ಸಂಘ ಪರಿವಾರದ ಷಡ್ಯಂತ್ರಕ್ಕೆ ಪ್ರಚೋದನೆ ಒಳಗಾಗದೆ ಪ್ರಬುದ್ಧತೆ ಮೆರೆದ ಜಿಲ್ಲೆಯ ಮುಸಲ್ಮಾನರು :ಎಚ್ ಮಹಮ್ಮದ್ ಅಲಿ

IMG-20211120-WA0048
Ad Widget

Ad Widget

Ad Widget

Ad Widget

ಪುತ್ತೂರು : ಪುತ್ತೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಸಭೆ ನ.20ರಂದು ನಡೆಯಿತು.

Ad Widget

Ad Widget

Ad Widget

ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಮಾತನಾಡಿ ,ದೇಶದ ಸ್ವತಂತ್ರ ಹೋರಾಟದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಬಹುದೊಡ್ಡ ಕೊಡುಗೆ ಇದೆ,ಇದೀಗ ಕೋಮು ಶಕ್ತಿಗಳು ಲವ್ ಜಿಹಾದ್, ಗೋ ಹತ್ಯೆ ಎಜೆಂಡ ಇಟ್ಟು ಕೊಂಡು ಮುಸಲ್ಮಾನರನ್ನು ಗುರಿಯಾಗಿಸಿದೆ,
ಮತಾಂತರ ಎಂಬ ವಿಷಯ ಇಟ್ಟುಕೊಂಡು ಕ್ರೈಸ್ತರನ್ನು ಗುರಿಯಾಗಿಸಿದೆ,
ಇದೀಗ ಚುನಾವಣೆ ಹತ್ತಿರ ಬರುತ್ತಿದ್ದು,ಸಂಘ ಪರಿವಾರದ ಸಂಘಟಣೆಯವರು ಅಲ್ಲಲ್ಲಿ ಸಮಾವೇಶ ನಡೆಸಿ ಭಾಷಣದಲ್ಲಿ ಮುಸ್ಲಿಂ ರನ್ನು ಹೀನಾಯವಾಗಿ ಬೈದು, ಮುಸ್ಲಿಂ ಸಮುದಾಯದವರನ್ನು ಕೆರಳಿಸುವ ಕೆಲಸ ಮಾಡುತ್ತಿದೆ, ಮುಸಲ್ಮಾನರು ಕೆರಳಿದರೆ ಇದರಿಂದ ಬಿಜೆಪಿಗೆ ಲಾಭವಾಗಲಿ ಎಂಬ ದುರುದ್ದೇಶದಿಂದ ಇಂತಹ ಸಮಾವೇಶಗಳನ್ನು ನಡೆಸಲಾಗುತ್ತಿದೆ, ಆದರೆ ಸಂಘ ಪರಿವಾರದ ಈ ಷಡ್ಯಂತ್ರಕ್ಕೆ ಬಲಿ ಬೀಳದೆ, ಪ್ರಚೋದನೆಗೆ ಒಳಗಾಗದೆ ಜಿಲ್ಲೆಯ ಮುಸ್ಲಿಂ ಸಮುದಾಯವು ಬಹಳ ಪ್ರಬುದ್ಧತೆಯಿಂದ ಮೆರೆದಿದೆ ಎಂದು ಹೇಳಿದರು

Ad Widget


ಮುಸಲ್ಮಾನರು ಎಲ್ಲಾ ಧರ್ಮದವರನ್ನು ಗೌರವಿಸುವ ಜಾತ್ಯತೀತ ಚೌಕಟ್ಟಿನಲ್ಲಿಹಿಂದೂ ಸಮಾಜದ ಬಂದುಗಳೊಂದಿಗೆ ವ್ಯಾಪಾರ ವ್ಯವಹಾರದೊಂದಿಗೆ ಜೀವಿಸುವವರಾಗಿರುತ್ತಾರೆ , ಆದರೆ ನಮ್ಮ ಯುವಕರು ಕೋಮುವಾದಿ ಸಂಘಟಣೆಗಳಿಗೆ ಬಲಿ ಬೀಳದಂತೆ ನೋಡಿ ಕೊಳ್ಳುವ ಜವಾಬ್ದಾರಿ ಸಮುದಾಯದ ಹಿರಿಯ ಮೇಲಿದೆ ಎಂದು ಹೇಳಿದರು. ಇದೀಗ ಕೆಲವರು ಕಾಂಗ್ರೆಸ್ ಪಕ್ಷ ಸಮುದಾಯಕ್ಕೆ ಏನೂ ಮಾಡಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ, ಕಾಂಗ್ರೆಸ್ ಆಡಳಿತ ಯಾವತ್ತೂ ದೇಶದ ಮುಸಲ್ಮಾನರ ದೇಶ ನಿಷ್ಠೆಯನ್ನು ಹಾಗೂ ಅವರ ಪೌರತ್ವವನ್ನು ಪ್ರಶ್ನೆ ಮಾಡಿದ್ದಿಲ್ಲ ಎಂದು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಮಾಡುವವರು ಅರಿತು ಕೊಳ್ಳಲಿ ಎಂದು ಹೇಳಿದರು

Ad Widget

Ad Widget

ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿ ಅಲ್ಪ ಸಂಖ್ಯಾತ ಸಮುದಾಯದವರು ಸಂಘಟಿತರಾಗಿ ತಮಗಾಗುವ ಅನ್ಯಾಯದ ವಿರುದ್ದ ಪುಟಿದೇಳುವ ಕೆಲಸ ಮಾಡಬೇಕು, ಒಂದು ರಾಜಕೀಯ ಪಕ್ಷವಾಗಿ ಎಲ್ಲಾ ಜಾತಿ ಧರ್ಮದವರ ಹಿತ ಕಾಪಾಡುವ ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ, ಕಾಂಗ್ರೆಸ್ ಪಕ್ಷದಡಿಯಲ್ಲಿ ಸಂಘಟಿತರಾಗಿ ಎಲ್ಲಾ ಜಾತಿ, ಎಲ್ಲಾ ಧರ್ಮದವರೊಂದಿಗೆ ಅನ್ಯೋನ್ಯತೆ ಯಿಂದ ಇದ್ದು ದೇಶ ಕಟ್ಟುವ ಕೆಲಸ ಮಾಡ ಬೇಕಾಗಿದೆ ಹಾಗೂ ಮುಸಲ್ಮಾನರನ್ನ ಕೋಮುವಾದಿಗಳೆಂದು ಬಿಂಬಿಸುವ ಶಕ್ತಿಗಳ ವಿರುದ್ಧ ಸಮುದಾಯವು ಜಾಗ್ರತರಾಗ ಬೇಕಾಗಿದೆ,
ದೇಶದ ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರ ಜೊತೆ ಕೈಜೋಡಿಸಿ ದೇಶಕ್ಕೆ ದ್ರೋಹ ಎಸಗಿರುವವರ ಎದುರು ನಮ್ಮ ದೇಶ ಭಕ್ತಿ ಯನ್ನು ಸಾಬೀತು ಪಡಿಸುವ ಅಗತ್ಯಇಲ್ಲ, ದೇಶದ ಅಖಂಡತೆಗೆ ಮತ್ತು ಐಕ್ಯತೆಗೆ ದೇಶದ ಮುಸಲ್ಮಾನರು ಯಾವ ತ್ಯಾಗಕ್ಕೂ ಸಿದ್ದರಿರುವ ಸಮುದಾಯವಾಗಿರುತ್ತದೆ ಎಂದು ಹೇಳಿದರು.


ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಪ್ರದಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿಗಳಾದ ಗ್ರೆಗೊರಿ ಡಿ ಸೋಜಾ ಮಾತನಾಡಿ ಈಗಿನ ಸರಕಾರಿ ವ್ಯವಸ್ಥೆಯಲ್ಲಿ,ಅಲ್ಪ ಸಂಖ್ಯಾತರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ನೋಡುವ ಕೆಲಸವಾಗುತ್ತಿದೆ ಇದರ ವಿರುದ್ಧ ನಾವು ಸಂಘಟಿತರಾಗಿ ಪ್ರತಿಭಟಿಸುವ ಕೆಲಸ ಮಾಡಬೇಕೆಂದರು.


ಘಟಕದ ಪದಾಧಿಕಾರಿಗಳಾದ ಬಿ ಕೆ ಅಬ್ದುಲ್ ರಹಿಮಾನ್ ಕಾವು, ಮನ್ಸೂರ್ ಮೌಲವಿ ಮಾಡ್ನೂರು,ಬಷೀರ್ ಕೌಡಿಚಾರ್,ಇಸ್ಮಾಯಿಲ್ ಗಟ್ಟ ಮನೆ, ಶರೀಫ್ ಕೊಯಿಲ, ಅಬ್ದುಲ್ ಖಾದರ್ ಕಟ್ಟಪುಣಿ, ಹನೀಫ್ ರೆಂಜಲಾಡಿ ಮೊದಲಾದವರು,ಸಭೆಯಲ್ಲಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.


ಸಭಾ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಘಟಕದ ಅಧ್ಯಕ್ಷರಾದ ವಿ ಎಚ್ ಎ ಶಕೂರ್ ಹಾಜಿ ಮಾತನಾಡಿ ಘಟಕದ ಪದಾಧಿಕಾರಿಗಳು ನೀಡಿರುವ ಸಲಹೆಯಂತೆ ಪ್ರತಿಯೊಂದು ವಲಯದಲ್ಲಿ ಅಲ್ಪ ಸಂಖ್ಯಾತ ಘಟಕದ ರಚನೆಗೆ ಕ್ರಮ ಕೈಗೊಳ್ಳಲಾಗುವುದು,ಅಲ್ಪ ಸಂಖ್ಯಾತರಿಗೆ ಸರಕಾರ ಇಲಾಖೆಯಿಂದ ಸಿಗುವ ಸವಲತ್ತುಗಳ ಮಾಹಿತಿಗಳನ್ನು ನೀಡಲಾಗುವುದು, ಪ್ರತಿ ತಿಂಗಳು ಸಭೆ ನಡೆಸಿ ಪಕ್ಷ ಸಂಘಟಣೆಯ ಕೆಲಸವನ್ನು ಮಾಡಲಾಗುವುದು, ಇದಕ್ಕೆ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಪೂರ್ಣ ಸಹಕಾರ ನೀಡುವಂತೆ ಕೇಳಿಕೊಂಡರು.


ಈ ಸಭೆಯಲ್ಲಿ ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ, ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಅಸ್ಮಾ ಘಟ್ಟಮನೆ, ಕಚೇರಿ ಕಾರ್ಯದರ್ಶಿ ಸಿರಿಲ್ ರೋಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು
ಘಟಕದ ಪ್ರದಾನ ಕಾರ್ಯದರ್ಶಿ ಶರೀಫ್ ಕೊಯಿಲ ಸ್ವಾಗತಿಸಿದರು,ಕಾರ್ಯದರ್ಶಿ ಬಷೀರ್ ಕೌಡಿಚಾರ್ ವಂದಿಸಿದರು ಪ್ರದಾನ ಕಾರ್ಯದರ್ಶಿ ಆಶಿಫ್ ಹಾಜಿ ತಂಬುತಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: