Ad Widget

Watch Video : ಮಂಗಳೂರು : ಕೇರಳದ ವಿದ್ಯಾರ್ಥಿಗಳ ಮಾರಾಮಾರಿ – ವಿದ್ಯಾರ್ಥಿಗಳು ಹಾಸ್ಟೇಲ್ ತೆರವುಗೊಳಿಸುವಂತೆ ಸ್ಥಳೀಯರ ಪ್ರತಿಭಟನೆ

1-2
Ad Widget

Ad Widget

Ad Widget

ಮಂಗಳೂರಿನ ಪದವಿ ಕಾಲೇಜೊಂದರ  ವಿದ್ಯಾರ್ಥಿಗಳ ಎರಡು  ತಂಡಗಳ ನಡುವೆ ಡಿ.2ರಂದು  ಹೊಡೆದಾಟ ನಡೆದಿದೆ.  ಈ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದ ಹಾಸ್ಟೇಲ್‌   ಗುಜ್ಜರಕೆರೆ ಎಂಬಲ್ಲಿದು ಅಲ್ಲಿನ  ಸ್ಥಳೀಯರು ಪ್ರತಿಭಟನೆ ನಡೆಸಿ ಕಾಲೇಜು ಹಾಸ್ಟೆಲ್ ಖಾಲಿ ಮಾಡುವಂತೆ ಒತ್ತಾಯಿಸಿದ  ಘಟನೆ ಶುಕ್ರವಾರ ಡಿ.3 ರಂದು ನಡೆದಿದೆ

Ad Widget

Ad Widget

Ad Widget

Ad Widget

Ad Widget

ಡಿಸೆಂಬರ್ 2 ರಂದು ತಡ  ರಾತ್ರಿ  ವಿದ್ಯಾರ್ಥಿಗಳ ತಂಡಗಳ ನಡುವೆ ಪರಸ್ಪರ  ಮಾರಾಮಾರಿ ನಡೆದಿದೆ.  ಪೊಲೀಸರ ಮೇಲೆ ಹಲ್ಲೆ, ಕಲ್ಲು ತೂರಾಟ,  ಕಾಲೇಜು ಭದ್ರತಾ ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು,  ಕಟ್ಟಡಕ್ಕೆ ಹಾನಿ ಹೀಗೆ ಹಲವು ಸರಣಿ ಘಟನೆಗಳು  ನಡೆದಿದ್ದವು.ಈ ಹಿನ್ನಲೆಯಲ್ಲಿ ಕಾಲೇಜು ಹಾಸ್ಟೆಲ್ ತೆರವು ಮಾಡುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಹಾಸ್ಟೆಲ್ ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು

Ad Widget

Ad Widget

Ad Widget

Ad Widget

Ad Widget

ಪ್ರತಿಭಟನಾ ಸ್ಥಳಕ್ಕೆ  ಮಂಗಳೂರು  ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿದ್ದು  ಸ್ಥಳೀಯ ನಿವಾಸಿಗಳೊಂದಿಗೆ  ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಹಾಸ್ಟೇಲ್‌ ನಲ್ಲಿ ನೆಲೆಸಿರುವ ಕಾಲೇಜ್‌ ವಿದ್ಯಾರ್ಥಿಗಳಿಂದ ಸ್ಥಳೀಯ ನಿವಾಸಿಗಳಿಗೆ ನಿರಂತರವಾಗಿ ಆಗುತ್ತಿರುವ ಕಿರಿಕಿರಿ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಹಾಗೂ ಯುವತಿಯರಿಗೆ ಉಂಟಾಗುತ್ತಿರುವ ಕಿರುಕುಳಗಳ ಬಗ್ಗೆ ವಿವರವಾಗಿ ವಿವರಿಸಿದರು.

ವಿದ್ಯಾರ್ಥಿಗಳ ಗಲಾಟೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ :

Ad Widget

Ad Widget

Ad Widget

Ad Widget

“ಹಾಸ್ಟೆಲ್‌ನ ವಿದ್ಯಾರ್ಥಿಗಳಿಂದ   ನಿತ್ಯ ತೊಂದರೆ  ಉಂಟಾಗುತ್ತಿದೆ. ಕಿರುಚಾಟ, ಕೂಗಾಟ ದಾಂಧಲೆ ಅತಿರೇಕದ ವಾಹನ ಚಾಲನೆ ಇಲ್ಲಿಯ ನಿತ್ಯದ ಪರಿಪಾಠವಾಗಿದೆ. ಆದರೆ  ನಿನ್ನೆ ರಾತ್ರಿ  ಮಾತ್ರ  ಅದು ಮಿತಿ ಮೀರಿ ಹೋಗಿದೆ ಎಂದು ಆರೋಪಿಸಿದ್ದಾರೆ.

  

ದೀಪಾವಳಿ ಸಂದರ್ಭದಲ್ಲಿ ಹಾಸ್ಟೆಲ್ ನ ವಿದ್ಯಾರ್ಥಿಗಳು ಬಾಲ್ಕನಿಯಿಂದ ಅಕ್ಕಪಕ್ಕದ ಮನೆಗಳ ಮೇಲೆ ಪಟಾಕಿ ಎಸೆದು ಅನಾಹುತ ಸೃಷ್ಟಿಸಿದ್ದಾರೆ.  ಬಾಲ್ಕನಿಯಲ್ಲಿ ಅರೆಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಾರೆ.  ಇದರಿಂದ ಇಲ್ಲಿನ ಮಹಿಳೆಯರು ಮುಜುಗರ ಅನುಭವಿಸುತ್ತಾರೆ   ಎಂದು  ಸ್ಥಳೀಯರು ಆರೋಪಿಸಿದ್ದಾರೆ.

.ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ , “ಘಟನೆಗೆ ಸಂಬಂಧಪಟ್ಟಂತೆ ಆರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಸ್ಥಳೀಯರೂ ಕೂಡಾ ದೂರು ನೀಡಲು ಸಿದ್ಧರಿದ್ದಾರೆ” ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಬೀದಿ ಕಾಳಗದ ಮಾಹಿತಿಗಾಗಿ ಈ ಲಿಂಕ್‌ ತೆರೆಯಿರಿ : ಮಂಗಳೂರು : ಕಾಲೇಜೊಂದರ ಇತ್ತಂಡಗಳ ಮಧ್ಯೆ ರಾತ್ರೋರಾತ್ರಿ ನಡೆಯಿತು ಬೀದಿ ಕಾಳಗ – ಸ್ಥಳಕ್ಕೆ ತೆರಳಿದ ಪೊಲೀಸರ ಮೇಲೂ ಹಲ್ಲೆ | 19 ಮಂದಿಯ ವಿರುದ್ದ ಪ್ರಕರಣ – 9 ಜನರ ಬಂಧನ

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: