ಸಿನೆಮಾ
Kantara : ಕಾಂತಾರದ “ವರಾಹ ರೂಪಂ” ಹಾಡಿಗೆ ಮುಂದುವರಿದ ಸಂಚಕಾರ – ಜಿಲ್ಲಾ ನ್ಯಾಯಾಲಯದ ಮೆಟ್ಟಿಲಲ್ಲಿ ಆದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟು ಮೆಟ್ಟಿಲೆರಿದ ʼನವರಸಂʼ ಟೀಂ – ಹಾಡಿನ ಬಳಕೆಗೆ ಮತ್ತೆ ತಡೆ

ಕೊಚ್ಚಿ: ಕನ್ನಡದ ಬ್ಲಾಕ್ ಬ್ಲಾಸ್ಟರ್ ಮೂವಿ ಕಾಂತಾರ ಹಾಗೂ ಅದರ ಜನಪ್ರಿಯ ಹಾಡು “ವರಾಹ ರೂಪಂ”ಹಾಡಿನ ಕುರಿತಾಗಿ ಉಂಟಾಗಿರುವ ವಿವಾದ ತಣ್ಣಗಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಹಕ್ಕುಸ್ವಾಮ್ಯ ಉಲ್ಲಂಘನೆ ಕುರಿತು ಥೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್ ಸಲ್ಲಿಸಿದ ಅರ್ಜಿಯನ್ನು ‘ನಾಟ್ ಇನ್ ಜ್ಯೂರಿಸ್ಡಿಕ್ಷನ್’ (ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ) ಉಲ್ಲೇಖದೊಂದಿಗೆ ಕೋಝಿಕೋಡ್ ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ವಜಾಮಾಡಿತ್ತು.
ಆದರೇ ಸೆಷನ್ಸ್ ಕೋರ್ಟು ಆದೇಶವನ್ನು ಪ್ರಶ್ನಿಸಿ ಥೈಕುಡಂ ಬ್ರಿಡ್ಜ್ ಹೈಕೋರ್ಟ್ನಲ್ಲಿ ದಾವೆ ಹೂಡಿತ್ತು. ಇದೀಗ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಆದೇಶಕ್ಕೆ ಕೇರಳ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ನೀಡಿ ನ್ಯಾಯಮೂರ್ತಿ ಪಿ. ಸೋಮರಾಜನ್ ಅವರ ಏಕ ಪೀಠ. ಹೊಂಬಾಳೆ ಬ್ಯಾನರ್, ರಿಷಬ್ ಶೆಟ್ಟಿ, ಪೃಥ್ವಿರಾಜ್ ಫಿಲ್ಮ್ಸ್, ಅಮೆಜಾನ್ ಸೆಲ್ಲರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ಗೂಗಲ್ ಇಂಡಿಯಾ ಹೆಡ್ ಆಫೀಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಇತರರಿಗೆ ಕೇರಳ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕಾಂತಾರ ಸಿನಿಮಾದ ವರಾಹ ರೂಪಂ ಎಂಬ ಹಾಡು ಸಖತ್ ಹಿಟ್ ಆಗಿತ್ತು. ಸಿನಿಮಾ ಮುಗಿದ ಮೇಲೂ ಪ್ರೇಕ್ಷಕರ ನಾಲಿಗೆ ಮೇಲೆ ಅದು ನಲಿಯುತ್ತಾ ಇತ್ತು. ಆದರೆ ಈ ಹಾಡು ಮಲಯಾಳಂ ಹಾಡಿನ ನಕಲು ಅದನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ ಕಾಪಿ ಮಾಡಿದ್ದಾರೆ ಎಂಬ ಆರೋಪ ಎದುರಾಗಿತ್ತು.
ಈ ಬಗ್ಗೆ ನವರಸಂ ಹಾಡಿನ ಮೂಲಕರ್ತ ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್’ ತಂಡ . ಹಕ್ಕುಸ್ವಾಮ್ಯ ಉಲ್ಲಂಘನೆ ಕುರಿತು ಕೋಝಿಕ್ಕೋಡ್ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೇ ವರಾಹರೂಪಂ” ಹಾಡಿನ ಮೂಲ ರೂಪ ಎನ್ನಲಾದ “ನವರಸಂ” ಹಾಡಿನ ಹಕ್ಕುಸ್ವಾಮ್ಯ ಮಾಲೀಕ ಎಂದು ಹೇಳಿಕೊಂಡಿರುವ ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂಪನಿ ಲಿಮಿಟೆಡ್ ಪಾಲಕ್ಕಾಡ್ ಕೋರ್ಟು ನಲ್ಲಿ ದಾವೆ ಹೂಡಿತ್ತು.
ಈ ಸಂಬಂಧ ವರಾಹರೂಪಂ” ಹಾಡಿನ ಬಳಕೆ ವಿರುದ್ಧ ಪಾಲಕ್ಕಾಡ್ ಹಾಗೂ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ತಡೆಯಾಜ್ಞೆ ನೀಡಿತ್ತು. ಇದನ್ನು ತೆರವುಗೊಳಿಸುವಂತೆ ಹೋಂಬಾಳೆ ಫಿಲ್ಮ್ಸ್ ಹೈಕೋರ್ಟು ಮೆಟ್ಟೀಲೆರಿತ್ತು. ಆದರೇ ಸಿವಿಲ್ ಪ್ರೊಸಿಜರ್ ಕೋಡ್ ಸಂಹಿತೆಯಡಿ ಜಿಲ್ಲಾ ನ್ಯಾಯಾಲಯಗಳು ನೀಡಿದ ತಡೆಯಾಜ್ಞೆ ಆದೇಶದ ವಿರುದ್ಧ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲು ಕೇರಳ ಹೈಕೋರ್ಟ್ ನಿರಾಕರಸಿ ಹೊಂಬಾಳೆ ಫಿಲಂಸ್ ನ ಅರ್ಜಿಯನ್ನು ವಜಾಗೊಳಿಸಿತ್ತು.
ಪುತ್ತೂರಿನ ಮಹಿಳೆ ಉಪ್ಪಳದ ಪತಿಯ ಮನೆಯಲ್ಲಿ ಕೆರೆಗೆ ಬಿದ್ದು ಮೃತ್ಯು
ಅದರ ಮರುದಿನ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಥೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್ ಸಲ್ಲಿಸಿದ ಅರ್ಜಿಯನ್ನು ‘ನಾಟ್ ಇನ್ ಜ್ಯೂರಿಸ್ಡಿಕ್ಷನ್ ಎಂದು ಹೇಳಿ ವಜಾಗೊಳಿಸಿತ್ತು. ಆದರೇ ಈ ತೀರ್ಪಿನ ಬಳಿಕವೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ನ.2ರಂದು ನೀಡಿದ್ದ ಮಧ್ಯಂತರ ಆದೇಶವೂ ಜಾರಿಯಲ್ಲಿತ್ತು.
ಹೀಗಾಗಿ .ನವೆಂಬರ್ 24 ರಂದು, ಅಮೆಜಾನ್ ಪ್ರೈಮ್ನಲ್ಲಿ ಕಾಂತಾರ ಸಿನಿಮಾ ಬಿಡುಗಡೆಗೊಂಡಾಗ “ವರಾಹರೂಪಂ” ಮೂಲ ಹಾಡನ್ನು ಬದಲಾಯಿಸಿಲಾಗಿತ್ತು. ಆದರೇ ಕೋಝಿಕ್ಕೋಡ್ ನ್ಯಾಯಾಲಯ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದ ಬಳಿಕ ಮೂಲ ಹಾಡು ಅಮೆಜಾನ್ ಪ್ರೈಮ್ನಲ್ಲಿ ಮತ್ತೆ ಕಾಣಿಸಿಕೊಂಡಿತ್ತು. ಇದರ ವಿರುದ್ದ ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂಪನಿ ಲಿಮಿಟೆಡ್ ಸಲ್ಲಿಸಿದ ಅರ್ಜಿಯಲ್ಲಿ ಹೈಕೋರ್ಟ್ ಹೊಸ ಆದೇಶ ನೀಡಿದೆ.
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಸೆಪ್ಟೆಂಬರ್ 30 ರಂದು ಬಿಡುಗಡೆಗೊಂಡು ಕರ್ನಾಟಕದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು.ಚಿತ್ರದ ತೆಲುಗು, ಹಿಂದಿ ಮತ್ತು ಮಲಯಾಳಂ ಆವೃತ್ತಿಗಳನ್ನು ಅನೇಕ ಪ್ರೇಕ್ಷಕರು ವೀಕ್ಷಿಸಿದ್ದಾರೆ.ಚಿತ್ರದ ಮಲಯಾಳಂ ಆವೃತ್ತಿಯನ್ನು ಪೃಥ್ವಿರಾಜ್ ಪ್ರೊಡಕ್ಷನ್ಸ್ ಹೊರ ತಂದಿದೆ.
ಸಿನೆಮಾ
Lakshmika Sajeevan ಹಠಾತ್ ಹೃದಯಾಘಾತ – 24ರ ಹರೆಯದ ಮಲಯಾಳಂ ನಟಿ ಲಕ್ಷ್ಮಿಕಾ ಸಜೀವನ್ ಮೃತ್ಯು

ಚಲನಚಿತ್ರ ಹಾಗೂ ಟೆಲಿಫಿಲ್ಮ್ʼ ಗಳ ನಟನೆಯ ಮೂಲಕ ಮನೆಮಾತಾಗಿದ್ದ ಮಲಯಾಳಂ ನಟಿ (Mollywood Actress) ಲಕ್ಷ್ಮಿಕಾ ಸಜೀವನ್ (Lakshmika Sajeevan) ಅವರು ಹಠಾತ್ ಅಸ್ವಸ್ಥಗೊಂಡು ಶಾರ್ಜಾದಲ್ಲಿ ನಿಧನರಾದರು. 24ರ ಹರೆಯದ ಉದಯೋನ್ಮುಖ ಪ್ರತಿಭೆ ಹಠಾತ್ ಹೃದಯಘಾತಕ್ಕೆ (Heart Attack) ತುತ್ತಾಗಿ ಮೃತಪಟ್ಟಿರುವುದಾಗಿ ವರದಿ ತಿಳಿಸಿವೆ.
ಶೋಷಿತ ಸಮುದಾಯಗಳ ಹೋರಾಟಗಳ ಮೇಲೆ ಬೆಳಕು ಚೆಲ್ಲುವ ಸಿನಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ ಟೆಲಿಫಿಲ್ಮ್ ‘ಕಕ್ಕ’ದಲ್ಲಿ ಪಂಚಮಿಯ ಪಾತ್ರ ಲಕ್ಷ್ಮಿಕಾಗೆ ಭಾರೀ ಜನಪ್ರಿಯತೆ ತಂದು ಕೊಟ್ಟಿತ್ತು. ಅದರಲ್ಲಿ ಆಕೆ ಮನೋಜ್ಞವಾಗಿ ನಟಿಸಿದ್ದು, ಚಿತ್ರದಲ್ಲಿನ ಆಕೆಯ ಅಭಿನಯವು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಪಾತ್ರದ ನಟನೆಗೆ ಪ್ರೇಕ್ಷಕರಿಂದ ಲೂ ಭರಫುರ ಮನ್ನಣೆ ಮತ್ತು ಮೆಚ್ಚುಗೆ ದೊರಕಿತ್ತು.

ದುಲ್ಕರ್ ಸಲ್ಮಾನ್ ಅವರ ‘ಒರು ಯಮಂದನ್ ಪ್ರೇಮಕಥಾ,’ ‘ಪಂಚವರ್ಣತಥಾ,’ ‘ಸೌದಿ ವೆಲ್ಲಕ್ಕ,’ ‘ಪುಜಯಮ್ಮ,’ ‘ಉಯರೆ,’ ‘ಒರು ಕುಟ್ಟನಾಡನ್ ಬ್ಲಾಗ್,’ ಮತ್ತು ‘ನಿತ್ಯಹರಿತ ನಾಯಕನ್’ ಆಕೆ ನಟಿಸಿದ ಪ್ರಮುಖ ಸಿನಿಮಾಗಳು. ಕೊಚ್ಚಿಯ ವಜವೇಲಿಲ್ ಮೂಲದ ಲಕ್ಷ್ಮಿಕಾ ಶಾರ್ಜಾದ ಬ್ಯಾಂಕಿಂಗ್ ಕ್ಷೇತ್ರದಲ್ಲೂ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಪ್ರಶಾಂತ್ ಬಿ ಮೊಲಿಕಲ್ ನಿರ್ದೇಶನದ ಮತ್ತು ಅಮಲ್ ಮೋಹನ್ ಬರೆದ ಥ್ರಿಲ್ಲರ್ ‘ಕೂನ್’ ಚಿತ್ರದಲ್ಲಿ ಲಕ್ಷ್ಮಿಕಾ ನಟಿಸಿದ್ದರು. ವಿಜೀಶ್ ಮಣಿ ನಿರ್ದೇಶನದ ‘ಪುಳಯಮ್ಮ’ ನಾಟಕ ಚಿತ್ರದಲ್ಲಿನ ದೇವಯಾನಿ ಟೀಚರ್ ಪಾತ್ರಕ್ಕಾಗಿ ಅವರು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದರು.

ಸಿನೆಮಾ
Toxic | ಯಶ್ ನಟನೆಯ ಹೊಸ ಸಿನಿಮಾ ʼಟಾಕ್ಸಿಕ್ʼ ಟೀಸರ್ ರಿಲೀಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದ ‘ಯಶ್ 19’ ಸಿನಿಮಾದ ಅತೀದೊಡ್ಡ ಅಪ್ಡೇಟ್ ಇತ್ತೀಚೆಗಷ್ಟೇ ಹೊರಬಿದ್ದಿದೆ.ಆ ಮೂಲಕ ‘ಕೆಜಿಎಫ್-2’ ರಿಲೀಸ್ ಅದ 20 ತಿಂಗಳ ನಂತರ ಸಿನಿರಂಗದಲ್ಲಿ ಯಶ್ ಮೇನಿಯ ಮತ್ತೆ ಶುರುವಾಗಿದೆ (Toxic).
ಇತ್ತೀಚೆಗಷ್ಟೇ ಯಶ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ‘ಲೋಡಿಂಗ್’ ಎಂದು ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿ, ಡಿ.9 ರ ಬೆಳಗ್ಗೆ 9:55 ಕ್ಕೆ ಟೈಟಲ್ ಅನೌನ್ಸ್ ಮೆಂಟ್ ಮಾಡುವುದಾಗಿ ಹೇಳಿದ್ದರು.
ಸಿನಿಮಾಕ್ಕೆ ʼಟಾಕ್ಸಿಕ್ʼ (Toxic) ಎಂದು ಟೈಟಲ್ ಇಡಲಾಗಿದೆ. ಅಂದುಕೊಂಡಂತೆ ಈ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ.
1 ನಿಮಿಷ 18 ಸೆಕೆಂಡ್ ಗಳ ಟೈಟಲ್ ವಿಡಿಯೋದಲ್ಲಿ ಜೋಕರ್ ರೀತಿಯ ಮುಖವನ್ನು ಹೋಲುವ ಕ್ಯಾರೆಕ್ಟರ್ ನ್ನು ತೋರಿಸಲಾಗಿದೆ. ಮೇಲ್ನೊಟಕ್ಕೆ ಹಾಲಿವುಡ್ ರೀತಿಯ ದೃಶ್ಯ ಗಳ ವಿಎಫ್ ಎಕ್ಸ್ ಗಳನ್ನು ತೋರಿಸಲಾಗಿದೆ.
2025 ರ ಏಪ್ರಿಲ್ 10 ರಂದು ಸಿನಿಮಾ ತೆರೆ ಕಾಣಲಿದೆ. ಯಶ್ ಬಿಟ್ಟು ಬೇರೆ ಯಾವ ಪಾತ್ರವರ್ಗವನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.
‘ಯಶ್ 19’ ಅಪ್ಡೇಟ್ ಬಳಿಕ ಸಿನಿಮಾದ ಬಗ್ಗೆ ಟ್ರೆಂಡ್ ಹೆಚ್ಚಿದೆ. ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಲಿದ್ದಾರೆ ಎನ್ನುವ ಮಾತುಗಳು ಹಬ್ಬಿದೆ. ಇದರೊಂದಿಗೆ ಮೃಣಾಲ್ ಠಾಕೂರ್ ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು ಕೆಲ ವರದಿಗಳ ಪ್ರಕಾರ ಸಿನಿಮಾದಲ್ಲಿ ಮೂವರು ನಾಯಕಿಯರು ಇರಲಿದ್ದಾರೆ ಎನ್ನಲಾಗಿದೆ.
ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಕಳೆದ ಕೆಲ ಸಮಯದಿಂದ ಯಶ್ ಹಾಲಿವುಡ್ ತಂತ್ರಜ್ಞರನ್ನು ಭೇಟಿ ಆಗುವುದರ ಜೊತೆ ಹಾಲಿವುಡ್ ನಾಡಿನಲ್ಲೇ ಕೆಲ ಸಮಯ ಕಳೆದಿದ್ದರು. ಆ ಕಾರಣದಿಂದ ಈ ಸಿನಿಮಾದಲ್ಲಿ ಭಾರೀ ಆ್ಯಕ್ಷನ್ ಇರಲಿದೆ ಎನ್ನಲಾಗುತ್ತಿದೆ.
ಸಿನೆಮಾ
Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲ ದಿನಗಳ ಬಳಿಕ ಮುಂಗಾರು ಮಳೆ’ ಸಿನಿಮಾ ಖ್ಯಾತಿಯ ನಟಿ ಪೂಜಾ ಗಾಂಧಿ, ತಮ್ಮ ಪತಿ ವಿಜಯ್ ಅವರೊಂದಿಗೆ ಕುವೆಂಪು ಅವರ ಹುಟ್ಟೂರು ಕುಪ್ಪಳಿಗೆ ಭೇಟಿ ನೀಡಿದ್ದಾರೆ. ಕವಿ ಶೈಲದಲ್ಲಿ ಸಮಯ ಕಳೆದಿರುವ ಅವರು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೂಜಾ ಗಾಂದಿಯವರು ಹೊರ ರಾಜ್ಯದವರಾದರೂ ಮದುವೆಯಾದ ತಕ್ಷಣ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕನ್ನಡ ಸಾರಸ್ವತ ಲೋಕದ ದಿಗ್ಗಜ ಕುವೆಂಪು ಬಾಳಿ ಬದುಕಿದ ಮನೆಗೆ ಭೇಟಿ ನೀಡಿ ಅಲ್ಲಿ ಫೋಟೊ ತೆಗೆಸಿಕೊಂಡಿರುವುದು ಕನ್ನಡಿಗರ ಖುಷಿಗೆ ಕಾರಣವಾಗಿದೆ.

ಬೆಂಗಳೂರಿನ ಯಲಹಂಕದಲ್ಲಿ ನಟಿ ಪೂಜಾ ಗಾಂಧಿ ಮತ್ತು ಉದ್ಯಮಿ ವಿಜಯ್ ಘೋರ್ಪಡೆ ನವೆಂಬರ್ 29 ರಂದು ಕುವೆಂಪು ಅವರ ಪರಿಕಲ್ಪನೆಯ ಮಂತ್ರ ಮಾಂಗಲ್ಯ ಪದ್ಧತಿಯಂತೆ ನಡೆದಿತ್ತು. . ವಿವಾಹಗಳಿಗೆ ಜನರು ಮಾಡುತ್ತಿದ್ದ ದುಂದುವೆಚ್ಚ, ಅದರಿಂದ ಉಂಟಾಗುತ್ತಿದ್ದ ಸಾಲಬಾಧೆ, ಅಲ್ಲಿದ್ದ ಕಂದಾಚಾರ, ಪುರೋಹಿತಶಾಹಿ ವ್ಯವಸ್ಥೆ ಮುಂತಾದವುಗಳ ವಿರುದ್ಧವಿದ್ದ ಕುವೆಂಪು ಅವರು, ಜನರು ಸರಳವಾಗಿ ಮದುವೆ ಮಾಡಿಕೊಂಡು ಬದುಕಬೇಕೆಂದು ಹಂಬಲಿಸಿದ್ದರು. ಇದಕ್ಕಾಗಿ ಹುಟ್ಟುಹಾಕಿದ ಹೊಸ ಪರಿಕಲ್ಪನೆಯೆ ’ಮಂತ್ರ ಮಾಂಗಲ್ಯ’.

ಈ ಮಂತ್ರ ಮಾಂಗಲ್ಯ ಮದುವೆ ಮತ್ತು ಪೂಜಾ ಗಾಂಧಿ ಕುರಿತಂತೆ ಖ್ಯಾತ ಗೀತ ಸಾಹಿತಿ ಕವಿರಾಜ್ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ‘ಕುವೆಂಪು ಅವರ ಆದರ್ಶವನ್ನು ಬದುಕಲ್ಲಿ ಹಾಸುಹೊಕ್ಕಾಗಿಸಿರುವ ಪೂಜಾ ಗಾಂಧಿ ನಿಜವಾದ ಕನ್ನಡತಿ’ ಎಂದು ಹೊಗಳಿದ್ದರು . ಅದಾದ ಬಳಿಕ ಪೂಜಾ ಗಾಂದಿ ಕವಿಶೈಲಕ್ಕೂ ಭೇಟಿ ನೀಡಿರುವುದು ಅವರ ಕುವೆಂಪು ಬಗೆಗಿನ ಪ್ರೀತಿಯನ್ನು ತೋರಿಸುತ್ತದೆ.

ಕವಿರಾಜ್ ಪೋಸ್ಟ್ನಲ್ಲಿ ಏನಿದೆ?
“ಪೂಜಾ ಗಾಂಧಿ- ಹುಟ್ಟು ಕನ್ನಡತಿ ಅಲ್ಲದಿದ್ದರೂ ಅವರ ಅಪಾರ ಕನ್ನಡ ಪ್ರೇಮ, ಅವರು ಕನ್ನಡದ ಕುರಿತು ಕಾಳಜಿಯಿಂದ ಮಾಡುತ್ತಿರುವ ಆರ್ ಎಂಡ್ ಡಿ ಮಾದರಿಯ ಕೆಲವು ಕಾರ್ಯಗಳನ್ನು ನನ್ನೊಂದಿಗೆ ಶೇರ್ ಮಾಡಿದಾಗ ಓದಿ ಮೆಚ್ಚುಗೆಯ ಜೊತೆ ಆಶ್ಚರ್ಯವಾಗಿತ್ತು. ಆದರೆ ಅದಕ್ಕೆ ನೂರು ಪಟ್ಟು ಮಹದಾಶ್ಚರ್ಯವಾಗಿದ್ದು ಇತ್ತೀಚೆಗೆ ಕರೆ ಮಾಡಿ, ‘ತಾನು ಮಂತ್ರ ಮಾಂಗಲ್ಯ ಮಾದರಿಯಲ್ಲಿ ವಿವಾಹವಾಗುತ್ತಿದ್ದೇನೆ’ ಎಂದಾಗ. ಕನ್ನಡ ಜನತೆ ಅವರಿಗೆ ಒಂದು ಐಡೆಂಟಿಟಿ ಕೊಟ್ಟ ಋಣವನ್ನು ಈ ರೀತಿ ಪದೇ ಪದೇ ಅವರು ತೀರಿಸುತ್ತಿರುವ ಪರಿಯನ್ನು ಹೊಗಳಲು ಮಾತೇ ಇಲ್ಲಾ” ಎಂದು ಕವಿರಾಜ್ ತಿಳಿಸಿದ್ದಾರೆ.

ಮದುವೆಯ ಬಳಿಕ ಪೂಜಾ ಗಾಂದಿ ಪತಿಯ ಜೊತೆಗೆ ಕವಿಶೈಲಕ್ಕೂ ಭೇಟಿಕೊಟ್ಟಿದ್ದಾರೆ. ಇಲ್ಲಿಯ ಸುಂದರ ತಾಣದಲ್ಲಿ ಜೋಡಿಯಾಗಿ ನಿಂತುಕೊಂಡು ಚೆಂದದ ಪೋಸ್ ಕೂಡ ಕೊಟ್ಟಿದ್ದಾರೆ. ಆ ಕ್ಷಣದ ಫೋಟೋಗಳನ್ನ ಸ್ವತಃ ಪೂಜಾ ಗಾಂಧಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್ನಲ್ಲಿಯೇ ಪೋಸ್ಟ್ ಕೂಡ ಮಾಡಿಕೊಂಡಿದ್ದಾರೆ. ಸದ್ಯ ಪೂಜಾ ಗಾಂಧಿ ಕವಿಶೈಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮದುವೆಯಾದ ಕೂಡಲೇ ವಿದೇಶಕ್ಕೆ ಹಾರುವ ನಟ-ನಟಿಯರ ಮಧ್ಯೆ ಪೂಜಾ ಗಾಂಧಿ ವಿಶೇಷವಾಗಿ ಕಂಡಿದ್ದಾರೆ. ಪೂಜಾ ಗಾಂಧಿ- ವಿಜಯ್ ಘೋರ್ಪಡೆ ದಂಪತಿ ಮದುವೆ ಬಳಿಕ ಮೊದಲ ಪ್ರಯಾಣವೆಂಬಂತೆ ಪೂಜಾ ಗಾಂಧಿ ಕವಿಶೈಲ ಪ್ರವಾಸ ನಡೆಸಿದ್ದಾರೆ. ಬಳಿಕ ಅಲ್ಲಿಯೆ ಇರುವ ಕವಿ ನೆಲೆಸಿದ್ದ ಮನೆಗೂ ಭೇಟಿ ನೀಡಿ ಫೋಟೊ ತೆಗೆಸಿಕೊಂಡಿದ್ದಾರೆ

ನವ ದಂಪತಿಗೆ ಶುಭ ಹಾರೈಸಿರುವ ಅಭಿಮಾನಿಗಳು ಪೂಜಾ ಗಾಂಧಿ ಅವರ ಸರಳತೆಗೆ ಹಾಗೂ ಕನ್ನಡ ಹಾಗೂ ಕುವೆಂಪು ಅವರ ಮೇಲಿನ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಪೂಜಾ ಗಾಂಧಿ ಕವಿಶೈಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹಚ್ಚ ಹಸಿರಿನ ತಾಣ ಕವಿಶೈಲ ಎಂತವರನ್ನಾದರೂ ತನ್ನತ್ತ ಸೆಳೆಯುತ್ತದೆ. ಜೊತೆಗೆ ಕುವೆಂಪು ಮೇಲಿನ ಅಭಿಮಾನಕ್ಕೂ ಈ ಜಾಗಕ್ಕೆ ಭೇಟಿ ನೀಡುವವರಿದ್ದಾರೆ.

ಕವಿ ಶೈಲದ ಬಗ್ಗೆ
ಕವಿ ಕುವೆಂಪು ಅವರ ಮನೆ ಕವಿ ಶೈಲದ ಕೆಳಭಾಗದಲ್ಲಿದೆ. ಕಲ್ಲು ಗೋಪುರ, ಕವಿಯ ಭಾವಗಳಿಗೆ ಜೀವ ತುಂಬುವ ಮಂಟಪಗಳಂತೆ ನೋಡುಗರ ಗಮನ ಸೆಳೆಯುತ್ತದೆ. ನಡುವೆ ಹಸುರು ಹುಲ್ಲುಗಳ ಮಧ್ಯೆ, ತರುಲತೆಗಳ ಸಂಗೀತ ಜಿರುಂಡಗಳು ಆಲಿಸುತ್ತಾ ಮಲಗಿರುವ ಕುವೆಂಪು ಸಮಾಧಿ ಇದೆ.
ಇಲ್ಲಿಂದ ಪೂರ್ವ ದಿಕ್ಕಿಗೆ ನೋಡಿದರೆ ಗುಡ್ಡಗಳು ಸಾಲು ಸಾಲು ದಿಗಂತದ ತನಕವೂ ಹರಡಿರುವ ವಿಶಾಲ ನೀಲಾಕಾಶ ಕಣ್ಮನ ಸೆಳೆಯುವ ರಮಣೀಯ ದೃಶ್ಯ . ಕವಿ ಕುವೆಂಪು ಕುಳಿತು. ಕಾವ್ಯಕ್ಕೆ ಸ್ಫೂರ್ತಿ ಪಡೆದ ತಾಣವಿದು. ಇದಕ್ಕೆ ಅವರೇ ಕೊಟ್ಟ ಹೆಸರು ಕವಿ ಶೈಲ.
ಅಲ್ಲಿಂದಲೇ ದೂರದ ಕುಂದಾದ್ರಿ. ಕೊಡಚಾದ್ರಿ ಬೆಟ್ಟಗಳನ್ನು ಕಾಣಬಹುದು ಕವಿ ಶೈಲಯ ದಿಂದ ಬೆಟ್ಟವಿಳಿವ ದಾರಿಯಲ್ಲು. ನಡೆದು ಬಂದರೆ. ಕವಿಮನೆ ವನದೇವತೆಯ ಮಡಿಲಲ್ಲಿ ಶಾಂತ ವಾತಾವರಣದಿಂದ ಸದಾ ತಂಪಾಗಿ ಹುಲ್ಲು ಹಾಸಿಗೆಯ ಮೇಲಿರುವ ದಕ್ಷಿಣ ಭಾರತದ ಶಾಂತಿನಿಕೇತನವಿದೆ.
-
ರಾಷ್ಟ್ರೀಯ2 days ago
Divorce under Hindu Marriage Act : ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ʼಈʼ ನಿಯಮ ಪಾಲನೆ ಕಡ್ಡಾಯ – ಕೊರ್ಟು ಮಹತ್ವದ ಆದೇಶ ; ಏನದು ನಿಯಮ ?
-
ಅಪರಾಧ2 days ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?
-
ಸುಳ್ಯ2 days ago
Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ – ಸಂಪಾಜೆಯಲ್ಲಿ ಇಂದೋರ್ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು
-
ಮಂಗಳೂರು2 days ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ರಾಷ್ಟ್ರೀಯ2 days ago
Pancard latest update : ಪ್ಯಾನ್ ಕಾರ್ಡ್ ಕುರಿತು ಮಹತ್ವದ ಮಾಹಿತಿ – ಈ ತಪ್ಪು ಮಾಡಿದರೆ 10,000 ರೂ ದಂಡ ಗ್ಯಾರಂಟಿ
-
ಮಂಗಳೂರು1 day ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್1 day ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು
-
ಸಿನೆಮಾ2 days ago
Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