ಪುತ್ತೂರಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ನಲ್ಲಿ 2022ರ ವಾರ್ಷಿಕ ಕ್ಯಾಲೆಂಡರ್ನ್ನು ವೈಜಯಂತಿ ಪಂಚಾಂಗದ ಸಂಪಾದಕರಾದ ಶ್ರೀ ಶಂಕರ್ ಜೋಯಿಷರವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಶಾಖಾ ಪ್ರಬಂಧಕ ನಾಮದೇವ ಮಲ್ಯ, ಉಪ ಪ್ರಬಂಧಕರಾದ ಯತೀಶ್, ಸುಬ್ರಾಯ ಶರ್ಮ ಮತ್ತು ಸಂಜೀವ ಉಪಸ್ಥಿತರಿದ್ದರು.
ವೈಜಯಂತಿ ಪಂಚಾಂಗದಿಂದ ರಚಿಸಲ್ಪಟ್ಟ ಈ ಕ್ಯಾಲೆಂಡರ್ ಎಲ್ಲಾ ವಿಶೇಷ ದಿನಗಳನ್ನು ಒಳಗೊಂಡಿದ್ದು ಗ್ರಾಹಕರು ತಮಗೆ ಕ್ಯಾಲೆಂಡರ್ ಬೇಕಾದಲ್ಲಿ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
