Connect with us

ರಾಜಕೀಯ

ದ.ಕ ವಿಧಾನ ಪರಿಷತ್ ಚುನಾವಣೆ | ಕಾಂಗ್ರೇಸ್ ಟಿಕೆಟ್ ನಿರ್ಧರಿಸಲು ಇಂದು ಮಹತ್ವದ ಸಭೆ – ಅಧಿಕೃತ ಅಭ್ಯರ್ಥಿ ಕಣಕ್ಕಿಳಿಸದಿರುವ ನಿರ್ಧಾರ? ಏನಿದು ಕಾಂಗ್ರೇಸ್ ಲೆಕ್ಕಚಾರ

Ad Widget

Ad Widget

ಮಂಗಳೂರು : ನ 17 : ವಿಧಾನ ಪರಿಷತ್‌ ಚುನಾವಣೆಗೆ ದಿನಾಂಕ ಘೋಷಣೆಯಾಗಿ ವಾರ ಕಳೆದರೂ ಅವಿಭಜಿತ ದ.ಕ ಜಿಲ್ಲೆಯ ಕಾಂಗ್ರೇಸ್‌ ಪಾಳಯದಲ್ಲಿ ನಿರೀಕ್ಷಿತ ಉತ್ಸಾಹ ಕಂಡು ಬರುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಜಿಲ್ಲೆಯ ಪ್ರಭಲ ಸಹಕಾರಿ ದುರೀಣ ಎಸ್‌.ಸಿ.ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು.

Ad Widget

Ad Widget

Ad Widget

Ad Widget

ಮೊದಲೇ ಕಾಂಗ್ರೇಸ್‌ ಪಕ್ಷದ ಬಳಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಷ್ಟು ಮತಗಳಿಲ್ಲ. ಇನ್ನೊಂದೆಡೆ ಪಕ್ಷದಲ್ಲಿ 11 ಮಂದಿ ಈ ಸ್ಥಾನಕ್ಕಾಗಿ ಅಕಾಂಕ್ಷಿಗಳಾಗಿದ್ದುಕೊಂಡು ಪ್ರಭಲವಾಗಿ ಲಾಭಿಗೆ ತೊಡಗಿರುವುದು. ಇವೆರೆಡರ ಮಧ್ಯೆ ಕಾಂಗ್ರೇಸ್‌ ಹಿತಚಿಂತಕ ವಲಯದಲ್ಲಿರುವ ಡಾ.ರಾಜೇಂದ್ರ ಕುಮಾರ್‌ ಸ್ಪರ್ಧಾ ಕಣಕ್ಕೆ ಇಳಿದಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ .

Ad Widget

Ad Widget

Ad Widget

ಈ ವಿಧಾನ ಪರಿಷತ್ತಿನ ಬಹುತೇಕ ಮತದಾರರು ಸ್ಥಳೀಯಾಡಳಿತ ಸಂಸ್ಥೆಯ ಜನಪ್ರತಿನಿಧಿಗಳಾಗಿರುವುದು, ಇದರಲ್ಲಿ ಬಹುಪಾಲು ಮಂದಿ ಸಹಕಾರಿ ಕ್ಷೇತ್ರದಿಂದ ಬಂದವರು ಆಗಿರುವುದು ರಾಜಕೀಯ ಪಕ್ಷಗಳ ತಲೆ ನೋವಿಗೆ ಕಾರಣವಾಗಿದೆ. ಸ್ವತಂತ್ರ ಅಭ್ಯರ್ಥಿ ಡಾ.ರಾಜೇಂದ್ರ ಕುಮಾರ್ ರವರು ಕಳೆದ 25 ವರ್ಷಗಳಿಂದ ಜಿಲ್ಲೆಯ ಸಹಕಾರಿ ಕ್ಷೇತ್ರದ ಅನಭಿಷಕ್ತ ದೊರೆಯ ರೂಪದಲ್ಲಿ ಕಂಗೊಳಿಸಿರುವುದು ಹಾಗೂ ಸಹಕಾರಿ ಕ್ಷೇತ್ರದಿಂದ ಬಂದ ಮತದಾರರ ಮೇಲೆ ದಟ್ಟ ಪ್ರಭಾವ ಹೊಂದಿರುವುದು ಕಾಂಗ್ರೇಸ್‌ ಆಸೆಗಳಿಗೆ ನೀರೆರೆಯುತ್ತಿದೆ.

Ad Widget

    

Ad Widget

Ad Widget

ಚುನಾವಣಾ ಮತ ಲೆಕ್ಕಚಾರ ಹೀಗಿದೆ

ಅವಿಭಜಿತ ದ.ಕ. ಜಿಲ್ಲೆಯಲ್ಲಿ  ಈ ದ್ವಿಸದಸ್ಯ ವಿಧಾನ ಪರಿಷತ್ ಚುಣಾವಣೆಯಲ್ಲಿ ಒಟ್ಟು 5914 ಮಂದಿ ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಇದರಲ್ಲಿ 3,608 ಬಿಜೆಪಿ 1̧909 ಕಾಂಗ್ರೆಸ್, ಎಸ್ಡಿಪಿಐ 172, ಇತರೆ 219, ಜೆಡಿಎಸ್ 6 ಬೆಂಬಲಿತರ ಅಥಾವ ತನ್ನ ಪಕ್ಷದ ಚಿಹ್ನೆಯಲ್ಲಿ ಗೆದ್ದ ಜನಪ್ರತಿನಿಧಿಗಳ ಮತಗಳನ್ನು ಹೊಂದಿದೆ ಎನ್ನಲಾಗಿದೆ.

ಕನಿಷ್ಟ 1975 ರಷ್ಟು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದರೆ ಈ ಚುನಾವಣೆ ಗೆಲ್ಲಲು ಸಾಕಾಗುತ್ತದೆ  ಎಂದು ಅಂದಾಜಿಸಲಾಗುತ್ತಿದೆ. ಈ ಲೆಕ್ಕಚಾರದ ಪ್ರಕಾರ ಬಿಜೆಪಿ ಬಳಿ ಮೊದಲ ಅಭ್ಯರ್ಥಿಗೆ ಮತ ಚಲಾಯಿಸಿದ ಬಳಿಕವೂ  ಮತ್ತೂ 1600 ಮತಗಳು ಹೆಚ್ಚುವರಿಯಾಗಿ ಉಳಿಯಲಿದೆ ಹಾಗೂ ಕಾಂಗ್ರೇಸ್ ಗೆ ತನ್ನ ಅಭ್ಯರ್ಥಿಯ ಗೆಲುವಿಗೆ  ಅಂದಾಜು 100 ಮತಗಳಷ್ಟು ಕೊರತೆ ಬೀಳಲಿದೆ. 

 ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಈಗಾಗಲೇ ಕಾಂಗ್ರೆಸ್ ಬೆಂಬಲಿಗ ಮಂಜುನಾಥ ಭಂಡಾರಿ, ದ.ಕ. ಕಾಂಗ್ರೆಸ್‌ನಿಂದ ಶಶಿಧರ ಹೆಗ್ಡೆ, ಕೃಪಾ ಅಳ್ವ  ಸೇರಿದಂತೆ ಒಟ್ಟು 11 ಮಂದಿ ತಲಾ 1 ಲಕ್ಷ ರೂ ಶುಲ್ಕ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಕೆಲ ಪ್ರಭಾವಿಗಳು ದೊಡ್ಡ ಮಟ್ಟದ ಲಾಬಿಯಲ್ಲಿ ಕೂಡ ತೊಡಗಿದ್ದಾರೆ.

ರಾಜೇಂದ್ರ ಕುಮಾರ್‌ ಗೆ ಬೆಂಬಲ ?

ಪಕ್ಷದ ಬಳಿ ಅಗತ್ಯ ಮತಗಳು ಇಲ್ಲದಿರುವ ಹಿನ್ನಲೆಯಲ್ಲಿ ಹಾಗೂ ಪಕ್ಷದ ಹಿತ ಚಿಂತಕರಾಗಿರುವರೇ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿರುವುದರಿಂದ ಈ ಬಾರಿಯ ಚುಣಾವಣೆಯಲ್ಲಿ ಕಾಂಗ್ರೇಸ್‌ ಸ್ಪರ್ಧೆ ಮಾಡದೆ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು  ಕಾಂಗ್ರೇಸ್‌ ನ ಒಂದು ಬಣ ವಾದಿಸುತ್ತಿದೆ .ಇನ್ನೂ ಕೆಲವರು ರಾಜೇಂದ್ರ ಕುಮಾರ್‌ ಅವರನ್ನು ಕಾಂಗ್ರೇಸ್‌ ಟಿಕೆಟ್‌ ಅಡಿಯಲ್ಲಿ ಸ್ಪರ್ಧಿಸುವಂತೆ ಮನವೊಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅದರೆ ಈ ಪ್ರಪೋಸಲ್‌ ಗೆ ರಾಜೇಂದ್ರ ಕುಮಾರ್‌ ಅವರು ಒಪ್ಪುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ

 ಹೀಗಾಗಿ ಟಿಕೆಟ್‌ ಹಂಚಿಕೆಯ ಬಗ್ಗೆ  ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರವರು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ವೇಳೆ ಪಕ್ಷೇತರ ಅಭ್ಯರ್ಥಿ ಡಾ.ರಾಜೇಂದ್ರ ಕುಮಾರ್ ಅವರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಸಂದರ್ಭ ಕಾಂಗ್ರೆಸ್ ಸ್ಪರ್ಧಿಸುವುದೇ ಅಥವಾ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುವುದೇ ಎಂಬುದು ನಿರ್ಧಾರವಾಗಲಿದೆ. ಆದರೆ ಯಾವುದೇ ಕಾರಣಕ್ಕೂ ತಾನು ಸ್ಪರ್ಧಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರಾಜೇಂದ್ರ ಕುಮಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಡಿಕೆಶಿ ಆಪ್ತ ಯುಬಿ ಶೆಟ್ಟಿ ಹೆಸರು ಮುನ್ನಲೆಗೆ :

ಇನ್ನೂ  ಡಿ.ಕೆ ಶಿವಕುಮಾರ್‌ ರವರು ತಮ್ಮ ಆಪ್ತ ಹಾಗೂ ಗುತ್ತಿಗೆದಾರ ಯು.ಬಿ ಶೆಟ್ಟಿಯವರನ್ನು ಕಣಕ್ಕಿಲಿಸಲು ಮನ: ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೇ ಅವರು ಉಳಿದ 11 ಮಂದಿ ಅಕಾಂಕ್ಷಿಗಳ ಹಾಗೇ 1 ಲ.ರೂ ಡೆಪಾಸಿಟ್‌ ಪಾವತಿಸಿ ಅರ್ಜಿ ಗುಜರಾಯಿಸಿಲ್ಲ. ಟಿಕೆಟ್‌ ಆಕಾಂಕ್ಷಿಗಳಿಗೆ ತಾನೇ ಮಾಡಿದ ನೀಯಮವನ್ನು ಪಕ್ಷದ ಹೈಕಮಾಂಡ್‌ ಸೂಪರ್‌ ಸೀಡ್‌ ಮಾಡಿ ಯು.ಬಿ ಶೆಟ್ಟಿಯವರಿಗೆ ಟಿಕೆಟ್‌ ನೀಡುವುದೆ ಎನ್ನುವುದು ಸದ್ಯದ ಕುತೂಹಲ.

 ಈ ಕ್ಷೇತ್ರ ಹಿಂದೆ ಹಲವು ಬಾರಿ ಕಾಂಗ್ರೇಸ್‌ ಪಕ್ಷದ ಕೈ ಹಿಡಿದ ಕ್ಷೇತ್ರ. ಕುಂದಾಪುರದ ಹಿರಿಯ ಕೈ ಮುಖಂಡ  ಪ್ರತಾಪ್‌ ಚಂದ್ರ ಶೆಟ್ಟಿಯವರು ಕಳೆದ ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ದ.ಕ. ವಿಧಾನ ಪರಿಷತ್ ಚುನಾವಣಾ ಇತಿಹಾಸದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಇದ್ದ ಉದಾಹರಣೆ ಇಲ್ಲ. ಹಾಗಾಗಿ ಸದ್ಯ ಈ ಕ್ಷೇತ್ರ ಕೌತುಕದ ಕಣವಾಗಿದೆ.

Click to comment

Leave a Reply

ಉದ್ಯೋಗ

Job Alert:  ನಿರುದ್ಯೋಗಿಗಳಿಗೆ ಗುಡ್‌ ನ್ಯೂಸ್‌ –  ಸದ್ಯದಲ್ಲೆ  ಸಾರಿಗೆ ಇಲಾಖೆಗೆ  9 ಸಾವಿರ  ಸಿಬ್ಬಂದಿಗಳ ನೇಮಕ  : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ  

Ad Widget

Ad Widget

ಬೆಳಗಾವಿ:ನಾನು ಸಾರಿಗೆ ಸಚಿವರಾಗಿದ್ದಾಗ ಸಾರಿಗೆ ಸಿಬ್ಬಂದಿಗಳ ನೇಮಕಾತಿ ನಡೆದಿತ್ತು.ಅಲ್ಲಿಂದ ಇಲ್ಲಿಯವರೆಗೆ ನೇಮಕಾತಿ ನಡೆದಿಲ್ಲ. ಕಳೆದ 7ವರ್ಷಗಳಿಂದ 13,888 ಸಿಬ್ಬಂದಿ ನಿವೃತ್ತಿಯಾಗಿದ್ದಾರೆ. ಈಗ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವಂತ  9,000  ಸಿಬ್ಬಂದಿಗಳ ನೇಮಕ ಮತ್ತು 5500 ಹೊಸಬಸ್ ಖರೀದಿ ಮಾಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಶಕ್ತಿ ಯೋಜನೆ ಜಾರಿಯಾದ ಮೇಲೆ ಮೇಲೆ ಜನರು ಹೆಚ್ಚು ಓಡಾಡುತ್ತಿದ್ದಾರೆ. ಮೊದಲು 85 ಲಕ್ಷ ಜನರು ಓಡಾಡುತ್ತಿದ್ದರು. ಈಗ 1 ಕೋಟಿ ಜನರು ಓಡಾಟ ಮಾಡುತ್ತಿದ್ದಾರೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಹಿಳೆಯರ ಓಡಾಟ ಕೂಡ ಹೆಚ್ಚಾಗಿದೆ ಎಂದರು.

Ad Widget

Ad Widget

Ad Widget

ಇದಕ್ಕೆಲ್ಲಾ ಪ್ರಮುಖ ಕಾರಣ ಕಳೆದ ನಾಲ್ಕು ವರ್ಷದಲ್ಲಿ ಒಂದೇ ಒಂದು ಬಸ್  ಖರೀದಿ ಮಾಡಿಲ್ಲ. ಹೊಸ ಬಸ್ ತಗೊಂಡು ಹಳೆಯ ಬಸ್ಸುಗಳನ್ನು ಸ್ಕ್ರ್ಯಾಪ್‌ ಮಾಡಬೇಕು. ಹೀಗೆ ಆಗಿದ್ದರೆ ಏನು ಸಮಸ್ಯೆ ಆಗುತ್ತಿರಲಿಲ್ಲ ಎಂದರು.

Ad Widget

Baryl Vanneihsangi: ಸೋಷಿಯಲ್‌ ಮೀಡಿಯಾ ಸ್ಟಾರ್‌ ಈಗ ಮಿಜೋರಾಂ ರಾಜ್ಯದ ಕಿರಿಯ ಮಹಿಳಾ ಶಾಸಕಿ – ಬೆರಿಲ್ ವನ್ನೈಹಸಂಗಿ ಬಗ್ಗೆ ನಿಮಗೆಷ್ಟು ಗೊತ್ತು?

Ad Widget

Ad Widget

ಬೆಳಗಾವಿ ಸಾರಿಗೆ ವಿಭಾಗಕ್ಕೆ ಬಿಎಂಟಿಸಿ ಹಳೆ ಬಸ್ ಬಿಟ್ಟಿರುವುದಕ್ಕೆ ಇಲ್ಲಿ ಬಸ್ ಇಲ್ಲ ಎಂಬ ಕಾರಣಕ್ಕೆ ತೆಗೆದುಕೊಂಡಿದ್ದಾರೆ. ಮತ್ತೆ ಆ ಬಸ್ಸುಗಳನ್ನು ವಾಪಸ್‌ ಕಳುಹಿಸಿದ್ದಾರೆ. ಸತತವಾಗಿ ನಾಲ್ಕು ವರ್ಷ ಬಸ್ ಖರೀದಿ ಮಾಡಿಲ್ಲ, ಏಳು ವರ್ಷಗಳಿಂದ ನೇಮಕಾತಿ ಮಾಡಿಲ್ಲ, ಹೀಗಾಗಿ ಸಮಸ್ಯೆ ಆಗುತ್ತಿದೆ. ಹಾಗಾಗಿ 5500 ಹೊಸ ಬಸ್ ಖರೀದಿ ಮಾಡುತ್ತಿದ್ದು, 9 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ ಎಂದು ತಿಳಿಸಿದರು.

KFD Recruitment 2023: ಅರಣ್ಯ ಇಲಾಖೆಯಿಂದ ಫಾರೆಸ್ಟ್ ಗಾರ್ಡ್ 540 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ : ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು

 ಬೆಳಗಾವಿ, ಬಾಗಲಕೋಟೆ, ಗದಗ, ಹುಬ್ಬಳ್ಳಿ ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಅತಿಹೆಚ್ಚು ಬಸ್ ನಿಲ್ದಾಣವನ್ನು 2013ರಿಂದ 2017ರವರೆಗೆ ನಾನು ಸಾರಿಗೆ ಸಚಿವ ಇದ್ದಾಗ ಈ ಭಾಗಕ್ಕೆ ಹಲವು ಬಸ್ಸು ಕೊಟ್ಟಿದ್ದೇನೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಎರಡು ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ಹಾಕಲು ಸೂಚನೆ ನೀಡಿದ್ದೇನೆ. ಬೆಳಗಾವಿ ನಗರಕ್ಕೆ 100 ಹೊಸ ಬಸ್ ಖರೀದಿ ಮಾಡುತ್ತೇನೆ. ಮೂರು ತಿಂಗಳಲ್ಲಿ ಅವಧಿಯಲ್ಲಿ ಈ ಹೊಸ ಬಸ್ ಗಳು ಬರುತ್ತವೆ ಎಂದು ಹೇಳಿದ್ದಾರೆ.

Southeastern Railway Recruitment 2023 ಸೌತ್ ಈಸ್ಟರ್ನ್ ರೈಲ್ವೇಸ್ ವಿಭಾಗದಲ್ಲಿ ಭರ್ಜರಿ ಉದ್ಯೋಗವಕಾಶ: ಅಪ್ರೆಂಟಿಸ್ ಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

Continue Reading

ರಾಷ್ಟ್ರೀಯ

Baryl Vanneihsangi: ಸೋಷಿಯಲ್‌ ಮೀಡಿಯಾ ಸ್ಟಾರ್‌ ಈಗ ಮಿಜೋರಾಂ ರಾಜ್ಯದ ಕಿರಿಯ ಮಹಿಳಾ ಶಾಸಕಿ – ಬೆರಿಲ್ ವನ್ನೈಹಸಂಗಿ ಬಗ್ಗೆ ನಿಮಗೆಷ್ಟು ಗೊತ್ತು?

Ad Widget

Ad Widget

ಡಿಸೆಂಬರ್ 4 ರಂದು ಮಿಜೋರಾಂ ವಿಧಾನಸಭಾ ಚುನಾವಣಾ ಫಲಿತಾಂಶ ಬಿಡುಗಡೆಯಾಗಿದ್ದು ಝೋರಂ ಪೀಪಲ್ಸ್ ಮೂವ್ಮೆಂಟ್ (ZPM)  MNFನ ಸೋಲಿಗೆ ಕಾರಣವಾಯಿತು.  ZPM ನ ಹೊಸ ಚುನಾಯಿತ ಮಹಿಳಾ ಶಾಸಕಿ ಬೆರಿಲ್ ವನ್ನೈಹಸಂಗಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಐಜ್ವಾಲ್ ಸೌತ್-III ಸ್ಥಾನದಿಂದ ಚುನಾವಣೆಯಲ್ಲಿ ಗೆಲ್ಲುವ  ಮೂಲಕ, ಬೆರಿಲ್ ವನ್ನೆಹಸಂಗಿ ಮಿಜೋರಾಂನ ಅತ್ಯಂತ  ಕಿರಿಯ ಮಹಿಳಾ ಶಾಸಕರಾಗಿದ್ದಾರೆ.

Ad Widget

Ad Widget

Ad Widget

Ad Widget

ವನ್ನೈಹಸಂಗಿ ಅವರು ಎಂಎನ್‌ಎಫ್‌ನ ಎಫ್ ಲಾಲ್ನುನ್ಮಾವಿಯಾ ಅವರನ್ನು 1,414 ಮತಗಳಿಂದ ಸೋಲಿಸಿದರು. ಬೆರಿಲ್ ವನ್ನೆಹಸಂಗಿ 9,370 ಮತಗಳನ್ನು ಪಡೆದರೆ, ಎಫ್ ಲಾಲ್ನುನ್ಮಾವಿಯಾ 7,956 ಮತಗಳನ್ನು ಪಡೆದರು.

Ad Widget

Ad Widget

Ad Widget

ಮಿಜೋರಾಂ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕಿ  ಬೆರಿಲ್ ವನ್ನೈಹಸಂಗಿಗೆ  32ರ ಹರೆಯ. ಆಕೆಯ ಚುನಾವಣಾ ಅಫಿಡವಿಟ್ ಪ್ರಕಾರ, ಅವರು ಈ ಹಿಂದೆ ಐಜ್ವಾಲ್ ಮುನ್ಸಿಪಲ್ ಕಾರ್ಪೊರೇಷನ್ (AMC) ನಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡಿದ್ದಾರೆ. ಅವರು ಮೇಘಾಲಯದ ಶಿಲ್ಲಾಂಗ್‌ನಲ್ಲಿರುವ ನಾರ್ತ್ ಈಸ್ಟರ್ನ್ ಹಿಲ್ ವಿಶ್ವವಿದ್ಯಾಲಯದಲ್ಲಿ ಎಂಎ ಮಾಡಿದ್ದಾರೆ. ವರದಿಗಳ ಪ್ರಕಾರ, ಬೆರಿಲ್ ವನ್ನೆಹಿಸಂಗಿ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ. ಅವರು ಪ್ರಸಿದ್ಧ ಟಿವಿ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

Ad Widget

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಬೆರಿಲ್ ವನ್ನೆಹ್‌ಸಂಗಿ ಸಾಕಷ್ಟು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ತನ್ನ Instagram ಬಯೋದಲ್ಲಿ, ಅವರು ಟಿವಿ ನಿರೂಪಕಿ, ಹೊಸ್ಟೆಸ್, ಆಂಕರ್ ಮತ್ತು ರಾಜಕಾರಣಿ ಎಂದು ವಿವರಿಸಿದ್ದಾರೆ.

Ad Widget

Ad Widget

ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಮೂವರು ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಐಜ್ವಾಲ್ ಸೌತ್-III ರಿಂದ ಬೆರಿಲ್ ವನ್ನೆಹಸಂಗಿ ಹೊರತುಪಡಿಸಿ, ಲುಂಗ್ಲೆಯಿ ಪೂರ್ವ ಸ್ಥಾನದಿಂದ ಝಡ್ಪಿಎಂ ಲಾಲ್ರಿನ್ಪುಯಿ ಮತ್ತು ಪಶ್ಚಿಮ ತುಯಿಪುಯಿ ಕ್ಷೇತ್ರದಿಂದ ಪ್ರೊವಾ ಚಕ್ಮಾ ಗೆದ್ದಿದ್ದಾರೆ.

ಬ್ಯಾರಿಲ್ ವನ್ನೈಸಂಗಿ ಮಾತು:ಹ್ “ನಾವು ಮಹಿಳೆ ಆಗಿದ್ದೇವೆ ಎಂಬ ಕಾರಣಕ್ಕೆ ನಮ್ಮನ್ನು ತಡೆಯಬೇಕು ಎನ್ನುವುದು ಅದರ ಅರ್ಥವಲ್ಲ. ಎಲ್ಲಾ ಮಹಿಳೆಯರಿಗೆ ನಾನು ಹೇಳುವ ಒಂದು ವಿಚಾರ ಎಂದರೆ ನಾನು ಎಲ್ಲಾ ಮಹಿಳೆಯನ್ನು ಪ್ರೋತ್ಸಾಹಿಸಲು ಬಯಸುತ್ತೇನೆ. ಸಮಾಜದ ಎಲ್ಲಾ ಮಹಿಳೆಯರಿಗೆ ಈ ಸಂದೇಶವನ್ನು ನೀಡಲು ನಾನು ಬಯಸುತ್ತೇನೆ. ಇದು ಜನರ ಗೆಲುವಾಗಿದೆ. ಬದಲಾವಣೆ ಬಯಸುವ ಜನರು, ಹೆಚ್ಚಿನ ಅಭಿವೃದ್ಧಿಯನ್ನು ತರಲು ಬಯಸುವ ಜನರಿಗೆ ಈ ಗೆಲುವು ಸಮರ್ಪಿತವಾಗಿದೆ. ಯಾವುದೇ ವೈಯಕ್ತಿಕ ಒಲವು, ಸ್ವಜನಪಕ್ಷಪಾತ, ಭ್ರಷ್ಟಾಚಾರವಿಲ್ಲದೇ, ಪ್ರಾಮಾಣಿಕವಾಗಿ ಮತ್ತು ಸರಿಯಾದ ರೀತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ” ಎಂದು ಕಿರಿಯ ಮಹಿಳಾ ಶಾಸಕಿ ಬ್ಯಾರಿಲ್ ವನ್ನೈಹಸಂಗಿ ತಿಳಿಸಿದರು.

Continue Reading

ರಾಜಕೀಯ

CM Siddaramaiah: ಐಸಿಸ್ ಉಗ್ರ  ಸಂಘಟನೆಯ ಬೆಂಬಲಿಗನ  ಜತೆ ಹುಬ್ಬಳಿಯಲ್ಲಿ ವೇದಿಕೆ ಹಂಚಿಕೊಂಡ  ಸಿ. ಎಂ.ಸಿದ್ದರಾಮಯ್ಯ : ಚಿತ್ರ ಸಹಿತ  ಯತ್ನಾಳ್  ಗಂಭೀರ  ಆರೋಪ  – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Ad Widget

Ad Widget

ಬೆಂಗಳೂರು: ಮುಖ್ಯಮಂತ್ರಿ  ಸಿದ್ದರಾಮಯ್ಯನವರು (CM Siddaramaiah) ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ  ಐಸಿಸ್ ಭಯೋತ್ಪಾದಕರ (ISIS Terrorist) ಬೆಂಬಲಿಗನಾದ  ತನ್ವೀರ್ ಫೀರ್  ಎಂಬಾತನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಗಂಭೀರ ಆರೋಪ ಮಾಡಿದ್ದಾರೆ.

Ad Widget

Ad Widget

Ad Widget

Ad Widget

ಬೆಳಗಾವಿ ಸುವರ್ಣಸೌಧದಲ್ಲಿ ಬುಧವಾರ ಮಾತನಾಡಿದ ಅವರು, ‌ಸಮಾವೇಶದ ವೇದಿಕೆಯಲ್ಲಿ ಸಿದ್ದರಾಮಯ್ಯ ಪಕ್ಕದಲ್ಲಿ ಕುಳಿತ ವ್ಯಕ್ತಿ ಐಸಿಸ್ ಸಂಘಟನೆ ಜೊತೆಗೆ ‌ಸಂಪರ್ಕ ಇರುವವನು. ಆ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇರಲಿಲ್ವಾ? ಎಂದು ಪ್ರಶ್ನಿಸಿದರು.

Ad Widget

Ad Widget

Ad Widget

ಎಲ್ಲ‌ ಮಾಹಿತಿ ಪಡೆದೇ ನಾನು ಗಂಭೀರವಾಗಿಯೇ ಹೇಳುತ್ತಿದ್ದೇನೆ. ಹುಡುಗಾಟಿಕೆಗೆ ನಾನು ಹೇಳಿಕೆ ನೀಡುತ್ತಿಲ್ಲ.‌ ಬೇಕಾದ್ರೆ ಮಾಹಿತಿ ತರಿಸಿಕೊಳ್ಳಲಿ ಎಂದು ಸವಾಲು ಹಾಕಿದರು. ಪ್ರಧಾನಿ ಕಾರ್ಯಕ್ರಮ ಇದ್ದರೆ ,ಯಾರ್ಯಾರು ವೇದಿಕೆ ಮೇಲೆ ಇರಬೇಕು ಎಂದು ಮಾಹಿತಿ ಇರುತ್ತದೆ. ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಇರ್ತಾರೆ ಎಂದು ಮಾಹಿತಿ ಇರಲಿಲ್ವಾ..? ನಾನೇ ಇನ್ನೊಂದು ವಾರದಲ್ಲೇ ಎಲ್ಲ ಮಾಹಿತಿ ಹೇಳ್ತೀನಿ ಎಂದರು.

Ad Widget

Arecanut price ಚೇತರಿಕೆ ಕಾಣದ ಅಡಿಕೆ ಧಾರಣೆ -ದರ ಕುಸಿತದ ಹಿಂದಿದೆ ಈ ಕಾರಣಗಳು – ಡೋಲಾಯಮಾನ ಸ್ಥಿತಿಯಲ್ಲಿ ಅಡಿಕೆ ಭವಿಷ್ಯ

Ad Widget

Ad Widget

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ತನ್ವಿರ್ ಫೀರ್ ಎಂಬ ಮುಸ್ಲಿಂ ಮೌಲ್ವಿ ಯೆಮೆನ್, ಸೌದಿ ಹಾಗೂ ಮಧ್ಯ ಪ್ರಾಚ್ಯ ದೇಶಗಳ ಪ್ರವಾಸಗಳ ವೇಳೆ ಭಯೋತ್ಪಾದಕ ಸಂಘಟನೆಗಳ ಪ್ರಮುಖರನ್ನು ಭೇಟಿಯಾಗಿರುವ ಚಿತ್ರಗಳನ್ನು ಅಪ್ಲೋಡ್‌ ಮಾಡಿದ್ದಾರೆ. 

X ಖಾತೆಯಲ್ಲಿ ಯತ್ನಾಲ್‌ ಹಂಚಿಕೊಂಡಿರುವ ಪೋಸ್ಟ್

 

ಯತ್ನಾಳ್ ಅವರ ಆರೋಪ ಏನು?

ಭಯೋತ್ಪಾದಕ ಬೆಂಬಲಿಗೆ ಹಿಂದೆಯೂ ಹಲವಾರು ಬಾರಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದ. ಕೆಲವೇ ದಿನಗಳಲ್ಲಿ ತನ್ವಿರ್ ಫೀರ್ ಎಂಬ ಭಯೋತ್ಪಾದಕ ಬೆಂಬಲಿಗನ ಇನ್ನಷ್ಟು ವಿವರಗಳನ್ನು ಬಹಿರಂಗಗೊಳಿಸುತ್ತೇನೆ. ಈತನು ಮಧ್ಯಪ್ರಾಚ್ಯ ದೇಶಗಳಿಂದ ಹಣವನ್ನು ಭಾರತಕ್ಕೆ ತರುವ ಹಾಗು ಭಾರತದ ಚಟುವಟಿಕಗಳ ಮಾಹಿತಿಯನ್ನು ಅರಬ್ ದೇಶಗಳಿಗೆ ರವಾನಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.

ಪುತ್ತೂರು : ಕುಡಿದು ಟೈಟಾಗಿದ್ದ ಚಾಲಕ ವಿವೇಕಾನಂದ ವಿದ್ಯಾ ಸಂಸ್ಥೆಯ ಬಸ್ಸನ್ನು ಯದ್ವಾತದ್ವಾ ಚಲಾಯಿಸಿ ಸರಣಿ ಅಪಘಾತ – ಮಾಜಿ ಶಾಸಕಿಯ ಪುತ್ರನ ಕಾರು ಸೇರಿ 3 ವಾಹನಕ್ಕೆ ಢಿಕ್ಕಿ – ಪಾನಮತ್ತ ಚಲಾಯಿಸುತ್ತಿದ್ದ ಬಸ್ಸಿನಲ್ಲಿದ್ದರು ವಿದ್ಯಾರ್ಥಿಗಳು..̆

ರಾಜ್ಯ ಪೊಲೀಸ್, ಕೇಂದ್ರೀಯ ತನಿಖಾ ಸಂಸ್ಥೆಗಳು ಈ ಕುರಿತು ವಿಚಾರಣೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

Trending

error: Content is protected !!