Connect with us

ರಾಜಕೀಯ

Siddaramaiah BioPic | ಸದ್ದಿಲ್ಲದೆ ತಯಾರಾಗುತ್ತಿದೆ ಸಿದ್ದರಾಮಯ್ಯ ಬಯೋಪಿಕ್ : ಸಿದ್ದು ಪಾತ್ರದಲ್ಲಿ ಮಿಂಚಲಿದ್ದಾರೆ ಖ್ಯಾತ ತಮಿಳು ನಟ ವಿಜಯ್ ಸೇತುಪತಿ

Ad Widget

Ad Widget

Ad Widget

Ad Widget Ad Widget

ಬೆಂಗಳೂರು: ಸದ್ಯ ಬಯೋಪಿಕ್‌ಗಳು ಟ್ರೆಂಡಿಂಗ್‌ನಲ್ಲಿವೆ. ಈಗಾಗಲೇ ಸಿನಿಮಾ ತಾರೆಯರು, ಕ್ರಿಕೆಟ್, ರಾಜಕೀಯ ವ್ಯಕ್ತಿಗಳು, ಸಾಧಕರ ಎಷ್ಟೋ ಬಯೋಪಿಕ್‌ಗಳು ತೆರೆ ಮೇಲೆ ಬಂದು ಕಮಾಲ್ ಮಾಡಿದೆ. ಈಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ (Siddaramaiah BioPic )ತಯಾರಿಯ ಕೂಗು ಕೇಳಿ ಬರುತ್ತಿದೆ.

Ad Widget

Ad Widget

Ad Widget

Ad Widget

Ad Widget

ಸಿದ್ದರಾಮೋತ್ಸವದ ಬಳಿಕ ಸಿದ್ದರಾಮಯ್ಯ ಬಯೋಪಿಕ್ ಬರಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಿದ್ದು ಬೆಂಬಲಿಗರು ಕಥೆ, ಚಿತ್ರಕಥೆ ಬರೆದಿಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಸಿದ್ದರಾಮಯ್ಯ ಅವರ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಸಿದ್ದು ಬೆಂಬಲಿಗರು ವಿಜಯ್ ಸೇತುಪತಿ ಅವರನ್ನು ಕಾಂಟ್ಯಾಕ್ಟ್ ಮಾಡಿದ್ದು, ಅದಕ್ಕೆ ವಿಜಯ್ ಸೇತುಪತಿ ಅವರು ಪ್ರಾಥಮಿಕ ಹಂತದಲ್ಲಿ ಓಕೆ ಎಂದಿದ್ದಾರಂತೆ.

Ad Widget

Ad Widget

ಸಿದ್ದು ಬೆಂಬಲಿಗರ ಬಳಿ ಸಿನಿಮಾ ಮಾಡುವಷ್ಟು ಹಣ ಇಲ್ಲದ ಕಾರಣ, ಈಗ ನಿರ್ಮಾಪಕರ ಮೂಲಕವಾಗಿ ಬೆಂಬಲಿಗರು ಸಿದ್ದು ಬಯೋಪಿಕ್ ಮಾಡಲು ರೆಡಿ ಇದ್ದಾರೆ. ಈ ಚಿತ್ರಕ್ಕೆ ಶಾಸಕರೋರ್ವರು ಹಣ ಹೂಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಸಿನಿಮಾ ಆಗಲು ಸಿದ್ದರಾಮಯ್ಯ ಅವರ ಅನುಮತಿ ಬೇಕು. ಸಿದ್ದರಾಮಯ್ಯ ಅವರ ಬಳಿ ಒಮ್ಮೆ ಈ ಬಗ್ಗೆ ಚರ್ಚೆ ಮಾಡಲಾಗಿದ್ದು, ಆದರೆ ಅವರಿನ್ನೂ ಒಕೆ ಅಂತ ಹೇಳಿಲ್ಲ.

Ad Widget

Ad Widget

ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು “ನಾನು ಸಿದ್ದು ಬಯೋಪಿಕ್ ಮಾಡುತ್ತಿಲ್ಲ, ಸಿದ್ದು ಸರ್ ಓಕೆ ಅಂದರೆ ಉತ್ತರ ಕರ್ನಾಟಕದ ಕೆಲವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ. ಸಾಹೇಬ್ರು ಓಕೆ ಅಂದರೆ ಚುನಾವಣೆ ಬರುವ ಮುನ್ನವೇ ಈ ಚಿತ್ರ ತೆರೆಗೆ ಬರಲಿದೆ. ಸಿದ್ದರಾಮಯ್ಯ ಅವರ ಜನಪರ ಯೋಜನೆಗಳು, ಸಾಮಾಜಿಕ ಕಳಕಳಿ ವಿಚಾರವಾಗಿ ಸಿನಿಮಾ ಬರಲಿದೆಯಂತೆ” ಎಂದಿದ್ದಾರೆ.

Ad Widget

Ad Widget

“ಚುನಾವಣೆ ಸಲುವಾಗಿ ಈ ಸಿನಿಮಾ ಮಾಡುತ್ತಿಲ್ಲ, ಅವರ ಅಭಿಮಾನಿಗಳು ಈ ಸಿನಿಮಾ ಬರಬೇಕು ಎಂದು ಆಶಿಸುತ್ತಿದ್ದಾರೆ. ಚುನಾವಣೆಗಾಗಿ ಈ ರೀತಿ ಮಾಡಬೇಕಾದ ಅವಶ್ಯಕತೆಯಿಲ್ಲ. ಸಿದ್ದರಾಮಯ್ಯ ಜೀವನಚರಿತ್ರೆ, ರಾಜಕೀಯ ಜೀವನ ಈ ಸಿನಿಮಾದಲ್ಲಿ ಇರಲಿದೆ. ಸ್ಕ್ರಿಪ್ಟ್ ಅಂತೂ ತುಂಬ ಚೆನ್ನಾಗಿದೆ” ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ. ಈ ಚಿತ್ರದ ನಿರ್ದೇಶಕರು ಯಾರು ಎಂಬ ಕುತೂಹಲ ಶುರುವಾಗಿದೆ.

ಬಯೋಪಿಕ್ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡಿದ್ದು, “ಕನಕಗಿರಿ ಕ್ಷೇತ್ರದವರು ಸಿನಿಮಾ ಮಾಡ್ತೀವಿ ಅಂತ ಒಂದು ವಾರದ ಹಿಂದೆ ನನ್ನ ಕಾಂಟ್ಯಾಕ್ಟ್ ಮಾಡಿದ್ದರು. ಅದರ ಬಗ್ಗೆ ಇನ್ನೂ ನಿರ್ಧಾರ ತಗೊಂಡಿಲ್ಲ. ನನಗೆ ನಟನೆ ಗೊತ್ತಿಲ್ಲ, ನಾನು ಸಿನಿಮಾದಲ್ಲಿ ನಟಿಸುತ್ತಿಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Click to comment

Leave a Reply

ಅಂತರ ರಾಜ್ಯ

Mungekar-ಮುಸ್ಲಿಮರಿಗೆ ದೇಶದ ಸಂಪತ್ತಿನಲ್ಲಿ ಮೊದಲ ಹಕ್ಕಿದೆ ಎಂದು ಸಿಂಗ್ ಹೇಳಿಲ್ಲ; ಮೋದಿಯವರ ಹೇಳಿಕೆ ಸುಳ್ಳು ಎಂದು ಕುಟುಕಿದ ಮುಂಗೇಕರ್

Ad Widget

Ad Widget

Ad Widget

Ad Widget Ad Widget

ಮುಂಬೈ: ಕಾಂಗ್ರೆಸ್ ನಾಯಕ, ಆರ್ಥಿಕ ತಜ್ಞ ಮತ್ತು ನೀತಿ ಆಯೋಗದ ಸದಸ್ಯರೂ ಆಗಿದ್ದ ಡಾ. ಬಾಲಚಂದ್ರ ಮುಂಗೇಕರ್‌ರವರು ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ ನೀಡಿಲ್ಲ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಸುಳ್ಳು ಎಂದು ಹೇಳಿದ್ದಾರೆ.
ಡಾ. ಸಿಂಗ್ ಅವರ ಹೇಳಿಕೆಯ ಒಂದು ವಾಕ್ಯವನ್ನು ಪ್ರಸ್ತುತಪಡಿಸುವ ಮೂಲಕ ಮೋದಿ ಅವರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನವನ್ನು ಸೃಷ್ಟಿಸುವುದು ಬಿಜೆಪಿಯ ತಂತ್ರವಾಗಿದೆ. ಆದರೆ, ಜನರು ಮೋದಿ ಅವರ ಹೇಳಿಕೆಗಳನ್ನು ನಂಬುವುದಿಲ್ಲ ಎಂದು ಮುಂಬೈ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಡಾ.ಮುಂಗೇಕರ್ ಹೇಳಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಯುಪಿಎ ಸರ್ಕಾರದ ಭಾಗವಾಗಿದ್ದ ಡಾ. ಮುಂಗೇಕರ್, ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ತಳ್ಳಿ ಹಾಕಿದ್ದು, ಸತ್ಯವನ್ನು ಮುಂದಿಟ್ಟಿದ್ದಾರೆ.

Ad Widget

Ad Widget

2006ರ ಡಿಸೆಂಬರ್ 9ರಂದು ನಡೆದಿದ್ದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ, ‘ದೇಶದ ದಲಿತರು, ಆದಿವಾಸಿಗಳು, ಒಬಿಸಿ, ಮಹಿಳೆಯರು, ಮಕ್ಕಳು ಅಭಿವೃದ್ಧಿಯ ಫಲವನ್ನು ಸವಿಯಬೇಕು ಮತ್ತು ಅಲ್ಪಸಂಖ್ಯಾತ ಸಮುದಾಯವೂ ಪ್ರಯೋಜನ ಪಡೆಯಬೇಕು’ ಎಂದು ಡಾ ಮನಮೋಹನ್ ಸಿಂಗ್ ಹೇಳಿದ್ದರು. ಅವರ ಹೇಳಿಕೆಯ ಅರ್ಥವೇನೆಂದರೆ, ಎಸ್‌ಸಿ ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಹೊಂದಿದ್ದಾರೆ ಎಂಬುದಾಗಿತ್ತು. ಸಭೆಯ ನಂತರ ಡಾ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ನಾನು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದೆವು. ಅಲ್ಪಸಂಖ್ಯಾತರು ಎಂದರೆ ಧಾರ್ಮಿಕ ಅಲ್ಪಸಂಖ್ಯಾತರು ಮಾತ್ರವಲ್ಲದೆ ಭಾಷಾ ಅಲ್ಪಸಂಖ್ಯಾತರು ಸಹ ಹೌದು. ಸಭೆಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು ಎಂದು ಡಾ. ಮುಂಗೇಕರ್ ಹೇಳಿದ್ದಾರೆ.

Ad Widget

Ad Widget

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿರುತ್ತದೆ ಮತ್ತು ಅವರು ಹೆಚ್ಚು ಮಕ್ಕಳನ್ನು ಹೊಂದಿರುವುದರಿಂದ ಅದನ್ನು ಸಮುದಾಯದೊಳಗೆ ಹಂಚಿಕೆ ಮಾಡಲಾಗುತ್ತದೆ ಎಂದು ಸಿಂಗ್ ಹೇಳಿರುವುದಾಗಿ ಮೋದಿ ಈಗ ಹೇಳುತ್ತಿರುವುದು ಸರಿಯೇ? ಚುನಾವಣೆಯಲ್ಲಿ ಧಾರ್ಮಿಕ ತಿರುವು ನೀಡಲು ಅವರು ಹೀಗೆ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಹೇಳಿಕೆ ನೀಡುವುದು ಸೂಕ್ತವಲ್ಲ. 102 ಲೋಕಸಭಾ ಸ್ಥಾನಗಳಿಗೆ ಮೊದಲ ಹಂತದ ಮತದಾನ ನಡೆದಿದ್ದು, ಬಿಜೆಪಿ ಸೋಲುವ ಚಿತ್ರಣ ಸ್ಪಷ್ಟವಾಗಿದೆ. 40ರ ಗಡಿ ತಲುಪಲಾಗದೆ ಮೋದಿ ನಿರಾಸೆಗೊಂಡಿದ್ದಾರೆ’ಎಂದು ಮುಂಗೇಕರ್ ಕುಟುಕಿದ್ದಾರೆ.

Ad Widget

Ad Widget
Continue Reading

ರಾಜಕೀಯ

Siddaramaiah-ಮೋದಿಯವರ ಮಂಗಳಸೂತ್ರ ಹೇಳಿಕೆ ಪ್ರಧಾನಿ ಸ್ಥಾನಕ್ಕೆ ತೋರಿದ ಅಗೌರವ : ಸಿದ್ದರಾಮಯ್ಯ

Ad Widget

Ad Widget

Ad Widget

Ad Widget Ad Widget

ಬೆಂಗಳೂರು (ಏ.23): ಕಾಂಗ್ರೆಸ್‌ ಗೆದ್ದರೆ ಮಹಿಳೆಯರ ಮಂಗಳಸೂತ್ರವನ್ನು ಮುಸ್ಲಿಮರಿಗೆ ಹಂಚಲಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ರಾಜ್ಯ ಕಾಂಗ್ರೆಸ್‌ ಮುಖಂಡರಿಂದ ಸೋಮವಾರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಹಲವು ಕಾಂಗ್ರೆಸ್‌ ಮುಖಂಡರು ಇದೊಂದು ಕೀಳು ಹೇಳಿಕೆ, ಪ್ರಧಾನಿ ಮೋದಿ ಅವರು ಸೋಲಿನ ಭೀತಿಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಶ್ರಮದಿಂದ ಗಳಿಸಿದ ಸಂಪತ್ತನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗಾದರೂ ಇದೆಯೇ? ಆದರೂ ಇದನ್ನು ಕಾಂಗ್ರೆಸ್ ಮಾಡಲಿದೆ.

Ad Widget

Ad Widget

Ad Widget

Ad Widget

Ad Widget

ಪ್ರಧಾನಿ ಮೋದಿಯವರು ಜೈಪುರದಲ್ಲಿ ನಡೆಸಿದ ಸಮಾವೇಶದಲ್ಲಿ ತಾಯಂದಿರು ಶ್ರಮದಿಂದ ಮಾಡಿಸಿಕೊಂಡಿರುವ ಚಿನ್ನದ ತಾಳಿಯನ್ನು ಕಿತ್ತುಕೊಳ್ಳಲಾಗುತ್ತದೆ. ಅದನ್ನು ದೇಶದ ಸಂಪತ್ತಿನ ಮೊದಲ ಹಕ್ಕುದಾರರು ಮುಸ್ಲಿಮರು ಎಂದಿದ್ದ ಹಿಂದಿನ ಪ್ರಧಾನಿ ಮನಮೋಹನ ಸಿಂಗ್‌ ಅವರ ನೀತಿಯಂತೆ ಮುಸಲ್ಮಾನರು, ಒಳನುಸುಳುಕೋರರು ಮತ್ತು ಹೆಣ್ಣುಮಕ್ಕಳಿದ್ದವರಿಗೆ ಹಂಚಲಾಗುತ್ತದೆ ಎಂದು ಆರೋಪಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಪ್ರಧಾನಿಯಾಗಿ ಅವರು ಇಷ್ಟೊಂದು ಕೀಳುಹೇಳಿಕೆ ನೀಡಬಾರದಿತ್ತು. ಅವರ ಸ್ಥಾನಕ್ಕೆ ಅಗೌರವ ತೋರುವ ರೀತಿ ಮೋದಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

Ad Widget

Ad Widget

ಸೋಲಿನ ಭೀತಿ: ಕಾಂಗ್ರೆಸ್ ಗೆದ್ದರೆ ಮಹಿಳೆಯರ ಮಂಗಳಸೂತ್ರವನ್ನು ಕಿತ್ತು ಮುಸ್ಲಿಮರಿಗೆ ನೀಡುತ್ತದೆ ಎಂದು ದೇಶದ ಪ್ರಧಾನಿ ಹೇಳುತ್ತಿದ್ದಾರೆ. ಮೋದಿಯವರಿಗೆ ಸೋಲುವ ಭೀತಿ ಉಂಟಾಗಿದೆ. ಹೀಗಾಗಿ ಅವರು ಹೀಗೆ ಮಾತನಾಡುತ್ತಿದ್ದಾರೆ. ಭಾರತೀಯರೆಲ್ಲರೂ ಸಮಾನರು ಎಂದು ಸಂವಿಧಾನದಲ್ಲಿ ಹೇಳಿದ್ದಾರೆ. ಮಂಗಳಸೂತ್ರ ಕಿತ್ತುಕೊಳ್ಳುತ್ತಾರೆಂದರೆ ಏನರ್ಥ? ಈ ಮಾತುಗಳನ್ನು ನೋಡಿದರೆ ಬಿಜೆಪಿಯ ಹತಾಶೆ ಕಾಣಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.

Ad Widget

Ad Widget

ರಾಜ್ಯದ 25 ದಂಡಪಿಂಡಗಳನ್ನು ಜನರು ಮನೆಗೆ ಕಳಿಸಬೇಕು: ಬಿ.ವಿ.ಶ್ರೀನಿವಾಸ್ ವಿಶೇಷ ಸಂದರ್ಶನ!
ಪ್ರಧಾನಿ ಹೇಳಿಕೆ ಅವರ ಮನಸ್ಥಿತಿ ತೋರಿಸುತ್ತದೆ. ದೇಶದ ಇತಿಹಾಸದಲ್ಲಿ ಯಾವ ಪ್ರಧಾನಿಯೂ ಇಷ್ಟೊಂದು ಕೆಳಮಟ್ಟಕ್ಕೆ ಇಳಿದು ಮಾತನಾಡಿರುವುದು ನಾನು ನೋಡಿರಲಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರೆ, ಮೋದಿ ಅವರು ಮತೀಯ ಭಾವನೆ ಕೆರಳಿಸುವ ರೀತಿ ಮಾತನಾಡಿದ್ದಾರೆ. ಚುನಾವಣಾ ಆಯೋಗ ಯಾಕೆ ಈ ವಿಚಾರದಲ್ಲಿ ಕಣ್ಣುಮುಚ್ಚಿ ಕೂತಿದೆಯೋ ಗೊತ್ತಿಲ್ಲ. 70 ವರ್ಷಗಳಿಂದ ವಿವಿಧ ಪಕ್ಷಗಳು ಆಡಳಿತ ನಡೆಸಿವೆ. ಯಾವ ಹಿಂದೂಗೂ ಅನ್ಯಾಯವಾಗಿಲ್ಲ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Ad Widget

Ad Widget
Continue Reading

ಮಂಗಳೂರು

Padmaraj R Poojary-ಮೆಡಿಕಲ್- ಎಜ್ಯುಕೇಶನ್ ಹಬ್ ಆಗಿರುವ ಜಿಲ್ಲೆಯ ಪ್ರಾಕೃತಿಕ ಸೌಂದರ್ಯ, ದೇವಸ್ಥಾನಗಳನ್ನು ಬಳಸಿಕೊಂಡು ಟೂರಿಸಂ ಅಭಿವೃದ್ದಿ – ಮುಂಬೈ ಮಹಾನಗರ ಮಾದರಿ ಮಂಗಳೂರನ್ನು 20 ಗಂಟೆ ತೆರೆದಿರುವಂತೆ ನೋಡಿಕೊಂಡು ಉದ್ಯೋಗ ಸೃಷ್ಟಿ ನನ್ನ ಗುರಿ : ಪದ್ಮರಾಜ್ ಆರ್ ಪೂಜಾರಿ

Ad Widget

Ad Widget

Ad Widget

Ad Widget Ad Widget

ತುಳುನಾಡು ಅಭಿವೃದ್ಧಿ ಆಗಬೇಕಾದರೆ ಇಲ್ಲಿ ಈ ಹಿಂದೆ ಇದ್ದ ಸಾಮರಸ್ಯದ ಗತ ವೈಭವ ಮರುಸ್ಥಾಪನೆ ಮಾಡುವುದು ಅತ್ಯಗತ್ಯ. ನನಗೆ ಅಧಿಕಾರ ಸಿಕ್ಕಾಗ ನಾನು ಮಾಡುವ ಮೊದಲ ಕಾರ್ಯ ಇದು. ದಕ್ಷಿಣ ಕನ್ನಡ ಜಿಲ್ಲೆಗೆ ಕೈಗಾರಿಕೆಗಳು, ಹೂಡಿಕೆಗಳು ಬರುವಂತೆ ಮಾಡಬೇಕಿದೆ. ಮೆಡಿಕಲ್, ಎಜ್ಯುಕೇಶನ್, ಟೆಂಪಲ್ ಟೂರಿಸಂ, ಜಿಲ್ಲೆಯ ಪ್ರಾಕೃತಿಕ ಸೌಂದರ್ಯ ಬಳಸಿಕೊಂಡು ಟೂರಿಸಂ ಅಭಿವೃದ್ದಿ ಮಾಡುವ ಕೆಲಸವಾಗಬೇಕಿದೆ. ಇದುವರೆಗೆ ಈ ಕುರಿತು ಪ್ರಯತ್ನವೇ ನಡೆದಿಲ್ಲ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಹೇಳಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಮಾದ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಕ್ಷೇತ್ರದ ಅಭಿವೃದ್ದಿಗೆ ತನ್ನ ವಿಷನ್ ಹಂಚಿಕೊಂಡ ಪದ್ಮರಾಜ್ ಆರ್ ಪೂಜಾರಿ “ ಮುಂಬೈ ಮಹಾನಗರ 20 ಗಂಟೆ ಲೈವ್ ಆಗಿ ಲವಲವಿಕೆಯಿಂದ ಇರುತ್ತದೆ.ಮುಂಬೈಯಂತೆ ಮಾಡಲು ಅರ್ಹತೆ ಇರುವ ದೇಶದ ಇನ್ನೊಂದು ನಗರ ಇದ್ರೆ ಮಂಗಳೂರು . ಮಂಗಳೂರು ನಗರಕ್ಕೂ ಮುಂಬೈಯ ಹಾಗೇ ನಾಲ್ಕು ಸಾರಿಗೆ ಮಾರ್ಗಗಳಿವೆ. ಹೀಗಾಗಿ ಮಂಗಳೂರಿನಲ್ಲೂ ಸಹ ಅದೆ ರೀತಿಯ ವಾತವರಣ ನಿರ್ಮಾಣವಾಗಬೇಕು . ಒಂದೊಮ್ಮೆ ಇದು 20 ಗಂಟೆ ಒಪನ್ ಆದ್ರೆ ಅಲ್ಲಿಯ ಹಾಗೆ ಕೈಗಾರಿಕೆ ವಾಣಿಜ್ಯ ವ್ಯವಹಾರಗಳು ಇಲ್ಲೂ ಬೆಳೆಯುತ್ತದೆ. ಆಗ ಅಲ್ಲಿಯಂತೆ ಇಲ್ಲಿಯೂ ಉದ್ಯೋಗ ಸೃಷ್ಟಿ ಆಗಲಿದೆ. ವಿದ್ಯಾವಂತರು ಹೊರ ರಾಜ್ಯ, ದೇಶಗಳಿಗೆ ಹೋಗಿ ದುಡಿಯುವ ಅನಿವಾರ್ಯತೆಗೆ ಪರಿಹಾರವಾಗಿ ಇಲ್ಲೇ ಉದ್ಯೋಗ ಸೃಷ್ಟಿ ಮಾಡೋದು ನನ್ನ ಗುರಿ.

Ad Widget

Ad Widget

ಬಿಜೆಪಿಯ ಹಿಂದುತ್ವ, ಮೋದಿ ಪ್ರಚಾರ
ನಾನೂ ಹಿಂದೂ ಧರ್ಮದಲ್ಲಿ ಹುಟ್ಟಿದವನು. ಹಿಂದೂ ಧರ್ಮದಲ್ಲಿ ಅಪಾರ ಗೌರವ, ನಂಬಿಕೆಗಳನ್ನು ಇಟ್ಟುಕೊಂಡವನು. ನಮ್ಮ ಧರ್ಮವನ್ನು ಪಾಲನೆ ಮಾಡುವುದರೊಂದಿಗೆ ಇತರ ಧರ್ಮಗಳನ್ನು ಗೌರವಿಸಬೇಕು ಎಂಬ ಜ್ಞಾನವನ್ನು ಹಿಂದೂ ಧರ್ಮ ನನಗೆ ನೀಡಿದೆ. ಸಾಧ್ಯವಾದಷ್ಟು ಕಡು ಬಡವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದ್ದೇನೆ. ಇದು ರಾಷ್ಟ್ರ ಭಕ್ತಿ ಅಲ್ವಾ? ಬಿಜೆಪಿಯವರು ಜಾತಿ, ಧರ್ಮ ಹೆಸರಲ್ಲಿ ದ್ವೇಷ ಹರಡಿಸಿ, ಯುವಕರನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಜೈಲಿಗೆ ಹೋಗುವಂತೆ ಮಾಡುವುದು, ಆಸ್ಪತ್ರೆ ಸೇರುವಂತೆ ಅಥವಾ ಕೊಲೆಗೀಡಾಗಿ ಅವರ ಮನೆಯವರನ್ನು ಅನಾಥ ಮಾಡುವುದು ರಾಷ್ಟ್ರಭಕ್ತಿಯಾ ಅಂತ ಕೇಳಲು ಇಚ್ಛಿಸುತ್ತೇನ ಎಂದರು.

Ad Widget

Ad Widget

ಬಿಜೆಪಿ ಅಪಪ್ರಚಾರ
ಪದ್ಮರಾಜ್ ಜಾತಿ ಹೆಸರಲ್ಲಿ ರಾಜಕಾರಣ ಮಾಡ್ತಿದ್ದಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಎಲ್ಲಾದರೂ ಜಾತಿ ಆಧಾರದಲ್ಲಿ ಓಟು ಹಾಕಿ ಅಂತ ಹೇಳಿದ್ದೇನಾ? ಪದ್ಮರಾಜ್ ಬಿಲ್ಲವನೇ ಅಲ್ಲ, ಘಟ್ಟದವರು ಎನ್ನುವ ಅಪಪ್ರಚಾರವನ್ನೂ ಮಾಡುತ್ತಿದ್ದಾರೆ. ನಾನು ಶಾಲೆ, ಕಾಲೇಜು ಕಲಿತಿಲ್ವಾ? ಅವರಿಗೆ ಬೇಕಾದರೆ, ನನ್ನ ಯಾವುದಾದರೂ ಸರ್ಟಿಫಿಕೆಟ್ ಸ್ಕೂಲ್, ಕಾಲೇಜಲ್ಲಿ ಸಿಗಲ್ವಾ? ಇದನ್ನೆಲ್ಲ ಮಾಡೋದು ಅಪಪ್ರಚಾರ ಅಲ್ವಾ? ಕುದ್ರೋಳಿ ದೇವಾಲಯದಲ್ಲಿ 27 ವರ್ಷ ಕೆಲಸ ಮಾಡಿದ್ದೇನೆ. ಇದನ್ನೆಲ್ಲ ಜನರು ನೋಡಿದ್ದಾರೆ. ಉತ್ತರವನ್ನೂ ಕೊಡುತ್ತಾರೆ ಎಂದರು

Ad Widget

Ad Widget

ಜಾತಿ ರಾಜಕಾರಣ
ಪದ್ಮರಾಜ್ ಯಾವತ್ತೂ ಯಾವುದೇ ಜಾತಿ, ಧರ್ಮವನ್ನು ಇಟ್ಟುಕೊಂಡು ರಾಜಕೀಯ ಮಾಡಿದವನಲ್ಲ, ಆದರೆ ನಾನು ಬಿಲ್ಲವ ಸಮಾಜದಲ್ಲಿ ಹುಟ್ಟಿದ್ದು ಹೌದು. ಆ ಬಗ್ಗೆ ನನಗೆ ಹೆಮ್ಮೆಯಿದೆ. ಹಾಗಂತ ನಾನೆಲ್ಲೂ ಜಾತಿ ಹೆಸರನ್ನು ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿಲ್ಲ. ನಾನು ಸ್ಥಾಪನೆ ಮಾಡಿದ ‘ಗುರು ಬೆಳದಿಂಗಳು’ ಸಂಸ್ಥೆಯ ಮೂಲಕ ಆ ಜಾತಿ, ಈ ಜಾತಿ ಎಂದು ನೋಡದೆ ಸಮಾಜದ ಎಲ್ಲ ಅಶಕ್ತರ ಕಳ್ಕೊರೆಸುವ ಕೆಲಸ ಮಾಡುತ್ತಿದ್ದೇನೆ. ಆದರೆ ಚುನಾವಣೆ ಗೆಲ್ಲುವುದಕ್ಕಾಗಿ ಅಪಪ್ರಚಾರ ಮಾಡೋದು ಬಿಜೆಪಿಯವರ ಚಾಳಿ. ಇದನ್ನು ಮಾಡುತ್ತಲೇ ಇರುತ್ತಾರೆ. ಇದಕ್ಕೆ ಜನರೇ ಉತ್ತರ ಕೊಡ್ತಾರೆ.

•ಪೂಜಾರಿ ಅವರ ಶಿಷ್ಯರಾಗಿ ಅವರ ಅನೇಕ ಚುನಾವಣೆ ನೋಡಿದ್ದೀರಿ. ಆಗಿನ ಚುನಾವಣೆಗಿಂತ ಈ ಬಾರಿಯ ಚುನಾವಣೆ ಹೇಗೆ ಭಿನ್ನವಾಗಿದೆ?
ಪೂಜಾರಿ ಕಾಲದಲ್ಲೂ ಬಿಜೆಪಿಯವರ ಅಪಪ್ರಚಾರ ಇತ್ತು. ಈಗಲೂ ಮಾಡುತ್ತಿದ್ದಾರೆ. ಬಿಜೆಪಿಯ ಅಪಪ್ರಚಾರಗಳಿಂದಲೇ ಅವರು ಸೋತದ್ದು. ಅಂದು ಪೂಜಾರಿ ವಿರುದ್ಧ ಅಪಪ್ರಚಾರ ಮಾಡಿದವರೆಲ್ಲ ಇಂದು ಅವರ ಬಳಿ ಹೋಗಿ ಕಾಲು ಹಿಡಿಯುತ್ತಿದ್ದಾರೆ. ಇದು ಯಾಕೆ? ತಾವು ತಪ್ಪು ಮಾಡಿದ್ದೇವೆ ಅಂತ ಅವರಿಗೂ ಗೊತ್ತಾಗಿದೆ. ಪೂಜಾರಿ ಅವರಿಗೆ ಆಗಿರುವ ಸೋಲು ಕ್ಷೇತ್ರದ ಜನರಿಗೆ ಆಗಿರುವ ಸೋಲು. ಈಗ ಬಿಜೆಪಿಯವರು ಪೂಜಾರಿ ಕಾಲು ಹಿಡಿಯಲು ಯಾಕೆ ಬರುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗಿದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading