ರಾಷ್ಟ್ರೀಯ
Kerala Lottory : ಬಡವನ ಬದುಕಿನಲ್ಲಿ ಪವಾಡ : ಮಧ್ಯಾಹ್ನ ಖರೀದಿಸಿದ ಲಾಟರಿಗೆ ಸಂಜೆ 70 ಲಕ್ಷ ಜಾಕ್ ಪಾಟ್ – ಅದರ ಮಧ್ಯೆ ಬಂದಿತ್ತು ಮನೆ ಜಪ್ತಿ ನೊಟೀಸ್
ಕೊಲ್ಲಂ: ಆತ ಮನೆ ಕಟ್ಟುವ ಸಲುವಾಗಿ ಬ್ಯಾಂಕಿನಿಂದ 7.5 ಲಕ್ಷ ಸಾಲ (Home Loan) ಮಾಡಿದ್ದ . ಅದರ ಕಂತು ಸರಿಯಾಗಿ ಕಟ್ಟಲಾಗದೇ ಅದರ ಕಂತು 9 ಲಕ್ಷ ತಲುಪಿತು. ಏತನ್ಮಧ್ಯೆ ಮನೆಯ ಜಪ್ತಿಯ ನೋಟಿಸನ್ನು ಬ್ಯಾಂಕಿನವರು ಕಳುಹಿಸಿದ್ದರು. ಇದರಿಂದ ದಿಕ್ಕು ತೋಚದಂತಾಗಿ ಮನೆಯಲ್ಲಿ ಮಲಗಿದಾತನ ಬದುಕಿನಲ್ಲಿ ಪವಾಡ ಸಂಭವಿಸಿತ್ತು.
ಈ ಪವಾಡ ನಡೆದದ್ದು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಶಾಸ್ತಾಂಕೋಟ ಮೈನಾಗಪಳ್ಳಿ ಶಾನವಾಸ್ ಮಂಝಿಲ್ ನಿವಾಸಿ ಪೂಕ್ಕುಂಜ್ ಬದುಕಿನಲ್ಲಿ. ಅವರು ಬುಧವಾರ ಮಧ್ಯಾಹ್ನ ಒಂದು ಗಂಟೆಗೆ ನಲುವತ್ತು ರೂಪಾಯಿ ಕೊಟ್ಟು ಕೇರಳ ಸರಕಾರದ ಅಕ್ಷಯ ಲಾಟರಿಯ ಟಿಕೆಟ್ ಖರೀದಿಸಿದರು. ಅಲ್ಲಿಂದ ಎರಡು ಗಂಟೆ ಸುಮಾರಿಗೆ ಮನೆಗೆ ಬಂದಾಗ ಬ್ಯಾಂಕ್ ನ ಜಪ್ತಿ ನೋಟಿಸ್ ಬಂದಿತ್ತು. ಇದರಿಂದ ಕಂಗಾಲದ ಅವರು ಏನು ಮಾಡಬೇಕೆಂದು ಗೊತ್ತಾಗದೆ ಮನೆಯಲ್ಲಿ ಮಲಗಿದ್ದರು . ಸಂಜೆ ಮೂರೂವರೆ ಗಂಟೆಗೆ ಎದ್ದಾಗ 70 ಲಕ್ಷದ ಭಾಗ್ಯದೇವತೆ ಅವರಿಗೆ ಒಲಿದಿದ್ದಳು.
ಬೈಕ್ನಲ್ಲಿ ಮೀನು ಮಾರಾಟ ಬದುಕಿನ ಬಂಡಿ ಸವೆಸುತ್ತಿದ್ದ ಪೂಕ್ಕುಂಜ್ ಎಂದಿನಂತೆ ಬುಧವಾರವೂ ಅದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಮೀನು ಮಾರಲು ಬರುವಾಗ ಮೈನಾಗಪಳ್ಳಿ ಪ್ಲಾಮೂಟ್ನ ಚಿಕ್ಕ ಸ್ಟಾಲ್ ನಲ್ಲಿ ಲಾಟರಿ ಮಾರಾಟ ಮಾಡುವ ವೃದ್ಧರೊಬ್ಬರ ಕೈಯಿಂದ ಒಂದು ಗಂಟೆಗೆ ಲಾಟರಿ ಖರೀದಿಸಿದ್ದಾರೆ.
ಮನೆಗೆ ತಲುಪಿದ ಸ್ವಲ್ಪ ಸಮಯದ ಬಳಿಕ ಎರಡುಗಂಟೆಗೆ ಕಾರ್ಪೊರೇಷನ್ ಬ್ಯಾಂಕ್ ಕರುನಾಗಪಳ್ಳಿ ಕುಟ್ಟಿವಟ್ಟಂ ಶಾಖೆಯಿಂದ ಜಪ್ತಿ ನೋಟಿಸ್ ಲಭಿಸಿದೆ.ಎಂಟು ವರ್ಷಗಳ ಹಿಂದೆ ಮನೆ ಕಟ್ಟಲು ಬ್ಯಾಂಕ್ ನಲ್ಲಿ 7.45 ಲಕ್ಷ ರೂಪಾಯಿ ಸಾಲ ಮಾಡಿದ್ದು, ಅದೀಗ ಬಡ್ಡಿ ಸಮೇತ 9 ಲಕ್ಷ ರೂ.ಗೆ ತಲುಪಿದೆ.ನೋಟೀಸ್ ಲಭಿಸಿದಾಗ ಏನು ಮಾಡಬೇಕೆಂದು ತೋಚದೆ ಎದೆ ಬಡಿದುಕೊಳ್ಳುತ್ತಾ ದುಃಖದಲ್ಲಿ ಹಾಸಿಗೆಯಲ್ಲಿ ಮಲಗಿದ್ದಾರೆ.
ಸಂಜೆ ಮೂರೂ ವರೆಗೆ ಖರೀದಿಸಿದ ಎ.ಝಡ್.907042 ಲಾಟರಿಗೆ ಪ್ರಥಮ ಬಹುಮಾನ ಬಂದಿದ್ದಾಗಿ ಸಹೋದರ ಫೋನ್ ಮಾಡಿ ತಿಳಿಸಿದ್ದಾನೆ.ಮೊದಲು ನಂಬಲಿಲ್ಲ. ಲಭಿಸಿದ್ದು ನಿಜ ಎಂದು ಮನವರಿಕೆಯಾದಾಗ ನೇರವಾಗಿ ಕರುನಾಗಪಳ್ಳಿಯ ಪತ್ನಿಯ ಕುಟುಂಬದ ಮನೆಗೆ ತೆರಳಿದ್ದು, ಮರೆಯಲಾಗದ ಬುಧವಾರಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಅಲ್ಲಿಂದ ಪತ್ನಿ ಮುಮ್ತಾಜ್ ಮಕ್ಕಳಾದ ಮುನೀರ್ ಮತ್ತು ಮುಹ್ಸಿನಾ ಜೊತೆ ಹಿಂತಿರುಗಿದ್ದಾಗಿ ಪೂಕ್ಕುಂಜ್ ತಿಳಿಸಿದ್ದಾರೆ.
karunya lottery Result : ಪೆರ್ಲದ ಲಾಟರಿ ಟಿಕೆಟ್ ಮಾರಾಟಗಾರನಿಗೆ ಒಲಿಯಿತು 80 ಲಕ್ಷ ರೂಪಾಯಿ ಜಾಕ್ ಪಾಟ್
ರಾಷ್ಟ್ರೀಯ
ಅಪಾರ್ಟ್ ಮೆಂಟ್ ನ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಯುಟ್ಯೂಬರ್ ಜೋಡಿ
ಹೊಸದಿಲ್ಲಿ ಎ.14: ಸೋಶಿಯಲ್ ಮಿಡಿಯಾ ಯೂಟ್ಯೂಬರ್ ಮೂಲಕ ಟ್ರೆಂಡಿಗ್ ನಲ್ಲಿದ್ದ ಜೋಡಿಯೊಂದು ಅಪಾರ್ಟ್ ಮೆಂಟ್ ನ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹರಿಯಾಣದ ಬಹದ್ದೂರ್ಗಢದ ರುಹಿಲ್ ರೆಸಿಡೆನ್ಸಿಯಲ್ಲಿ ನಡೆದಿದೆ.
ಮೃತರನ್ನು ಗರ್ವಿತ್ (25) ಮತ್ತು ನಂದಿನಿ (22) ಎಂದು ಗುರುತಿಸಲಾಗಿದೆ. ಮೃತ ಜೋಡಿ ತಮ್ಮ ಯೂಟ್ಯೂಬ್ ಚಾನೆಲ್ ನಿರ್ವಹಣೆ ಮತ್ತು ಕಿರುಚಿತ್ರಗಳನ್ನು ರಚಿಸುವಲ್ಲಿ ಪ್ರಸಿದ್ಧರಾಗಿದ್ದರು. ಇತ್ತೀಚೆಗೆ, ಅವರು ತಮ್ಮ ತಂಡದೊಂದಿಗೆ ಡೆಹ್ರಾಡೂನ್ನಿಂದ ಬಹದ್ದೂರ್ಗಢಕ್ಕೆ ಸ್ಥಳಾಂತರಗೊಂಡಿದ್ದರು.
ದಂಪತಿಗಳು ಕಟ್ಟಡದ ಏಳನೇ ಮಹಡಿಯಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಅವರು ತಮ್ಮ ತಂಡದ ಸರಿಸುಮಾರು ಐದು ಮಂದಿಯೊಂದಿಗೆ ವಾಸಿಸುತ್ತಿದ್ದರು.
ಮಂಗಳೂರು
Padmaraj R ಜಿಲ್ಲೆಯ ಪ್ರಭಾವಿ ಬಿಲ್ಲವ ನಾಯಕ, ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಶಿಷ್ಯ ಪದ್ಮರಾಜ್ ರಾಮಯ್ಯ ಗೆ ಒಲಿದ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ –
ಪುತ್ತೂರು: ಕಾಂಗ್ರೆಸ್ ಪಕ್ಷ ರಾಜ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮಂಗಳೂರು ಲೋಕಸಭಾ ಕ್ಷೇತ್ರದಿಂದ ಜಿಲ್ಲೆಯ ಪ್ರಭಾವಿ ಬಿಲ್ಲವ ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜನಾರ್ಧನ ಪೂಜಾರಿಯರ ಶಿಷ್ಯ , ಕಳೆದ 25 ವರ್ಷಗಳಿಂದ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಯವಾದಿ ಪದ್ಮರಾಜ್ ರಾಮಯ್ಯನವರಿಗೆ ಟಿಕೆಟ್ ನೀಡಲಾಗಿದೆ. ನೋಟರಿ ವಕೀಲರಾದ ಇವರು ತನ್ನ ನೋಟರಿ ಸಹಿಯನ್ನು ಬಡವರು, ವಿದ್ಯಾರ್ಥಿಗಳ ದೃಢೀಕರಣಕ್ಕೆ ಉಚಿತವಾಗಿ ನೀಡುವ ಮೂಲಕ ಸಮಾಜಕ್ಕೊಬ್ಬ ಮಾದರಿ ವಕೀಲರಾಗಿದ್ದಾರೆ.
ಪದ್ಮರಾಜ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರುನಲ್ಲಿ ವಾಸ್ತವ್ಯವಿದ್ದ ಮಂಗಳೂರು ಮೂಲದ ಎಚ್.ಎಂ. ರಾಮಯ್ಯ ಪೂಜಾರಿ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರ. ಅವರು ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ ಮುಂದೆ ಬಿ.ಎ. ಪದವಿಯನ್ನು ಬೆಳ್ತಂಗಡಿಯ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು
1995ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿಯವರೊಂದಿಗೆ ಪ್ರಾರಂಭಿಸಿದ ಇವರು ನಾಲ್ಕು ವರ್ಷಗಳ ಬಳಿಕ ಮಂಗಳೂರಿನ ಬಳ್ಳಾಲ್ಬಾಗ್ನಲ್ಲಿ ಸ್ವಂತ ಕಚೇರಿ ಪ್ರಾರಂಭಿಸಿದರು. ವೃತ್ತಿ ಜೀವನದ ಆರಂಭದ ಸಮಯದಲ್ಲಿ ಹಿರಿಯ ವಕೀಲರಾದ ಪಿ.ಗಂಗಾಧರ್ ಅವರ ಸಲಹೆಯಂತೆ ಆಗಿನ ಬಿಲ್ಲವರ ಯೂನಿಯನ್ ಸದಸ್ಯರಾದರು. ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದಿದ್ದರೂ ಬಿ.ಜನಾರ್ದನ ಪೂಜಾರಿಯವರು ಸ್ಪರ್ಧಿಸಿದ ಎಲ್ಲಾ ಚುನಾವಣೆ ಸಂದರ್ಭದಲ್ಲೂ ಅವರಿಗಾಗಿ ದುಡಿದಿದ್ದಾರೆ.
ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ, ಸಮಾಜಸೇವೆಯನ್ನು ಮೈಗೂಡಿಸಿಕೊಂಡಿರುವ ಪದ್ಮರಾಜ್ ಅವರಿಗೆ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಳದ ಬಗ್ಗೆ ಅಪಾರ ಶ್ರದ್ಧೆ, ಭಕ್ತಿ. ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿಪದ್ಮರಾಜ್ ರವರು ಮಂಗಳೂರಿನ ನವರಾತ್ರಿ ಉತ್ಸವ ವಿಶ್ವ ಪ್ರಸಿದ್ಧಿ ಪಡೆಯಲು ಶ್ರಮ ಪಟ್ಟಿದ್ದಾರೆ.
ಕೊರೊನಾ ಮಹಾಮಾರಿಯಿಂದಾಗಿ 40 ದಿನಗಳ ಲಾಕ್ಡೌನ್ ಉಂಟಾದ ಸಂದರ್ಭ ಬಿ.ಜನಾರ್ದನ ಪೂಜಾರಿಯವರ sUcneyMte ದಿನಂಪ್ರತಿ ದೇವಸ್ಥಾನದ ವತಿಯಿಂದ ಸುಮಾರು 1000 ಬಡವರು, ನಿರಾಶ್ರಿತರಿಗೆ ಹಾಗೂ ವಲಸೆ ಕೂಲಿ ಕಾರ್ಮಿಕರಿಗೆ ಅನ್ನದಾನ ನಡೆಯುತ್ತಿತ್ತು. ಈ ಸಂದರ್ಭ ಪದ್ಮರಾಜ್ ಅವರೇ ಖುದ್ದಾಗಿ ಸೇವಾದಳದವರೊಂದಿಗೆ ವಿವಿಧ ಪ್ರದೇಶಗಳಿಗೆ ತೆರಳಿ ಅನ್ನದಾನ ವಿತರಣೆಯಲ್ಲಿ ಭಾಗಿಯಾಗುತ್ತಿದ್ದರು
ಪದ್ಮರಾಜ್ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ದೇವಸ್ಥಾನದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 300 ಕ್ವಿಂಟಾಲ್ ಅಕ್ಕಿದಾನ ಮಾಡಲಾಗಿತ್ತು. ಎರಡನೇ ಲಾಕ್ಡೌನ್ ಸಂದರ್ಭದಲ್ಲಿ ತನ್ನ ಮುಂದಾಳತ್ವದ ಗುರು ಬೆಳದಿಂಗಳು ಪೌಂಡೇಶನ್ ಮೂಲಕ ಸಹಸ್ರಾರು ನೊಂದವರಿಗೆ ದಿನಸಿ, ಆಹಾರ ಸಾಮಾಗ್ರಿ ತಲುಪಿಸಿದರು. ಗುರು ಬೆಳದಿಂಗಳು ಪೌಂಡೇಶನ್ ಅಶಕ್ತರ ಕಣ್ಣೀರು ಒರೆಸಲು ಪದ್ಮರಾಜ್ ಆರಂಭಿಸಿದ ಪೌಂಡೇಷನ್. ಇದರ ಮೂಲಕ ಸಾವಿರಾರು ನೊಂದವರಿಗೆ ಸಹಾಯ ಮಾಡಲಾಗಿದೆ.
ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರು, ಜೆ.ಸಿ. ಪ್ರತಿಷ್ಠಾನ ದ.ಕ. ಜಿಲ್ಲಾ ಗೌರವ ಸಂಚಾಲಕ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಘ ಸಂಸ್ಥೆಗಳಿಂದ ಇವರ ಸಮಾಜಮುಖಿ ಸೇವೆಗೆ ಗೌರವ ಸಂದಿದೆ. ನಮ್ಮ ಕುಡ್ಲ ವಾಹಿನಿ ನೀಡುವ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಪದ್ಮರಾಜ್ರವರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಅದರ್ಶಗಳನ್ನು ಮೈಗೂಡಿಸಿಕೊಂಡವರು. 2 ವರ್ಷಗಳ ಹಿಂದೆ ಗಣ ರಾಜ್ಯೋತ್ಸವದ ಸಂದರ್ಭ ಕೇಂದ್ರ ಸರಕಾರ ನಾರಾಯಣ ಗುರುಗಳ ಟ್ಯಾಬ್ಲೊ ಪ್ರದರ್ಶನವನ್ನು ನಿರಾಕರಿಸಿದಾಗ ಅದರ ವಿರುದ್ಧ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ದ್ದವರು. ಇವರ ಮುಂದಾಳತ್ವದಲ್ಲಿ ಗುರುಗಳಿಗೆ ಆದ ಅವಮಾನದ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿತ್ತು. ಹಿಂದಿನ ರಾಜ್ಯ ಸರಕಾರದ ಅವಧಿಯಲ್ಲಿ 10ನೇ ತರಗತಿಯ ಪಠ್ಯಪುಸ್ತಕದ ಸಮಾಜ ವಿಜ್ಞಾನದಲ್ಲಿ ನಾರಾಯಣ ಗುರುಗಳ ಪಠ್ಯ ಕೈಬಿಟ್ಟದ್ದರ ವಿರುದ್ಧ ಮೊದಲು ಖಂಡನೆ ವ್ಯಕ್ತಪಡಿಸಿ ರಾಜ್ಯಾದ್ಯಂತ ಹೋರಾಟ ಮಾಡುವ ಮೂಲಕ ಗುರುಗಳ ಪಠ್ಯವನ್ನು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ಅಪರಾಧ
Mother Kills Own Daughter: ಮನೆಯಲ್ಲಿ ಬಾಯ್ ಫ್ರೆಂಡ್ ಜತೆ ಮಗಳ ನೋಡಿ ತಾಯಿ ಕೆಂಡಮಂಡಲ – ಕತ್ತು ಹಿಸುಕಿ ಹತ್ಯೆ
ಹೈದರಾಬಾದ್: ಮನೆಯಲ್ಲಿ ಯಾರೂ ಇಲ್ಲದ ವೇಳೆ, ಮಗಳು ತನ್ನ ಬಾಯ್ಫ್ರೆಂಡ್ ಜೊತೆ ಮನೆಯೊಳಗಡೆ ಇರುವುದನ್ನು ಕಂಡು ಕೋಪಗೊಂಡ ತಾಯಿ, ಸ್ವಂತ ಮಗಳನ್ನೆ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಹೈದರಾಬಾದ್ನಲ್ಲಿ (Hyderabad) ನಡೆದಿದೆ. 19ರ ಹರೆಯದ ಬಾರ್ಗವಿ ಕೊಲೆಯಾದವಳು.
ಹೈದರಾಬಾದ್ ನ ಇಬ್ರಾಹಿಂಪಟ್ಟಣದಲ್ಲಿ ಕೃತ್ಯ ನಡೆದಿದೆ. ಬಾರ್ಗವಿಯ ತಾಯಿ ಜಂಗಮ್ಮ ಕೊಲೆ ಆರೋಪಿ. ಭಾರ್ಗವಿಗೆ ಮದುವೆ ಮಾಡಲು ನಿರ್ಧರಿಸಿದ್ದ, ಜಂಗಮ್ಮ ಸೂಕ್ತ ವರನ ಅನ್ವೇಷಣೆಯಲ್ಲಿದ್ದರು. ಆದರೆ ಯುವತಿ ಸ್ಥಳೀಯ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಇದು ಜಂಗಮ್ಮನಿಗೆ ಇಷ್ಟವಿರಲಿಲ್ಲ. ಆಕೆ ಅವರಿಬ್ಬರ ಪ್ರೀತಿ ಸಂಬಂಧವನ್ನು ವಿರೋಧಿಸಿದ್ದಳು.
ಸೋಮವಾರ ಮಧ್ಯಾಹ್ನ ಜಂಗಮ್ಮ ಗದ್ದೆಯಿಂದ ಊಟಕ್ಕೆಂದು ಮನೆಗೆ ಬಂದಾಗ ಮಗಳ ಗೆಳೆಯ ಮನೆಯಲ್ಲಿದ್ದದ್ದನ್ನು ಕಂಡು ಕೋಪಗೊಂಡಿದ್ದಾಳೆ. ಮಗಳಿಗೆ ಬೈಯಲು ಆರಂಭಿಸಿದ್ದಾಳೆ. ಈ ವೇಳೆ ಯುವಕ ಮನೆಯಿಂದ ಓಡಿ ಹೋಗಿದ್ದು, ಯುವತಿಯ ತಮ್ಮನಿಗೆ ವಿಷಯ ತಿಳಿಸಿದ್ದಾನೆ. ಆಕೆಯ ಸಹೋದರ ಮನೆಗೆ ಬಂದಾಗ ಬಾಗಿಲು ಬೀಗ ಹಾಕಿತ್ತು. ಕಿಟಕಿಯಿಂದ ನೋಡಿದಾಗ, ತಾಯಿ ಅಕ್ಕನ ಕತ್ತು ಹಿಸುಕಲು ಪ್ರಯತ್ನಿಸುತ್ತಿರುವುದು ಕಾಣಿಸಿದೆ.
ಹೀಗಾಗಿ ಆತ ಕೋಣೆಯ ಬಾಗಿಲು ಬಿಡಿದಿದ್ದು, ಅಲ್ಲಿಂದ ಹೊರ ಬಂದ ಜಂಗಮ್ಮ , ತಾನು ನೋಡಿದಾಗ ಮಗಳು ಕೊರಳಿಗೆ ಸೀರೆಯ ಕುಣಿಕೆ ಹಾಕಿಕೊಂಡಿದ್ದು, ಪ್ರಜ್ಞೆ ತಪ್ಪಿ ಬಿದ್ದಿರುವುದಾಗಿ ಸುಳ್ಳು ಕಥೆಯೊಂದನ್ನು ಮಗನಲ್ಲಿ ಹೇಳಿದ್ದಳು. ಸಂಬಂಧಿಕರು ವೈದ್ಯರನ್ನು ಮನೆಗೆ ಕರೆತಂದು ಪರೀಖ್ಷೆಗೆ ಒಳಪಡಿಸಿದಾಗ, ಭಾರ್ಗವಿ ಸಾವನ್ನಪ್ಪಿರುವುದು ಗೊತ್ತಾಗಿದೆ.
ಕೊಲೆಯಾದ ಯುವತಿಯ ಅಪ್ರಾಪ್ತ ಸಹೋದರ, ತಾನು ಕೊಲೆಯನ್ನು ನೋಡಿರುವುದಾಗಿ ತಾಯಿಯ ವಿರುದ್ಧ ದೂರು ನೀಡಿದ್ದು , ಅದರಂತೆ ಪ್ರಕರಣ ದಾಖಲಾಗಿದೆ.
-
ಪುತ್ತೂರು1 day ago
ನರಿಮೊಗರು : ಬೈಕ್ – ಜೀಪು ನಡುವೆ ಭೀಕರ ಅಪಘಾತ : ಬೈಕ್ ಸವಾರ ಮೃತ್ಯು – ಇಬ್ಬರು ಮಕ್ಕಳು ಗಂಭೀರ : ಬೈಕನ್ನು ಎಳೆದೊಯ್ದ ಜೀಪು – ಜೀಪು ತೆಗೆಯಲು ಸಾರ್ವಜನಿಕರ ತೀವ್ರ ವಿರೋಧ
-
ದಕ್ಷಿಣ ಕನ್ನಡ3 hours ago
ನಿಮ್ಮ ಕಾವಲುಗಾರನಾಗಿ ನಾನಿರುವೆ: ಪದ್ಮರಾಜ್ ಆರ್. ಪೂಜಾರಿ; ಬಂಟ್ವಾಳದಲ್ಲಿ ಬಿರುಸಿನ ಪ್ರಚಾರ
-
ಸಾಮಾಜಿಕ ಮಾಧ್ಯಮ7 hours ago
Dhruv Rathee | ಕನ್ನಡ ಸೇರಿ ಪಂಚಭಾಷೆಯಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ ದೇಶದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