Ad Widget

ಬಂಟ್ವಾಳ ಪಿಕಪ್ ಅಪಘಾತ ಪ್ರಕರಣ- ಜತೆಯಾಗಿ ನಡೆದ ಪ್ರಾಣಸ್ನೇಹಿತರ ಅಂತ್ಯಕ್ರಿಯೆ – ತುಂಡಾದ ವ್ಹೀಲ್ ರಾಡ್ ಪ್ರಾಣಕ್ಕೆ ಎರವಾಯಿತು

InShot_20211116_173303343
Ad Widget

Ad Widget

Ad Widget

ಉಪ್ಪಿನಂಗಡಿ: ಬಂಟ್ವಾಳ ತಾಲೂಕು ರಾಮಲ್ ಕಟ್ಟೆ ಎಂಬಲ್ಲಿ ಭಾನುವಾರ ಸಂಭವಿಸಿದ ಪಿಕಪ್ ಅಪಘಾತ   ಮೃತಪಟ್ಟಿದ್ದ ಪ್ರಾಣಸ್ನೇಹಿತರಾಗಿದ್ದ ಆಶಿಕ್ (21) ಹಾಗೂ ಚೇತನ್(21) ಅಂತ್ಯಸಂಸ್ಕಾರ ನ.15ರಂದು ಉಪ್ಪಿನಂಗಡಿಯಲ್ಲಿ ಜತೆಯಾಗಿಯೇ ನೆರವೇರಿತು.

Ad Widget

Ad Widget

Ad Widget

Ad Widget

ಉಪ್ಪಿನಂಗಡಿಯ ಮಮತಾ ಶೆಟ್ಟಿ ಎಂಬುವರ ಪುತ್ರ ಆಶಿಕ್  ಮೃತದೇಹವನ್ನು  ನಟ್ಟಿಬೈಲಿನ ಮನೆಯಿಂದ  ಅಂತ್ಯಸಂಸ್ಕಾರಕ್ಕೆ ಉಪ್ಪಿನಂಗಡಿ ಸ್ಮಶಾನಕ್ಕೆ ತರಲಾಯಿತು.

Ad Widget

Ad Widget

Ad Widget

Ad Widget

ಇನ್ನೊಂದೆಡೆ ಬಾರ್ಯ ಗ್ರಾಮದ ಪಿಲಿಗೂಡು ನಿವಾಸಿ ದಿ. ಧರ್ಣಪ್ಪ ಪೂಜಾರಿ ಅವರ ಪುತ್ರ ಚೇತನ್ ಮೃತದೇಹವನ್ನೂ ಉಪ್ಪಿನಂಗಡಿ ಸ್ಮಶಾನಕ್ಕೆ ತರಲಾಯಿತು.

ಬಾಲ್ಯ ಸ್ನೇಹಿತರಾದ ಚೇತನ್ ಮತ್ತು ಆಶಿಕ್ ಮೃತದೇಹಗಳ ಅಂತ್ಯಕ್ರಿಯೆ ಒಟ್ಟಿಗೇ ಏಕಕಾಲದಲ್ಲಿ ನಡೆಸಲಾಯಿತು.

Ad Widget

Ad Widget

ನ.14ರಂದು ಮಂಗಳೂರಿನ ಕಾರ್ಯಕ್ರಮಕ್ಕೆ  ಕ್ಯಾಟರಿಂಗ್ ಆಹಾರವನ್ನು ಸಾಗಿಸಿ ಕಾರ್ಯಕ್ರಮ ಮುಗಿಸಿ ಹಿಂದಿರುಗುತಿದ್ದಾಗ ಬಂಟ್ವಾಳದಲ್ಲಿ ಪಿಕಪ್ ವಾಹನ ಮರಕ್ಕೆ ಡಿಕ್ಕಿಯಾಗಿದೆ.  ಸ್ಥಳದಲ್ಲೇ ಇಬ್ಬರು ಮೃತಪಟ್ಟರೇ ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದರು.

ಚಲಿಸುತಿದ್ದ ಪಿಕಪ್ ನ ವ್ಹೀಲ್ ರಾಡ್ ತುಂಡಾಗಿ ವಾಹನವು ಎರಡು ಸುತ್ತು ತಿರುಗಿತು.  ಆಗ ಪಿಕಪ್ ನ ಹಿಂಬದಿಯಲ್ಲಿ ಕೂತಿದ್ದ ನಾಲ್ವರು ರಸ್ತೆಗೆ ಎಸೆಯಲ್ಪಟ್ಟರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದರು.

ಕೂಡಲೇ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಇಬ್ಬರೂ ಬದುಕುಳಿಯಲಿಲ್ಲ.

ಮೃತಪಟ್ಟ ಇಬ್ಬರೂ ಬಾಲ್ಯ ಸ್ನೇಹಿತರಾಗಿದ್ದರು. ಇವರ ಮೃತದೇಹ ಉಪ್ಪಿನಂಗಡಿ ತಲುಪಿದಾಗ ಜನಸಮೂಹವೇ ಸೇರಿತ್ತು.

Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: