ಸಿನೆಮಾ
Varaha Roopam : ವರಾಹರೂಪಂ ಹಾಡಿನ ಬಳಕೆಗಿದ್ದ ತಾತ್ಕಲಿಕ ತಡೆಯಾಜ್ಞೆ ತೆರವು – ಕಾಂತಾರ ತಂಡಕ್ಕೆ ಗೆಲುವು

ಕೊಚ್ಚಿ : ಡಿ 3 :’ವರಾಹ ರೂಪಂ’ ಹಾಡಿನ ಕೃತಿಸ್ವಾಮ್ಯ ವಿವಾದಕ್ಕೆ ಸಂಬಂಧಿಸಿದಂತೆ ಕಾಂತಾರ ಚಿತ್ರ ದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮಂಸ್ ನ ವಿರುದ್ಧ ಮಾತೃಭೂಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಲಿಮಿಟೆಡ್ (ಎಂಪಿಪಿಸಿಎಲ್) ಹೂಡಿದ್ದ ದಾವೆಯನ್ನು ಕೇರಳ ನ್ಯಾಯಾಲಯ ಶನಿವಾರ ಹಿಂತಿರುಗಿಸಿದೆ.
ದೂರುದಾರ ಎಂಪಿಪಿಸಿಎಲ್ ನ ನೋಂದಾಯಿತ ಕಚೇರಿ ಕೋಯಿಕ್ಕೋಡ್ ನಲ್ಲಿರುವುದರಿಂದ ಕೋಝಿಕೋಡ್ ಜಿಲ್ಲಾ ನ್ಯಾಯಾಲಯವೇ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ ಎಂಬ ಆಧಾರದ ಮೇಲೆ ಪಾಲಕ್ಕಾಡ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದಾವೆಯನ್ನು ಹಿಂದಿರುಗಿಸಿತು ಎಂದು ಬಾರ್ ಅಂಡ್ ಬೆಂಚ್ ವೆಬ್ ಸೈಟ್ ವರದಿ ಮಾಡಿದೆ.
ಇದರೊಂದಿಗೆ, “ವರಾಹರೂಪಂ” ಹಾಡಿನ ಬಳಕೆಗೆ ಸಂಬಂಧಿಸಿದಂತೆ ಕಾಂತಾರ ಚಲನಚಿತ್ರ ತಯಾರಕರ ವಿರುದ್ಧವಿದ್ದ ಎರಡು ತಡೆಯಾಜ್ಞೆಗಳು ತೆರವುಗೊಂಡಿದೆ, ಹೀಗಾಗಿ ಪ್ರಸ್ತುತ ಯಾವುದೇ ಪ್ಲಾಟ್ ಫಾರ್ಮ್ ನಲ್ಲಿ ಈ ಹಾಡಿನ ಪ್ರದರ್ಶನಕ್ಕೆ ನಿರ್ಬಂಧವಿರುವುದಿಲ್ಲ .ಹೀಗಾಗಿ, ಚಲನಚಿತ್ರ ತಯಾರಕರು ಸದ್ಯಕ್ಕೆ ಹಾಡನ್ನು ಬಳಸಲು ಮುಕ್ತರಾಗಿದ್ದಾರೆ.
ಪ್ರಕರಣ ಹಾಗೂ ನ್ಯಾಯಾಲಯದಲ್ಲಿ ದಾವೆ ಸಾಗಿದ ಹಾದಿ
ಸೆಪ್ಟೆಂಬರ್ 30, 2022 ರಂದು ಬಿಡುಗಡೆಯಾದ ರಿಷಬ್ ಶೆಟ್ಟಿ ಅವರ ಬ್ಲಾಕ್ ಬ್ಲಾಸ್ಟರ್ ಕನ್ನಡ ಚಲನಚಿತ್ರ ಕಾಂತಾರ ಮತ್ತು ಅದರ ಸಂಗೀತ ಸಂಯೋಜಕ ಬಿ ಅಜನೀಶ್ ಲೋಕನಾಥ್ ಅವರು ‘ವರಾಹ ರೂಪಂ’ ಹಾಡಿನ ಕುರಿತಾಗಿ ಕೃತಿಸ್ವಾಮ್ಯ ಉಲ್ಲಂಘನೆಯ ಆರೋಪಕ್ಕೆ ತುತ್ತಾದರು. ಕೇರಳದ ಥೈಕ್ಕುಡಂ ಬ್ರಿಡ್ಜ್ ಎಂಬ ನಿರ್ಮಾಣ ತಯಾರಿಸಿದ ನವರಸಮ್” ಹಾಡನ್ನು ‘ವರಾಹ ರೂಪಂ’ ಹಾಡಿನ ನಕಲಿ ಎನ್ನುವ ಆರೋಪ ವ್ಯಕ್ತವಾಗಿತ್ತು.
ಹೀಗಾಗಿ ಹಾಡಿನ ಹಕ್ಕು ಸ್ವಾಮ್ಯ ಕುರಿತಾಗಿ ಕೋಯಿಕ್ಕೋಡ್ ಜಿಲ್ಲಾ ನ್ಯಾಯಾಲಯದಲ್ಲಿ ಥೈಕ್ಕುಡಂ ಬ್ರಿಡ್ಜ್ ಸಂಸ್ಥೆ ದಾವೆ ಹೂಡಿದ್ದರೇ, ಪಾಲಕ್ಕಾಡ್ ನ್ಯಾಯಾಲಯದಲ್ಲಿ , “ನವರಸಮ್” ಕೃತಿಸ್ವಾಮ್ಯ ಹೊಂದಿರುವ ಎಂಪಿಪಿಸಿಎಲ್ ವ್ಯಾಜ್ಯ ಹೂಡಿತ್ತು. ವಿಚಾರಣೆ ಕೈಗೆತ್ತಿಕೊಂಡ ಎರಡು ನ್ಯಾಯಾಲಯಗಳು ಮುಂದಿನ ತೀರ್ಪಿನವರೆಗೆ ಹಾಡನ್ನು ಬಳಸಿಕೊಳ್ಳದಂತೆ ಕಾಂತಾರ ಚಿತ್ರದ ನಿರ್ಮಾಪಕರ ವಿರುದ್ಧ ಪ್ರತ್ಯೇಕ ತಡೆಯಾಜ್ಞೆ ಆದೇಶಗಳನ್ನು ಹೊರಡಿಸಿದ್ದವು.
ಕೋಯಿಕ್ಕೋಡ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೊಂಬಾಳೆ ಫೀಲಂಸ್ ಹೈಕೋರ್ಟು ಮೋರೆ ಹೋಗಿತ್ತು. ಸಿವಿಲ್ ಪ್ರೊಸಿಜರ್ ಕೋಡ್ ಸಂಹಿತೆಯಡಿ ಜಿಲ್ಲಾ ನ್ಯಾಯಾಲಯಗಳು ನೀಡಿದ ತಡೆಯಾಜ್ಞೆ ಆದೇಶದ ವಿರುದ್ಧ ತೀರ್ಪು ನೀಡಲು ನಿರಾಕರಿಸಿ ಹೈಕೋರ್ಟು ಹೊಂಬಾಳೆ ಫಿಲಂಸ್ ನ ಅರ್ಜಿಯನ್ನು ತಿರಸ್ಕರಿಸಿತ್ತು.
ಮತ್ತೆ ಕೋಯಿಕ್ಕೋಡ್ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದ್ದು, ಥೈಕ್ಕುಡಮ್ ಬ್ರಿಡ್ಜ್ ನ ದಾವೆಯನ್ನು ನಿರ್ವಹಿಸಲು ನ್ಯಾಯಾಲಯದ ಪರಿಮಿತಿಯ ಸಮಸ್ಯೆಯನ್ನು ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸಿತು. ಆದಾಗ್ಯೂ, ಡಿಸೆಂಬರ್ 1 ಗುರುವಾರ ದಂದು, ಕೇರಳ ಹೈಕೋರ್ಟ್ ಕೋಯಿಕ್ಕೋಡ್ ಜಿಲ್ಲಾ ನ್ಯಾಯಾಲಯದ ಈ ಆದೇಶಕ್ಕೆ ತಡೆ ನೀಡಿದೆ. ಆದಾಗ್ಯೂ, ಥೈಕ್ಕುಡಮ್ ಬ್ರಿಡ್ಜ್ ನ ಅರ್ಜಿಯನ್ನು ಹಿಂದಿರುಗಿಸಿದ ಮಾತ್ರಕ್ಕೆ, ಇದು “ವರಾಹರೂಪಂ” ಹಾಡಿನ ವಿರುದ್ಧದ ಹಿಂದಿನ ತಡೆಯಾಜ್ಞೆ ಆದೇಶವನ್ನು ಪುನರುಜ್ಜೀವನಗೊಳಿಸಲು ಕಾರಣವಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಮರುದಿನ ಸ್ಪಷ್ಟಪಡಿಸಿತು.
ಇದಾದ ಬಳಿಕ ಪಾಲಕ್ಕಾಡ್ ನ್ಯಾಯಾಲಯವು ಸಹ ಅರ್ಜಿಯನ್ನು ಹಿಂದಿರುಗಿಸುವುದರೊಂದಿಗೆ, ತಯಾರಕರು ಈಗ ಚಲನಚಿತ್ರದಲ್ಲಿ ಹಾಡನ್ನು ಬಳಸಬಹುದು.
ಸಂತಸ ವ್ಯಕ್ತಪಡಿಸಿದ ರಿಷಬ್ ಶೆಟ್ಟಿ
ಇಂದು ಈ ಕುರಿತಾಗಿ ಟ್ವೀಟ್ ಮಾಡಿರುವ ಚಿತ್ರದ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ “ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT platform ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ . ಎಂದು ಹೇಳಿದ್ದರು.
ಓಟಿಟಿಯಲ್ಲಿ ‘ಕಾಂತಾರ’ ಚಿತ್ರ ಬಿಡುಗಡೆಯಾದಾಗ ವರಾಹರೂಪಂ ಹಾಡಿಗೆ ಬೇರೆ ಟ್ಯೂನ್ ಬಳಸಲಾಗಿತ್ತು. ಆ ನಂತರ ತಡೆಯಾಜ್ಞೆ ತೆರವಾಗಿ, ಹಾಡನ್ನು ಪುನಃ ಬಳಸಿಕೊಳ್ಳುವುದಕ್ಕೆ ಅನುಮತಿ ಸಿಕ್ಕಿದೆ. ಅದರಂತೆ, ತತ್ಕ್ಷಣಕ್ಕೆ ಬರುವಂತೆ ಇಂದಿನಿಂದ ಚಿತ್ರಮಂದಿರ, ಓಟಿಟಿ, ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲ ವೇದಿಕೆಗಳಲ್ಲೂ ಮೂಲ ‘ವರಾಹ ರೂಪಂ’ ಹಾಡು ಪುನಃ ಸಿಗಲಿದೆ.
ಸಿನೆಮಾ
Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲ ದಿನಗಳ ಬಳಿಕ ಮುಂಗಾರು ಮಳೆ’ ಸಿನಿಮಾ ಖ್ಯಾತಿಯ ನಟಿ ಪೂಜಾ ಗಾಂಧಿ, ತಮ್ಮ ಪತಿ ವಿಜಯ್ ಅವರೊಂದಿಗೆ ಕುವೆಂಪು ಅವರ ಹುಟ್ಟೂರು ಕುಪ್ಪಳಿಗೆ ಭೇಟಿ ನೀಡಿದ್ದಾರೆ. ಕವಿ ಶೈಲದಲ್ಲಿ ಸಮಯ ಕಳೆದಿರುವ ಅವರು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೂಜಾ ಗಾಂದಿಯವರು ಹೊರ ರಾಜ್ಯದವರಾದರೂ ಮದುವೆಯಾದ ತಕ್ಷಣ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕನ್ನಡ ಸಾರಸ್ವತ ಲೋಕದ ದಿಗ್ಗಜ ಕುವೆಂಪು ಬಾಳಿ ಬದುಕಿದ ಮನೆಗೆ ಭೇಟಿ ನೀಡಿ ಅಲ್ಲಿ ಫೋಟೊ ತೆಗೆಸಿಕೊಂಡಿರುವುದು ಕನ್ನಡಿಗರ ಖುಷಿಗೆ ಕಾರಣವಾಗಿದೆ.

ಬೆಂಗಳೂರಿನ ಯಲಹಂಕದಲ್ಲಿ ನಟಿ ಪೂಜಾ ಗಾಂಧಿ ಮತ್ತು ಉದ್ಯಮಿ ವಿಜಯ್ ಘೋರ್ಪಡೆ ನವೆಂಬರ್ 29 ರಂದು ಕುವೆಂಪು ಅವರ ಪರಿಕಲ್ಪನೆಯ ಮಂತ್ರ ಮಾಂಗಲ್ಯ ಪದ್ಧತಿಯಂತೆ ನಡೆದಿತ್ತು. . ವಿವಾಹಗಳಿಗೆ ಜನರು ಮಾಡುತ್ತಿದ್ದ ದುಂದುವೆಚ್ಚ, ಅದರಿಂದ ಉಂಟಾಗುತ್ತಿದ್ದ ಸಾಲಬಾಧೆ, ಅಲ್ಲಿದ್ದ ಕಂದಾಚಾರ, ಪುರೋಹಿತಶಾಹಿ ವ್ಯವಸ್ಥೆ ಮುಂತಾದವುಗಳ ವಿರುದ್ಧವಿದ್ದ ಕುವೆಂಪು ಅವರು, ಜನರು ಸರಳವಾಗಿ ಮದುವೆ ಮಾಡಿಕೊಂಡು ಬದುಕಬೇಕೆಂದು ಹಂಬಲಿಸಿದ್ದರು. ಇದಕ್ಕಾಗಿ ಹುಟ್ಟುಹಾಕಿದ ಹೊಸ ಪರಿಕಲ್ಪನೆಯೆ ’ಮಂತ್ರ ಮಾಂಗಲ್ಯ’.

ಈ ಮಂತ್ರ ಮಾಂಗಲ್ಯ ಮದುವೆ ಮತ್ತು ಪೂಜಾ ಗಾಂಧಿ ಕುರಿತಂತೆ ಖ್ಯಾತ ಗೀತ ಸಾಹಿತಿ ಕವಿರಾಜ್ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ‘ಕುವೆಂಪು ಅವರ ಆದರ್ಶವನ್ನು ಬದುಕಲ್ಲಿ ಹಾಸುಹೊಕ್ಕಾಗಿಸಿರುವ ಪೂಜಾ ಗಾಂಧಿ ನಿಜವಾದ ಕನ್ನಡತಿ’ ಎಂದು ಹೊಗಳಿದ್ದರು . ಅದಾದ ಬಳಿಕ ಪೂಜಾ ಗಾಂದಿ ಕವಿಶೈಲಕ್ಕೂ ಭೇಟಿ ನೀಡಿರುವುದು ಅವರ ಕುವೆಂಪು ಬಗೆಗಿನ ಪ್ರೀತಿಯನ್ನು ತೋರಿಸುತ್ತದೆ.

ಕವಿರಾಜ್ ಪೋಸ್ಟ್ನಲ್ಲಿ ಏನಿದೆ?
