Connect with us

ಅಪರಾಧ

ಪುತ್ತೂರು : ಸರಕಾರ ಪಿಯು ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಮತ್ತೆ ಹೊಡೆದಾಟ | ಐವರಿಗೆ ಗಾಯ – ಇಬ್ಬರು ಗಂಭೀರ | 90ರ ದಶಕವನ್ನು ನೆನಪಿಸುತ್ತಿದೆ ಕಾಲೇಜಿನ ವಿದ್ಯಾರ್ಥಿಗಳ ನಡವಳಿಕೆ

Ad Widget

Ad Widget

ಪುತ್ತೂರು : ನ 24 : ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ಇಂದು ( ನ 24)  ಮತ್ತೆ ಹೊಡೆದಾಟ ನಡೆದ ಬಗ್ಗೆ ವರದಿಯಾಗಿದೆ. ನಿನ್ನೆ ಮಧ್ಯಾಹ್ನ  ವಿದ್ಯಾರ್ಥಿನಿಯರ ವಿಚಾರವಾಗಿ ಭಿನ್ನ ಕೋಮಿಗೆ ಸೇರಿದ ವಿದ್ಯಾರ್ಥಿಗಳ ಎರಡು ತಂಡಗಳು ಕಾಲೇಜ್‌ ಅವರಣದಲ್ಲಿ ಹೊಡೆದಾಡಿಕೊಂಡಿದ್ದವು.

Ad Widget

Ad Widget

Ad Widget

Ad Widget

ಅದರ ಮುಂದುವರಿದ ಭಾಗವಾಗಿ ಇಂದು ಮಧ್ಯಾಹ್ನ ಮತ್ತೆ ಭಿನ್ನ ಕೋಮಿಗೆ ಸೇರಿದ ವಿದ್ಯಾರ್ಥಿಗಳ ಎರಡು ತಂಡಗಳು ಬಡಿದಾಡಿಕೊಂಡಿವೆ. ಇಂದಿನ ಹೊಡೆದಾಟದಲ್ಲಿ ಒಟ್ಟು ಐವರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.  ಎಲ್ಲರೂ ಪಿಯುಸಿ ವಿದ್ಯಾರ್ಥಿಗಳಾಗಿದ್ದು ಅಪ್ರಾಪ್ತರಾಗಿದ್ದಾರೆ.

Ad Widget

Ad Widget

Ad Widget

 ಇಂದಿನ ಹೊಡೆದಾಟ ಹೇಗೆ ಆರಂಭವಾಯಿತು ? ಎನ್ನುವ ಬಗ್ಗೆ ನಿಖರ ಮಾಹಿತಿ ಇನ್ನು ಲಭ್ಯವಾಗಿಲ್ಲ . ಸದ್ಯ ಗಾಯಗೊಂಡ ಎರಡು ತಂಡದವರು ತಮ್ಮ ತಮ್ಮ ಪರವಾದ ವಾದಗಳನ್ನು ಮುಂದಿಡುತ್ತಿದ್ದಾರೆ. ಪೊಲೀಸರು ಈಗಷ್ಟೆ  ಪ್ರಕರಣ  ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದ್ದು ಗಾಯಾಳು ವಿದ್ಯಾರ್ಥಿಗಳ ಹೇಳಿಕೆಯನ್ನು ದಾಖಲಿಸುವ ಕಾರ್ಯದಲ್ಲಿ ನಿರತರಾಗಿರುವುದಾಗಿ ತಿಳಿದು ಬಂದಿದೆ.

Ad Widget

ಕೊಂಬೆಟ್ಟು ಶಾಲಾ ವಿದ್ಯಾರ್ಥಿಗಳಾದ ಮುಕ್ವೆ ನಿವಾಸಿ ಉಮ್ಮರ್ ಎಂಬವರ ಪುತ್ರ ಸೈಫುದ್ದೀನ್ ಹಾಗೂ ಬನ್ನೂರು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಇಮ್ರಾನ್ ಹಾಗೂ ಇನ್ನೂರ್ವ ವಿದ್ಯಾರ್ಥಿ ಗಾಯಗೊಂಡು  ಪುತ್ತೂರಿನ  ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Ad Widget

ಇಂದು ವಿದ್ಯಾರ್ಥಿ ಸಂಘಟನೆಯಾದ  ಎಬಿವಿಪಿ ವಿದ್ಯಾರ್ಥಿಗಳೂ ನಿನ್ನೆಯ ಹೊಡೆದಾಟ ಖಂಡಿಸಿ  ಪುತ್ತೂರು ಠಾಣೆಯ ಬಳಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಬಳಿಕ 30 ಜನರ ಗುಂಪೊಂದು ಈ ಮೂವರು  ವಿದ್ಯಾರ್ಥಿಗಳ ಮೇಲೆ  ಹಲ್ಲೆ ನಡೆಸಿದ್ದಾರೆ ಎಂದು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ  ವಿದ್ಯಾರ್ಥಿಗಳ ಪರವಾಗಿರುವರು ಆರೋಪಿಸಿದ್ದಾರೆ.

ಇನ್ನೂ, ಇನ್ನೊಂದು ತಂಡದ  ಇದೇ ಕಾಲೇಜಿನ ವಿದ್ಯಾರ್ಥಿಗಳಾದ  ಪ್ರಜ್ವಲ್ ಮತ್ತು ತೇಜಸ್ ಎಂಬವರು ಗಾಯಾಳುವಾಗಿ  ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

“  ಕಾಲೇಜಿಗೆ ಹೊರಗಿನವರು ಬಂದು ಹಲ್ಲೆ ನಡೆಸಿದ್ದೂ ಈ ಬಗ್ಗೆ  ಕೂಲಂಕುಶವಾಗಿ ತನಿಖೆ ನಡೆಸಬೇಕೆಂದು  ಆಗ್ರಹಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ವಿದ್ಯಾರ್ಥಿ ಸಂಘಟನೆ ಮೂಲಕ ಮನವಿ ನೀಡಿ ಹಿಂದಿರುಗುತ್ತಿದ್ದ ವೇಳೆ ಹಲ್ಲೆ ನಡೆಸಿದ್ದಾರೆ.   ಕಾಲೇಜಿಗೆ ಸಂಬಂಧಪಡದ ವ್ಯಕ್ತಿಗಳು ಬಿಳಿ ಬಣ್ಣದ ಕಾರಿನಲ್ಲಿ ಬಂದು ಅವರ ಬಳಗದ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಕಾಲೇಜು ಬಳಿಯ ಕಾಲು ದಾರಿಯಲ್ಲಿ ಅವಿತು ನಮ್ಮ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ  ದಾಖಲಾಗಿರುವ ಗಾಯಾಳುಗಳು  ಆರೋಪಿಸಿದ್ದಾರೆ.

ನಿನ್ನೆ ನಡೆದಾಟದ ಹೊಡೆದಾಟದ ಬಗ್ಗೆ ಎರಡು ತಂಡದ ವಿದ್ಯಾರ್ಥಿಗಳ ಹೇಳಿಕೆಗಳನ್ನು ವಿಡಿಯೋ ರೂಪದಲ್ಲಿ ಪೊಲೀಸರು  ದಾಖಲಿಸಿಕೊಂಡು  NC ( ಅಸಂಜ್ಣೆಯ ಪ್ರಕರಣ) ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಪುತ್ತೂರಿನ ಅತ್ಯಂತ ಪುರಾತನ ಕಾಲೇಜ್‌ ಹಾಗೂ ಹಲವಾರು ಶ್ರೇಷ್ಟ ವ್ಯಕ್ತಿಗಳನ್ನು ನಾಡಿಗೆ ನೀಡಿದ ಇತಿಹಾಸವಿರುವ ಕಾಲೇಜ್‌ ಹೊಡೆದಾಟದ ತಾಣವಾಗುತ್ತಿರುವುದು ಪುತ್ತೂರಿನ ಪ್ರಜ್ಣಾವಂತರ ನೋವಿಗೆ ಕಾರಣಾವಾಗಿದೆ. 90ರ ದಶಕದಲ್ಲೂ ಈ ಕಾಲೇಜ್‌ ಇದೇ ರೀತಿಯ ಹೊಡೆದಾಟಕ್ಕೆ ಕಾರಣವಾಗಿತ್ತು . ಆಗ ಅಲ್ಲಿಗೆ ಪ್ರಾಂಶುಪಾಲರಾಗಿ ಆಗಮಿಸಿದ ನಿವೃತ್ತ ಸೈನಿಕ ಕುಂಜಪ್ಪನವರು ಇಡೀ ಕಾಲೇಜಿನ ಚಿತ್ರಣವನ್ನೆ ಬದಲಾಯಿಸಿದರು. ಇಲ್ಲಿನ ಎರಡು ಪ್ರತಿಷ್ಟಿತ ಖಾಸಗಿ ಕಾಲೇಜುಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಇಲ್ಲಿಯ ವಿದ್ಯಾರ್ಥಿಗಳ ಭವಿಷ್ಯವನ್ನು ಅವರು ರೂಪಿಸಿದರು . ಇದೀಗ ಮತ್ತೊಮ್ಮೆ ಇಲ್ಲಿನ ಶಾಲಾ ಅಡಳಿತ ಮಂಡಳಿ ಈ ರೀತಿಯ ಕಠಿನ ನಿರ್ಧಾರ ತಳೆಯುವ ಅನಿವಾರ್ಯತೆ ಬಂದೂದಗಿದೆ.

ಇದನ್ನೂ ಓದಿ : ಪುತ್ತೂರು: ವಿದ್ಯಾರ್ಥಿನಿಯ ವಿಚಾರವಾಗಿ ಬಡಿದಾಡಿಕೊಂಡ ಕಾಲೇಜ್ ವಿದ್ಯಾರ್ಥಿಗಳು ..! ಹಲ್ಲೆ ಖಂಡಿಸಿ ಕ್ಯಾಂಪಸ್ ಪ್ರಂಟ್ ನಿಂದ ಪ್ರತಿಭಟನೆ – ಏಕಾಏಕಿ ನೆರೆದ ಪ್ರತಿಭಟನಕಾರರನ್ನು ಚದುರಿಸಿದ ಪೊಲೀಸರು

Continue Reading
Click to comment

Leave a Reply

ಅಪರಾಧ

ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

Ad Widget

Ad Widget

ಪುತ್ತೂರು: ಕೆದಿಲದಲ್ಲಿ ನವೆಂಬರ್ 22 ರಂದು ನಡೆದ ಸರಣಿ ಕಳ್ಳತನದ ಆರೋಪಿಯನ್ನು ಸ್ಥಳೀಯರು ಡಿ 4 ರಂದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು , ಇಂದು(ಮಂಗಳವಾರ) ಬಂಧಿಸಿರುವ ಬಗ್ಗೆ ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.ಮೂಲತಃ ವಿಟ್ಲ ಸಮೀಪದ ಕಡಂಬು ನಿವಾಸಿ ಹಾಲಿ ಚಿಕ್ಕಮಂಗಳೂರು ಉಪ್ಪಳ್ಳಿ ನಿವಾಸಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬ್ಬಕರ್ ಬಂಧಿತ. ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಡಿ.19ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Ad Widget

Ad Widget

Ad Widget

Ad Widget

ಕೆದಿಲದ ರಮ್ಲ ಕುಂಞಿ ಮನೆಯಲ್ಲಿ ಕಳ್ಳತನಗೈದಿದ್ದ ಆರೋಪಿ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವುಗೈದಿದ್ದ. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ ಸಂಖ್ಯೆ 112 ಮತ್ತು 113ರಂತೆ ಪ್ರಕರಣ ದಾಖಲಾಗಿತ್ತು.

Ad Widget

Ad Widget

Ad Widget

ಸಿಕ್ಕಿಬಿದ್ದದ್ದು ಹೀಗೆ

Ad Widget

ಈ ಪೈಕಿ ಆರೋಪಿಯು ಕಳವು ಗೈದ ದ್ವಿಚಕ್ರವಾಹನ ಗುಡ್ಡ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ. ಅದನ್ನು ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸೋಮವಾರ ಅಬೂಬ್ಬಕರ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಖರೀದಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಉಂಟಾಗಿದೆ. ಅವರು ಆತನ ಬೆನ್ನ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ.

Ad Widget

Ad Widget

ಈತ ಅಲ್ಲಿಂದ ತಾನು ಬೈಕ್ ಅಡಗಿಸಿಟ್ಟಿದ್ದ ಗುಡ್ಡಕ್ಕೆ ತೆರಳಿದ್ದು ಈ ವೇಳೆ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಿಸಿದ್ದಾರೆ. ಈವೇಳೆ ಆತ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಆತನನ್ನು ಠಾಣೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಒಂದೇ ದಿನ ಎರಡು ಕಳ್ಳತನ

ರಮ್ಲ ಕುಂಞಿ ಬೆಂಗಳೂರು ಕಂಬಳಕ್ಕೆ ವ್ಯಾಪಾರಕ್ಕೆಂದು ನ.22ರಂದು ರಾತ್ರಿ 8 ಗಂಟೆಗೆ ಮನೆಗೆ ಬೀಗ ಹಾಕಿ ತೆರಳಿದ್ದು, ಕೆದಿಲ ಮಿತ್ತಪಡ್ಪು ನಿವಾಸಿ ಹಮೀದ್ ನ.23 ರಂದು ಬೆಳಗ್ಗೆ ಹೋಗಿ ನೋಡುವ ಸಂದರ್ಭದಲ್ಲಿ ಬೀಗ ಮುರಿದಿದ್ದು ಪತ್ತೆಯಾಗಿತ್ತು, ಕಪಾಟಿನಲ್ಲಿದ್ದ ಸುಮಾರು ೨ಲಕ್ಷ ಕಳವಾಗಿತ್ತು. ಇದರ ಜತೆಗೆ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಅವರಿಗೆ ಸೇರಿದ ದ್ವಿಚಕ್ರವಾಹನ ಮನೆಯ ಅಂಗಳದಿಂದ ಕಳವಾಗಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು.

ಇತ್ತೆ ಬರ್ಪೆ ಹೆಸರು ಬಂದದ್ದು ಹೇಗೆ :

ಟ್ಲದಲ್ಲಿ ಅಟೋ ರಿಕ್ಷಾ ಹೊಂದಿದ್ದ ಅಬೂಬಕ್ಕರ್ ರಿಕ್ಷಾ ಹಿಂಭಾಗದಲ್ಲಿ ಇತ್ತೆ ಬರ್ಪೆ ಎಂದು ಬರೆದಿಕೊಂಡಿದ್ದರು. ಇದರಿಂದ ಆ ಹೆಸರಿನಲ್ಲೇ ಜನರಿಗೆ ಚಿರಪರಿಚಿತರಾಗಿದ್ದರು. ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಕಾರ್ಕಳ, ಉಡುಪಿ, ಸುರತ್ಕಲ್, ಚಿಕ್ಕಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು 80 ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿತ್ತು.

Continue Reading

ಅಪರಾಧ

Ballari Murder case ಸರಿಯಾಗಿ ಆರೈಕೆ ಮಾಡ್ತಿಲ್ಲ ಎಂದು ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ: ಪೊಲೀಸರಿಗೆ ಆರೋಪಿ ಶರಣು

ಹೆಂಡತಿ ಸರಿಯಾಗಿ ಆರೈಕೆ ಮಾಡುತ್ತಿಲ್ಲವೆಂದು ಪತಿ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

Ad Widget

Ad Widget

ಬಳ್ಳಾರಿ, (ಡಿಸೆಂಬರ್ 04): ಸರಿಯಾಗಿ ಆರೈಕೆ ಮಾಡುತ್ತಿಲ್ಲ ಎಂದು ಕೋಪಗೊಂಡ ಪತಿರಾಯನೊಬ್ಬ(Husband) ಹೆಂಡತಿಯನ್ನು(Wife) ಕೊಚ್ಚಿ ಕೊಂದಿರುವ ಘಟನೆ ಬಳ್ಳಾರಿ(Bellary) ಜಿಲ್ಲೆಯ ಸಿರುಗುಪ್ಪದ ಬಲಕುಂದಿ ಗ್ರಾಮದಲ್ಲಿ ನಡೆದಿದೆ. ಮೈಬುನಾ ಬಿ. (35) ಕೊಲೆಯಾದ ಮಹಿಳೆ.

Ad Widget

Ad Widget

Ad Widget

Ad Widget

ಡಯಾಲಿಸಿಸ್ ರೋಗಿಯಾಗಿರುವ ಆರೋಪಿ ರಸೂಲ್ ಸಾಬ್, ಪತ್ನಿ ಸರಿಯಾಗಿ ಕೇರ್ ಮಾಡುತ್ತಿಲ್ಲ ಎಂದು ಮಲಗಿದ್ದ ಮೈಬುನಾಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ರಸೂಲ್ ಸಾಬ್ ತಾನೇ ಪೊಲೀಸರ ಮುಂದೆ ಶರಣಾಗಿದ್ದಾನೆ.

Ad Widget

Ad Widget

Ad Widget

ಈ ಬಗ್ಗೆ ಮಾತನಾಡಿರುವ ರಸೂಲ್ ಸಾಬ್ ನನಗೆ ಡಯಾಲಿಸಿಸ್ ಕಾಯಲೆ ಇದೆ. ಆದ್ರೆ, ಪತ್ನಿ ಸರಿಯಾಗಿ ಆರೈಕೆ ಮಾಡುತ್ತಿಲ್ಲ. ಹೀಗಾಗಿ ನಾನು ಬೇಗ ಸಾಯುತ್ತೇನೆ. ನನಗಿಂತ ಮೊದಲು ಪತ್ನಿ ಸಾಯಬೇಕು ಎಂದು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ತೆಕ್ಕಲಕೋಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Ad Widget
Continue Reading

ಅಪರಾಧ

Shabarimala ಶಬರಿಮಲೆ ಅಯ್ಯಪ್ಪ ಭಕ್ತರ ವೇಷ ಧರಿಸಿ ಕಾರಿನಲ್ಲಿ ಕೋಟ್ಯಂತರ ಮೌಲ್ಯದ ಅಂಬರ್ ಗ್ರೀಸ್ ಸಾಗಾಟ; ಮೂವರ ಬಂಧನ

Ad Widget

Ad Widget

ಗುರುವಾಯೂರು: ಶಬರಿಮಲೆ ಅಯ್ಯಪ್ಪ ಭಕ್ತರ  ಸೋಗಿನಲ್ಲಿ  ಕಾರಿನಲ್ಲಿ ಪ್ರಯಾಣಿಸುತ್ತ  ಕೋಟ್ಯಂತರ ಮೌಲ್ಯದ ತಿಮಿಂಗಿಲದ ವಿಸರ್ಜನೆ ಅಂಬರ್ ಗ್ರೀಸ್ ಅಕ್ರಮ ಸಾಗಾಟಕ್ಕೆ ಯತ್ನಿಸಿದ ಮೂವರನ್ನು ಬಂಧಿಸಲಾಗಿದೆ.  ಕೊಯಿಲಾಂಡಿ ಮರಕ್ಕಾಟ್ಟುಪೊಯಿಲ್‌ ನ ಬಾಜಿನ್ (31), ಕೊಯಿಲಾಂಡಿ ವಟ್ಟಕಂಡಿಯ ರಾಹುಲ್ (26), ಕೋಝಿಕ್ಕ್ಕೋಡ್ ಅರಿಕ್ಕುಳಂ‌ ರಾಮಪಾಟ್ಕಂಡಿಯ ಅರುಣ್ ದಾಸ್ (30)  (30)  ಬಂಧಿತರು. ಈ ಮೂವರು ಆಯ್ಯಪ್ಪ ವರತಧಾರಿಗಳಂತೆ ವೇಷ ಧರಿಸಿದ್ದರು.

Ad Widget

Ad Widget

Ad Widget

Ad Widget

ಆರೋಪಿಗಳನ್ನು  ತ್ರಿಶೂರ್ ನಗರ ಪೊಲೀಸ್ ಕಮಿಷನರ್ ನೇತೃತ್ವದ ಶ್ಯಾಡೋ ಪೊಲೀಸ್ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ದಳ ಮತ್ತು ಗುರುವಾಯೂರ್ ದೇಗುಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.1972ರ ವನ್ಯಜೀವಿ ಸಂರಕ್ಷಣೆ ಕಾಯಿದೆಯಡಿ ದೇಶದಲ್ಲಿ ತಿಮಿಂಗಿಲದ ವಿಸರ್ಜನೆ ಹೊಂದಿರುವುದು ಸಾಗಿಸುವುದು   ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಂಬರ್ ಗ್ರೀಸ್  ಖರೀದಿಸಲು ಬಂದ ಮಧ್ಯವರ್ತಿಗಳ ಸೋಗಿನಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Ad Widget

Ad Widget

Ad Widget

ಇವರು ಅಯ್ಯಪ್ಪ ವೃತಧಾರಿಗಳು ಬಳಸುವ ಕಪ್ಪು ವಸ್ತ್ರ ಧರಿಸಿದ್ದು, ಮೈಯೆಲ್ಲ ಆಯ್ಯಪ್ಪ ಭಕ್ತರಂತೆ ವಿಭೂತಿ ಬಳಿದುಕೊಂಡಿದ್ದರು. ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವರು ಈ ರೀತಿ ನಾಟಕವಾಡಿದರು ಎಂದು ಆರೋಪಿಗಳು ಪೊಲೀಸ್‌ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ.

Ad Widget
Ad Widget

Ad Widget

ಆರೋಪಿಗಳು ಪ್ರಯಾಣಿಸುತ್ತಿದ್ದ ಕಾರಿನಿಂದ ಐದು ಕೆಜಿ ಅಂಬರ್ ಗ್ರೀಸ್ ಮತ್ತು ಐಷಾರಾಮಿ ಕಾರನ್ನು ವಶಪಡಿಸಲಾಗಿದೆ. ಗುರುವಾಯೂರು ದೇಗುಲ‌ ಠಾಣೆಯ  ಪೊಲೀಸರು ದಾಖಲಿಸಿಕೊಂಡ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಗುರುವಾಯೂರು ಎಸಿಪಿ ಕೆ.ಜಿ.ಸುರೇಶ್, ದೇಗುಲ ಠಾಣೆಯ ಎಚ್ ಒಸಿ. ಪ್ರೇಮಾನಂದ ಕೃಷ್ಣನ್, ಎಸ್ಐ ವಿ.ಪಿ.ಅಶ್ರಫ್, ಸೀನಿಯರ್ ಸಿಪಿಒ ಎನ್.ರಜಿತ್, ಶ್ಯಾಡೋ  ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎನ್.ಜಿ. ಸುವ್ರತಕುಮಾರ್, ಸಿಪಿಒಗಳಾದ ಪಿ.ಎಂ. ರಫಿ, ಎಂ.ಎಸ್. ಲಿಗೇಶ್, ಎಸ್. ಶರತ್, ಸಿಂಪ್ಸನ್ ಮತ್ತು ಪ್ರದೀಪ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

Continue Reading

Trending

error: Content is protected !!