Connect with us

ಬಿಗ್ ನ್ಯೂಸ್

ಪೆರ್ಡೂರು ಮೇಳಕ್ಕೆ ಜನ್ಸಾಲೆ ಬದಲು ಧಾರೇಶ್ವರ – ಪರ ವಿರೋಧ ಚರ್ಚೆ ತಾರಕಕ್ಕೆ | ́ನನ್ನನ್ನು ನಾನು ಮಾರಿಕೊಳ್ಳಲು ತಯಾರಿಲ್ಲʼ : ಜನ್ಸಾಲೆ |ಪಟ್ಲರ ನೆನಪಿಸದ ಘಟನೆ

Ad Widget

Ad Widget

Ad Widget

Ad Widget Ad Widget

ಕುಂದಾಪುರ, ನ. 23:  ಬಡಗುತಿಟ್ಟಿನ ಪ್ರಖ್ಯಾತ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ತಾನು ಹಲವು ವರ್ಷಗಳಿಂದ ಯಕ್ಷಗಾನ ಕೃಷಿ ಮಾಡಿದ ಪೆರ್ಡೂರು ಮೇಳದ ತಿರುಗಾಟಕ್ಕೆ ತಿಲಾಂಜಲಿ ಹಾಡಿದ್ದಾರೆ. ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿದ್ದ ಅವರು ಈ ಸಾಲಿನಿಂದ ಆ ಮೇಳದ ಭಾಗವಾಗಿರುವುದಿಲ್ಲ.

Ad Widget

Ad Widget

Ad Widget

Ad Widget

Ad Widget

ಈ ವರ್ಷದ ತಿರುಗಾಟಕ್ಕೆ  ತಯಾರಿ ನಡೆಸಿರುವ ಪೆರ್ಡೂರು ಮೇಳವೂ ಕೆಲವೊಂದು ಮುಮ್ಮೇಳ ಕಲಾವಿದರ ಬದಲಾವಣೆ ನಡೆಸಿತ್ತು. ಆದರೆ, ‘ತಿರುಗಾಟ ಪ್ರಾರಂಭಕ್ಕೆ ಕೆಲವೇ ದಿನ ಇದೆ ಎನ್ನುವಾಗ ಕಳೆದ 9 ವರ್ಷಗಳಿಂದ ಮೇಳದ ಪ್ರಧಾನ ಭಾಗವತರಾಗಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು ಮೇಳದಿಂದ ನಿರ್ಗಮಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ

Ad Widget

Ad Widget

ಜನ್ಸಾಲೆ ಸ್ಥಾನಕ್ಕೆ  ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯೂ ಹಲವು ವರ್ಷಗಳ ಹಿಂದೆ ಇದೇ ಮೇಳದ ನೊಗ ಹೊತ್ತಿದ್ದ ಮತ್ತೊರ್ವ ಹಿರಿಯ ಹಾಗೂ ಪ್ರಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರವರನ್ನು ತಂದಿದೆ. 9 ವರ್ಷಗಳ ತರುವಾಯ ಮತ್ತೆ  ಅವರು ಈ ವರ್ಷದ ತಿರುಗಾಟದ ಮೂಲಕ ಪೆರ್ಡೂರು ಮೇಳದ ಪ್ರಧಾನ ಭಾಗವತರ ನೆಲೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

Ad Widget

Ad Widget

9 ವರ್ಷಗಳ ಹಿಂದೆ ಧಾರೇಶ್ವರರು ಬಡಗುತಿಟ್ಟಿನ ಪ್ರಸಿದ್ದ ಮೇಳಗಳಲ್ಲಿ ಒಂದಾದ ಪೆರ್ಡೂರು ಮೇಳದ ಸಾರಥ್ಯವಹಿಸಿಕೊಂಡಿದ್ದರು. ಎರಡೂವರೆ ದಶಕಕ್ಕೂ ಅಧಿಕ ಕಾಲ ಅವರು ಈ ಮೇಳದಲ್ಲಿ ಯಕ್ಷ ಕೃಷಿ ಮಾಡಿದ್ದಾರೆ. ಶಿವಾನಿ-ಭವಾನಿ, ನಾಗವಲ್ಲಿ, ದಾಮಿನಿ-ಭಾಮಿನಿ, ಸಾವನಿ-ಪಾವನಿ,  ಹೀಗೆ ಅನೇಕ ಯಶಸ್ವಿ ಸಾಮಾಜಿಕ ಹಾಗೂ ಪೌರಾಣಿಕ ಪ್ರಸಂಗಗಳು ಇವರ ದಕ್ಷ ನಿರ್ದೇಶನ ಹಾಗೂ ಪ್ರಧಾನ ಭಾಗವತಿಕೆಯಲಿ ಮೂಡಿಬಂದು ಜನಪ್ರಿಯ ಕಲಾ ಪ್ರಸಂಗಗಳು ಎನಿಸಿಕೊಂಡಿದ್ದವು. 9 ವರ್ಷಗಳ ಹಿಂದೆ ಪೆರ್ಡೂರು ಮೇಳದಿಂದ ನಿರ್ಗಮಿಸಿದ ಇವರು  ಕೇವಲ ಅತಿಥಿ ಕಲಾವಿದರಾಗಿ ಹಾಗೂ ಧಾರೇಶ್ವರ ಯಕ್ಷಬಳಗದಲ್ಲಿ ಮಾತ್ರ ಭಾಗವಹಿಸುತ್ತಿದ್ದರು.

Ad Widget

Ad Widget
ಸುಬ್ರಹ್ಮಣ್ಯ ಧಾರೇಶ್ವರ

 64 ಹರೆಯದ ಧಾರೇಶ್ವರರು ಯಕ್ಷಗಾನದ ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ಪರಿಚಯಿಸಿದ ಸ್ವರ ಸಂಯೋಜಕ. ಪೆರ್ಡೂರು ಮೇಳವೂ ಪೌರಣಿಕ ಪ್ರಸಂಗಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಸಾಮಾಜಿಕ ಪ್ರಸಂಗಳನ್ನು ಆಡಿಸುವ ಮೇಳ. ಧಾರೇಶ್ವರರು ಈ ಎರಡು ಮಾದರಿಯ ಪ್ರಸಂಗದಲ್ಲೂ ನಿಷ್ಣಾತರು.

 ನ. 30ರಿಂದ ಮೇಳ ಈ ಸಾಲಿನ  ತಿರುಗಾಟ ಆರಂಭಿಸಲಿದ್ದು ಪ್ರೊ. ಪವನ್ ಕಿರಣ್‌ಕರೆ ಅವರ ‘ಕೃಷ್ಣಕಾದಂಬಿನಿ’ ಪ್ರಸಂಗ ಈ ವರ್ಷದ ಕಥಾನಕವಾಗಿ ಪ್ರದರ್ಶನವಾಗಲಿದೆ. ಮತ್ತೆ ಮೇಳದ ಸಾರಥ್ಯವಹಿಸುವದನ್ನುಖಚಿತಪಡಿಸರುವ  ಧಾರೇಶ್ವರರು ““ಪೆರ್ಡೂರು ಬಿಟ್ಟ ಬಳಿಕ ಯಾವುದೇ ಮೇಳದಲ್ಲಿ  ತಿರುಗಾಟ ಮಾಡಿರಲಿಲ್ಲ. ಈಗ ಕರುಣಾಕರ ಶೆಟ್ಟಿ ಅವರು ಮತ್ತೆ ಮೇಳಕ್ಕೆ ಸೇರುವಂತೆ ಆಹ್ವಾನಿಸಿದ್ದಾರೆ” ಎಂದಿದ್ದಾರೆ.

ಏನಿದು ಬೆಳವಣಿಗೆ ?

ಜನ್ಸಾಲೆ ಹಾಗೂ  ಪೆರ್ಡೂರು ಮೇಳದ ಯಜಮಾನರ ನಡುವೆ ಕಳೆದೆರಡು ವರ್ಷಗಳಿಂದ ಶೀತಲ ಸಮರ ನಡೆಯುತ್ತಿರುವ ಬಗ್ಗೆ ಅಲ್ಲಲ್ಲಿ ವದಂತಿಗಳು ಹುಟ್ಟುತಿದ್ದವು. ಕೆಲವು ತಿಂಗಳ ಹಿಂದೆ ಇಂತಹ ಸುದ್ದಿ ಜಾಲತಾಣದಲ್ಲಿ ಪ್ರಸಾರವಾದ ಬಳಿಕ ಜನ್ಸಾಲೆಯವರೇ ಸ್ಪಷ್ಟನೆ ನೀಡಿ ಮೇಳದಲ್ಲಿ ಮುಂದುವರಿಯುವ ಬಗ್ಗೆ ತಿಳಿಸಿದ್ದರು.

ಆ ಬಳಿಕ ಮೇಳದ ನೂತನ ಪ್ರಸಂಗ ‘ಕೃಷ್ಣಕಾದಂಬಿನಿʼಯ  ಕರಪತ್ರಗಳಲ್ಲಿ ಜನ್ಸಾಲೆಯವರ ಭಾವಚಿತ್ರ ಹಾಗೂ ಹೆಸರು ನಮೂದಿಸಲಾಗಿತ್ತು. ಅದರೇ ಇದೀಗ ನಡೆದಿರುವ ಅಚ್ಚರಿಯ ಬೆಳವಣಿಗೆಯಲ್ಲಿ ಈ ಪ್ರಸಂಗದ ಕರಪತ್ರದಲ್ಲಿ ಧಾರೇಶ್ವರ ಅವರ ಭಾವಚಿತ್ರ ಹಾಗೂ ಹೆಸರನ್ನು ನಮೂದಿಸಲಾಗಿದೆ.

ರಾಘವೇಂದ್ರ ಆಚಾರ್ಯ ಅವರು ಮುನಿಸಿಕೊಂಡು ಮೇಳ ಬಿಟ್ಟಿರುವುದೆ ಈ ಬೆಳವಣಿಗೆಗೆ ಕಾರಣ ಎನ್ನಲಾಗುತ್ತಿದೆ. ಮೇಳವೂ ವಿಧಿಸಿರುವ ನೂತನ ಕಟ್ಟುಪಾಡುಗಳನ್ನು ದಿಕ್ಕರಿಸಿ ಜನ್ಸಾಲೆಯವರು ಈ ನಿರ್ಧಾರಕ್ಕೆ ಬಂದಿದ್ದಾರೆ . ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು  “ಹಗಲು ಹೊತ್ತಿನಲ್ಲಿ ಕೂಡ ಗಾನವೈಭವ, ತಾಳಮದ್ದಳೆಯಂತಹ ಕಾರ್ಯಕ್ರಮಗಳಿಗೆ ತೆರಳಲು ನಿರ್ಬಂಧ ವಿಧಿಸಲಾಗಿದೆ. ನನ್ನನ್ನು ನಾನು ಮಾರಿಕೊಳ್ಳಲು ತಯಾರಿಲ್ಲ. ಆದ್ದರಿಂದ ಪೆರ್ಡೂರು ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದೇನೆ ಎಂದಿದ್ದಾರೆ.

ರಾಘವೇಂದ್ರ ಜನ್ಸಾಲೆ

ಇನ್ನೂ ಈ ಬೆಳವಣಿಗೆಗಳ ಬಗ್ಗೆ ಪೆರ್ಡೂರು ಮೇಳದ ಯಜಮಾನರಾದ ವೈ. ಕರುಣಾಕರ ಶೆಟ್ಟಿಯವರು ಪ್ರತಿಕ್ರಿಯಿಸಿದ್ದು “ ಮೇಳದ ವ್ಯವಸ್ಥೆಗಳಿಗೆ ಜನ್ಸಾಲೆ ಅವರು ಒಪ್ಪದೇ ಇರುವುದರಿಂದ ಬದಲಾವಣೆ ಅನಿವಾರ್ಯವಾಯಿತು. ಧಾರೇಶ್ವರ ಅವರು ಮೇಳದಲ್ಲಿ ಮುಂದುವರಿಯಲಿದ್ದಾರೆ. ಪ್ರದರ್ಶನ ಪೂರ್ವ ತಯಾರಿಗಳು ಅವರ ನಿರ್ದೇಶನದಲ್ಲಿ ಆರಂಭವಾಗಿವೆ  ಎಂದಿದ್ದಾರೆ

 ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವಮೇಳದ ಹಿರಿಯ ಕಲಾವಿದರಾದ ವಿದ್ಯಾಧರ ರಾವ್ ಜಲವಳ್ಳಿ ಹಾಗೂ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪರವರು  “ ತಿರುಗಾಟದ ಅವಧಿಯಲ್ಲಿ ಬೇರೆ ಖಾಸಗಿ ಪ್ರದರ್ಶನಗಳಿಗೆ ಹೋಗುವುದಿಲ್ಲ ಎನ್ನುವ ತೀರ್ಮಾನಕ್ಕೆ ಕಲಾವಿದರು ಹಾಗೂ ಯಜಮಾನರ ನಡುವೆ ನಡೆದ ಸಭೆಯಲ್ಲಿ ನಾವೆಲ್ಲ ಬಂದಿದ್ದೇವು ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ

ಜನ್ಸಾಲೆಯವರು ಯಕ್ಷಗಾನದ ಸ್ಟಾರ್‌ ಭಾಗವತರಾಗಿರುವುದರಿಂದ ಪೆರ್ಡೂರು ಮೇಳದ ಈ ಬೆಳವಣಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ, ಒಂದಷ್ಟು ಮಂದಿ ಜನ್ಸಾಲೆ ಪರ ಬ್ಯಾಟಿಂಗ್‌ ಮಾಡಿದರೆ ಉಳಿದವರು ಮೇಳದ ಯಜಮಾನರ ಪರ ವಾದ ಮಂಡಿಸುತ್ತಿದ್ದಾರೆ.

ಅಸಂಖ್ಯಾತ ಅಭಿಮಾನಿಗಳನ್ನು ಅದರಲ್ಲೂ ವಿಶೇಷವಾಗಿ ಯುವ ಯಕ್ಷಗಾನ ಅಭಿಮಾನಿಗಳ ನೆಚ್ಚಿನ ಭಾಗವತರಾಗಿರುವ ಜನ್ಸಾಲೆ ಮೇಳದ ಯಶಸ್ಸಿಗೆ ಕಾರಣರಾಗಿದ್ದರು. ಇವರ ನಿರ್ಗಮನದಿಂದ ಮೇಳದ ಅಕರ್ಷಣೆಯಲ್ಲಿ ಕುಂಠಿತವಾಗಲಿದೆ ಎನ್ನುವ ವಾದ ಕೆಲವರದು. ಕಟೀಲು ಮೇಳದಿಂದ ತೆಂಕುತಿಟ್ಟಿನ ಪ್ರಸಿದ್ದ ಬಾಗವತರಾದ ಸತೀಶ ಶೆಟ್ಟಿ ಪಟ್ಲ ರವರ ನಿರ್ಗಮನವೂ ಇದೇ ರೀತಿಯಾಗಿತ್ತು ನೆನಪಿಸಿಕೊಂಡಿರುವ ಕೆಲವರು ಮೇಳದ ಕಲಾವಿದರೂ ಮೇಳಕ್ಕಿಂತ ಹೆಚ್ಚಿನ ಗೌರವವನ್ನು ಪಡೆಯುವುದು ಮೇಳ ನಡೆಸುವವರಿಗೆ ರುಚಿಸುವುದಿಲ್ಲ ಎಂದು ಆರೋಪಿಸಿದ್ದಾರೆ.

ಸತೀಶ್‌ ಶೆಟ್ಟಿ ಪಟ್ಲ

ಪ್ರಸ್ತುತ ಸನ್ನಿವೇಶದಲ್ಲಿ ಮೇಳ ನಡೆಸುವುದು ಸುಲಭದ ಕೆಲಸವಲ್ಲ. ಅದನ್ನು ಕಲೆಯ ಮೇಲಿನ ಪ್ರೀತಿಯಿಂದ ನಡೆಸಲಾಗುತ್ತಿದೆಯೆ ಹೊರತು ಅರ್ಥಿಕ ಲಾಭದ ಉದ್ದೇಶದಿಂದ ಅಲ್ಲ . ಹಾಗಾಗಿ ಕಲಾವಿದರೂ ಮೇಳದ ಯಜಮಾನರು ರೂಪಿಸಿವ ನಿಯಮಗಳಿಗೆ ಬದ್ದರಾಗಿರಬೇಕು . ಯಾವೂದೋ ಒಬ್ಬ ಕಲಾವಿದನಿಗಾಗಿ ಮೇಳದ ನಿಯಮಗಳನ್ನು ಬದಲಿಸುವುದು ಸರಿಯಲ್ಲ ಎನ್ನುವ ವಾದವನ್ನು ಕೆಲವರು ಮಾಡುತ್ತಿದ್ದಾರೆ .

ಜನ್ಸಾಲೆ ಮುಂದೇನು ?

9 ವರ್ಷದಿಂದ ಪೆರ್ಡೂರು ಮೇಳದಲ್ಲಿ ಮಾಡಿರುವ ಕೆಲಸದಲ್ಲಿ ತೃಪ್ತಿ ಇದೆ. ಬೇರೆ ಮೇಳಗಳಿಂದ ಕರೆ ಬಂದಿದ್ದರೂ, ಈಗಾಗಲೇ ಕಲಾವಿದರ ಆಯ್ಕೆ ನಡೆದಿರುವುದರಿಂದ, ನನ್ನಿಂದಾಗಿ ಬೇರೆಯವರಿಗೆ ತೊಂದರೆ ಆಗಬಾರದು ಎನ್ನುವುದಕ್ಕಾಗಿ ಈ ವರ್ಷ ತಿರುಗಾಟ ಮಾಡುವುದಿಲ್ಲ. ಆದರೆ ಯಾವುದೇ ಪ್ರದರ್ಶನಕ್ಕೆ ಪ್ರೀತಿಯಿಂದ ಕರೆ ಬಂದರೂ ಅತಿಥಿಯಾಗಿ ಭಾಗವತಿಕೆಗೆ ಹೋಗುತ್ತೇನೆ’ ಎಂದು ಜನ್ಸಾಲೆ ರಾಘವೇಂದ್ರ ಆಚಾರ್ಯ ಪ್ರತಿಕ್ರಿಯಿಸಿದರು.

Click to comment

Leave a Reply

ಸಾಮಾಜಿಕ ಮಾಧ್ಯಮ

Hasana sex tape : ಚುನಾವಣೆ ಹೊಸ್ತಿಲಲ್ಲಿ  ಹಾಸನ ಅಭ್ಯರ್ಥಿಯ ರಾಸಲೀಲೆಯ ಪೆನ್‌ ಡ್ರೈವ್‌  ಸೌಂಡ್‌ ! ಅಸಲಿಯ / ನಕಲಿಯ ತೀವ್ರ ಚರ್ಚೆ

Ad Widget

Ad Widget

Ad Widget

Ad Widget Ad Widget

ಹಾಸನ ಲೋಕಸಭಾ ಕ್ಷೇತ್ರದ  ರಾಜಕೀಯ ಪಕ್ಷವೊಂದರ ಅಭ್ಯರ್ಥಿಯೊರು  ಭಾಗಿಯಾಗಿದ್ದಾರೆ  ಎನ್ನಲಾದ ನೂರಾರು  ರಾಸಲೀಲೆಯ ಫೋಟೋ ಮತ್ತು ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ವೊಂದು ಇದೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಚುನಾವಣೆಯಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಕೆಲ ಅಶ್ಲೀಲ ವಿಡಿಯೋ ಹಾಗೂ ಫೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವು ಆ ಪೆನ್‌ ಡ್ರೈವ್‌ ಒಳಗಿನಿಂದ ಸೋರಿಕೆ ಮಾಡಲಾದ ಕ್ಲಿಪಿಂಗ್‌ ಗಳು ಎಂದು ಹೇಳಲಾಗುತ್ತಿದೆ.

Ad Widget

Ad Widget

Ad Widget

Ad Widget

Ad Widget

ಚುನಾವಣೆ ಹೊಸ್ತಿಲಲ್ಲಿ , 3 ದಿನಗಳ ಹಿಂದೆಯಷ್ಟೆ ಈ ಪೆನ್‌ ಡ್ರೈವ್‌ ಚರ್ಚೆ ಮುನ್ನಲೆಗೆ ಬಂದಿದೆ. ಈ ವಿಡಿಯೋ ತುಣುಕುಗಳಲ್ಲಿ ಕೆಲವು ಸಂಘಟನೆಗಳಿಗೆ ಸೇರಿದ ಮಹಿಳೆಯರು, ಅಭ್ಯರ್ಥಿಯ ಪಕ್ಷದ ಮುಖಂಡರ ಪತ್ನಿಯರು ಇದ್ದಾರೆ. ಮನೆ ಕೆಲಸದ ಮಹಿಳೆಯರೂ ಇದ್ದಾರೆ ಎಂಬ ಚರ್ಚೆ ಬಿರುಸಿನಿಂದ ನಡೆದಿದೆ. ತನ್ನಲ್ಲಿ ಕೆಲಸ ಕೇಳಿ ಬಂದ ಯುವತಿಯರು ಹಾಗೂ ಮಹಿಳೆಯರನ್ನು ಆ ವ್ಯಕ್ತಿ ವಿಕೃತವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Ad Widget

Ad Widget

ಆದರೇ ರಾಜಕಾರಣಿಯ ಬೆಂಬಲಿಗರು ಈ ಆರೋಪಗಳನ್ನು ನಿರಾಕರಿಸಿದ್ದು.  ಅತ್ಯಾಧುನಿಕ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಈ ವಿಡಿಯೋಗಳನ್ನು  ಎಂದು  ಅಭ್ಯರ್ಥಿಯ ಬೆಂಬಲಿಗರು   ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.

Ad Widget

Ad Widget

ಚುನಾವಣೆಯ ಪ್ರಚಾರದ ಭರಾಟೆ ಆರಂಭವಾಗಿ ಇಷ್ಟು ದಿನಗಳ ಬಳಿಕ ಇದೀಗ ಕೊನೆಯ ಹಂತದಲ್ಲಿ ಈ ರಾಸಲೀಲೆಯ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಬಗ್ಗೆ ಚರ್ಚೆ ನಡೆಯುತ್ತಿರುವುದು ಕುತೂಹಲ ಮೂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನಕ್ಕೆ  ಶರಣಾಗಿದ್ದಾರೆ.

Ad Widget

Ad Widget

ಈ ಪೆನ್‌ಡ್ರೈನಲ್ಲಿ ಸುಮಾರು ಸಾವಿರಾರು ವಿಡಿಯೋಗಳಿವೆ ಎನ್ನಲಾಗುತ್ತಿದೆ. ಇದರಲ್ಲಿರುವ ಎನ್ನಲಾದ ಅಭ್ಯರ್ಥಿ ತನ್ನ ಬಳಿ ಸಹಾಯ ಕೇಳಿಕೊಂಡು ಬರುವ ಮಹಿಳೆಯರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದ. ಆ ಲೈಂಗಿಕ ಚಟುವಟಿಕೆಯನ್ನು ತಾನೇವಿಡಿಯೋ ಮಾಡಿಟ್ಟುಕೊಳ್ಳುತ್ತಿದ್ದ. ಈಗಾಗಲೇ ಕ್ಷೇತ್ರದ ಹಲವರು ಹಲವರು ಈ ಈ ವಿಡಿಯೋಗಳನ್ನು ನೋಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ತುಣುಕುಗಳು ಹರಿದಾಡುತ್ತಿವೆ.

 ಈ ಹಿಂದೆ ಹಾಸನದ ವಕೀಲ ದೇವರಾಜೇಗೌಡ ಎಂಬುವವರು ಅಭ್ಯರ್ಥಿಯ ಹಲವು ಅಶ್ಲೀಲ ವಿಡಿ ಯೋಗಳು ತಮ್ಮ ಬಳಿ ಇವೆ ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಈ ವಿಡಿಯೋಗಳನ್ನು ತಾವು ಬಹಿರಂಗ ಗೊಳಿಸಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

Continue Reading

ಬಿಗ್ ನ್ಯೂಸ್

NOTAForSoujanyaCase : ಸೌಜನ್ಯ ಪ್ರಕರಣ : ಟ್ವಿಟರ್ ಟ್ರೆಂಡಿಂಗಲ್ಲಿ 3ನೇ ಸ್ಥಾನ ಪಡೆದ ನೋಟಾ ಅಭಿಯಾನ

Ad Widget

Ad Widget

Ad Widget

Ad Widget Ad Widget

ಮಂಗಳೂರು: 2012ರ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಇದೀಗ ಬಾರಿ ಸದ್ದು ಮಾಡುತ್ತಿದೆ.

Ad Widget

Ad Widget

Ad Widget

Ad Widget

Ad Widget

ಸೌಜನ್ಯ ಪರ ಹೋರಾಟಗಾರರು ಎ.26ರಂದು ಜರಗುವ ಲೋಕಸಭಾ ಚುನಾವಣೆಯಲ್ಲಿ ನೋಟಾ ಮತದಾನದ ಅಭಿಯಾನ ಕೈಗೊಂಡಿದ್ದಾರೆ.

Ad Widget

Ad Widget

ಟ್ವಿಟರ್ (ಎಕ್ಸ್) ನಲ್ಲಿ #NOTAForSoujanyaCase ಎಂಬ ಟ್ರೆಂಡಿಂಗ್ 3ನೇ ಸ್ಥಾನ ಪಡೆದಿದೆ.

Ad Widget

Ad Widget

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ನೋಟಾ ಅಭಿಯಾನದ ಪರ ಪ್ರಚಾರ ಕಾರ್ಯವನ್ನು ಹೋರಾಟಗಾರರು ನಡೆಸುತ್ತಿದ್ದಾರೆ.

Ad Widget

Ad Widget

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನೋಟಾ ಪರಿಣಾಮ ಯಾವಾ ರೀತಿ ಪಲಿತಾಂಶದ ಮೇಲೆ ಪರಿಣಾಮ ಬೀರಬಹುದೆಂಬ ಅಂಕಿಅಂಶ ಇನ್ನೂ ಕೂಡ ರಾಜಕೀಯ ಪಂಡಿತರಿಗೆ ಅಂದಾಜಿಸಲು ಸಾಧ್ಯವಾಗಿಲ್ಲ.

Continue Reading

ಬಿಗ್ ನ್ಯೂಸ್

ಪದ್ಮರಾಜ್ ಆರ್ ಪೂಜಾರಿ ಬಿಲ್ಲವನಲ್ಲ – ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ – ಜಿಲ್ಲಾ ಕಾಂಗ್ರೆಸ್ ನಿಂದ ಪೊಲೀಸ್ ಕಮೀಷನರ್ ಗೆ ದೂರು

Ad Widget

Ad Widget

Ad Widget

Ad Widget Ad Widget

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಯವರ ಜಾತಿಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸುತ್ತಿದ್ದು ಇದರ ವಿರುದ್ದ , ಜಿಲ್ಲಾ ಕಾಂಗ್ರೆಸ್ ಮಂಗಳೂರು ಪೊಲೀಸ್ ಕಮೀಷನರ್ ಗೆ ದೂರು ನೀಡಿದೆ.

Ad Widget

Ad Widget

Ad Widget

Ad Widget

Ad Widget

ಗಣೇಶ್ ಶೆಟ್ಟಿ ಎಂಬವರು ಯುವನಾಯಕ ಬ್ರಿಜೇಶ್ ಚೌಟ ಫೇಸ್ ಬುಕ್ ಪೇಜಿನಲ್ಲಿ ಹಾಗು ಡಾಕ್ಟರ್ಸ್ ಲೀವ್ ಸ್ಟೇಸ್ಟಸ್ ಗ್ರೂಫಿನಲ್ಲಿ ಸಂತೋಷ್ ಕುಮಾರ್ ಎಂಬಾತ ಅಪಪ್ರಚಾರ ನಡೆಸಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ.

Ad Widget

Ad Widget

ಪದ್ಮರಾಜ್ ಆರ್ ಪೂಜಾರಿಯವರು ಬಿಲ್ಲವ ಸಮುದಾಯಕ್ಕೆ ಸೇರಿದವರಲ್ಲ. ಅವರು ಹಿಂದೂ ಯುವಕನ ಕೊಲೆ ಕೇಸಿನಲ್ಲಿ ಕೊಲೆ ಆರೋಪಿ ಪಿ ಎಫ್ ಐ ಕಾರ್ಯಕರ್ತನ ಪರ ವಕಾಲತ್ತು ವಹಿಸಿದ್ದಾರೆ ಇತ್ಯಾದಿ ಸುಳ್ಳು ಸುದ್ದಿಗಳನ್ನು ಒಳಗೊಂಡ ಪೋಸ್ಟ್ ವೊಂದನ್ನು ವಿರೋದಿಗಳು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಹಂಚುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

Ad Widget

Ad Widget

ಈ ಹಿಂದೆ ಜನಾರ್ಧನ ಪೂಜಾರಿಯನ್ನು ಅನುಸರಿಸಿದ ಅಪಪ್ರಚಾರದ ತಂತ್ರವನ್ನೆ ಅವರ ಶಿಷ್ಯ ಪದ್ಮರಾಜ್ ವಿರುದ್ದವು ಅನುಸರಿಸುತ್ತಿದ್ದು, ಮತದಾರರು ಇದನ್ನು ಸೂಕ್ಷ್ಮವಾಗಿ ಗಮನಿಸಿ ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡಬೇಕೆಂದು ಅದು ವಿನಂತಿಸಿದೆ.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading