ಅಪರಾಧ
ಪುತ್ತೂರು : ಸಹೋದರರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ
ಪುತ್ತೂರು : ಡಿ 2 : ಸಹೋದರರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಪುತ್ತೂರು ನಗರದ ಹೊರ ವಲಯದ ಕೆಮ್ಮಿಂಜೆ ಗ್ರಾಮದಲ್ಲಿ ಡಿ 1 ರಂದು ತಡ ರಾತ್ರಿ ನಡೆದಿದೆ. ಹಾವೇರಿ ಜಿಲ್ಲೆಯ ಹೊಸೂರು ನಿವಾಸಿ ಮಾದೇವಪ್ಪ ಕೊಲೆಯಾದವರು. ಇವರ ಅಣ್ಣ ನಿಂಗನ ಗೌಡ ಕೊಲೆ ಆರೋಪಿ. ಇವರಿಬ್ಬರು ವಲಸೆ ಕಾರ್ಮಿಕರಾಗಿದ್ದು , ಪ್ರಸ್ತುತ ಪುತ್ತೂರಿನಲ್ಲಿ ವಾಸಿಸುತ್ತಿದ್ದರು.
ಸಹೋದರರಿಬ್ಬರು ವಿಪರೀತ ಕುಡಿತದ ಚಟ ಹೊಂದಿದ್ದರು ಎನ್ನಲಾಗಿದೆ. ಕುಡಿದು ಅಗಾಗ ಪರಸ್ಪರ ಗಲಾಟೆ ಮಾಡುವ ಖಯಾಲಿ ಹೊಂದಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ಕೂಡ ಇಬ್ಬರು ಮದ್ಯಪಾನ ಮಾಡಿದ್ದಾರೆ. ಬಳಿಕ ಪರಸ್ಪರ ಜಗಳವಾಡಿ ಕೊಂಡಿದ್ದಾರೆ.
ಕುಡಿತದ ಮತ್ತಿನಲ್ಲಿ ನಿಂಗನ ಗೌಡನು, ಮಾದೇವಪ್ಪನ ಮೇಲೆ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಆತ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ. ತಮ್ಮ ಉಸಿರು ಚೆಲ್ಲಿ ಬೀಳುತ್ತಲೆ ಆರೋಪಿ ನಿಂಗನ ಗೌಡ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಆರೋಪಿಯ ವಿರುದ್ದ ಕೊಲೆ ಕೇಸ್ ದಾಖಲು ಮಾಡಿಕೊಂಡಿದ್ದಾರೆ
ಅಪರಾಧ
Online acquaintance-ಆನ್ ಲೈನ್ ಪರಿಚಿತ ಗೆಳೆಯ ಮಹಿಳೆಯ ಜೀವಾಂತ್ಯಗೊಳಿಸಿದ
ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎಂ. ಶೋಭಾ (48) ಕೊಲೆ ಪ್ರಕರಣದ ಆರೋಪಿ ನವೀನ್ ಗೌಡ (28) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ನವೀನ್ ಗೌಡ, ನಗರದ ಸಾಫ್ಟ್ವೇರ್ ಕಂಪನಿಯೊಂದರ ಉದ್ಯೋಗಿ. ಕೊಡಿಗೇಹಳ್ಳಿ ಬಳಿಯ ಗಣೇಶ ನಗರದ ಶೋಭಾ ಅವರನ್ನು ಏ. 18ರಂದು ಕೊಲೆ ಮಾಡಿ ಪರಾರಿಯಾಗಿದ್ದ.
ಶೋಭಾ ಮಗಳು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು. ಶೋಭಾ ಅವರು ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದರು. ಎರಡನೇ ಮಗಳ ಜೊತೆ ನೆಲೆಸಿದ್ದರು. ಅವರ ಪತಿ ಹಾಗೂ ಮೊದಲ ಮಗಳು ಪ್ರತ್ಯೇಕವಾಗಿ ವಾಸವಿದ್ದರು. ಏ. 18ರಂದು ಬೆಳಿಗ್ಗೆ ಎರಡನೇ ಮಗಳು ತಮ್ಮ ಪತಿ ಮನೆಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಮನೆಗೆ ಬಂದಿದ್ದ ನವೀನ್ ಗೌಡ, ಶೋಭಾ ಅವರನ್ನು ಕತ್ತು ಹಿಸುಕಿ ಕೊಂದಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.
ಸಾಮಾಜಿಕ ಮಾಧ್ಯಮದಿಂದ ಪರಿಚಯ: ‘ಶೋಭಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಖಾತೆ ಹೊಂದಿದ್ದರು. ಅದೇ ಖಾತೆಗೆ ಆರೋಪಿ ನವೀನ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಶೋಭಾ ಸ್ವೀಕರಿಸಿದ್ದರು. ನಂತರ, ಇಬ್ಬರೂ ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು ಎಂದು ಪೊಲೀಸರು ಹೇಳಿದರು.
ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದ ಇಬ್ಬರೂ ಮಾತುಕತೆ ಆರಂಭಿಸಿದ್ದರು. ಇಬ್ಬರ ನಡುವೆ ಸಲುಗೆಯೂ ಬೆಳೆದಿತ್ತು ಎಂಬ ಮಾಹಿತಿ ಇದೆ. ಭೇಟಿಯಾಗುವುದಾಗಿ ಹೇಳಿದ್ದ ನವೀನ್, ಕೆಲ ದಿನಗಳ ಹಿಂದೆಯಷ್ಟೇ ಶೋಭಾ ಅವರ ಮನೆಗೆ ಬಂದು ಹೋಗಿದ್ದ. ಏ. 18ರಂದು ಎರಡನೇ ಬಾರಿ ಮನೆಗೆ ಬಂದಿದ್ದ ನವೀನ್ ಹಾಗೂ ಶೋಭಾ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ’ ಎಂದು ತಿಳಿಸಿದರು.
ಕೊಲೆ ನಂತರ ಆರೋಪಿ ನವೀನ್, ಶೋಭಾ ಅವರ ಕಾರಿನಲ್ಲಿಯೇ ಸ್ಥಳದಿಂದ ಪರಾರಿಯಾಗಿದ್ದ. ಸಲುಗೆ ಕಾರಣಕ್ಕೆ ಈ ಕೊಲೆ ನಡೆದಿರುವ ಮಾಹಿತಿ ಇದೆ’ ಎಂದು ಪೊಲೀಸರು ಹೇಳಿದರು.
ಅಪರಾಧ
Everest fish curry-ಎವರೆಸ್ಟ್ ಫಿಶ್ಕರಿ ಮಸಾಲಾದಲ್ಲಿ ಎಥಿಲಿನ್ ಆಕ್ಸೆಡ್ ಪತ್ತೆ
ಸಿಂಗಾಪುರ: ಭಾರತದ ಜನಪ್ರಿಯ ಉತ್ಪನ್ನ `ಎವರೆಸ್ಟ್ ಫಿಶ್ಕರಿ ಮಸಾಲಾ’ದಲ್ಲಿ ಅನುಮತಿಸಿರುವುದಕ್ಕಿಂತ ಅಧಿಕ ಮಟ್ಟದ ಎಥಿಲಿನ್ ಆಕ್ಸೆಡ್ ರಾಸಾಯನಿಕವಿದೆ ಎಂಬ ಕಾರಣಕ್ಕೆ ಈ ಮಸಾಲಾ ಉತ್ಪನ್ನವನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸಿಂಗಾಪುರ ಆದೇಶಿಸಿದೆ.
ಎಥಿಲೀನ್ ಆಕ್ಸೆಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ ಮತ್ತು ಬ್ಯಾಕ್ಟಿರಿಯಾಗಳ ಮಾಲಿನ್ಯವನ್ನು ತಡೆಗಟ್ಟಲು ಕೃಷಿ ಉತ್ಪನ್ನಗಳ ಧೂಮೀಕರಣ(ಕೀಟನಿಯಂತ್ರಣದ ಒಂದು ವಿಧಾನ)ಕ್ಕೆ ಮಾತ್ರ ಬಳಸಲಾಗುತ್ತದೆ ಎಂದು ಸಿಂಗಾಪುರ ಫುಡ್ ಏಜೆನ್ಸಿಯ ಹೇಳಿಕೆ ತಿಳಿಸಿದ್ದು ಎವರೆಸ್ಟ್ ಫಿಶ್ಕರಿ ಮಸಾಲಾವನ್ನು ಆಮದು ಮಾಡಿಕೊಳ್ಳುವ ಎಸ್ಪಿ ಮುತ್ತಯ್ಯ ಆ್ಯಂಡ್ ಸನ್ಸ್ ಪ್ರೈ.ಲಿ. ಸಂಸ್ಥೆಗೆ ಸಿಂಗಾಪುರ ಮಾರುಕಟ್ಟೆಯಿಂದ ಉತ್ಪನ್ನವನ್ನು ತಕ್ಷಣ ವಾಪಾಸು ಪಡೆಯುವಂತೆ ಸೂಚಿಸಿದೆ.
ಸುಳ್ಯ
Kadaba-ಕಡಬ : ಕುಮಾರಧಾರ ನದಿಯಲ್ಲಿ ಮೊಸಳೆ ಮೃತಪಡಲು ಪ್ಲಾಸ್ಟಿಕ್ ಸೇವನೆ ಯೇ ಕಾರಣ – ನದಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಪರಿಸರ ಪ್ರೇಮಿಗಳ ಕಿಡಿ
ಕಡಬ ಸಮೀಪದ ಪುಳಿಕುಕ್ಕು ಬಳಿ ಕುಮಾರಧಾರ ನದಿಯಲ್ಲಿ ಮೃತಪಟ್ಟ ಮೊಸಳೆಯ ಸಾವಿಗೆ ಪ್ಲಾಸ್ಟಿಕ್ ಸೇವನೆ ಮಾಡಿರುವುದೇ ಕಾರಣ ಎನ್ನುವುದು ಮೊಸಳೆಯ ಮೃತದೇಹದ ಮರಣೋತ್ತರ ಪರೀಕ್ಷೆಯ ವೇಳೆ ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆ ವೇಳೆ ಮೃತ ಮೊಸಳೆಯ ಹೊಟ್ಟೆಯಲ್ಲಿ 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ಹಾಗೂ ಮತ್ತಿತರ ತ್ಯಾಜ್ಯ ಪತ್ತೆಯಾಗಿದೆ.
ಕಡಬ-ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು ಸೇತುವೆ ಕೆಳಭಾಗದ ಕುಮಾರಧಾರ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆಯಾಗಿತ್ತು.. ಅರಣ್ಯ ಇಲಾಖೆಯ ಏನೆಕಲ್ಲು ನರ್ಸರಿ ಪ್ರದೇಶದಲ್ಲಿ ಮೊಸಳೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡಬ ತಾಲೂಕು ಪಶು ವೈದ್ಯಾಧಿಕಾರಿ ಡಾ.ಅಜಿತ್ ನಡೆಸಿದರು.
ಮರಣೋತ್ತರ ಪರೀಕ್ಷೆ ವೇಳೆ ಮೊಸಳೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್ ಪತ್ತೆಯಾಗಿತ್ತು. . ಈ ತ್ಯಾಜ್ಯ ಮೊಸಳೆಯ ಹೊಟ್ಟೆಯಲ್ಲಿ ಜೀರ್ಣಗೊಳ್ಳದೆ ಅಸೌಖ್ಯಗೊಂಡು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಇದೊಂದು ಹೆಣ್ಣು ಮೊಸಳೆಯಾಗಿದ್ದು ನಾಲ್ಕು ವರ್ಷ ವಯಸ್ಸಿನದ್ದು ಎಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಏನೆಕಲ್ಲಿನ ನರ್ಸರಿ ಪ್ರದೇಶದಲ್ಲಿ ಮೊಸಳೆ ಕಳೆಬರಹದ ಅಂತ್ಯ ಕ್ರಿಯೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಅರಣ್ಯ ಉಪವಿಭಾಗ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಪಂಜ ವಲಯ ಅರಣ್ಯಾಕಾರಿ ಗಿರೀಶ್, ಉಪ ವಲಯಾರಣ್ಯಾಕಾರಿಗಳಾದ ಸುಬ್ರಹ್ಮಣ್ಯ, ಅಜಿತ್ ಮತ್ತಿತರರು ಭಾಘವಹಿಸಿದ್ದರು.
ಕೆಲವು ಕಿಡಿಗೇಡಿಗಳು ಕೋಳಿ ತ್ಯಾಜ್ಯ, ದನ ಕಡಿದು ಮಾಂಸ ಮಾಡಿರುವುದರ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಎಸೆಯುತ್ತಾರೆ. ಗೋ ಕಳ್ಳರು ರಾತ್ರಿ ಹೊತ್ತು ಯಾರೂ ಇಲ್ಲದ ವೇಳೆ ನದಿಗೆ ತ್ಯಾಜ್ಯ ಎಸೆದರೆ, ಕೋಳಿ ತ್ಯಾಜ್ಯ ಎಸೆಯುವವರು ರಾತ್ರಿ ತಮ್ಮ ಅಂಗಡಿ ಬಂದ್ ಮಾಡಿದ ಬಳಿಕ ಜನಸಂದಣೀ ಇಲ್ಲದಿದ್ದ ಸಮಯ ಗಮನಿಸಿ ನದಿಗೆ ಅಥವಾ ತೋಡಿಗೆ ಎಸೆದು ಬರುತ್ತಾರೆ. ಇದರಿಂದ ನೀರು ಕಲುಷಿತಗೊಂಡು, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಇನ್ನು ಇದನ್ನು ಸೇವಿಸುವ ಜಲಚರಗಳು ಸಾವನ್ನಪ್ಪುತ್ತಿವೆ. ಇದರ ವಿರುದ್ದ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ
-
ಪುತ್ತೂರು2 days ago
ಅರುಣ್ ಪುತ್ತಿಲ ಮನೆ ಬಳಿ ಅಣ್ಣಾಮಲೈಗೆ ಅದ್ದೂರಿ ಸ್ವಾಗತ
-
ದಕ್ಷಿಣ ಕನ್ನಡ2 days ago
Annamali Road Show ಅಣ್ಣಾಮಲೈ ಪುತ್ತೂರಿನ ರೋಡ್ ಶೋ ಸಮಯ ಬದಲಾವಣೆ – ಮಾಹಿತಿ ನೀಡದ ಪುತ್ತೂರು ಬಿಜೆಪಿ – ಕಾಲ್ ಎತ್ತದ ಮುಖಂಡರು ; ಗೊಂದಲದಲ್ಲಿ ಕಾರ್ಯಕರ್ತರು
-
ದಕ್ಷಿಣ ಕನ್ನಡ2 days ago
Ashok Kumar Rai | ಮಿಸ್ಟರ್ ಅಶೋಕ್ ರೈ ‘ಯೂ ಆರ್ ಲಯನ್ ಆಫ್ ಸೌತ್ ಕೆನರಾ ಯೂ ಆರ್ ಗ್ರೇಟ್ ಎಂಎಲ್ಎ’ – ಶಾಸಕ ಅಶೋಕ್ ರೈಯನ್ನು ಹೊಗಳಿದ ಕಾಂಗ್ರೇಸ್ ಹೈಕಮಾಂಡ್ ಮಟ್ಟದ ನಾಯಕ ಸುರ್ಜೆವಾಲ
-
ದಕ್ಷಿಣ ಕನ್ನಡ2 days ago
ವಿಟ್ಲ : ದುರಸ್ತಿಗೆ ಬಾವಿಗಿಳಿದ ಇಬ್ಬರು ಅಮ್ಲಜನಕ ಕೊರತೆಯಿಂದ ಮೃತ್ಯು
-
ಅಪರಾಧ2 days ago
Everest fish curry-ಎವರೆಸ್ಟ್ ಫಿಶ್ಕರಿ ಮಸಾಲಾದಲ್ಲಿ ಎಥಿಲಿನ್ ಆಕ್ಸೆಡ್ ಪತ್ತೆ
-
ರಾಜಕೀಯ2 days ago
ಪುತ್ತೂರಿನ ಇಂದಿನ ಬಿಜೆಪಿ ರೋಡ್ ಶೋ ಸಮಯ ಬದಲಾವಣೆ – ನಡುಮಧ್ಯಾಹ್ನ ನಡೆಸಲಿದ್ದಾರೆ ಅಣ್ಣಾಮಲೈ ರೋಡ್ ಶೋ
-
ಮಂಗಳೂರು2 days ago
Heat wave-ರಾಜ್ಯದಲ್ಲಿ ಇನ್ನೂ ಐದು ದಿನ ಉಷ್ಣ ಮಾರುತ ದಾಳಿ; ಕರಾವಳಿಯಲ್ಲಿ ಮುಂದುವರಿದ ಪ್ರಖರ ಬಿಸಿಲು
-
ನಿಧನ ವಾರ್ತೆ21 hours ago
Run over-ತಂದೆಯಿಂದಲೇ ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಪುಟ್ಟ ಕಂದಮ್ಮ ದುರ್ಮರಣ