“ಪೂಜಾ ಗಾಂಧಿ- ಹುಟ್ಟು ಕನ್ನಡತಿ ಅಲ್ಲದಿದ್ದರೂ ಅವರ ಅಪಾರ ಕನ್ನಡ ಪ್ರೇಮ, ಅವರು ಕನ್ನಡದ ಕುರಿತು ಕಾಳಜಿಯಿಂದ ಮಾಡುತ್ತಿರುವ ಆರ್ ಎಂಡ್ ಡಿ ಮಾದರಿಯ ಕೆಲವು ಕಾರ್ಯಗಳನ್ನು ನನ್ನೊಂದಿಗೆ ಶೇರ್ ಮಾಡಿದಾಗ ಓದಿ ಮೆಚ್ಚುಗೆಯ ಜೊತೆ ಆಶ್ಚರ್ಯವಾಗಿತ್ತು. ಆದರೆ ಅದಕ್ಕೆ ನೂರು ಪಟ್ಟು ಮಹದಾಶ್ಚರ್ಯವಾಗಿದ್ದು ಇತ್ತೀಚೆಗೆ ಕರೆ ಮಾಡಿ, ‘ತಾನು ಮಂತ್ರ ಮಾಂಗಲ್ಯ ಮಾದರಿಯಲ್ಲಿ ವಿವಾಹವಾಗುತ್ತಿದ್ದೇನೆ’ ಎಂದಾಗ. ಕನ್ನಡ ಜನತೆ ಅವರಿಗೆ ಒಂದು ಐಡೆಂಟಿಟಿ ಕೊಟ್ಟ ಋಣವನ್ನು ಈ ರೀತಿ ಪದೇ ಪದೇ ಅವರು ತೀರಿಸುತ್ತಿರುವ ಪರಿಯನ್ನು ಹೊಗಳಲು ಮಾತೇ ಇಲ್ಲಾ” ಎಂದು ಕವಿರಾಜ್ ತಿಳಿಸಿದ್ದಾರೆ.

ಮದುವೆಯ ಬಳಿಕ ಪೂಜಾ ಗಾಂದಿ ಪತಿಯ ಜೊತೆಗೆ ಕವಿಶೈಲಕ್ಕೂ ಭೇಟಿಕೊಟ್ಟಿದ್ದಾರೆ. ಇಲ್ಲಿಯ ಸುಂದರ ತಾಣದಲ್ಲಿ ಜೋಡಿಯಾಗಿ ನಿಂತುಕೊಂಡು ಚೆಂದದ ಪೋಸ್ ಕೂಡ ಕೊಟ್ಟಿದ್ದಾರೆ. ಆ ಕ್ಷಣದ ಫೋಟೋಗಳನ್ನ ಸ್ವತಃ ಪೂಜಾ ಗಾಂಧಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್ನಲ್ಲಿಯೇ ಪೋಸ್ಟ್ ಕೂಡ ಮಾಡಿಕೊಂಡಿದ್ದಾರೆ. ಸದ್ಯ ಪೂಜಾ ಗಾಂಧಿ ಕವಿಶೈಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮದುವೆಯಾದ ಕೂಡಲೇ ವಿದೇಶಕ್ಕೆ ಹಾರುವ ನಟ-ನಟಿಯರ ಮಧ್ಯೆ ಪೂಜಾ ಗಾಂಧಿ ವಿಶೇಷವಾಗಿ ಕಂಡಿದ್ದಾರೆ. ಪೂಜಾ ಗಾಂಧಿ- ವಿಜಯ್ ಘೋರ್ಪಡೆ ದಂಪತಿ ಮದುವೆ ಬಳಿಕ ಮೊದಲ ಪ್ರಯಾಣವೆಂಬಂತೆ ಪೂಜಾ ಗಾಂಧಿ ಕವಿಶೈಲ ಪ್ರವಾಸ ನಡೆಸಿದ್ದಾರೆ. ಬಳಿಕ ಅಲ್ಲಿಯೆ ಇರುವ ಕವಿ ನೆಲೆಸಿದ್ದ ಮನೆಗೂ ಭೇಟಿ ನೀಡಿ ಫೋಟೊ ತೆಗೆಸಿಕೊಂಡಿದ್ದಾರೆ

ನವ ದಂಪತಿಗೆ ಶುಭ ಹಾರೈಸಿರುವ ಅಭಿಮಾನಿಗಳು ಪೂಜಾ ಗಾಂಧಿ ಅವರ ಸರಳತೆಗೆ ಹಾಗೂ ಕನ್ನಡ ಹಾಗೂ ಕುವೆಂಪು ಅವರ ಮೇಲಿನ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಪೂಜಾ ಗಾಂಧಿ ಕವಿಶೈಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹಚ್ಚ ಹಸಿರಿನ ತಾಣ ಕವಿಶೈಲ ಎಂತವರನ್ನಾದರೂ ತನ್ನತ್ತ ಸೆಳೆಯುತ್ತದೆ. ಜೊತೆಗೆ ಕುವೆಂಪು ಮೇಲಿನ ಅಭಿಮಾನಕ್ಕೂ ಈ ಜಾಗಕ್ಕೆ ಭೇಟಿ ನೀಡುವವರಿದ್ದಾರೆ.

ಕವಿ ಶೈಲದ ಬಗ್ಗೆ
ಕವಿ ಕುವೆಂಪು ಅವರ ಮನೆ ಕವಿ ಶೈಲದ ಕೆಳಭಾಗದಲ್ಲಿದೆ. ಕಲ್ಲು ಗೋಪುರ, ಕವಿಯ ಭಾವಗಳಿಗೆ ಜೀವ ತುಂಬುವ ಮಂಟಪಗಳಂತೆ ನೋಡುಗರ ಗಮನ ಸೆಳೆಯುತ್ತದೆ. ನಡುವೆ ಹಸುರು ಹುಲ್ಲುಗಳ ಮಧ್ಯೆ, ತರುಲತೆಗಳ ಸಂಗೀತ ಜಿರುಂಡಗಳು ಆಲಿಸುತ್ತಾ ಮಲಗಿರುವ ಕುವೆಂಪು ಸಮಾಧಿ ಇದೆ.
ಇಲ್ಲಿಂದ ಪೂರ್ವ ದಿಕ್ಕಿಗೆ ನೋಡಿದರೆ ಗುಡ್ಡಗಳು ಸಾಲು ಸಾಲು ದಿಗಂತದ ತನಕವೂ ಹರಡಿರುವ ವಿಶಾಲ ನೀಲಾಕಾಶ ಕಣ್ಮನ ಸೆಳೆಯುವ ರಮಣೀಯ ದೃಶ್ಯ . ಕವಿ ಕುವೆಂಪು ಕುಳಿತು. ಕಾವ್ಯಕ್ಕೆ ಸ್ಫೂರ್ತಿ ಪಡೆದ ತಾಣವಿದು. ಇದಕ್ಕೆ ಅವರೇ ಕೊಟ್ಟ ಹೆಸರು ಕವಿ ಶೈಲ.
ಅಲ್ಲಿಂದಲೇ ದೂರದ ಕುಂದಾದ್ರಿ. ಕೊಡಚಾದ್ರಿ ಬೆಟ್ಟಗಳನ್ನು ಕಾಣಬಹುದು ಕವಿ ಶೈಲಯ ದಿಂದ ಬೆಟ್ಟವಿಳಿವ ದಾರಿಯಲ್ಲು. ನಡೆದು ಬಂದರೆ. ಕವಿಮನೆ ವನದೇವತೆಯ ಮಡಿಲಲ್ಲಿ ಶಾಂತ ವಾತಾವರಣದಿಂದ ಸದಾ ತಂಪಾಗಿ ಹುಲ್ಲು ಹಾಸಿಗೆಯ ಮೇಲಿರುವ ದಕ್ಷಿಣ ಭಾರತದ ಶಾಂತಿನಿಕೇತನವಿದೆ.
ಸಿನೆಮಾ
Ramesh Aravind Serial: ಸದ್ಯದಲ್ಲೆ ಕಿರುತೆರೆಯನ್ನು ಅಪ್ಪಲಿಸಲಿದೆ ಖ್ಯಾತ ಚಿತ್ರನಟ ರಮೇಶ್ ಅರವಿಂದ್ ನಿರ್ಮಾಣದ ಧಾರಾವಾಹಿ – ಯಾವಾಗ ? ಯಾವ ವಾಹಿನಿಯಲ್ಲಿ ? ಏನಿದರ ಕಥಾ ಹಂದರ – ಇಲ್ಲಿದೆ ಮಾಹಿತಿ

ನಟ ರಮೇಶ್ ಅರವಿಂದ್ (Ramesh Arvind) ಅವರಿಗೆ ಕಿರುತೆರೆ ಹೊಸದೇನೂ ಅಲ್ಲ. ಬಹಳ ಎಳವೆಯಲ್ಲೇ ದೂರದರ್ಶನಕ್ಕಾಗಿ ಶೋ ಒಂದನ್ನು ನಿರೂಪಣೆ ಮಾಡಿದ್ದರು ರಮೇಶ್. ಆ ಬಳಿಕ ಪ್ರೀತಿಯಿಂದ ರಮೇಶ್, ರಾಜಾ-ರಾಣಿ ರಮೇಶ್, ವೀಕೆಂಡ್ ವಿತ್ ರಮೇಶ್ ಹೀಗೆ ಹಲವು ಜನಪ್ರಿಯ ಟಿವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಮಾತ್ರವಲ್ಲ ಕೆಲವು ಧಾರಾವಾಹಿಗಳನ್ನು ನಿರ್ಮಾಣ ಸಹ ಮಾಡಿದ್ದಾರೆ ನಟ ರಮೇಶ್ ಅರವಿಂದ್. ಇದೀಗ ಮತ್ತೊಂದು ಹೊಸ ಧಾರಾವಾಹಿಯನ್ನು ತೆರೆಗೆ ತರುತ್ತಿದ್ದಾರೆ.
ಈ ಬಾರಿ ಅವರು ಸುವರ್ಣ ವಾಹಿನಿಗಾಗಿ ಧಾರಾವಾಹಿಯನ್ನು (Serial) ನಿರ್ಮಿಸುತ್ತಿದ್ದು, ಈ ಧಾರಾವಾಹಿಗೆ ‘ಆಸೆ’ (Aase) ಎಂದು ಹೆಸರಿಡಲಾಗಿದೆ. ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ನೂತನವಾದ ಮನಮುಟ್ಟುವ ಮನರಂಜನೆಯ ಧಾರಾವಾಹಿಗಳನ್ನು ನೀಡುತ್ತಲೇ ಆ ಸಾಲಿಗೆ ಆಸೆ ಸೇರ್ಪಡೆ ಆಗಲಿದೆ. ಈಗಾಗಲೇ ಧಾರಾವಾಹಿಯ ಶೀರ್ಷಿಕೆ ಗೀತೆಯಂತೂ ನೋಡುಗರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿದೆ.

ಆಸೆ ಧಾರಾವಾಹಿಯ ಕಥೆ :
ಚಿಕ್ಕ ವಯಸ್ಸಿನಲ್ಲಿ ತಿಳಿಯದೇ ನಡೆದ ಒಂದು ಘಟನೆಯಿಂದಾಗಿ ತಾಯಿಯಿಂದ ಪ್ರತಿದಿನ, ಪ್ರತಿಕ್ಷಣ ದೂಷಿಸಲ್ಪಡುತ್ತಿರುವ ಕಥಾನಾಯಕ ಸೂರ್ಯ. ಇವನ ಮಾತು ಕೊಂಚ ಒರಟು. ಹಾಗಿದ್ದರೂ ಕೂಡ ಅವನ ಮನಸು ಮೃದುವಾಗಿದೆ. ಜೀವನದಲ್ಲಿ ನೊಂದು-ಬೆಂದು ಆಕಾಂಕ್ಷೆಯನ್ನೇ ಆತ ಕಳೆದುಕೊಂಡಿದ್ದಾನೆ. ತಂದೆಗೆ ಸೂರ್ಯ ಎಂದರೆ ಬಹಳ ಮುದ್ದು. ಇನ್ನೊಂದೆಡೆ ಬಡತನದಲ್ಲಿ ಇದ್ದರೂ ಕೂಡ ಮುಖದಲ್ಲಿ ಯಾವಾಗಲೂ ಮಂದಹಾಸವನ್ನು ಹೊಂದಿರುವ ಹುಡುಗಿ ಮೀನಾ. ಅವಳೇ ಈ ಕಥೆಯ ನಾಯಕಿ. ಕುಟುಂಬದ ಕಷ್ಟಕ್ಕಾಗಿ ತನ್ನ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದವಳು ಈಕೆ. ಹೆತ್ತವರಿಗೆ ಸಹಕರಿಸುತ್ತಿರುವ ಮುಗ್ದ ಮನಸಿನ ಕಣ್ಮಣಿ ಇವಳು. ಒಡಹುಟ್ಟಿದವರ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ಮೀನಾ ಒಂದು ರೀತಿಯಲ್ಲಿ ತಾಯಿಯ ಎರಡನೇ ರೂಪ ಎನ್ನಬಹುದು.
ಒಂದು ಕಡೆ ಜೀವನದಲ್ಲಿ ಗುರಿ, ಆಸೆಯೇ ಇಲ್ಲದ ಹುಡುಗ ಸೂರ್ಯ. ಇನ್ನೊಂದು ಕಡೆ ಮನೆಯವರ ಸಂತೋಷಕ್ಕಾಗಿ ಬಹಳ ಆಸೆಯನ್ನು ಇಟ್ಟುಕೊಂಡಿರುವ ಮೀನಾ. ಹೀಗೆ ತದ್ವಿರುದ್ಧವಾದ ಇಬ್ಬರ ಬದುಕು ಎದುರುಬದರಾದರೆ ಏನಾಗುತ್ತೆ ಎಂಬುದು ‘ಆಸೆ’ ಧಾರಾವಾಹಿಯ ಸಾರಾಂಶ.
ಪಾತ್ರ ಪರಿಚಯ
ಈ ಧಾರಾವಾಹಿಯಲ್ಲಿ ಪ್ರಮುಖವಾಗಿ ನಟ, ರಂಗಭೂಮಿ ಕಲಾವಿದರಾದ ಮಂಡ್ಯ ರಮೇಶ್ (Mandya Ramesh) ಅವರು ಮುಖ್ಯ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಜೊತೆಗೆ ನಿನಾದ್, ಪ್ರಿಯಾಂಕಾ, ಸ್ನೇಹಾ, ನಾಗೇಂದ್ರ ಶಾ, ಪ್ರಗತಿ, ನಂದೀಶ್, ಲಕ್ಷ್ಮಿ ಚಂದ್ರಶೇಖರ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ಕಲಾವಿದರು ಈ ಅಭಿನಯಿಸುತ್ತಿದ್ದಾರೆ.. ಇದೇ ಸೋಮವಾರದಿಂದ ರಾತ್ರಿ 7.30 ಕ್ಕೆ ಧಾರಾವಾಹಿಯ ಪ್ರಸಾರವಾಗಲಿದೆ.
ಸಿನೆಮಾ
ಬಿ – ಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಸುದ್ದಿ – ನಿಜಕ್ಕೂ ಅವರಿಬ್ಬರ ಮಧ್ಯೆ ಆಗಿರುವುದೇನು ?

Abhishek Bachchan, Aishwarya Rai divorce rumours ಸದ್ಯ ಬಿ-ಟೌನ್ನಲ್ಲಿ ಭಾರಿ ಸುದ್ದಿ ಮಾಡುತ್ತಿರುವ ವಿಷಯವೆಂದರೇ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಸುದ್ದಿ. ಬಾಲಿವುಡ್ ಅದರ್ಶ ಜೋಡಿ ಎಂದೆ ಹೆಗ್ಗಳಿಕೆ ಹೊಂದಿದ್ದ ಈ ದಂಪತಿಗೆ ಏನಾಯಿತು ? ಎಂಬ ಪ್ರಶ್ನೆ ಈಗ ಅವರ ಅಭಿಮಾನಿಗಳನ್ನು ಕಾಡಲು ಆರಂಬಿಸಿದೆ. ಅಷ್ಟಕ್ಕೂ ಆದದ್ದೇನೆಂದರೆ ಮುಂದೆ ಓದಿ
ಸೆಲೆಬ್ರಿಟಿ ದಂಪತಿಗಳ ವೈಮನಸ್ಸು ವಿಚ್ಛೇದನ ಇವೆಲ್ಲಾ ಹೊಸದಲ್ಲ. ಈ ರೀತಿ ವಿಚ್ಛೇದನ ಪಡೆದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಈಗ ಅಭಿಷೇಕ್ ಬಚ್ಚನ್ (Abhishek Bachchan) ಹಾಗೂ ಐಶ್ವರ್ಯಾ ರೈ ದಂಪತಿ ವಿಚ್ಛೇದನ ಪಡೆಯಲಿದ್ದಾರೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ
ಅಭಿಷೇಕ್ ಬಚ್ಚನ್ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣ ರೆಡ್ಡಿಟ್ ನಲ್ಲಿ ಬಳಕೆದಾರರೊಬ್ಬರು ಅಭಿಷೇಕ್ ಉಂಗುರ ದರಿಸದ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಅಭಿಷೇಕ್ ಇತ್ತೀಚಿನ ದಿನಗಳಲ್ಲಿ ಮದುವೆ ಉಂಗುರವನ್ನು ಧರಿಸುತ್ತಿಲ್ಲ, ಹಿಂದೆ ಅದು ಯಾವಾಗಲೂ ಅವರ ಕೈಯಲ್ಲಿರುತಿತ್ತು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್ ಆಗುತ್ತಾರೆ ಎಂಬಂತೆ ತೋರುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಈ ಬಳಿಕ ಅವರಿಬ್ಬರು ಡೈವೋರ್ಸ್ ಆಗುತ್ತಾರೆ ಎನ್ನುವ ಸುದ್ದಿ ಸಕತ್ ಸದ್ದು ಮಾಡುತ್ತಿದೆ.
ಇದಾದ ಬಳಿಕ ಇತ್ತೀಚೆಗೆ ಮತ್ತೊಂದು ಘಟನೆ ನಡೆಯಿತು. ಇತ್ತೀಚೆಗೆ ಐಶ್ವರ್ಯಾ ರೈ ಹುಟ್ಟುಹಬ್ಬವಿತ್ತು. ಆಗ ಐಶ್ವರ್ಯಾ ಜೊತೆಗಿದ್ದಿದ್ದು ಅವರ ತಾಯಿ ಮತ್ತು ಮಗಳು ಮಾತ್ರ. ಅವರ ಬರ್ತ್ಡೇ ದಿನ ಅಭಿಷೇಕ್ ಅವರು ಐಶ್ವರ್ಯಾ ಅವರ ಫೋಟೋನ ಗೂಗಲ್ನಲ್ಲಿ ಹುಡುಕಿ ಡೌನ್ಲೋಡ್ ಮಾಡಿ ಪೋಸ್ಟ್ ಮಾಡಿದ್ದರು. ಹ್ಯಾಪಿ ಬರ್ತ್ಡೇ ಎಂದಷ್ಟೇ ಬರೆದಿದ್ದರು. ಅಲ್ಲದೇ ಐಶ್ವರ್ಯಾ ಮತ್ತು ಅಭಿಷೇಕ್ ಕಳೆದ ಹಲವು ದಿನಗಳಿಂದ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದು ಕೂಡ ಗಾಸಿಪ್ ಗೆ ಇನ್ನಷ್ಟು ಶಕ್ತಿ ತುಂಬಿದೆ
ಸ್ವಘೋಷಿತ ಚಿತ್ರ ವಿಶ್ಲೇಷಕ ಉಮೈರ್ ಸಂಧು ಇತ್ತೀಚೆಗೆ ಟ್ವೀಟ್ ಮಾಡಿದ್ದು ಅದರಲ್ಲಿ ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದರು. ‘ಅಭಿಷೇಕ್-ಐಶ್ವರ್ಯಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ’ ಎಂದು ಉಮೈರ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರು ಪೋಸ್ಟ್ ಮಾಡುವ ಬಹುತೇಕ ಎಲ್ಲಾ ಟ್ವೀಟ್ಗಳು ಫೇಕ್ ಆಗಿರುತ್ತವೆ. ಹೀಗಾಗಿ, ಇವರ ಟ್ವೀಟನ್ನು ಜನ ಗಂಭೀರವಾಗಿ ಸ್ವೀಕರಿಸಿಲ್ಲ
ಆದರೆ ಇವರಿಬ್ಬರ ಡೈವೊರ್ಸ್ ಗಾಳಿ ಸುದ್ದಿಯ ಕುರಿತಾಗಿ ಬಚ್ಚನ್ ಕುಟುಂಬದ ಯಾರೊಬ್ಬರೂ ಇದುವರೆಗೆ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದಾಗಿ ಬಿಗ್-ಬಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನವೂ ಸುಳಿದಾಡುತ್ತಿದೆ.
ಐಶ್ವರ್ಯ ರೈ ಮತ್ತು ಅಭಿಷೇಕ್ 2007ರಲ್ಲಿ ಕೆಲವೇ ಜನರ ಸಮ್ಮುಖದಲ್ಲಿ ಮದುವೆಯಾದರು. 2011ರಲ್ಲಿ ಐಶ್ವರ್ಯಾ ಆರಾಧ್ಯಗೆ ಜನ್ಮ ನೀಡಿದರು. ಈಗ ಇಬ್ಬರ ವಿಚ್ಛೇದನದ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ ಈ ವಿಚಾರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ
Health Benefits of Pomegranates: ಪುರುಷರಿಗೆ ಪ್ರಯೋಜನಕಾರಿ ದಾಳಿಂಬೆ – ಇದರಲ್ಲಿದೆ ಹಲವು ಆರೋಗ್ಯವರ್ಧಕ ಅಂಶಗಳು
ಆದರೆ ಇದರ ಮಧ್ಯೆಯೇ ನಟಿ ಐಶ್ವರ್ಯ ಮತ್ತು ಮಗಳು ಆರಾಧ್ಯ ಡ್ಯಾನ್ಸ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ವಿಚ್ಛೇದನದ ಸುದ್ದಿಯ ಬೆನ್ನಲ್ಲೇ ಈ ವಿಡಿಯೋ ವೈರಲ್ ಆಗಿರುವುದು ನೆಟ್ಟಿಗರ ಅನುಮಾನವನ್ನು ಹೆಚ್ಚಿಸಿದೆ
ಕೊನೆಗೂ ಮುಕ್ತಿ ಸಿಕ್ಕಿತು ಎಂದು ಮಗಳೊಂದಿಗೆ ಐಶ್ವರ್ಯ ಡ್ಯಾನ್ಸ್ ಮಾಡುತ್ತಿದ್ದಾಳೆ ಎಂದು ಕೆಲವರು ಬರೆದಿದ್ದರೆ, ತಮ್ಮ ನಡುವೆ ಎಲ್ಲವೂ ಸರಿಯಿದೆ, ವಿಚ್ಛೇದನದ್ದು ಗಾಳಿ ಸುದ್ದಿ ಮಾತ್ರ ಎಂದು ಈ ರೀತಿ ಐಶ್ವರ್ಯ ರೈ ತಿಳಿಸುತ್ತಿದ್ದಾರೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅಮ್ಮ-ಮಗಳ ಡ್ಯಾನ್ಸ್ ಹಾಗೂ ನಟನಾ ಜೋಡಿಯ ವಿಚ್ಛೇದನ ಸದ್ಯದ ಹಾಟ್ ಟಾಪಿಕ್.
-
ಸಿನೆಮಾ2 days ago
ಬಿ – ಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಸುದ್ದಿ – ನಿಜಕ್ಕೂ ಅವರಿಬ್ಬರ ಮಧ್ಯೆ ಆಗಿರುವುದೇನು ?
-
ದಕ್ಷಿಣ ಕನ್ನಡ2 days ago
ಪುತ್ತೂರು : ಕುಡಿದು ಟೈಟಾಗಿದ್ದ ಚಾಲಕ ವಿವೇಕಾನಂದ ವಿದ್ಯಾ ಸಂಸ್ಥೆಯ ಬಸ್ಸನ್ನು ಯದ್ವಾತದ್ವಾ ಚಲಾಯಿಸಿ ಸರಣಿ ಅಪಘಾತ – ಮಾಜಿ ಶಾಸಕಿಯ ಪುತ್ರನ ಕಾರು ಸೇರಿ 3 ವಾಹನಕ್ಕೆ ಢಿಕ್ಕಿ – ಪಾನಮತ್ತ ಚಲಾಯಿಸುತ್ತಿದ್ದ ಬಸ್ಸಿನಲ್ಲಿದ್ದರು ವಿದ್ಯಾರ್ಥಿಗಳು..̆
-
ದಕ್ಷಿಣ ಕನ್ನಡ2 days ago
ವಿಟ್ಲ : ಅಡಿಕೆ ಮರ ಮುರಿದು ಬಿದ್ದು ಮಹಿಳೆ ಸಾವು
-
ರಾಜಕೀಯ2 days ago
CM Siddaramaiah: ಐಸಿಸ್ ಉಗ್ರ ಸಂಘಟನೆಯ ಬೆಂಬಲಿಗನ ಜತೆ ಹುಬ್ಬಳಿಯಲ್ಲಿ ವೇದಿಕೆ ಹಂಚಿಕೊಂಡ ಸಿ. ಎಂ.ಸಿದ್ದರಾಮಯ್ಯ : ಚಿತ್ರ ಸಹಿತ ಯತ್ನಾಳ್ ಗಂಭೀರ ಆರೋಪ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
-
ಸುಳ್ಯ1 day ago
College student rape case ಪುತ್ತೂರು : ಕಾಲೇಜ್ ವಿದ್ಯಾರ್ಥಿನಿಯ ಅಪಹರಿಸಿ ಅತ್ಯಾಚಾರ ಪ್ರಕರಣ – ಬಂಧಿತ ಆರೊಪಿಗೆ 2 ತಿಂಗಳ ಬಳಿಕ ಜಾಮೀನು
-
Uncategorized2 days ago
loan write off ದೇಶದ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂ. ರೈಟ್-ಆಫ್….
-
ಉದ್ಯೋಗ1 day ago
Job Alert: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ – ಸದ್ಯದಲ್ಲೆ ಸಾರಿಗೆ ಇಲಾಖೆಗೆ 9 ಸಾವಿರ ಸಿಬ್ಬಂದಿಗಳ ನೇಮಕ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
-
ಪುತ್ತೂರು1 day ago
Puthila Parivara | ಪುತ್ತೂರು ನಗರಸಭೆ 2 ವಾರ್ಡ್ ಮರುಮತದಾನ – ಬಿಜೆಪಿ ಕಾಂಗ್ರೇಸ್ ನಡುವೆ ಕಾರ್ಯಕರ್ತರ ಒತ್ತಾಯದಂತೆ ಪುತ್ತಿಲ ಪರಿವಾರ ಮತ್ತೊಂದು ಚುನಾವಣೆ ಎದುರಿಸುವುದು ಬಹುತೇಕ ಫಿಕ್ಸ್ : ವಿಧಾನಸಭಾ ಚುನಾವಣೆಯಲ್ಲಿ ಈ ವಾರ್ಡ್ ಗಳಲ್ಲಿ ಯಾರಿಗೆ ಎಷ್ಟು ಮತದಾನವಾಗಿತ್ತು ಗೊತ್ತೇ.?