Ad Widget

‘ಕರ್ನಾಟಕದ ಇತಿಹಾಸದಲ್ಲೇ ಮೊದಲು ಬಿಜೆಪಿಯ ಅಭ್ಯರ್ಥಿ ರಾಜ್ಯ ವಕ್ಫ್ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆ’ ಎಂದು ಶಾಫಿ ಸಅಧಿ ಆಯ್ಕೆಗೆ ಸಂತೋಷ ಹಂಚಿಕೊಂಡ ಸಚಿವರಾದ ಜೊಳ್ಳೆ ಮತ್ತು ಮಾಧುಸ್ವಾಮಿ – ಸಂಘ ಪರಿವಾರದವರ ಚರ್ಮ ಸುಳಿಯಬೇಕು , ಜನಗಣತಿಯಾದರೇ ಮುಸ್ಲಿಂರೇ ರಾಜ್ಯದಲ್ಲಿ ನಂ.1 ಎಂದಿದ್ದಾರೆ ಎನ್ನಲಾದ ಸಅಧಿ ಭಾಷಣ ವೈರಲ್

IMG-20211118-WA0000
Ad Widget

Ad Widget

Ad Widget

ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಫಿ ಸಾಅದಿ ಅವರಿಗೆ ಅಭಿನಂದಿಸಿರುವ ಮುಜುರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಚಿವ ಮಾಧುಸ್ವಾಮಿ ಮೊಟ್ಟ ಮೊದಲ ಬಾರಿಗೆ ನಮ್ಮ ಪಕ್ಷದ ಅಭ್ಯರ್ಥಿ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದು ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.

Ad Widget

Ad Widget

Ad Widget

Ad Widget


ಈ ಕುರಿತು ಇಬರು ಸಚಿವರು ಫೇಸ್ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಅದರಲ್ಲಿ “ಇಂದು ಬೆಂಗಳೂರಿನಲ್ಲಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಮೊಟ್ಟ ಮೊದಲ ಬಾರಿಗೆ ಆಯ್ಕೆಯಾಗಿರುವ ನಮ್ಮ ಪಕ್ಷದ ಅಭ್ಯರ್ಥಿ ಶಾಫಿ ಸಅದಿ ಅವರಿಗೆ ಹೂಗುಚ್ಛ ನೀಡಿ, ಅಭಿನಂದನೆ ಸಲ್ಲಿಸಲಾಯಿತು.

Ad Widget

Ad Widget

Ad Widget

Ad Widget


‘ಕರ್ನಾಟಕದ ಇತಿಹಾಸದಲ್ಲೇ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರ’ ಎಂದು ಬರೆದುಕೊಂಡಿದ್ದಾರೆ . ಈ ಕಾರ್ಯಕ್ರಮದಲ್ಲಿ ಸಂಘ ಪರಿವಾರದ ಜವಾಬ್ದಾರಿಯಿಂದ ಬಿಜೆಪಿಗೆ ಹೋದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕೂಡ ಜೊತೆಗಿದ್ದರು.

ಭಾರಿ ವಿರೋಧ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ:
ಆದರೆ ಸಚಿವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಕೆಲ ನೆಟ್ಟಿಗರು ಶಾಫಿ ಸಅದಿ ಸಂಘ ಪರಿವಾರದ ಸಿಪ್ಪೆ ಸುಲಿಯುತ್ತೇನೆ ಎಂದಿದ್ದಾರೆ ಎನ್ನಲಾದ ವಿಡಿಯೋ ವೊಂದನ್ನು ಹಂಚಿಕೊಂಡಿದ್ದಾರೆ. ಎಸ್ ಎಸ್ ಎಫ್ ಕಾರ್ಯಕ್ರಮವೊಂದರಲ್ಲಿ ಎನ್ನಲಾದ ಆ ವಿಡೀಯೋದಲ್ಲಿ ಶಾಫಿ ಸಅಧಿ ಅವರು ಸಂಘ ಪರಿವಾರದವರ ಸಿಪ್ಪೆ ಸುಳಿಯುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

Ad Widget

Ad Widget


ರಾಜ್ಯದಲ್ಲಿ ಜನಗಣತಿಯಾದರೇ ರಾಜ್ಯದ ಬಹುದೊಡ್ಡ ಜನಸಂಖ್ಯೆ ಮುಸ್ಲಿಂಮರದಾಗುತ್ತದೆ ಅವರಿಗೆ 35 ಶಾಸಕರು 5 ಎಂಪಿ ಬೇಕಾಗುತ್ತದೆ ಎಂದು ಮತ್ತೊಂದು ಕಾರ್ಯಕ್ರಮದಲ್ಲಿ ಹೇಳಿದ್ದರು ಎನ್ನಲಾದ ವಿಡಿಯೋವು ಜಾಲಾತಾಣದಲ್ಲಿ ವೈರಲ್ ಆಗಿದ್ದು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

Ad Widget

Leave a Reply

Recent Posts

error: Content is protected !!
%d bloggers like this: