Connect with us

ದಕ್ಷಿಣ ಕನ್ನಡ

Mangalore Blast | ಬೆಳ್ತಂಗಡಿ ಸ್ಯಾಟಲೈಟ್ ಫೋನ್ ಕರೆ ಬಗ್ಗೆ ದೃಡಪಟ್ಟಿಲ್ಲ : ದ.ಕ ಎಸ್ಪಿ

Ad Widget

Ad Widget

ಮಂಗಳೂರು, ನ 27 : ಮಂಗಳೂರು ಕುಕ್ಕರ್ ಸ್ಪೋಟದ (Mangalore Blast) ವಿಚಾರವಾಗಿ ಕಕ್ಕಿಂಜೆಯಲ್ಲಿ ಉಪಗ್ರಹ ಕರೆಗಳು ರಿಂಗಣಿಸಿರುವ ವದಂತಿಗಳ ಕುರಿತು ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದು, ಉಪಗ್ರಹ ಕರೆಗಳು ಬಂದಿರುವ ಬಗ್ಗೆ ದೃಢಗೊಂಡಿಲ್ಲ (Satellite Phone) ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಾನೆ ಭಾನುವಾರ ಸ್ಪಷ್ಟಪಡಿಸಿದ್ದಾರೆ.

Ad Widget

Ad Widget

Ad Widget

Ad Widget

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಸಾಮಾನ್ಯವಾಗಿ ಸ್ಥಳೀಯವಾಗಿ ವಾಸವಾಗಿರುವ ಮಂದಿ ಆನೆಗಳನ್ನು ಹೆದರಿಸಲು ಪಟಾಕಿಗಳನ್ನು ಬಳಸುತ್ತಾರೆ. ಸ್ಪೋಟದ ಸದ್ದು ಇದರಿಂದಲೂ ಕೇಳಿರುವ ಸಾಧ್ಯತೆ ಇದೆ. ಉಪಗ್ರಹ ಕರೆಗಳು ಬಂದ ಬಗ್ಗೆ ನಿರ್ದಿಷ್ಟ ಮಾಹಿತಿಗಳು ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ.

Ad Widget

Ad Widget

Ad Widget

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟಕ್ಕೂ ಮುನ್ನ ಬೆಳ್ತಂಗಡಿಯ ಬೇಂದ್ರಾಳದ ಬಾರೆಯಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಕರೆ ಕುರಿತು ಮಾಹಿತಿಗಳು ಹರಿದಾಡಿದ್ದವು.

Ad Widget

ಈ ಹಿನ್ನೆಲೆಯಲ್ಲಿ ಅಲ್ಲಿ ಧರ್ಮಸ್ಥಳ ಪೊಲೀಸರು ಶನಿವಾರ ಪರಿಶೀಲನೆ ನಡೆಸಿದ್ದಾರೆ. ಆದರೆ ಅಂತಹ ಯಾವುದೇ ಸುಳಿವುಗಳು ಪೊಲೀಸರಿಗೆ ಆ ಪ್ರದೇಶದಲ್ಲಿ ಸಿಕ್ಕಿಲ್ಲ ಎಂದರು.

Ad Widget

Ad Widget
Click to comment

Leave a Reply

ಮಂಗಳೂರು

Interfaith Marriage ಮಂಗಳೂರು :  ಭಿನ್ನಕೋಮಿನ ಜೋಡಿ ವಿವಾಹ?

Ad Widget

Ad Widget

ಸುರತ್ಕಲ್, ಡಿ. 7: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಭಿನ್ನ ಕೋಮಿನ ಜೋಡಿಯೊಂದು ನಾಪತ್ತೆಯಾಗಿದ್ದು, ಅವರಿಬ್ಬರು ವಿವಾಹವಾಗಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ಎರಡು ಕುಟುಮಬದ ಮೂಲಗಳಿಂದ ಈ ಬಗ್ಗೆ ಯಾವುದೇ ಖಚಿತತೆ ದೊರಕಿಲ್ಲ

Ad Widget

Ad Widget

Ad Widget

Ad Widget

ಸುರತ್ಕಲ್‌   7ನೇ ಬ್ಲಾಕ್ ಕಾಟಿಪಳ್ಳದ ಯುವಕ ಪ್ರಶಾಂತ್ ಭಂಡಾರಿ (31) ಹಾಗೂ 3ನೇ ಬ್ಲಾಕ್ ಆಶ್ರಯ ಕಾಲನಿಯನಿವಾಸಿ ಆಯೇಷಾ (19) ಡಿ. 1ರಂದು ನಾಪತ್ತೆಯಾಗಿದ್ದರು ಎನ್ನಲಾಗಿದೆ. , ಇದೀಗ ಅವರು ವಿವಾಹವಾಗಿದ್ದಾರೆ ಎನ್ನುವ ಫೋಟೋವನ್ನು  ಅವರಿಬ್ಬರ ಆಪ್ತರು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

Ad Widget

Ad Widget

Ad Widget

 ಆಯೇಷಾ ತನ್ನ ಹೆಸರನ್ನು ಅಕ್ಷತಾ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಕೂಡ ವೈರಲ್‌ ಮೆಸೇಜ್‌ ನಲ್ಲಿ ಹೇಳಲಾಗಿದೆ. ಯುವತಿ ನಾಪತ್ತೆಯಾದ ಬಗ್ಗೆ   ಆಯೇಷಾ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Ad Widget

ಯುವತಿ ಕುಟುಂಬ ಮೂಲತಃ ಕಾರವಾರದ ಮುಂಡಗೋಡದವರಾಗಿದ್ದು, ಈಕೆಯ ತಂದೆ ಸ್ಥಳೀಯವಾಗಿ ಉದ್ಯೋಗದಲ್ಲಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ.

Ad Widget

Ad Widget

Continue Reading

ದಕ್ಷಿಣ ಕನ್ನಡ

ಧರ್ಮಸ್ಥಳದಲ್ಲಿ ಜನಜಾಗೃತಿವೇದಿಕೆ ಪದಾಧಿಕಾರಿಗಳ ಸಹಮಿಲನ ಮತ್ತು ವ್ಯಸನಮುಕ್ತರ ಕುಟುಂಬೋತ್ಸವ.

Ad Widget

Ad Widget

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರು ಕನಸು ಕಂಡ ಗ್ರಾಮರಾಜ್ಯದ ಮೂಲಕ ರಾಮರಾಜ್ಯ ಸ್ಥಾಪನೆಯ ಕಲ್ಪನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಾಕಾರಗೊಳಿಸಿದ್ದಾರೆ ಎಂದು ಕಲ್ಬುರ್ಗಿ ಜಿಲ್ಲೆಯ ಮಳೇಂದ್ರ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Ad Widget

Ad Widget

Ad Widget

Ad Widget

ಅವರು ಗುರುವಾರ ಧರ್ಮಸ್ಥಳದಲ್ಲಿ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಹಮಿಲನ ಮತ್ತು ವ್ಯಸನಮುಕ್ತರ ಕುಟುಂಬೋತ್ಸವದಲ್ಲಿ ಆಶೀರ್ವಚನ ನೀಡಿದರು.

Ad Widget

Ad Widget

Ad Widget

ತಮ್ಮ ಆಚಾರ-ವಿಚಾರದಲ್ಲಿ ಹಾಗೂ ಬಹುಮುಖಿ ಸಮಾಜಸೇವಾ ಕಾರ್ಯಗಳಲ್ಲಿ ಅವರು ಗಾಂಧೀಜಿಯವರ ತತ್ವ, ಸಿದ್ಧಾಂತಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅವರ ಹಿತ-ಮಿತ ಮಾತು ಮತ್ತು  ಕೃತಿಯಲ್ಲಿ ಸರ್ವರ ಸೇವಾ ಕಾಳಜಿ ಇದೆ. ಪ್ರಾಚೀನ ದೇಗುಲಗಳ ಜೀರ್ಣೋದ್ಧಾರ, ಕೆರೆಗಳಿಗೆ ಕಾಯಕಲ್ಪ, ಪ್ರಕೃತಿ-ಪರಿಸರ ಸಂರಕ್ಷಣೆ, ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮೊದಲಾದ ಜನಸೇವಾಕಾರ್ಯಗಳಿಂದ ಅವರು ನಡೆದಾಡುವ ದೇವರೆಂದೇ ಗೌರವಿಸಲ್ಪಡುತ್ತಾರೆ.

Ad Widget

ಧರ್ಮಸ್ಥಳದ ಇತಿಹಾಸದಲ್ಲಿ ಅವರ ಸೇವಾವಧಿ ಸುವರ್ಣಯುಗವಾಗಿದೆ. ಅವರ ಸರಳ ವ್ಯಕ್ತಿತ್ವ, ನಡೆ-ನುಡಿ, ಆದರ್ಶ ಹಾಗೂ ಅನುಕರಣೀಯವಾಗಿದ್ದು, ಪೂಜ್ಯರಿಗೆ ಎಲ್ಲಾ ವೀರಶೈವ ಮಠಗಳ ಪೂರ್ಣ ಬೆಂಬಲ, ಸಹಕಾರವಿದೆ ಎಂದು ಸ್ವಾಮೀಜಿ ಹೇಳಿದರು.

Ad Widget

Ad Widget

ಗುಳೇದಗುಡ್ಡದಮಠದ ಒಪ್ಪಂತೇಶ್ವರ ಸ್ವಾಮೀಜಿ ಶುಭ ಹಾರೈಸಿದರು.

ಸಮಾರಂಭವನ್ನು ಉದ್ಘಾಟಿಸಿದ ಹೇಮಾವತಿ ಹೆಗ್ಗಡೆಯವರು, ಲಕ್ಷದೀಪೋತ್ಸವದ ಶುಭಾವಸರದಲ್ಲಿ ಸಾವಿರಾರು ಮಂದಿ ವ್ಯಸನಮುಕ್ತರಾಗಿ ಸಾರ್ಥಕ ಜೀವನ ನಡೆಸಲು ದೃಢಸಂಕಲ್ಪ ಮಾಡಿರುವುದು ಶ್ರೀ ಸ್ವಾಮಿಗೆ ಅರ್ಪಿಸುವ ದೊಡ್ಡ ಸೇವೆ ಆಗಿದೆ. ದುಶ್ಚಟಗಳಿಗೆ ಬಲಿಯಾದರೆ ಮಾನಹಾನಿ, ಧನಹಾನಿ ಹಾಗೂ ಪ್ರಾಣಹಾನಿಯೊಂದಿಗೆ ಸರ್ವಸ್ವವೂ ನಾಶವಾಗುತ್ತದೆ.. ವ್ಯಸನಮುಕ್ತರು ಇನ್ನಾದರೂ ಉತ್ತಮ ಜೀವನ ನಡೆಸಬೇಕು ಎಂದು ಅವರು ಶುಭ ಹಾರೈಸಿದರು.

ವ್ಯಸನಮುಕ್ತರ ಪರವಾಗಿ, ಮೈಸೂರು ಜಿಲ್ಲೆಯ ಬನ್ನೂರು ಚಂದನ್ ಮತ್ತು ಬೆಳಗಾವಿಯ ಶೈಲಾ ಜಗದೀಶ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶ್ರದ್ಧಾಅಮಿತ್ ಸಾಧಕರನ್ನು ಗೌರವಿಸಿದರು.

ವ್ಯಸನಮುಕ್ತರಾಗಿ ಸಾರ್ಥಕ ಜೀವನ  ನಡೆಸಲು ಸಹಕರಿಸಿದವರಿಗೆ ಜಾಗೃತಿಅಣ್ಣ ಮತ್ತು ಜಾಗೃತಿಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಮನೆ ಮತ್ತು ಮನಸ್ಸು ಪರಿಶುದ್ಧವಾಗಿದ್ದರೆ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ.
ಮದ್ಯವ್ಯಸನಿಗಳನ್ನು ವ್ಯಸನಮುಕ್ತರಾಗಿ ಸಾರ್ಥಕ ಜೀವನ ನಡೆಸಲು ಪ್ರೇರೇಪಿಸುವುದು ಅತ್ಯಂತ ಪವಿತ್ರ ಹಾಗೂ ಪುಣ್ಯದ ಕಾರ್ಯವಾಗಿದೆ. ಮಾನಸಿಕ ಪರಿವರ್ತನೆ ಮತ್ತು ದೃಢಸಂಕಲ್ಪದಿAದ ಮಾತ್ರ ಇಂತಹ ಕಾರ್ಯಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಜನಜಾಗೃತಿವೇದಿಕೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಸೇವೆ ಶ್ಲಾಘನೀಯವಾಗಿದೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್, ಸತೀಶ್ ಹೊನ್ನವಳ್ಳಿ, ರಾಮಸ್ವಾಮಿ, ರಾಜಣ್ಣ ಕೊರವಿ ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾÊಸ್ ಸ್ವಾಗತಿಸಿದರು. ಅನಿಲ್ ಕುಮಾರ್ ಧನ್ಯವಾದವಿತ್ತರು.
ಯೋಜನಾಧಿಕಾರಿಗಳಾದ ಮೋಹನ್ ಕೆ., ಮತ್ತು ಗಣೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

Continue Reading

ದಕ್ಷಿಣ ಕನ್ನಡ

Yakshagana ಯಕ್ಷಗಾನ ಕಲಾವಿದ ದಾಸಪ್ಪ ರೈ ಅವರಿಗೆ ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೊರಿಯಲ್ಅವಾರ್ಡ್

Ad Widget

Ad Widget

ಆತ್ಮಾಲಯ ಅಕಾಡಮಿ ಬೆಂಗಳೂರು ಇದರ ಮುಖ್ಯಸ್ಥೆ ಡಾ.ಪದ್ಮಜ ಸುರೇಶ್ ನೇತೃತ್ವದಲ್ಲಿ ವಾರ್ಷಿಕವಾಗಿ ಪ್ರದಾನ ಮಾಡುವ 2023 ರ ಶ್ರೀಶಾಂತ ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಅವಾರ್ಡಗೆ ತೆಂಕು ತಿಟ್ಟು ಯಕ್ಷಗಾನದ ಖ್ಯಾತ ಕಲಾವಿದ ,ಸಂಘಟಕರಾದ ಯಚ್.ದಾಸಪ್ಪ ರೈ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ವಿದ್ವಾನ್ ಗಾನ ಕೇಸರಿ ಕುದುಮಾರ್ ವೆಂಕಟ್ರಮಣ , ಖ್ಯಾತ ಯಕ್ಷಗಾನ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ , ಪೂಕಳ ಲಕ್ಷ್ಮೀನಾರಾಯಣ ಭಟ್ , ಕುಂಬ್ಳೆ ಶ್ರೀಧರ ರಾವ್ ಸಂಗೀತ ಮತ್ತು ಯಕ್ಷಗಾನ ಕ್ಷೇತ್ರಗಳ ಸಾಧನೆಗಾಗಿ ಈ ಪ್ರಶಸ್ತಿ ಪುರಸ್ಕೃತರಾಗಿದ್ದರು.

Ad Widget

Ad Widget

Ad Widget

ದಿನಾಂಕ 9.12.2023 ರಂದು ಬೆಂಗಳೂರಿನ ಯವನಿಕ ಯುತ್ ಸೆಂಟ್ರಲ್‌ ,ನೃಪತುಂಗ ರೋಡ್ ಇಲ್ಲಿ ಜರಗುವ ಕಾರ್ಯಕ್ರಮದಲ್ಲಿ ರೂ 30,000 ನಗದಿನೊಂದಿಗೆ ದಾಸಪ್ಪ ರೈ ಪ್ರಶಸ್ತಿ ಪಡೆಯಲಿದ್ದಾರೆ .

Ad Widget

ಪುತ್ತೂರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಭಾಸ್ಕರ್ ಬಾರ್ಯರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Ad Widget

Ad Widget
Continue Reading

Trending

error: Content is protected !!