ವರದಿಗಳು
ನೆರೆಹೊರೆಯವರೊಂದಿಗೆ ಸಭ್ಯರಂತೆ ವರ್ತಿಸಿ ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದ ಮಂಗಳೂರಿನ ಆಯೇಷಾ ಬಾನು ದಂಪತಿಗೆ 10 ವರ್ಷ ಕಠಿಣ ಶಿಕ್ಷೆ – ಆಕೆ ಮಾಡುತ್ತಿದ್ದುದೇನು ಗೊತ್ತೆ?
ಛತ್ತೀಸಗಢ: ನಿಷೇಧಿತ ಸಿಮಿ, ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಜತೆ ಸಂಪರ್ಕ ಹೊಂದಿ ಹಲವಾರು ಉಗ್ರರಿಗೆ ನೆರವು ನೀಡುತ್ತಿದ್ದ ಮಂಗಳೂರಿನ ದಂಪತಿಗೆ ಇದೀಗ 10 ವರ್ಷಗಳ ಶಿಕ್ಷೆಯಾಗಿದೆ.
ಜುಬೇರ್ ಹುಸೇನ್ (42), ಆತನ ಪತ್ನಿ ಆಯೇಷಾ ಬಾನು (39) ಶಿಕ್ಷೆಗೊಳಗಾದವರು. ಇವರ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ರಾಯಪುರದ ಕೋರ್ಟ್ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ಇವರು ಮಾಡುತ್ತಿದ್ದುದೇನು?
ಮಂಗಳೂರಿನ ಈ ದಂಪತಿಯ ಹಿನ್ನೆಲೆಯೂ ಭಯಾನಕವಾಗಿದೆ. ಮಂಗಳೂರಿನಿಂದಲೇ ತಮ್ಮ ಕಾರ್ಯವನ್ನು ಶುರು ಮಾಡಿದ್ದರು ಈ ದಂಪತಿ. ಅದರಲ್ಲಿಯೂ ಪತ್ನಿ ಆಯೇಷಾಳದ್ದು ಪ್ರಮುಖ ಪಾತ್ರ. ನೆರೆಹೊರೆಯವರ ಜತೆ ಸಭ್ಯರಂತೆ ವರ್ತಿಸುತ್ತಿದ್ದ ಈಕೆ ಯಾರಿಗೂ ಅನುಮಾನ ಬಾರದಂತೆ ತನ್ನ ಕೆಲಸ ಮಾಡುತ್ತಿದ್ದಳು.
ಅಲ್ಲಿಂದ ಈ ದಂಪತಿ ರಾಯಪುರಕ್ಕೆ ಹೋಗಿ ಅಲ್ಲಿ ತಮ್ಮ ಕುಕೃತ್ಯ ಮುಂದುವರೆಸಿದ್ದರು. ಆದರೆ ಸುಲಭದಲ್ಲಿ ಇವರು ಸಿಕ್ಕಿಬೀಳುತ್ತಿರಲಿಲ್ಲ.
ಕರ್ನಾಟಕದಲ್ಲಿಯೂ ಉಗ್ರ ಸಂಘಟನೆಯ ಲಿಂಕ್ ಇರುವುದನ್ನು ಅರಿತಿದ್ದ ತನಿಖಾಧಿಕಾರಿಗಳು ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಕಣ್ಣು ಇಟ್ಟಿದ್ದರು.
2013ರಲ್ಲಿ ಬೀದಿ ಬದಿಯಲ್ಲಿ ಹೋಟೆಲ್ ಮಾಡುತ್ತಿದ್ದ ಧೀರಜ್ ಸಾವೋನ ಎಂಬ ಉಗ್ರನನ್ನು ಬಂಧಿಸಲಾಗಿತ್ತು. ಈತ ಇಂಡಿಯನ್ ಮುಜಾಹಿದೀನ್, ಸಿಮಿ ಸಂಘಟನೆ ಜತೆ ಸಂಬಂಧ ಹೊಂದಿದವರಿಗೆ ಪಾಕಿಸ್ತಾನದ ಖಾಲಿದ್ ಎಂಬುವವನಿಂದ ಹಣ ಪಡೆದು ಉಗ್ರರ ಖಾತೆಗೆ ರವಾನಿಸುತ್ತಿದ್ದ ವಿಷಯ ಬಹಿರಂಗಗೊಂಡಿತು.
ಈತನ ಹಿನ್ನೆಲೆ ಕೆದಕಿದಾಗ ಸಿಕ್ಕಿದ್ದೇ ಈ ಆಯೇಷಾ ಬಾನೋ. ಈಕೆಯ ಬ್ಯಾಂಕ್ ಖಾತೆಗೂ ಸಹ ಈತನಿಂದ ಹಣದ ವರ್ಗಾವಣೆ ಆಗುತ್ತಿತ್ತು.
ಆಕೆಯ ಮೂಲ ಕೆದಕಿದಾಗ ಮಂಗಳೂರು ಮೂಲಕ ಈಕೆ ತನ್ನ ಪತಿಯ ಜತೆಗೂಡಿ ಉಗ್ರ ಕೃತ್ಯದಲ್ಲಿ ತೊಡಗಿರುವುದು ತಿಳಿಯಿತು. ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರರ ಜತೆ ಕೂಡ ಈಕೆ ನಂಟು ಹೊಂದಿರುವುದು ಬಹಿರಂಗವಾಯಿತು.
ಇವಳು ಬಿಹಾರದ ಸುಮಾರು 50 ಬ್ಯಾಂಕ್ ಖಾತೆಯ ನೆಟ್ ಬ್ಯಾಂಕಿಂಗ್ ಅನ್ನು ಹೊಂದಿದ್ದಳು. ಇದರ ಮೂಲಕ ಉಗ್ರರಿಗೆ ಹಣ ನೀಡುತ್ತಿದ್ದಳು.
ಆದಾಯ ತೆರಿಗೆ ಇಲಾಖೆಯ ಕಣ್ಣನ್ನು ತಪ್ಪಿಸಲು 49 ಸಾವಿರಕ್ಕಿಂತ ಕಡಿಮೆ ಹಣವನ್ನು ವರ್ಗವಣೆ ಮಾಡುತ್ತಿದ್ದಳು. ಮೊದಮೊದಲು ಅಕ್ಕಪಕ್ಕದ ಮನೆಯವರಿಗೆ ವಿಚಾರಿಸಿದಾಗ ಸಭ್ಯಳಂತೆ ಇದ್ದ ಈಕೆಯ ಬಗ್ಗೆ ಯಾರಿಗೂ ಸುಳಿವೇ ಇರದದ್ದು ತಿಳಿಯಿತು. ಕೊನೆಗೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ಪೊಲೀಸರ ಕೈಗೆ ಕೊನೆಗೂ 2013ರಲ್ಲಿ ಸಿಕ್ಕಿಬಿದ್ದಳು. ಈ ದಂಪತಿ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿ ಕೇಸ್ ದಾಖಲಾಗಿತ್ತು. ಇದೀಗ 10 ವರ್ಷಗಳ ಕಠಿಣ ಶಿಕ್ಷೆಯಾಗಿದೆ.
ಅಂತರ ರಾಜ್ಯ
Google Ad-ಗೂಗಲ್ ಆಡ್ ಗೆ 3 ತಿಂಗಳಿನಲ್ಲಿ 39 ಕೋಟಿ ರೂ. ಖರ್ಚು ಮಾಡಿದ ಬಿಜೆಪಿ
ಹೊಸದಿಲ್ಲಿ : ಶೋಧ ಜಾಲತಾಣ ಗೂಗಲ್ ನಲ್ಲಿ ಈ ವರ್ಷದ ಜನವರಿ 1ರಿಂದೀಚೆಗೆ ಜೆಪಿಯು ತನ್ನ 81,874 ರಾಜಕೀಯ ಜಾಹೀರಾತುಗಳಿಗಾಗಿ 39 ಕೋಟಿ ರೂ. ವೆಚ್ಚ ಮಾಡಿದೆ ಎಂದು ಗೂಗಲ್ ನ ಜಾಹೀರಾತು ಪಾರದರ್ಶಕತಾ ಕೇಂದ್ರದ ದತ್ತಾಂಶಗಳು ಪ್ರದರ್ಶಿಸಿವೆ.
