Ad Widget

ಲಾಕ್ ಡೌನ್ ಸಂದರ್ಭ ಬಡಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲು ಶಾಲೆಗೆ ಪ್ರಿಂಟರ್ ಕೊಡುಗೆ ನೀಡಿದ ವಿದ್ಯಾಮಾತ ಫೌಂಡೇಶನ್ ಗೆ ಇಡ್ಯೊಟ್ಟು ಶಾಲೆಯ ವತಿಯಿಂದ ಗೌರವಾರ್ಪಣೆ

IMG_20211126_155123
Ad Widget

Ad Widget

Ad Widget

ಪುತ್ತೂರು: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದಷ್ಟು ಯೋಜನೆಗಳ ಮೂಲಕ ಸೇವೆ ಸಲ್ಲಿಸುತ್ತಿರುವ ‘ವಿದ್ಯಾಮಾತಾ ಫೌಂಡೇಶನ್’ ಗೆ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡ್ಯೊಟ್ಟು ಕುರಿಯ ಗ್ರಾಮ ಪುತ್ತೂರು’ ಶಾಲೆಯ ಶಿಕ್ಷಕರು ಹಾಗೂ ಶಾಲಾ ಎಸ್.ಡಿ.ಎಂ.ಸಿ ಯವರು ದಿನಾಂಕ ನ.26 ರಂದು ಇಡ್ಯೊಟ್ಟು ಶಾಲೆಯಲ್ಲಿ ಗೌರವ ಸಮರ್ಪಿಸಿದರು.

Ad Widget

Ad Widget

Ad Widget

Ad Widget

ಕೊರೋನಾ ಸಂಕಷ್ಟ ಕಾಲದಲ್ಲಿ ಅತೀ ಬಡ ವರ್ಗದ ವಿದ್ಯಾರ್ಥಿಗಳಿರುವ ಇಡ್ಯೊಟ್ಟು ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಶಿಕ್ಷಣಕ್ಕೆ ಸಹಕಾರಿಯಾಗಲು ವಿದ್ಯಾಮಾತಾ ಫೌಂಡೇಶನ್ ವತಿಯಿಂದ ಕೆಡಿಪಿ ಸದಸ್ಯರಾಗಿರುವ ಬಿ.ಎಸ್.ವಿಜಯ್ ರವರ ಮನವಿ ಮೇರೆಗೆ ಆನ್ಲೈನ್ ತರಗತಿಗಳಿಗೆ ಆಂಡ್ರೋಯ್ಡ್ ಫೋನ್ ಇಲ್ಲದೇ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿರುವುದನ್ನು ನೋಡಿ ವಿದ್ಯಾಮಾತಾ ಫೌಂಡೇಶನ್ ವತಿಯಿಂದ ಪ್ರಿಂಟರನ್ನು ಒದಗಿಸಲಾಗಿತ್ತು.

Ad Widget

Ad Widget

Ad Widget

Ad Widget

ಇದು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗಿತ್ತು. ಈ ನಿಟ್ಟಿನಲ್ಲಿ ವಿದ್ಯಾಮಾತಾ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ಭಾಗ್ಯೇಶ್ ರೈಯವರು ಇಡ್ಯೊಟ್ಟು ಶಾಲೆಗೆ ಇಂದು ಭೇಟಿ ನೀಡಿದ ವೇಳೆ ಅವರನ್ನು ಗೌರವಿಸಲಾಯಿತು.

ಭಾಗ್ಯೇಶ್ ರೈ ಮಕ್ಕಳ ಜೊತೆ ಸಂವಾದ ನಡೆಸಿ, ಅವರಿಗೆ ಸಿಹಿತಿಂಡಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಇಡ್ಯೊಟ್ಟು ಶಾಲೆಯ ಪ್ರಭಾರ ಮುಖ್ಯಗುರುಗಳಾದ ದೇವಪ್ಪ ಎಂ., ಸಹಶಿಕ್ಷಕರಾದ ಯಶೋದಾ ಪಿ., ವಿಶಾಲಾಕ್ಷಿ ಕೆ., ಗೌರವ ಶಿಕ್ಷಕರಾದ ರಂಸೀನಾ ಹಾಗೂ ವಿದ್ಯಾಮಾತಾ ಫೌಂಡೇಶನ್ ನ ಸಿಬ್ಬಂದಿಗಳಾದ ಹರ್ಷಿತಾ ಆಚಾರ್ಯ, ಚಂದ್ರಕಾಂತ್ ಹಾಗೂ ವಿಜೇತಾರವರು ಉಪಸ್ಥಿತರಿದ್ದರು.

Ad Widget

Ad Widget
Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: