ಧರ್ಮಸ್ಥಳ: ಡಿಬಾಸ್ ಎಂದೇ ಖ್ಯಾತವಾದ ನಟ ದರ್ಶನ್ ತೂಗುದೀಪ್ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜೊತೆ ಮಾತುಕತೆ ನಡೆಸಿ ಆಶೀರ್ವಾದ ಪಡೆದಿದ್ದಾರೆ.
ದರ್ಶನ್ ಆಗಮಿಸಿದ ಸುದ್ದಿ ಕೇಳಿ ದೇವಸ್ಥಾನದ ಆವರಣದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು ಎನ್ನಲಾಗಿದೆ.
ದರ್ಶನ್ ದೇವಸ್ಥಾನ ಹೊರಗೆ ಹೋಗುವ ಹಾಗೂ ಹೊರಬರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದರ್ಶನ್ ಧರ್ಮಸ್ಥಳದಲ್ಲಿ ವಿಡಿಯೋ ವೈರಲ್:
ಮಂಗಳೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ದರ್ಶನ್ ಧರ್ಮಸ್ಥಳ ಭೇಟಿ ಮಾಡಿದ್ದಾರೆ.