ಭಾರತದಲ್ಲಿ ರಾಜಕೀಯ ಜಾಹೀರಾತುಗಳಿಗಾಗಿ ಈ ವರ್ಷ ಒಟ್ಟು ನಿಧಿಯ ಶೇ.32.8ರಷ್ಟನ್ನು ಮಿಸಲಿಟ್ಟಿದ್ದು, ಈ ವರ್ಷ ರಾಜಕೀಯ ಜಾಹೀರಾತುಗಳಿಗಾಗಿ ಕೇಂದ್ರ ಸರಕಾರದ ನೋಡಲ್ ಜಾಹೀರಾತು ಏಜೆನ್ಸಿಯಾದ ಕೇಂದ್ರೀಯ ಸಂವಹನ ಇಲಾಖೆಯು 32 ಕೋಟಿ ರೂ. ವ್ಯಯಿಸಿದೆ.
ಭಾರತೀಯ ರಾಜಕೀಯ ಕ್ರಿಯಾ ಸಮಿತಿ ಸಂಸ್ಥೆಯ ರಾಜಕೀಯ ಕಾರ್ಯತಂತ್ರ ನಿರ್ವಹಣಾ ಕಂಪೆನಿಯಾದ ಇಂಡಿಯನ್ ಪಿಎಸಿ ಕನ್ಸಲಿಂಗ್ ಪ್ರೈ. ಲಿಮಿಟೆಡ್ 7.25 ಕೋಟಿ ರೂ. ವೆಚ್ಚ ಮಾಡಿರುವುದಾಗಿ ದತ್ತಾಂಶಗಳು ಪ್ರದರ್ಶಿಸಿವೆ. ಈ ಕಂಪೆನಿಯು ಪಶ್ಚಿಮಬಂಗಾಳದಲ್ಲಿ ಟಿಎಂಸಿಗಾಗಿ ಹಾಗೂ ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವುದಾಗಿ ಇಕನಾಮಿಕ್ ಟೈಸ್ ವರದಿ ತಿಳಿಸಿದೆ.
ಜನವರಿ 1ರಿಂದೀಚೆಗೆ ಬಿಜು ಜನತಾದಳವು 24 ಕೋಟಿ ರೂಪಾಯಿನ್ನು 144 ಜಾಹೀರಾತುಗಳಿಗಾಗಿ ವ್ಯಯಿಸಿದೆ. ಗೂಗಲ್ನಲ್ಲಿ ಜಾಹೀರಾತುಗಳಿಗಾಗಿ ಬಿಜೆಪಿಯು ಬಹುತೇಕ ವೆಚ್ಚವನ್ನು ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ನಡೆಸಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ತನ್ನ ಬಹುತೇಕ ಹಣವನ್ನು ಎಪ್ರಿಲ್ ನಲ್ಲಿ ಜಾಹೀರಾತುಗಳಿಗಾಗಿ ವ್ಯಯಿಸಿದೆ.
ಬಿಜೆಪಿಯು ಬಹುತೇಕ ಹಣವನ್ನು ಒಡಿಶಾ , ಉತ್ತರಪ್ರದೇಶ, ಹಾಗೂ ಬಿಹಾರದಲ್ಲಿ ಖರ್ಚು ಮಾಡಿದರೆ, ಮಹಾರಾಷ್ಟ್ರ, ಬಿಹಾರ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚಿನ ವೆಚ್ಚ ಮಾಡಿದೆ ಎಂದು ಇಕನಾಮಿಕ್ ಟೈಸ್ ವರದಿ ತಿಳಿಸಿದೆ.
ಅಂತರ ರಾಜ್ಯ
Maruti Suzuki-ಭಾರತೀಯರ ಬಹು ಬೇಡಿಕೆಯ ಮಾಡೆಲ್ ಗಳಾದ ಮಾರುತಿ ಸುಜುಕಿ ಸ್ವಿಫ್ಟ್, ಗ್ರ್ಯಾಂಡ್ ವಿಟಾರಾ ಕಾರುಗಳ ಬೆಲೆ ಹೆಚ್ಚಳ
ಮುಂಬೈ: ಭಾರತದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಜನಪ್ರಿಯ ಮಾದರಿಗಳಾದ ಸ್ವಿಫ್ಟ್ ಮತ್ತು ಗ್ರ್ಯಾಂಡ್ ವಿಟಾರಾದ ಆಯ್ದ ಮಾಡಲ್ ಗಳ ಬೆಲೆ ಏರಿಕೆ ಮಾಡಿದ್ದು, ನೂತನ ದರಗಳು ತಕ್ಷಣವೇ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
2024 ರ ಜನವರಿಯಲ್ಲಿ ಕಂಪನಿಯು ತನ್ನ ಮಾದರಿ ಶ್ರೇಣಿಯಾದ್ಯಂತ ಬೆಲೆಗಳನ್ನು ಹೆಚ್ಚಿಸಿತ್ತು. ಇದೀಗ ಕೆಲವೇ ತಿಂಗಳುಗಳ ಅಂತರದಲ್ಲಿ ಮತ್ತೆ ದರ ಏರಿಕೆ ಮಾಡಿದೆ. ಹೆಚ್ಚುತ್ತಿರುವ ಹಣದುಬ್ಬರದ ಒತ್ತಡಗಳು ಮತ್ತು ಹೆಚ್ಚಿದ ನಿರ್ಮಾಣ ವೆಚ್ಚಗಳನ್ನು ಉಲ್ಲೇಖಿಸಿ ಸಂಸ್ಥೆ ಈ ದರ ಏರಿಕೆ ಮಾಡಿದೆ ಎಂದು ಹೇಳಲಾಗಿದೆ.
ಸಂಸ್ಥೆಯ ಮೂಲಗಳ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯ ಜನಪ್ರಿಯ ಮಾದರಿಗಳಲ್ಲಿ ಪ್ರಮುಖವಾದ ಸ್ವಿಫ್ಟ್ ಕಾರುಗಳ ಬೆಲೆಗಳನ್ನು 25,000 ರೂ.ವರೆಗೆ ಹೆಚ್ಚಿಸಲಾಗಿದ್ದು, ಗ್ರಾಂಡ್ ವಿಟಾರಾ ಸಿಗ್ಮಾ ಮಾಡೆಲ್ ನ ಬೆಲೆಯಲ್ಲಿ 19,000 ರೂ ಏರಿಕೆಯಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆ, ‘ನಾವು ಸ್ವಲ್ಪ ಸಮಯದವರೆಗೆ ಹೆಚ್ಚಿದ ಇನ್ಪುಟ್ ಮತ್ತು ನಿರ್ಮಾಣ ವೆಚ್ಚವನ್ನು ಸರಿದೂಗಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಗಳು ನಮ್ಮ ಗ್ರಾಹಕರಿಗೆ ಕೆಲವು ಬೆಲೆ ಏರಿಕೆ ಹೇರಲು ಒತ್ತಾಯಿಸಿದೆ. ಬೆಲೆ ಹೆಚ್ಚಳವು ಕೆಲವು ಮಾದರಿಗಳಲ್ಲಿ ಗಣನೀಯವಾಗಿರುತ್ತದೆ ಎಂದು ಹೇಳಿದೆ.
ಸ್ವಿಫ್ಟ್, ಕಾರುಗಳ ಬೆಲೆ ಏರಿಕೆಯಿಂದಾಗಿ ಅದರ ಮಾರಾಟದ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಒಂದಾಗಿದೆ. ಕಾಂಪ್ಯಾಕ್ಟ್ SUV ವಿಭಾಗದಲ್ಲಿ ತುಲನಾತ್ಮಕವಾಗಿ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿದ್ದ ಗ್ರಾಂಡ್ ವಿಟಾರಾ, ಹೆಚ್ಚಿದ ಬೆಲೆಗಳೊಂದಿಗೆ ಖರೀದಿದಾರರನ್ನು ಆಕರ್ಷಿಸುವಲ್ಲಿ ಸವಾಲುಗಳನ್ನು ಎದುರಿಸಬಹುದು.
ಮುಖ್ಯವಾಗಿ ಕಚ್ಚಾ ವಸ್ತುಗಳ ಬೆಲೆ ಏರಿಕೆ, ಜಾಗತಿಕ ಪೂರೈಕೆ ಸರಪಳಿ ಅಡೆತಡೆಗಳು ಸೇರಿದಂತೆ ಒಟ್ಟಾರೆ ಆರ್ಥಿಕ ಮಂದಗತಿ ಸೇರಿದಂತೆ ವಿವಿಧ ಅಂಶಗಳ ಪರಿಣಾಮವಾಗಿ ಬೆಲೆ ಏರಿಕೆಯಾಗಬಹುದು. ಭಾರತೀಯ ಆಟೋಮೊಬೈಲ್ ಉದ್ಯಮವು ಕೆಲವು ಸಮಯದಿಂದ ಈ ಸಮಸ್ಯೆಗಳನ್ನು ಎದುರಿಸುತ್ತಿದೆ. ಮಾರುತಿ ಸುಜುಕಿಯ ಇತ್ತೀಚಿನ ಬೆಲೆ ಏರಿಕೆ ಕ್ರಮವು ಸವಾಲಿನ ಮಾರುಕಟ್ಟೆ ಪರಿಸ್ಥಿತಿಗಳ ಪ್ರತಿಬಿಂಬವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಂಸ್ಥೆಯು ಈ ಮಾದರಿಯ ಕಾರುಗಳ ದರ ಏರಿಕೆಗೆ ಏಕೆ ಮುಂದಾಗಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಹ್ಯಾಚ್ಬ್ಯಾಕ್ ವಿಭಾಗ (ಸ್ವಿಫ್ಟ್) ಮತ್ತು ಕಾಂಪ್ಯಾಕ್ಟ್ ಎಸ್ಯುವಿ ವಿಭಾಗ (ಗ್ರ್ಯಾಂಡ್ ವಿಟಾರಾ) ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿದೆ, ಉದಾಹರಣೆಗೆ ಹೆಚ್ಚಿದ ಸ್ಪರ್ಧೆ ಅಥವಾ ಗ್ರಾಹಕರ ಆದ್ಯತೆಗಳನ್ನು ಬದಲಾಯಿಸುವುದು, ಈ ನಿರ್ದಿಷ್ಟ ಮಾದರಿಗಳಿಗೆ ಬೆಲೆಗಳನ್ನು ಹೆಚ್ಚಿಸುವ ನಿರ್ಧಾರದ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಲಾಗಿದೆ.
ಅಂತರ ರಾಜ್ಯ
Rahul Gandhi-ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೇ ಪ.ಜಾ., ಪ.ಪಂ. ಹಾಗೂ ಹಿಂದುಳಿದ ವರ್ಗದ ಮಹಿಳೆಯರ ಖಾತೆಗೆ ವಾರ್ಷಿಕ 1 ಲಕ್ಷ ರೂ. ವರ್ಗಾವಣೆ : ರಾಹುಲ್ ಗಾಂಧಿ ಘೋಷಣೆ
ಸಿಯೋನಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತನ್ನ ಪಕ್ಷ ಜಯ ಗಳಿಸುವ ಆತ್ಮವಿಶ್ವಾಸವನ್ನು ಸೋಮವಾರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನೂತನ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರ ಖಾತೆಗಳಿಗೆ ವಾರ್ಷಿಕ 1 ಲಕ್ಷ ರೂ. ವರ್ಗಾಯಿಸಲಿದೆ ಎಂದು ಹೇಳಿದ್ದಾರೆ.
ಮಂದ್ಲಾ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಸಿಯೋನಿ ಜಿಲ್ಲೆಯ ಧನೋರಾದಲ್ಲಿ Rallyಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಿರುದ್ಯೋಗಿ ಯುವ ಜನರಿಗೆ ಖಾತರಿಪಡಿಸಿದ ಶಿಷ್ಯ ವೃತ್ತಿ ಒದಗಿಸುವ ಭರವಸೆ ನೀಡಿದರು.
ಮೂರರಿಂದ ನಾಲ್ಕು ಕ್ರಾಂತಿಕಾರಿ ಹೆಜ್ಜೆಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಬಡ ಕುಟುಂಬಗಳ ಮಹಿಳೆಯರ ಬ್ಯಾಂಕ್ಖಾತೆಗಳಿಗೆ 1 ಲಕ್ಷ ರೂ. ವರ್ಗಾಯಿಸುತ್ತೇವೆ. ಈ ಮೂಲಕ ನಾವು ಪ್ರತಿ ತಿಂಗಳು ಅವರ ಖಾತೆಗಳಿಗೆ ಸಾವಿರಾರು ರೂಪಾಯಿ ವರ್ಗಾಯಿಸಲಿದ್ದೇವೆ” ಎಂದು ಅವರು ಹೇಳಿದ್ದಾರೆ.
“ಕೇಂದ್ರದಲ್ಲಿ ಸರಕಾರ ರೂಪಿಸಿದ ಬಳಿಕ ನಾವು ಉದ್ಯೋಗದಲ್ಲಿ ಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಲಿದ್ದೇವೆ. ಸಾರ್ವಜನಿಕ ವಲಯದಲ್ಲಿ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ರೂಪಿಸಲಿದ್ದೇವೆ” ಎಂದು ಅವರು ತಿಳಿಸಿದರು.
ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ದೇಶದ ನಿರುದ್ಯೋಗಿ ಯುವ ಜನರಿಗೆ ಒಂದು ವರ್ಷ ಶಿಷ್ಯ ವೃತ್ತಿ ಹಾಗೂ ಈ ಅವಧಿಯಲ್ಲಿ 1 ಲಕ್ಷ ರೂ. ಭತ್ತೆಯ ಖಾತರಿ ನೀಡುವ ನೂತನ ಕಾನೂನನ್ನು ನಾವು ಜಾರಿಗೆ ತರಲಿದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದರು.
ಬುಡಕಟ್ಟು ಜನರನ್ನು ಆದಿವಾಸಿ ಎಂದು ಕರೆಯುವ ಬದಲು ಬಿಜೆಪಿ ಉದ್ದೇಶಪೂರ್ವಕವಾಗಿ ‘ವನವಾಸಿ’ ಎಂದು ಕರೆಯುತ್ತಿದೆ. ಅವರನ್ನು ಭೂಮಿಯಿಂದ ಪ್ರತ್ಯೇಕಿಸಲು ಹಾಗೂ ನೀರು, ಅರಣ್ಯ ಭೂಮಿಯ ಮೇಲಿನ ಅವರ ಹಕ್ಕನ್ನು ಕಿತ್ತುಕೊಳ್ಳುಲು ಬಿಜೆಪಿ ಅವರನ್ನು ವನವಾಸಿ ಎಂದು ಕರೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.
-
ಪುತ್ತೂರು22 hours ago
ನರಿಮೊಗರು : ಬೈಕ್ – ಜೀಪು ನಡುವೆ ಭೀಕರ ಅಪಘಾತ : ಬೈಕ್ ಸವಾರ ಮೃತ್ಯು – ಇಬ್ಬರು ಮಕ್ಕಳು ಗಂಭೀರ : ಬೈಕನ್ನು ಎಳೆದೊಯ್ದ ಜೀಪು – ಜೀಪು ತೆಗೆಯಲು ಸಾರ್ವಜನಿಕರ ತೀವ್ರ ವಿರೋಧ
-
ಪುತ್ತೂರು2 days ago
Puttur Jathre | ಪುತ್ತೂರ ಒಡೆಯನ ದರ್ಶನ ಬಲಿಗೆ ಕ್ಷಣಗಣನೆ – ‘ಪುತ್ತೂರು ಬೆಡಿ’ ಭರದ ತಯಾರಿ – ಶೃಂಗಾರಗೊಂಡ ಬ್ರಹ್ಮರಥ
-
ದಕ್ಷಿಣ ಕನ್ನಡ2 days ago
ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಆಗಮಿಸಿದ ಬಲ್ನಾಡು ಉಳ್ಳಾಳ್ತಿ ದೈವಗಳ ಕಿರುವಾಳು – ಶ್ರೀ ದೇವರ ತೆಪ್ಪೋತ್ಸವ