Connect with us

ಸಿನೆಮಾ

Kantara On Prime | ‘ವರಾಹ ರೂಪಂ’ ಇಲ್ಲದ ‘ಕಾಂತಾರ’ ಪ್ರೈಮ್ ನಲ್ಲಿ ಕಂಡು ಸಿನಿ ಪ್ರಿಯರಿಗೆ ಬೇಸರ : ಕಾಂತರಾ ಬಿಡುಗಡೆಗೆ ಮೊದಲು ನಮ್ಮನ್ನು ಮಾತನಾಡಿದ್ದರೆ, ಬ್ಯಾಂಡ್ ನ ಉಲ್ಲೇಖ ನೀಡಿದ್ದರೆ ಒಪ್ಪಿಕೊಳ್ಳುತಿದ್ದೆವು – ಥೈಕುಡಂ ಬ್ರಿಡ್ಜ್

Ad Widget

Ad Widget

ರಿಷಬ್‌ ಶೆಟ್ಟಿ ಅಭಿನಯದ ‘ಕಾಂತಾರ’ ಸಿನಿಮಾ ವಿಶ್ವಾದ್ಯಂತ ಎಂಥ ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡ ಈ ಸಿನಿಮಾ ಈಗ ಓಟಿಟಿಯಲ್ಲೂ ರಿಲೀಸ್ ಆಗಿದೆ. ನವೆಂಬರ್ 24ರಿಂದ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ‘ಕಾಂತಾರ’ ರಿಲೀಸ್ ಆಗಿದೆ. ಆದರೆ ಒಂದು ಅಂಶ ಮಾತ್ರ ಸಿನಿಪ್ರಿಯರಿಗೆ ಬೇಸರ ಉಂಟು ಮಾಡಿದೆ. ಅಷ್ಟಕ್ಕೂ ಏನದು ಬೇಸರದ ವಿಷಯ? ‘ಕಾಂತಾರ’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ‘ವರಾಹ ರೂಪಂ..’ ಹಾಡು ಸಖತ್ ಫೇಮಸ್ ಆಗಿತ್ತು. ಇದೀಗ ಕಾಂತಾರ ಚಿತ್ರದ ಓಟಿಟಿ ವರ್ಷನ್‌ನಲ್ಲಿ ಆ ಹಾಡನ್ನು ತೆಗೆದು ಹಾಕಲಾಗಿದೆ. ಬೇರೆ ಹಾಡನ್ನು ಬಳಸಲಾಗಿದೆ. ಇದು ನೋಡುಗರಿಗೆ ಬೇಸರ ಉಂಟು ಮಾಡಿದೆ.

Ad Widget

Ad Widget

Ad Widget

Ad Widget

‘ಕಾಂತಾರ’ ಸಿನಿಮಾದ ಆತ್ಮದಂತೆ ‘ವರಾಹ ರೂಪಂ..’ ಹಾಡು ಇತ್ತು. ಅದನ್ನು ಮರಳಿ ಬಳಸಬೇಕು ಎಂದು ನೆಟ್ಟಿಗರು ಅಭಿಯಾನ ಶುರು ಮಾಡಿದ್ದಾರೆ.

Ad Widget

Ad Widget

Ad Widget

ಎಂಬ ಹ್ಯಾಷ್‌ಟ್ಯಾಗ್ ಬಳಸಿ, ಟ್ವಿಟರ್‌ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ‘ವರಾಹ ರೂಪಂ.. ಹಾಡು ಇಲ್ಲದೇ ಹೋದರೆ, ಕಾಂತಾರ, ಕಾಂತಾರವೇ ಅಲ್ಲ. ಆ ಹಾಡಿಲ್ಲದಿದ್ದರೆ ಅದರ ತಿರುಳು ಚೆನ್ನಾಗಿರುವುದಿಲ್ಲ. ಬೇಕೇ ಬೇಕು ‘ವರಾಹ ರೂಪಂ..’ ಹಾಡು ಬೇಕು..’ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ‘ಒಂದು ಹಾಡಿನಿಂದ ಒಂದು ಸಿನಿಮಾವಾಗುವುದಿಲ್ಲ. ಆದರೆ ಆ ಒಂದು ಹಾಡೇ ಇಡೀ ಸಿನಿಮಾವನ್ನು ಕಂಪ್ಲೀಟ್ ಮಾಡುತ್ತದೆ. ದಯವಿಟ್ಟು ವರಾಹ ರೂಪಂ ಹಾಡನ್ನು ಮರುಬಳಕೆ ಮಾಡಿ..’ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

Ad Widget

ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಕಾನುನೂ ಕ್ರಮ ಕೈಗೊಳ್ಳುತ್ತೇವೆ. ಹಾಡಿನ ಹಕ್ಕುಗಳ ಕುರಿತಂತೆ ಕಾಂತಾರ ತಂಡ ನಮಗೆ ಯಾವುದೇ ಕ್ರೆಡಿಟ್ ನೀಡಿಲ್ಲ, ಈ ಹಾಡನ್ನು ತಮ್ಮ ಸ್ವಂತ ಸೃಷ್ಟಿ ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಹೋರಾಟಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು, ಅಷ್ಟೇ ಅಲ್ಲದೆ ಎಲ್ಲ ಸಂಗೀತಕಾರರು ಮ್ಯೂಸಿಕ್ ರೈಟ್ ಉಳಿಸಿಕೊಳ್ಳಲು ಸಹಾಯ ಮಾಡಿ ಎಂದು ‘ತೈಕ್ಕುಡಂ ಬ್ರಿಡ್ಜ್’ ತಂಡವು ಹೇಳಿಕೊಂಡಿತ್ತು. ಜೊತೆಗೆ ಕಾನೂನು ಸಮರಕ್ಕೆ ಇಳಿದಿತ್ತು.

Ad Widget

Ad Widget

ಆನಂತರ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್‌ನ ಅನುಮತಿ ಇಲ್ಲದೆ ‘ವರಾಹ ರೂಪಂ’ ಹಾಡನ್ನು ಬಳಕೆ ಮಾಡುವಂತಿಲ್ಲ ಎಂದು ಕೇರಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಓಟಿಟಿಯಲ್ಲಿ ಅಮೇಜಾನ್ ಪ್ರೈಮ್‌ ವಿಡಿಯೋ ವರಾಹಂ ರೂಪಂ ಹಾಡನ್ನು ಕೈಬಿಟ್ಟು, ಬೇರೆ ಹಾಡನ್ನು ಬಳಿಸಿದೆ. ಈ ಕುರಿತು ಕೂಡ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್‌ ಪೋಸ್ಟ್ ಹಾಕಿದ್ದು, ಇದು ನಮಗೆ ಸಿಕ್ಕ ಜಯ ಎಂದು ಹೇಳಿಕೊಂಡಿದೆ,.

ಕಾಂತರಾ ಬಿಡುಗಡೆಗೆ ಮೊದಲು ನಮ್ಮನ್ನು ಮಾತನಾಡಿದ್ದರೆ, ಬ್ಯಾಂಡ್ ನ ಉಲ್ಲೇಖ ನೀಡಿದ್ದರೆ ನಾವು ಅದನ್ನು ಒಪ್ಪಿಕೊಳ್ಳುತಿದ್ದೆವು ಎಂದು ಥೈಕುಡಂ ಬ್ರಿಡ್ಜ್ ಸಂಸ್ಥೆ ಮ್ಯೂಸಿಕ್ ಸಂಸ್ಥೆಯ ಮುಖ್ಯಸ್ಥ ವಿಯಾನ್ ಫೆರ್ನಾಂಡೀಸ್ ಹೇಳಿದ್ದಾರೆ .

Click to comment

Leave a Reply

ಸಿನೆಮಾ

Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ

Ad Widget

Ad Widget

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲ ದಿನಗಳ ಬಳಿಕ ಮುಂಗಾರು ಮಳೆ’ ಸಿನಿಮಾ ಖ್ಯಾತಿಯ ನಟಿ ಪೂಜಾ ಗಾಂಧಿ, ತಮ್ಮ ಪತಿ ವಿಜಯ್ ಅವರೊಂದಿಗೆ ಕುವೆಂಪು ಅವರ ಹುಟ್ಟೂರು ಕುಪ್ಪಳಿಗೆ ಭೇಟಿ ನೀಡಿದ್ದಾರೆ. ಕವಿ ಶೈಲದಲ್ಲಿ ಸಮಯ ಕಳೆದಿರುವ ಅವರು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೂಜಾ ಗಾಂದಿಯವರು ಹೊರ ರಾಜ್ಯದವರಾದರೂ ಮದುವೆಯಾದ ತಕ್ಷಣ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕನ್ನಡ ಸಾರಸ್ವತ ಲೋಕದ ದಿಗ್ಗಜ ಕುವೆಂಪು ಬಾಳಿ ಬದುಕಿದ ಮನೆಗೆ ಭೇಟಿ ನೀಡಿ ಅಲ್ಲಿ ಫೋಟೊ ತೆಗೆಸಿಕೊಂಡಿರುವುದು ಕನ್ನಡಿಗರ ಖುಷಿಗೆ ಕಾರಣವಾಗಿದೆ.

Ad Widget

Ad Widget

Ad Widget

Ad Widget


ಬೆಂಗಳೂರಿನ ಯಲಹಂಕದಲ್ಲಿ ನಟಿ ಪೂಜಾ ಗಾಂಧಿ ಮತ್ತು ಉದ್ಯಮಿ ವಿಜಯ್ ಘೋರ್ಪಡೆ ನವೆಂಬರ್ 29 ರಂದು ಕುವೆಂಪು ಅವರ ಪರಿಕಲ್ಪನೆಯ ಮಂತ್ರ ಮಾಂಗಲ್ಯ ಪದ್ಧತಿಯಂತೆ ನಡೆದಿತ್ತು. . ವಿವಾಹಗಳಿಗೆ ಜನರು ಮಾಡುತ್ತಿದ್ದ ದುಂದುವೆಚ್ಚ, ಅದರಿಂದ ಉಂಟಾಗುತ್ತಿದ್ದ ಸಾಲಬಾಧೆ, ಅಲ್ಲಿದ್ದ ಕಂದಾಚಾರ, ಪುರೋಹಿತಶಾಹಿ ವ್ಯವಸ್ಥೆ ಮುಂತಾದವುಗಳ ವಿರುದ್ಧವಿದ್ದ ಕುವೆಂಪು ಅವರು, ಜನರು ಸರಳವಾಗಿ ಮದುವೆ ಮಾಡಿಕೊಂಡು ಬದುಕಬೇಕೆಂದು ಹಂಬಲಿಸಿದ್ದರು. ಇದಕ್ಕಾಗಿ ಹುಟ್ಟುಹಾಕಿದ ಹೊಸ ಪರಿಕಲ್ಪನೆಯೆ ’ಮಂತ್ರ ಮಾಂಗಲ್ಯ’.

Ad Widget

Ad Widget

Ad Widget


ಈ ಮಂತ್ರ ಮಾಂಗಲ್ಯ ಮದುವೆ ಮತ್ತು ಪೂಜಾ ಗಾಂಧಿ ಕುರಿತಂತೆ ಖ್ಯಾತ ಗೀತ ಸಾಹಿತಿ ಕವಿರಾಜ್ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ‘ಕುವೆಂಪು ಅವರ ಆದರ್ಶವನ್ನು ಬದುಕಲ್ಲಿ ಹಾಸುಹೊಕ್ಕಾಗಿಸಿರುವ ಪೂಜಾ ಗಾಂಧಿ ನಿಜವಾದ ಕನ್ನಡತಿ’ ಎಂದು ಹೊಗಳಿದ್ದರು . ಅದಾದ ಬಳಿಕ ಪೂಜಾ ಗಾಂದಿ ಕವಿಶೈಲಕ್ಕೂ ಭೇಟಿ ನೀಡಿರುವುದು ಅವರ ಕುವೆಂಪು ಬಗೆಗಿನ ಪ್ರೀತಿಯನ್ನು ತೋರಿಸುತ್ತದೆ.

Ad Widget


ಕವಿರಾಜ್ ಪೋಸ್ಟ್ನಲ್ಲಿ ಏನಿದೆ?
“ಪೂಜಾ ಗಾಂಧಿ- ಹುಟ್ಟು ಕನ್ನಡತಿ ಅಲ್ಲದಿದ್ದರೂ ಅವರ ಅಪಾರ ಕನ್ನಡ ಪ್ರೇಮ, ಅವರು ಕನ್ನಡದ ಕುರಿತು ಕಾಳಜಿಯಿಂದ ಮಾಡುತ್ತಿರುವ ಆರ್ ಎಂಡ್ ಡಿ ಮಾದರಿಯ ಕೆಲವು ಕಾರ್ಯಗಳನ್ನು ನನ್ನೊಂದಿಗೆ ಶೇರ್ ಮಾಡಿದಾಗ ಓದಿ ಮೆಚ್ಚುಗೆಯ ಜೊತೆ ಆಶ್ಚರ್ಯವಾಗಿತ್ತು. ಆದರೆ ಅದಕ್ಕೆ ನೂರು ಪಟ್ಟು ಮಹದಾಶ್ಚರ್ಯವಾಗಿದ್ದು ಇತ್ತೀಚೆಗೆ ಕರೆ ಮಾಡಿ, ‘ತಾನು ಮಂತ್ರ ಮಾಂಗಲ್ಯ ಮಾದರಿಯಲ್ಲಿ ವಿವಾಹವಾಗುತ್ತಿದ್ದೇನೆ’ ಎಂದಾಗ. ಕನ್ನಡ ಜನತೆ ಅವರಿಗೆ ಒಂದು ಐಡೆಂಟಿಟಿ ಕೊಟ್ಟ ಋಣವನ್ನು ಈ ರೀತಿ ಪದೇ ಪದೇ ಅವರು ತೀರಿಸುತ್ತಿರುವ ಪರಿಯನ್ನು ಹೊಗಳಲು ಮಾತೇ ಇಲ್ಲಾ” ಎಂದು ಕವಿರಾಜ್ ತಿಳಿಸಿದ್ದಾರೆ.

Ad Widget

Ad Widget


ಮದುವೆಯ ಬಳಿಕ ಪೂಜಾ ಗಾಂದಿ ಪತಿಯ ಜೊತೆಗೆ ಕವಿಶೈಲಕ್ಕೂ ಭೇಟಿಕೊಟ್ಟಿದ್ದಾರೆ. ಇಲ್ಲಿಯ ಸುಂದರ ತಾಣದಲ್ಲಿ ಜೋಡಿಯಾಗಿ ನಿಂತುಕೊಂಡು ಚೆಂದದ ಪೋಸ್ ಕೂಡ ಕೊಟ್ಟಿದ್ದಾರೆ. ಆ ಕ್ಷಣದ ಫೋಟೋಗಳನ್ನ ಸ್ವತಃ ಪೂಜಾ ಗಾಂಧಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್ನಲ್ಲಿಯೇ ಪೋಸ್ಟ್ ಕೂಡ ಮಾಡಿಕೊಂಡಿದ್ದಾರೆ. ಸದ್ಯ ಪೂಜಾ ಗಾಂಧಿ ಕವಿಶೈಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


ಮದುವೆಯಾದ ಕೂಡಲೇ ವಿದೇಶಕ್ಕೆ ಹಾರುವ ನಟ-ನಟಿಯರ ಮಧ್ಯೆ ಪೂಜಾ ಗಾಂಧಿ ವಿಶೇಷವಾಗಿ ಕಂಡಿದ್ದಾರೆ. ಪೂಜಾ ಗಾಂಧಿ- ವಿಜಯ್ ಘೋರ್ಪಡೆ ದಂಪತಿ ಮದುವೆ ಬಳಿಕ ಮೊದಲ ಪ್ರಯಾಣವೆಂಬಂತೆ ಪೂಜಾ ಗಾಂಧಿ ಕವಿಶೈಲ ಪ್ರವಾಸ ನಡೆಸಿದ್ದಾರೆ. ಬಳಿಕ ಅಲ್ಲಿಯೆ ಇರುವ ಕವಿ ನೆಲೆಸಿದ್ದ ಮನೆಗೂ ಭೇಟಿ ನೀಡಿ ಫೋಟೊ ತೆಗೆಸಿಕೊಂಡಿದ್ದಾರೆ


ನವ ದಂಪತಿಗೆ ಶುಭ ಹಾರೈಸಿರುವ ಅಭಿಮಾನಿಗಳು ಪೂಜಾ ಗಾಂಧಿ ಅವರ ಸರಳತೆಗೆ ಹಾಗೂ ಕನ್ನಡ ಹಾಗೂ ಕುವೆಂಪು ಅವರ ಮೇಲಿನ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಪೂಜಾ ಗಾಂಧಿ ಕವಿಶೈಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹಚ್ಚ ಹಸಿರಿನ ತಾಣ ಕವಿಶೈಲ ಎಂತವರನ್ನಾದರೂ ತನ್ನತ್ತ ಸೆಳೆಯುತ್ತದೆ. ಜೊತೆಗೆ ಕುವೆಂಪು ಮೇಲಿನ ಅಭಿಮಾನಕ್ಕೂ ಈ ಜಾಗಕ್ಕೆ ಭೇಟಿ ನೀಡುವವರಿದ್ದಾರೆ.


ಕವಿ ಶೈಲದ ಬಗ್ಗೆ
ಕವಿ ಕುವೆಂಪು ಅವರ ಮನೆ ಕವಿ ಶೈಲದ ಕೆಳಭಾಗದಲ್ಲಿದೆ. ಕಲ್ಲು ಗೋಪುರ, ಕವಿಯ ಭಾವಗಳಿಗೆ ಜೀವ ತುಂಬುವ ಮಂಟಪಗಳಂತೆ ನೋಡುಗರ ಗಮನ ಸೆಳೆಯುತ್ತದೆ. ನಡುವೆ ಹಸುರು ಹುಲ್ಲುಗಳ ಮಧ್ಯೆ, ತರುಲತೆಗಳ ಸಂಗೀತ ಜಿರುಂಡಗಳು ಆಲಿಸುತ್ತಾ ಮಲಗಿರುವ ಕುವೆಂಪು ಸಮಾಧಿ ಇದೆ.


ಇಲ್ಲಿಂದ ಪೂರ್ವ ದಿಕ್ಕಿಗೆ ನೋಡಿದರೆ ಗುಡ್ಡಗಳು ಸಾಲು ಸಾಲು ದಿಗಂತದ ತನಕವೂ ಹರಡಿರುವ ವಿಶಾಲ ನೀಲಾಕಾಶ ಕಣ್ಮನ ಸೆಳೆಯುವ ರಮಣೀಯ ದೃಶ್ಯ . ಕವಿ ಕುವೆಂಪು ಕುಳಿತು. ಕಾವ್ಯಕ್ಕೆ ಸ್ಫೂರ್ತಿ ಪಡೆದ ತಾಣವಿದು. ಇದಕ್ಕೆ ಅವರೇ ಕೊಟ್ಟ ಹೆಸರು ಕವಿ ಶೈಲ.


ಅಲ್ಲಿಂದಲೇ ದೂರದ ಕುಂದಾದ್ರಿ. ಕೊಡಚಾದ್ರಿ ಬೆಟ್ಟಗಳನ್ನು ಕಾಣಬಹುದು ಕವಿ ಶೈಲಯ ದಿಂದ ಬೆಟ್ಟವಿಳಿವ ದಾರಿಯಲ್ಲು. ನಡೆದು ಬಂದರೆ. ಕವಿಮನೆ ವನದೇವತೆಯ ಮಡಿಲಲ್ಲಿ ಶಾಂತ ವಾತಾವರಣದಿಂದ ಸದಾ ತಂಪಾಗಿ ಹುಲ್ಲು ಹಾಸಿಗೆಯ ಮೇಲಿರುವ ದಕ್ಷಿಣ ಭಾರತದ ಶಾಂತಿನಿಕೇತನವಿದೆ.

Continue Reading

ಸಿನೆಮಾ

Ramesh Aravind Serial: ಸದ್ಯದಲ್ಲೆ ಕಿರುತೆರೆಯನ್ನು ಅಪ್ಪಲಿಸಲಿದೆ ಖ್ಯಾತ ಚಿತ್ರನಟ ರಮೇಶ್ ಅರವಿಂದ್ ನಿರ್ಮಾಣದ ಧಾರಾವಾಹಿ – ಯಾವಾಗ ? ಯಾವ ವಾಹಿನಿಯಲ್ಲಿ ? ಏನಿದರ ಕಥಾ ಹಂದರ – ಇಲ್ಲಿದೆ ಮಾಹಿತಿ

Ad Widget

Ad Widget

ನಟ ರಮೇಶ್ ಅರವಿಂದ್ (Ramesh Arvind) ಅವರಿಗೆ ಕಿರುತೆರೆ ಹೊಸದೇನೂ ಅಲ್ಲ. ಬಹಳ ಎಳವೆಯಲ್ಲೇ ದೂರದರ್ಶನಕ್ಕಾಗಿ ಶೋ ಒಂದನ್ನು ನಿರೂಪಣೆ ಮಾಡಿದ್ದರು ರಮೇಶ್. ಆ ಬಳಿಕ ಪ್ರೀತಿಯಿಂದ ರಮೇಶ್, ರಾಜಾ-ರಾಣಿ ರಮೇಶ್, ವೀಕೆಂಡ್ ವಿತ್ ರಮೇಶ್ ಹೀಗೆ ಹಲವು ಜನಪ್ರಿಯ ಟಿವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಮಾತ್ರವಲ್ಲ ಕೆಲವು ಧಾರಾವಾಹಿಗಳನ್ನು ನಿರ್ಮಾಣ ಸಹ ಮಾಡಿದ್ದಾರೆ ನಟ ರಮೇಶ್ ಅರವಿಂದ್. ಇದೀಗ ಮತ್ತೊಂದು ಹೊಸ ಧಾರಾವಾಹಿಯನ್ನು ತೆರೆಗೆ ತರುತ್ತಿದ್ದಾರೆ.
ಈ ಬಾರಿ ಅವರು ಸುವರ್ಣ ವಾಹಿನಿಗಾಗಿ ಧಾರಾವಾಹಿಯನ್ನು (Serial) ನಿರ್ಮಿಸುತ್ತಿದ್ದು, ಈ ಧಾರಾವಾಹಿಗೆ ‘ಆಸೆ’ (Aase) ಎಂದು ಹೆಸರಿಡಲಾಗಿದೆ. ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ನೂತನವಾದ ಮನಮುಟ್ಟುವ ಮನರಂಜನೆಯ ಧಾರಾವಾಹಿಗಳನ್ನು ನೀಡುತ್ತಲೇ ಆ ಸಾಲಿಗೆ ಆಸೆ ಸೇರ್ಪಡೆ ಆಗಲಿದೆ. ಈಗಾಗಲೇ ಧಾರಾವಾಹಿಯ ಶೀರ್ಷಿಕೆ ಗೀತೆಯಂತೂ ನೋಡುಗರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿದೆ.

Ad Widget

Ad Widget

Ad Widget

Ad Widget

ಆಸೆ ಧಾರಾವಾಹಿಯ ಕಥೆ :
ಚಿಕ್ಕ ವಯಸ್ಸಿನಲ್ಲಿ ತಿಳಿಯದೇ ನಡೆದ ಒಂದು ಘಟನೆಯಿಂದಾಗಿ ತಾಯಿಯಿಂದ ಪ್ರತಿದಿನ, ಪ್ರತಿಕ್ಷಣ ದೂಷಿಸಲ್ಪಡುತ್ತಿರುವ ಕಥಾನಾಯಕ ಸೂರ್ಯ. ಇವನ ಮಾತು ಕೊಂಚ ಒರಟು. ಹಾಗಿದ್ದರೂ ಕೂಡ ಅವನ ಮನಸು ಮೃದುವಾಗಿದೆ. ಜೀವನದಲ್ಲಿ ನೊಂದು-ಬೆಂದು ಆಕಾಂಕ್ಷೆಯನ್ನೇ ಆತ ಕಳೆದುಕೊಂಡಿದ್ದಾನೆ. ತಂದೆಗೆ ಸೂರ್ಯ ಎಂದರೆ ಬಹಳ ಮುದ್ದು. ಇನ್ನೊಂದೆಡೆ ಬಡತನದಲ್ಲಿ ಇದ್ದರೂ ಕೂಡ ಮುಖದಲ್ಲಿ ಯಾವಾಗಲೂ ಮಂದಹಾಸವನ್ನು ಹೊಂದಿರುವ ಹುಡುಗಿ ಮೀನಾ. ಅವಳೇ ಈ ಕಥೆಯ ನಾಯಕಿ. ಕುಟುಂಬದ ಕಷ್ಟಕ್ಕಾಗಿ ತನ್ನ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದವಳು ಈಕೆ. ಹೆತ್ತವರಿಗೆ ಸಹಕರಿಸುತ್ತಿರುವ ಮುಗ್ದ ಮನಸಿನ ಕಣ್ಮಣಿ ಇವಳು. ಒಡಹುಟ್ಟಿದವರ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ಮೀನಾ ಒಂದು ರೀತಿಯಲ್ಲಿ ತಾಯಿಯ ಎರಡನೇ ರೂಪ ಎನ್ನಬಹುದು.

Ad Widget

Ad Widget

Ad Widget

ಒಂದು ಕಡೆ ಜೀವನದಲ್ಲಿ ಗುರಿ, ಆಸೆಯೇ ಇಲ್ಲದ ಹುಡುಗ ಸೂರ್ಯ. ಇನ್ನೊಂದು ಕಡೆ ಮನೆಯವರ ಸಂತೋಷಕ್ಕಾಗಿ ಬಹಳ ಆಸೆಯನ್ನು ಇಟ್ಟುಕೊಂಡಿರುವ ಮೀನಾ. ಹೀಗೆ ತದ್ವಿರುದ್ಧವಾದ ಇಬ್ಬರ ಬದುಕು ಎದುರುಬದರಾದರೆ ಏನಾಗುತ್ತೆ ಎಂಬುದು ‘ಆಸೆ’ ಧಾರಾವಾಹಿಯ ಸಾರಾಂಶ.
ಪಾತ್ರ ಪರಿಚಯ
ಈ ಧಾರಾವಾಹಿಯಲ್ಲಿ ಪ್ರಮುಖವಾಗಿ ನಟ, ರಂಗಭೂಮಿ ಕಲಾವಿದರಾದ ಮಂಡ್ಯ ರಮೇಶ್ (Mandya Ramesh) ಅವರು ಮುಖ್ಯ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಜೊತೆಗೆ ನಿನಾದ್, ಪ್ರಿಯಾಂಕಾ, ಸ್ನೇಹಾ, ನಾಗೇಂದ್ರ ಶಾ, ಪ್ರಗತಿ, ನಂದೀಶ್, ಲಕ್ಷ್ಮಿ ಚಂದ್ರಶೇಖರ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ಕಲಾವಿದರು ಈ ಅಭಿನಯಿಸುತ್ತಿದ್ದಾರೆ.. ಇದೇ ಸೋಮವಾರದಿಂದ ರಾತ್ರಿ 7.30 ಕ್ಕೆ ಧಾರಾವಾಹಿಯ ಪ್ರಸಾರವಾಗಲಿದೆ.

Ad Widget
Continue Reading

ಸಿನೆಮಾ

ಬಿ – ಟೌನ್‌ ನಲ್ಲಿ ಭಾರೀ ಸದ್ದು ಮಾಡುತ್ತಿದೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಸುದ್ದಿ – ನಿಜಕ್ಕೂ ಅವರಿಬ್ಬರ ಮಧ್ಯೆ ಆಗಿರುವುದೇನು ?

Ad Widget

Ad Widget

Abhishek Bachchan, Aishwarya Rai divorce rumours ಸದ್ಯ ಬಿ-ಟೌನ್​ನಲ್ಲಿ ಭಾರಿ ಸುದ್ದಿ ಮಾಡುತ್ತಿರುವ ವಿಷಯವೆಂದರೇ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿ. ಬಾಲಿವುಡ್‌ ಅದರ್ಶ ಜೋಡಿ ಎಂದೆ ಹೆಗ್ಗಳಿಕೆ ಹೊಂದಿದ್ದ ಈ ದಂಪತಿಗೆ ಏನಾಯಿತು ? ಎಂಬ ಪ್ರಶ್ನೆ ಈಗ ಅವರ ಅಭಿಮಾನಿಗಳನ್ನು ಕಾಡಲು ಆರಂಬಿಸಿದೆ. ಅಷ್ಟಕ್ಕೂ ಆದದ್ದೇನೆಂದರೆ ಮುಂದೆ ಓದಿ

Ad Widget

Ad Widget

Ad Widget

Ad Widget


ಸೆಲೆಬ್ರಿಟಿ ದಂಪತಿಗಳ ವೈಮನಸ್ಸು ವಿಚ್ಛೇದನ ಇವೆಲ್ಲಾ ಹೊಸದಲ್ಲ. ಈ ರೀತಿ ವಿಚ್ಛೇದನ ಪಡೆದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಈಗ ಅಭಿಷೇಕ್ ಬಚ್ಚನ್ (Abhishek Bachchan) ಹಾಗೂ ಐಶ್ವರ್ಯಾ ರೈ ದಂಪತಿ ವಿಚ್ಛೇದನ ಪಡೆಯಲಿದ್ದಾರೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ

Ad Widget

Ad Widget

Ad Widget


ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣ ರೆಡ್ಡಿಟ್ ನಲ್ಲಿ ಬಳಕೆದಾರರೊಬ್ಬರು ಅಭಿಷೇಕ್ ಉಂಗುರ ದರಿಸದ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಅಭಿಷೇಕ್ ಇತ್ತೀಚಿನ ದಿನಗಳಲ್ಲಿ ಮದುವೆ ಉಂಗುರವನ್ನು ಧರಿಸುತ್ತಿಲ್ಲ, ಹಿಂದೆ ಅದು ಯಾವಾಗಲೂ ಅವರ ಕೈಯಲ್ಲಿರುತಿತ್ತು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬಂತೆ ತೋರುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಈ ಬಳಿಕ ಅವರಿಬ್ಬರು ಡೈವೋರ್ಸ್‌ ಆಗುತ್ತಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ.

Ad Widget

Arecanut price ಚೇತರಿಕೆ ಕಾಣದ ಅಡಿಕೆ ಧಾರಣೆ -ದರ ಕುಸಿತದ ಹಿಂದಿದೆ ಈ ಕಾರಣಗಳು – ಡೋಲಾಯಮಾನ ಸ್ಥಿತಿಯಲ್ಲಿ ಅಡಿಕೆ ಭವಿಷ್ಯ

Ad Widget

Ad Widget


ಇದಾದ ಬಳಿಕ ಇತ್ತೀಚೆಗೆ ಮತ್ತೊಂದು ಘಟನೆ ನಡೆಯಿತು. ಇತ್ತೀಚೆಗೆ ಐಶ್ವರ್ಯಾ ರೈ ಹುಟ್ಟುಹಬ್ಬವಿತ್ತು. ಆಗ ಐಶ್ವರ್ಯಾ ಜೊತೆಗಿದ್ದಿದ್ದು ಅವರ ತಾಯಿ ಮತ್ತು ಮಗಳು ಮಾತ್ರ. ಅವರ ಬರ್ತ್ಡೇ ದಿನ ಅಭಿಷೇಕ್ ಅವರು ಐಶ್ವರ್ಯಾ ಅವರ ಫೋಟೋನ ಗೂಗಲ್ನಲ್ಲಿ ಹುಡುಕಿ ಡೌನ್ಲೋಡ್ ಮಾಡಿ ಪೋಸ್ಟ್ ಮಾಡಿದ್ದರು. ಹ್ಯಾಪಿ ಬರ್ತ್ಡೇ ಎಂದಷ್ಟೇ ಬರೆದಿದ್ದರು. ಅಲ್ಲದೇ ಐಶ್ವರ್ಯಾ ಮತ್ತು ಅಭಿಷೇಕ್ ಕಳೆದ ಹಲವು ದಿನಗಳಿಂದ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದು ಕೂಡ ಗಾಸಿಪ್‌ ಗೆ ಇನ್ನಷ್ಟು ಶಕ್ತಿ ತುಂಬಿದೆ


ಸ್ವಘೋಷಿತ ಚಿತ್ರ ವಿಶ್ಲೇಷಕ ಉಮೈರ್ ಸಂಧು ಇತ್ತೀಚೆಗೆ ಟ್ವೀಟ್ ಮಾಡಿದ್ದು ಅದರಲ್ಲಿ ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದರು. ‘ಅಭಿಷೇಕ್-ಐಶ್ವರ್ಯಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ’ ಎಂದು ಉಮೈರ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರು ಪೋಸ್ಟ್ ಮಾಡುವ ಬಹುತೇಕ ಎಲ್ಲಾ ಟ್ವೀಟ್ಗಳು ಫೇಕ್ ಆಗಿರುತ್ತವೆ. ಹೀಗಾಗಿ, ಇವರ ಟ್ವೀಟನ್ನು ಜನ ಗಂಭೀರವಾಗಿ ಸ್ವೀಕರಿಸಿಲ್ಲ

Southeastern Railway Recruitment 2023 ಸೌತ್ ಈಸ್ಟರ್ನ್ ರೈಲ್ವೇಸ್ ವಿಭಾಗದಲ್ಲಿ ಭರ್ಜರಿ ಉದ್ಯೋಗವಕಾಶ: ಅಪ್ರೆಂಟಿಸ್ ಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ


ಆದರೆ ಇವರಿಬ್ಬರ ಡೈವೊರ್ಸ್‌ ಗಾಳಿ ಸುದ್ದಿಯ ಕುರಿತಾಗಿ ಬಚ್ಚನ್​ ಕುಟುಂಬದ ಯಾರೊಬ್ಬರೂ ಇದುವರೆಗೆ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದಾಗಿ ಬಿಗ್​-ಬಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನವೂ ಸುಳಿದಾಡುತ್ತಿದೆ.


ಐಶ್ವರ್ಯ ರೈ ಮತ್ತು ಅಭಿಷೇಕ್ 2007ರಲ್ಲಿ ಕೆಲವೇ ಜನರ ಸಮ್ಮುಖದಲ್ಲಿ ಮದುವೆಯಾದರು. 2011ರಲ್ಲಿ ಐಶ್ವರ್ಯಾ ಆರಾಧ್ಯಗೆ ಜನ್ಮ ನೀಡಿದರು. ಈಗ ಇಬ್ಬರ ವಿಚ್ಛೇದನದ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ ಈ ವಿಚಾರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ

Health Benefits of Pomegranates: ಪುರುಷರಿಗೆ ಪ್ರಯೋಜನಕಾರಿ ದಾಳಿಂಬೆ – ಇದರಲ್ಲಿದೆ  ಹಲವು ಆರೋಗ್ಯವರ್ಧಕ ಅಂಶಗಳು


ಆದರೆ ಇದರ ಮಧ್ಯೆಯೇ ನಟಿ ಐಶ್ವರ್ಯ ಮತ್ತು ಮಗಳು ಆರಾಧ್ಯ ಡ್ಯಾನ್ಸ್​ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. ವಿಚ್ಛೇದನದ ಸುದ್ದಿಯ ಬೆನ್ನಲ್ಲೇ ಈ ವಿಡಿಯೋ ವೈರಲ್​ ಆಗಿರುವುದು ನೆಟ್ಟಿಗರ ಅನುಮಾನವನ್ನು ಹೆಚ್ಚಿಸಿದೆ
ಕೊನೆಗೂ ಮುಕ್ತಿ ಸಿಕ್ಕಿತು ಎಂದು ಮಗಳೊಂದಿಗೆ ಐಶ್ವರ್ಯ ಡ್ಯಾನ್ಸ್​ ಮಾಡುತ್ತಿದ್ದಾಳೆ ಎಂದು ಕೆಲವರು ಬರೆದಿದ್ದರೆ, ತಮ್ಮ ನಡುವೆ ಎಲ್ಲವೂ ಸರಿಯಿದೆ, ವಿಚ್ಛೇದನದ್ದು ಗಾಳಿ ಸುದ್ದಿ ಮಾತ್ರ ಎಂದು ಈ ರೀತಿ ಐಶ್ವರ್ಯ ರೈ ತಿಳಿಸುತ್ತಿದ್ದಾರೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅಮ್ಮ-ಮಗಳ ಡ್ಯಾನ್ಸ್ ಹಾಗೂ ನಟನಾ ಜೋಡಿಯ ವಿಚ್ಛೇದನ ಸದ್ಯದ ಹಾಟ್​ ಟಾಪಿಕ್​.

Continue Reading

Trending

error: Content is protected !!