ಸವಣಾಲು: ಶ್ರೀ ಆತ್ಮಾನಂದ ಅವಧೂತರು ದೇಹತ್ಯಾಗ

Ad Widget

Ad Widget

Ad Widget

ಬೆಳ್ತಂಗಡಿ, ನ.20: ಸವಣಾಲು ಗ್ರಾಮದ ಮಲ್ಲರೊಡಿಯ ಶ್ರೀ ಆತ್ಮಾನಂದ ಅವಧೂತರು (ಕೇಶವ ಭಟ್) ಅಲ್ಪಕಾಲದ ಅಸೌಖ್ಯದಿಂದ ತಮ್ಮ ಪೂರ್ವಾಶ್ರಮದ ಮನೆಯಲ್ಲಿ ನವಂಬರ್ 17 ರಂದು ದೇಹಾಂತವಾದರು.

Ad Widget

ಸಂಸಾರಿಯಾಗಿದ್ದು ವಿರಕ್ತ ಜೀವನದಲ್ಲಿ ಆಸಕ್ತರಾಗಿದ್ದ ಅವರು ಆ ಬಳಿಕ ಗೋಕರ್ಣದಲ್ಲಿ ಸನ್ಯಾಸ ದೀಕ್ಷೆ ಪಡೆದು ಗಾಣಗಾಪುರದ ದತ್ತಾತ್ರೇಯ ಪೀಠ, ವರದಪುರ ಶ್ರೀಧರ ಆಶ್ರಮ, ಬದರಿನಾಥ, ಕೇದಾರನಾಥ, ಕಾಶಿ ಮತ್ತು ಹಿಮಾಲಯದಲ್ಲಿ ಸಾಧನೆ ನಡೆಸಿದ್ದರು.

Ad Widget

Ad Widget

Ad Widget

ಸನ್ಯಾಸ ಸಾಧನೆ ಸಂದರ್ಭ ವಯೋ ಸಹಜ ಅನಾರೋಗ್ಯಗಳು ಕಾಡಿದ ಹಿನ್ನೆಲೆಯಲ್ಲಿ ಪೂರ್ವಾಶ್ರಮದ ಮಕ್ಕಳ ಒತ್ತಾಯದಿಂದ ಮರಳಿ ತಮ್ಮ ಊರಿಗೆ ಬಂದಿದ್ದರು.

Ad Widget

ಸವಣಾಲು ಕಾಳಿ ಬೆಟ್ಟ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಸಂಸ್ಥಾಪಕರಾಗಿ, ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದರು.

Ad Widget

Ad Widget

ಇವರು ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಗೋಕರ್ಣದ ವೇದ ವಿದ್ವಾಂಸರು ಆಗಮಿಸಿ ಸಕಲ ಧಾರ್ಮಿಕ ವಿಧಿಗಳೊಂದಿಗೆ ಅವಧೂತರ ಸಮಾಧಿ ಸ್ಥಾಪಿಸಲಾಯಿತು. ಮಲ್ಲರೋಡಿ ಮನೆಯವರು, ಆಪ್ತವರ್ಗ ಕಾರ್ಯದಲ್ಲಿ ಭಾವಿಗವಹಿಸಿದ್ದರು.

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: