Ad Widget

ಪಂಚಾಯತ್ ನಿರ್ಮಿಸಿದ ಕಾಲೋನಿ ರಸ್ತೆಗೆ ಬೇಲಿ- ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಪತ್ನಿ ವಿರುದ್ದ ದೂರು

IMG-20211115-WA0063
Ad Widget

Ad Widget

ಪುತ್ತೂರು: ಹಲವಾರು ಮನೆಗೆ ಸಂಪರ್ಕದ ಪಂಚಾಯತ್ ಅನುಮೋದಿತ ಕಾಲನಿ ರಸ್ತೆಯನ್ನೇ ಬೇಲಿಹಾಕಿ ಮುಚ್ಚಿದ ಘಟನೆ ಮುಂಡೂರು ಪಂಚಾಯತ್ ನಲ್ಲಿ ನಡೆದಿದೆ.

Ad Widget

Ad Widget

Ad Widget

Ad Widget

ಮುಂಡೂರು ಗ್ರಾಮದ ಮರ್ತಡ್ಕ-ನಾಡಾಜೆ-ನಡುಬೈಲು-ಕೊಡಿಬೈಲು ನಿವಾಸಿಗಳ ಕಾಲೋನಿಗೆ ಬರುವ ಗ್ರಾಮ ಪಂಚಾಯತ್ ಅನುಮೋದಿಸಿದ ರಸ್ತೆಯನ್ನು ಮುಚ್ಚಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮತ್ತು ಅಭಿವೃದ್ಧಿ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.

Ad Widget

Ad Widget

Ad Widget

Ad Widget

ಪಂಚಾಯತ್ ಅನುದಾನದಿಂದ 2019ರಲ್ಲಿ ನಿರ್ಮಾಣವಾದ ಕಾಲೋನಿಗೆ ಬರುವ ರಸ್ತೆಯನ್ನು ಮುಂಡೂರಿನ ನಳಿನಿ ಲೋಕಪ್ಪ ಎಂಬವರು ನ.13 ರಂದು ಮುಚ್ಚಿರುವ ಬಗ್ಗೆ ಪಂಚಾಯತ್ ಗೆ ದೂರು ನೀಡಲಾಗಿದೆ.

ಹಲವು ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪಂಚಾಯತ್ ನಿಂದ ಸೂಕ್ತ ನಿರ್ದೇಶನ ನೀಡಿ ರಸ್ತೆಯನ್ನು ತೆರವುಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

Ad Widget

Ad Widget

ನಳಿನಿ ಲೋಕಪ್ಪ ಗೌಡರ ಪತಿ ಲೋಕಪ್ಪ ಗೌಡರು ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತಿದ್ದಾರೆ.

Ad Widget

Leave a Reply

Recent Posts

error: Content is protected !!
%d bloggers like this: