Ad Widget

Mangalore Blast | ಬೆಳ್ತಂಗಡಿ ಸ್ಯಾಟಲೈಟ್ ಫೋನ್ ಕರೆ ಬಗ್ಗೆ ದೃಡಪಟ್ಟಿಲ್ಲ : ದ.ಕ ಎಸ್ಪಿ

InShot_20221127_225235523
Ad Widget

Ad Widget

Ad Widget

ಮಂಗಳೂರು, ನ 27 : ಮಂಗಳೂರು ಕುಕ್ಕರ್ ಸ್ಪೋಟದ (Mangalore Blast) ವಿಚಾರವಾಗಿ ಕಕ್ಕಿಂಜೆಯಲ್ಲಿ ಉಪಗ್ರಹ ಕರೆಗಳು ರಿಂಗಣಿಸಿರುವ ವದಂತಿಗಳ ಕುರಿತು ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದು, ಉಪಗ್ರಹ ಕರೆಗಳು ಬಂದಿರುವ ಬಗ್ಗೆ ದೃಢಗೊಂಡಿಲ್ಲ (Satellite Phone) ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಾನೆ ಭಾನುವಾರ ಸ್ಪಷ್ಟಪಡಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಸಾಮಾನ್ಯವಾಗಿ ಸ್ಥಳೀಯವಾಗಿ ವಾಸವಾಗಿರುವ ಮಂದಿ ಆನೆಗಳನ್ನು ಹೆದರಿಸಲು ಪಟಾಕಿಗಳನ್ನು ಬಳಸುತ್ತಾರೆ. ಸ್ಪೋಟದ ಸದ್ದು ಇದರಿಂದಲೂ ಕೇಳಿರುವ ಸಾಧ್ಯತೆ ಇದೆ. ಉಪಗ್ರಹ ಕರೆಗಳು ಬಂದ ಬಗ್ಗೆ ನಿರ್ದಿಷ್ಟ ಮಾಹಿತಿಗಳು ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟಕ್ಕೂ ಮುನ್ನ ಬೆಳ್ತಂಗಡಿಯ ಬೇಂದ್ರಾಳದ ಬಾರೆಯಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಕರೆ ಕುರಿತು ಮಾಹಿತಿಗಳು ಹರಿದಾಡಿದ್ದವು.

ಈ ಹಿನ್ನೆಲೆಯಲ್ಲಿ ಅಲ್ಲಿ ಧರ್ಮಸ್ಥಳ ಪೊಲೀಸರು ಶನಿವಾರ ಪರಿಶೀಲನೆ ನಡೆಸಿದ್ದಾರೆ. ಆದರೆ ಅಂತಹ ಯಾವುದೇ ಸುಳಿವುಗಳು ಪೊಲೀಸರಿಗೆ ಆ ಪ್ರದೇಶದಲ್ಲಿ ಸಿಕ್ಕಿಲ್ಲ ಎಂದರು.

Ad Widget

Ad Widget

Ad Widget

Ad Widget
Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: