Ad Widget

BJP MLA Kumaraswamy | ಮೃತಪಟ್ಟ ಮನೆಯವರಿಗೆ ಸಾಂತ್ವನ ಹೇಳಲು ಹೋದಾಗ ನನಗೆ ಹಲ್ಲೆ ನಡೆದಿದೆ – ಪೊಲೀಸರ ವೈಫಲ್ಯವೇ ಕಾರಣ – ಅಂಗಿ ಹರಿದ ಸ್ಥಿತಿಯಲ್ಲಿ ಮೂಡಿಗೆರೆ ಶಾಸಕ ಗಂಭೀರ ಆರೋಪ : ಗಲಾಟೆ ಸ್ಥಳದಿಂದ ಸುರಕ್ಷಿತವಾಗಿ ಹೋದ ಶಾಸಕರು 45 ನಿಮಿಷ ಬಳಿಕ ಅಂಗಿ ಹರಿದುಕೊಂಡು ಪ್ರತ್ಯಕ್ಷ..? ರಕ್ಷಿಸಿದ ಪೊಲೀಸರ ಮೇಲೆಯೇ ಆರೋಪ ..!

InShot_20221120_223741262
Ad Widget

Ad Widget

Ad Widget

ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ (BJP MLA Kumaraswamy) ಜನರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರಿನಲ್ಲಿ ಭಾನುವಾರ ಬೆಳಗ್ಗೆ ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ ವೇಳೆ ಈ ಘಟನೆ ನಡೆದಿದೆ. ಪೊಲೀಸರು ಅವರನ್ನು ಸುರಕ್ಷಿತವಾಗಿ ಕಳುಹಿಸಿದಾಗ ಅವರ ಅಂಗಿ ಹರಿದಿರುವುದು ಕಂಡುಬಂದಿಲ್ಲ. ಆದರೆ, ಘಟನೆ ನಡೆದು ಮೂಕ್ಕಾಲು ಗಂಟೆ ಬಳಿಕ ವಿಡಿಯೋ ಒಂದು ವೈರಲ್‌ ಆಗಿದ್ದು, ಶಾಸಕರು ಹರಿದ ಅಂಗಿಯಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಅವರ ಮೇಲೆ ಜನರು ಹಲ್ಲೆ ನಡೆಸಿದ್ರಾ? ಶರ್ಟ್ ಹರಿದು ಹಾಕಿ ನಡು ರೋಡಲ್ಲಿ ನಿಲ್ಲಿಸಿದ್ರಾ? ಹೀಗೊಂದು ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ. ಯಾಕಂದ್ರೆ ಶಾಸಕ ಎಂಪಿ ಕುಮಾರಸ್ವಾಮಿ ಹರಿದ ಅಂಗಿಯಲ್ಲಿ ಇರುವ ವಿಡಿಯೋ ಒಂದು ವೈರಲ್‌ ಆಗಿದ್ದು, ಆ ವಿಡಿಯೋದಲ್ಲಿ ಸಂಚು ಮಾಡಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಾಸಕರು ಗಂಭೀರ ಆರೋಪ ಮಾಡಿದ್ದಾರೆ.

Ad Widget

Ad Widget

Ad Widget

Ad Widget

ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರಿನಲ್ಲಿ ಭಾನುವಾರ ಬೆಳಗ್ಗೆ ಕಾಡಾನೆ ದಾಳಿ ನಡೆಸಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಹಿನ್ನೆಲೆ ಮೃತದೇಹ ನೋಡಲು ಶಾಸಕ ಎಂಪಿ ಕುಮಾರಸ್ವಾಮಿ ಭಾನುವಾರ ಸಂಜೆ 4.30ರ ಸುಮಾರಿಗೆ ಗ್ರಾಮಕ್ಕೆ ಭೇಟಿ ನೀಡಲು ತೆರಳಿದ್ದರು. ಶಾಸಕರು ಗ್ರಾಮಕ್ಕೆ ತಡವಾಗಿ ಹೋಗಿದ್ದನ್ನು ಗ್ರಾಮದ ಜನ ಪ್ರಶ್ನೆ ಮಾಡಿದ್ದಾರೆ. ಆನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಶಾಸಕರ ವಿರುದ್ಧ ಈ ವೇಳೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಶಾಸಕರು ಮತ್ತು ಜನರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿತ ಪೊಲೀಸರು ಅರಣ್ಯ ಇಲಾಖೆಯ ವಾಹನದಲ್ಲಿ ಶಾಸಕ ಎಂಪಿ ಕುಮಾರಸ್ವಾಮಿ ಅವರನ್ನು ಸುರಕ್ಷಿತವಾಗಿ ಮೂಡಿಗೆರೆಗೆ ಕಳುಹಿಸಿದ್ದಾರೆ.

Ad Widget

Ad Widget

ಹುಲ್ಲೆಮನೆ ಕುಂದೂರು ಗ್ರಾಮದಿಂದ ಶಾಸಕರನ್ನು ಪೊಲೀಸರು ವಾಹನದಲ್ಲಿ ಕಳುಹಿಸುವಾಗ ಯಾವುದೇ ರೀತಿಯ ಬಟ್ಟೆ ಹರಿದ ಬಗ್ಗೆ ಕುರುಹು ಕಂಡಿದ್ದಿಲ್ಲ. ಆದರೆ, ಘಟನೆ ನಡೆದು ಮುಕ್ಕಾಲು ಗಂಟೆಯ ಬಳಿಕ ವಿಡಿಯೋ ವೈರಲ್‌ ಆಗಿದ್ದು, ವಿಡಿಯೋದಲ್ಲಿ ಹರಿದ ಅಂಗಿಯನ್ನು ತೋರಿಸುತ್ತಾ ಶಾಸಕ ಎಂಪಿ ಕುಮಾರಸ್ವಾಮಿ ಪ್ರತಿಭಟನಾ ನಿರತರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಶಾಸಕರು ಹೇಳಿದ್ದೇನು?
ಬೇಕು ಅಂತಲೇ ಕೆಲ ಗುಂಪು ರೆಡಿ ಮಾಡಿ ಸಂಚು ಮಾಡಿದ್ದರು. ಶಾಸಕರೇ ಆನೆ ಸಾಕಿದ್ದಾರೆ ಎಂಬ ಅಭಿಪ್ರಾಯವನ್ನು ಜನ ವ್ಯಕ್ತಪಡಿಸಿದರು. ಕೋರ್ಟ್‌, ಸರ್ಕಾರ ಆನೆ ಬಗ್ಗೆ ಏನು ಹೇಳುತ್ತದೆ ಎಂದು ಇಡೀ ರಾಜ್ಯಕ್ಕೆ, ದೇಶಕ್ಕೆ ಗೊತ್ತು. ಈ ರೀತಿ ಸಂಚು ಮಾಡಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಪೊಲೀಸರ ವೈಫಲ್ಯ ಇದೆ. ಸ್ಥಳದಲ್ಲಿ 10 ಜನ ಪೊಲೀಸರು ಮಾತ್ರ ಇದ್ದರು. ನಾನು ಅಲ್ಲಿಯೇ ಇರ್ತಿದ್ದೆ. ಆದರೆ, ಪೊಲೀಸರು ನನ್ನ ಮಿಸ್‌ಗೈಡ್‌ ಮಾಡಿ ಕಳುಹಿಸಿದ್ರು. ಇಲ್ಲ ಅಂದ್ರೇ ನಾನು ಆ ಜಾಗ ಬಿಟ್ಟು ಕದಲುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಆನೆ ದಾಳಿಗೆ ಮಹಿಳೆ ಬಲಿ:

ಭಾನುವಾರ ಬೆಳಗ್ಗೆ ಅಡಕೆ ತೋಟದಲ್ಲಿ ಹುಲ್ಲುಕೊಯ್ಯುತ್ತಿದ್ದ ವೇಳೆ ಹುಲ್ಲೆಮನೆ ಕುಂದೂರಿನಲ್ಲಿ ಶೋಭಾ ಎಂಬುವವರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಶೋಭಾ ಅವರು ತೋಟದಿಂದ ರಸ್ತೆಗೆ ದಾಟುವ ಸಂದರ್ಭ ಆನೆ ಸೊಂಡಿಲಿನಿಂದ ಎತ್ತಿ ಬಿಸಾಡಿ ತುಳಿದು ಸಾಯಿಸಿತ್ತು. ಕಾಡಾನೆ ದಾಳಿಯಿಂದ ಈ ವರ್ಷ ಮೂಡಿಗೆರೆ ತಾಲೂಕಲ್ಲಿ ಸಂಭವಿಸಿದ ಮೂರನೇ ಸಾವು ಇದಾಗಿದೆ.

Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: