ಪುತ್ತೂರು : ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಬಂತೆಂದು ಕೊರಗಿ ಅಹಾರ ನಿದ್ದೆ, ತ್ಯಜಿಸಿದ ವ್ಯಕ್ತಿ ಸಾವು – ಜೈಲಿನಿಂದ ಬಿಡುಗಡೆಯಾದ ಕೆಲ ದಿನದಲ್ಲೆ ಆದಂ ಆಲಿ ನಿಧನ

WhatsApp-Image-2021-11-12-at-12.47.38
Ad Widget

Ad Widget

Ad Widget

ಪುತ್ತೂರು : ನ 11:  ಇತ್ತೀಚೆಗೆ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿದ್ದ ಆರೋಪಿಯೊಬ್ಬರು ಜೈಲಿನಿಂದ ಬಿಡುಗಡೆ  ಹೊಂದಿದ ಕೆಲ ದಿನಗಳ ಬಳಿಕ ನಿಧನ ಹೊಂದಿದ್ದಾರೆ. ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಆದಂ ಕುಂಞ (52 ) ನ. 11 ರಂದು ಪುತ್ತೂರು ಖಾಸಗಿ ಆಸ್ಫತ್ರೆಯಲ್ಲಿ ಮೃತಪಟ್ಟಿದ್ದಾರೆ.

Ad Widget

 ಆದಂ ಕುಂಞ ಯವರು ಬಡಗನ್ನೂರಿನಲ್ಲಿ  ಬೀಡಿ ಬ್ರ್ಯಾಂಚ್‌ ಕೆಲಸ ಮಾಡುತ್ತಿದ್ದು , ಅಲ್ಲಿಗೆ ಬಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಅವರ ವಿರುದ್ದ ಅ.24 ರಂದು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಕ್ಸೋದಡಿ ಅವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದರು.

Ad Widget

Ad Widget

Ad Widget

ಬಳಿಕ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅಲ್ಲಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. 12 ದಿನ ಜೈಲಿನಲ್ಲಿ ಕಳೆದ ಅವರು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.

Ad Widget

ಜೈಲಿನಿಂದ ಬಂದ ಬಳಿಕ ಅವರು ಅನ್ಯಮನಸ್ಕರಾಗಿದ್ದರು. ಪ್ರಕರಣ ದಾಖಲಾದ ಕೊರಗಿನಲ್ಲಿ ಅನ್ನ ಆಹಾರ ತ್ಯಜಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

Ad Widget

Ad Widget

ಆದಂ ಕುಂಞ  ಕುಟುಂಬಸ್ಥರ  ಪ್ರಕಾರ “ಆದಂ ಕುಂಞ ಯವರು ತಮ್ಮ ಮೇಲೆ ದಾಖಲಾದ ಪ್ರಕರಣದಿಂದ ಅವರು ಅತೀವವಾಗಿ  ನೊಂದುಕೊಂಡಿದ್ದರು .ನಾನು ತಪ್ಪು ಮಾಡದಿದ್ದರೂ ತನ್ನ ಮೇಲೆ ದೂರು ದಾಖಲಾಯಿತು. ಇದರಿಂದ ತನ್ನ ಮಾನ ಮಾರ್ಯಾದೆ ಹರಾಜಾಯಿತು ಎಂದು ತೀವ್ರವಾಗಿ ಬೇಸರಿಸಿಕೊಂಡಿದ್ದರು . ಇದೇ ಕೊರಗಿನಲ್ಲಿ  ಆಹಾರ , ನಿದ್ದೆಯನ್ನು ತ್ಯಜಿಸಿ ಮಂಕಾಗಿ ಕೂತು ಕೊಳ್ಳುತಿದ್ದರು.ಈ ಅಘಾತದಿಂದ ಚೇತರಿಸಿಕೊಳ್ಳದ ಅವರು ಅಸ್ವಸ್ಥಗೊಂಡು ನಿಧನ ಹೊಂದಿದ್ದಾರೆ “

ಆದಂ ಕುಂಞ ಯವರು ಮುಂಡೊಳ ಮಸೀದಿಯ ಜಮಾಅತ್ ಆಡಳಿತ ಕಮಿಟಿಯ ಸದಸ್ಯರಾಗಿದ್ದರು. ಮೃತರು ಪತ್ನಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: