Connect with us

ಬಿಗ್ ನ್ಯೂಸ್

ದ.ಕ. ಪರಿಷದ್‌ ಚುಣಾವಣೆ : ಪಕ್ಷೇತರ ಅಭ್ಯರ್ಥಿಯಾಗಿ ಸಹಕಾರಿ ದುರೀಣ ಡಾ ಎಂ. ಎನ್‌ ರಾಜೇಂದ್ರ ಕುಮಾರ್‌ ಸ್ಫರ್ಧೆ ಸಾಧ್ಯತೆಯ ಬಳಿಕ ಬದಲಾದ ಚುಣಾವಣಾ ಸಮೀಕರಣ |ಇಲ್ಲಿದೆ ಸೋಲು –ಗೆಲುವಿನ ಲೆಕ್ಕಚಾರ

Ad Widget

Ad Widget

ರಾಜ್ಯ ವಿಧಾನ ಪರಿಷತ್ʼ ನ 25 ಸ್ಥಾನಗಳಿಗೆ  ಚುಣಾವಣೆ ಘೋಷಣೆಯಾಗಿದ್ದು, ಡಿ 10  ರಂದು  ಚುಣಾವಣೆ ನಡೆಯಲಿದ್ದು  ಅಭ್ಯರ್ಥಿ ಆಯ್ಕೆಯ ಕಸರತ್ತಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ತೊಡಗಿಸಿಕೊಂಡಿವೆ. ದ.ಕ. ಜಿಲ್ಲೆಯ ದ್ವಿ ಸದಸ್ಯತ್ವ ಕ್ಷೇತ್ರದಿಂದ ಅಭ್ಯರ್ಥಿ ಆಯ್ಕೆಗೆ ಎರಡು ಪಕ್ಷಗಳಲ್ಲಿ ಅಕಾಂಕ್ಷಿಗಳ ದೊಡ್ಡ ದಂಡು ಇದೆ. ಆದರ ಜತೆಗೆ ಸಹಕಾರಿ ರಂಗದ ದುರೀಣ, ಎಸ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ  ಡಾ. ಎಂ. ಎನ್.‌ ರಾಜೇಂದ್ರ ಕುಮಾರವರು ಪಕ್ಷೇತರರಾಗಿ ಸ್ಪರ್ಧಿಸಲು ಮನ ಮಾಡಿದ್ದಾರೆ ಎನ್ನಲಾಗಿದೆ. ಇದು ಎರಡು ಪಕ್ಷಗಳ ಟಿಕೆಟ್ ಅಕಾಂಕ್ಷಿಗಳ ನಿದ್ದೆಗೆಡಿಸಿದೆ.

Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ, ಉಡುಪಿ ಈ ಎರಡು ಜಿಲ್ಲೆಗಳ ಎಲ್ಲ  ಗ್ರಾ. ಪಂ ಸದಸ್ಯರ ಸಹಿತ ಸ್ಥಳೀಯಾಡಳಿತ ‌ ಸಂಸ್ಥೆಗಳ ಚುನಾಯಿತ ಸದಸ್ಯರು ಹಾಗೂ ಜಿ.ಪಂ ಹಾಗೂ ತಾ.ಪಂ ಸದಸ್ಯರು  ಈ ಎಂಎಲ್‌ಸಿ ಚುಣಾವಣೆಯ ಮತದಾರರಾಗಿದ್ದಾರೆ. ಆದರೆ, ಈ ಬಾರಿ ಜಿ.ಪಂ ಹಾಗೂ ತಾ.ಪಂ. ನ ಅವಧಿ ಪೂರ್ಣಗೊಂಡಿದ್ದು, ಆದರೇ ಅದರ ಚುಣಾವಣೆ ಕೊವೀಡ್‌ ಹಿನ್ನಲೆ ಮುಂದೂಡಲ್ಪಟ್ಟಿರುವುದರಿಂದ ಈ ಬಾರಿಯ  ವಿಧಾನ ಪರಿಷತ್‌ ಚುಣಾವಣೆಯಲ್ಲಿ ಅಷ್ಟು ಮತಗಳ ಕೊರತೆ  ಉಂಟಾಗಲಿದೆ.

Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯ ಈ ದ್ವಿ ಸದಸ್ಯ ಕ್ಷೇತ್ರಕ್ಕೆ  6500 ಮಿಕ್ಕಿ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.  2015ರಲ್ಲಿ ನಡೆದ ಚುಣಾವಣೆಯಲ್ಲಿ  ಒಟ್ಟು 6534 ಮತಗಳು ಚಲಾವಣೆಗೊಂಡಿದ್ದವು.  ಈ ಬಾರಿ ಜಿ.ಪಂ ಹಾಗೂ ತಾ. ಪಂ ಸದಸ್ಯರು ಮತ ಚಲಾಯಿಸಲು ಸಾಧ್ಯವಿಲ್ಲವಾದುದರಿಂದ  ಒಟ್ಟು ಮತಗಳ ಸಂಖ್ಯೆ ಕಳೆದ ಬಾರಿಗಿಂತ ಅಂದಾಜು  250 ಕಡಿಮೆಯಾಗಲಿದೆ.

Ad Widget

ಲಭ್ಯ ಮಾಹಿತಿ ಪ್ರಕಾರ  ಇವುಗಳ ಪೈಕಿ ಈ ಬಾರಿ  ಸುಮಾರು 3600 ಮತಗಳು ಬಿಜೆಪಿ ಬೆಂಬಲಿತರದು, ಅಂ 2100 ಕಾಂಗ್ರೇಸ್‌ ಬೆಂಬಲಿತ ಮತಗಳು ಹಾಗೂ 550 ಮತಗಳು ಎಸ್ಡಿಪಿಐ, ಜೆಡಿಎಸ್‌ ಹಾಗೂ ಪಕ್ಷೇತರರ ಮತಗಳಿವೆ ಎಂದು ಅಂದಾಜಿಸಲಾಗಿದೆ. 

Ad Widget

Ad Widget

2200 ಪ್ರಥಮ ಪ್ರಾಶಸ್ತ್ಯದ ಮತ ಪಡೆದವರು ವಿಜಯದ ನಗೆ ಬೀರಲಿದ್ದಾರೆ. ಈ ಲೆಕ್ಕಚಾರದ ಪ್ರಕಾರ ಬಿಜೆಪಿ ಕೇವಲ ಒಬ್ಬ ಅಭ್ಯರ್ಥಿಯನ್ನು ಮಾತ್ರ  ಕಣಕ್ಕಿಳಿಸಿದರೆ, ತನ್ನ ಅಭ್ಯರ್ಥಿಯ ಗೆಲುವಿನ ಬಳಿಕವೂ ಅದರ ಬಳಿ ಹೆಚ್ಚುವರಿಯಾಗಿ 1400 ಮತಗಳು ಉಳಿಯಲಿವೆ.  ತನ್ನ ಪ್ರಥಮ ಆಯ್ಕೆಯಾಗಿ ಅದು ಹಾಲಿ ವಿಧಾನ ಪರಿಷತ್‌ ಸದಸ್ಯ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿಯನ್ನು ಸತತ ಮೂರನೇ ಬಾರಿ ಕಣಕ್ಕಿಳಿಸುವುದು ಬಹುತೇಕ ಖಚಿತ . ಪಕ್ಷದ ಮೂಲಗಳ ಪ್ರಕಾರ ಈ ಆಯ್ಕೆ ಖಚಿತಗೊಂಡಿದ್ದು, ಅಧಿಕೃತ ಪ್ರಕಟನೆಯಷ್ಟೆ ಬಾಕಿ ಉಳಿದಿದೆ.

ತನ್ನ ಎಲ್ಲ  ಬೆಂಬಲಿಗರ ಮತವನ್ನು ಒಟ್ಟಾಗಿ ಉಳಿಸಿಕೊಳ್ಳುವಲ್ಲಿ ಕಾಂಗ್ರೇಸ್‌ ಪಕ್ಷ  ಸಫಲವಾದಲ್ಲಿ, ಹಿರಿಯ ಕಾಂಗ್ರೇಸ್‌ ಮುಖಂಡ  ಕುಂದಾಪುರದ ಪ್ರತಾಪ್‌ ಚಂದ್ರ ಶೆಟ್ಟಿಯವರು ಪ್ರತಿನಿಧಿಸಿದ ಸ್ಥಾನವನ್ನೂ ಈ ಬಾರಿಯೂ ತನ್ನ ಬಳಿಯೇ ಉಳಿಸಿಕೊಳ್ಳುವುದು  ಕಾಂಗ್ರೇಸ್‌ ಗೆ ಸಾಧ್ಯ. ಈ ಸರ್ತಿ ಪ್ರತಾಪ್‌ ಚಂದ್ರ ಶೆಟ್ಟಿಯವರು ಚುಣಾವಣೆಯಲ್ಲಿ ಸ್ಫರ್ಧಿಸಲು ಹಿಂದೇಟು ಹಾಕಿದ್ದಾರೆ, ಆದರೇ ಈ ಬಾರಿ  ಕಾಂಗ್ರೇಸ್‌ ನಲ್ಲಿ ಈ ಸ್ಥಾನಕ್ಕೆ ಸ್ಪರ್ಧಿಸ ಬಯಸಿ  11 ಮಂದಿ ಅಕಾಂಕ್ಷಿಗಳಿದ್ದಾರೆ.

ಜಿಲ್ಲೆಯ ಕಾಂಗ್ರೇಸ್‌ ಈ ಬಾರಿ ಎಂಎಲ್ಸಿ ಚುಣಾವಣೆಗೆ ಸ್ಪರ್ಧಿಸ ಬಯಸುವವರು ರೂಪಾಯಿ ಒಂದು ಲಕ್ಷ ಡೆಪಾಸಿಟ್‌ ಪಾವತಿಸಿ  ಅರ್ಜಿ ಸಲ್ಲಿಸುವಂತೆ ತನ್ನ ಪಕ್ಷದ ಕಾರ್ಯಕರ್ತಗೆ ಸೂಚಿಸಿತ್ತು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ 6  ಹಾಗೂ ಉಡುಪಿ ಜಿಲ್ಲೆಯಿಂದ 5 ಮಂದಿ ಹೀಗೆ ಒಟ್ಟು 11 ಮಂದಿ  ತಲಾ  1 ಲ.ರೂ ಪಾವತಿಸಿ ಅರ್ಜಿ ಗುಜರಾಯಿಸಿದ್ದಾರೆ.

ಹೀಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೇಸಿನಿಂದ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯುವುದು ಬಹುತೇಕ ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಕಳೆದ ಬಾರಿ ಕಾಂಗ್ರೇಸ್‌ ನ ಅಧಿಕೃತ ಅಭ್ಯರ್ಥಿ ಪ್ರತಾಪ್‌ ಚಂದ್ರ ಶೆಟ್ಟಿ ವಿರುದ್ದ ಜಯಪ್ರಕಾಶ್‌ ಹೆಗ್ಡೆ ಹಾಗೂ ಹರಿಕೃಷ್ಣ ಬಂಟ್ವಾಳ ಬಂಡಾಯವಾಗಿ ಸ್ಪರ್ಧಿಸಿದ್ದರು. ಈ ಬಾರಿ ಇದೇ ರೀತಿ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿ ಒಡಕು ಉಂಟಾದರೆ ಅದರ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ.

ಈ ಸಂದರ್ಭ ಅದು ಒಂದೋ  ತನ್ನ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಅಥಾವ ಪಕ್ಷೇತರರಾಗಿ ಸ್ಪರ್ಧಿಸುವ ಅಭ್ಯರ್ಥಿಗೆ ತನ್ನ ಹೆಚ್ಚುವರಿ ಮತಗಳನ್ನು  ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಈ ಸಾಧ್ಯತೆಯನ್ನು ಗಮನಿಸಿರುವ ಸಹಕಾರಿ ದುರೀಣ ಡಾ. ಎಂ.ಎನ್.‌ ರಾಜೇಂದ್ರ ಕುಮಾರ್‌  ತನ್ನ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.   ವಿಧಾನ ಪರಿಷತ್ತಿನ ಬಹುತೇಕ ಮತದಾರರು  ಸಹಕಾರಿ ಹಿನ್ನಲೆಯವರಾಗಿರುವುದು ರಾಜೇಂದ್ರ ಕುಮಾರ್‌ ರವರಿಗೆ ಪ್ಲಸ್‌ ಪಾಯಿಂಟ್‌ .

ದಕ್ಷಿಣ ಕನ್ನಡ, ಉಡುಪಿ  ಜಿಲ್ಲೆಯ ಬಹುತೇಕ  ಗ್ರಾ. ಪಂ ಸದಸ್ಯರು ನವೋದಯ ಅಥಾವ ಇನ್ನಿತರ ಸಹಕಾರಿ ಸಂಘದಲ್ಲಿ ಗುರುತಿಸಿಕೊಂಡವರು. ಒಂದು ಲೆಕ್ಕಚಾರದ ಪ್ರಕಾರ  ಉಭಯ ಜಿಲ್ಲೆಗಳ ಸುಮಾರು 30% ಮಹಿಳಾ ಗ್ರಾ. ಪಂ ಸದಸ್ಯರು ನವೋದಯದ ಭಾಗವಾಗಿದ್ದವರು . ಕಾಂಗ್ರೇಸ್‌ ಹಾಗೂ ಬಿಜೆಪಿ ಎರಡು ಪಕ್ಷದ ಬೆಂಬಲಿತರು ಇದರಲ್ಲಿ ಸೇರಿದ್ದಾರೆ. ಹಾಗಾಗಿಯೇ ರಾಜೇಂದ್ರ ಕುಮಾರ್‌ ಈ ಎಂಎಲ್ಸಿ ಚುಣಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕತೆ ತೋರಿದ್ದಾರೆ ಎಂದು ಹೇಳಲಾಗಿದೆ .

ಬಹುತೇಕ ಅವರು ನ . 17 ರಂದು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರನ್ನು ಬಿಜೆಪಿಯ ಹೆಚ್ಚುವರಿ ಮತಗಳು ಗೆಲುವಿನ ದಡ ತಲುಪಿಸಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಬಿಜೆಪಿಯಲ್ಲಿರುವ ಹೆಚ್ಚುವರಿ 1400 ಮತಗಳು, ಕಾಂಗ್ರೇಸ್‌ , ಬಿಜೆಪಿಯೇತರ ಸದಸ್ಯರ ಸುಮಾರು 500 ಕ್ಕೂ ಹೆಚ್ಚು ಮತಗಳು ಹಾಗೂ ಕಾಂಗ್ರೇಸ್‌ ನಿಂದ ಒಂದಷ್ಟು ಮತಗಳು ಲಭಿಸಿದರೆ ಸುಲಭದಲ್ಲಿ ಅವರು ಗೆಲುವಿನತ್ತ ಹೆಜ್ಜೆ ಹಾಕಲಿದ್ದಾರೆ . ಜತೆಗೆ ಸಹಕಾರಿ ಕ್ಷೇತ್ರದ ಮತದಾರರು ದೊಡ್ಡ ಸಂಖ್ಯೆಯಲ್ಲಿ  ಎಂಎನ್‌ ಅರ್‌ ಪರ ಮತ ಚಲಾಯಿಸಿದರೆ ಆಗ ದೊಡ್ಡ ಪಲ್ಲಟಗಳು ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ

2015 ರ ಮತ ವಿಭಜನೆಯ ವಿವರ :

 2015ರ ಚುಣಾವಣೆಯಲ್ಲಿ ಒಟ್ಟು ಚಲಾವಣೆಯಾದ ಮತಗಳು : 6534 ಗೆಲುವು

ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ) ಪಡೆದ ಮತಗಳು : 2977 ಗೆಲುವು

 ಪ್ರತಾಪ್‌ ಚಂದ್ರ ಶೆಟ್ಟಿ ( ಕಾಂಗ್ರೇಸ್)‌ ಪಡೆದ ಮತಗಳು : 2237 ಸೋಲು

ಜಯಪ್ರಕಾಶ್‌ ಹೆಗ್ಡೆ ( ಕಾಂಗ್ರೇಸ್‌ ಬಂಡಾಯ ) ಪಡೆದ ಮತಗಳು : 872 ಸೋಲು

ಹರಿಕೃಷ್ಣ ಬಂಟ್ವಾಳ ( ಕಾಂಗ್ರೇಸ್‌ ಬಂಡಾಯ ) ಪಡೆದ ಮತಗಳು : 127 ಸೋಲು

ಪ್ರವೀಣ್‌ ಚಂದ್ರ ಜೈನ್‌  ( ಜೆಡಿಎಸ್‌ ) ಪಡೆದ ಮತಗಳು : 30 ಸೋಲು

ತಿರಸ್ಕೃತ ಮತಗಳು : 231

ನೋಟಾ : 02

Click to comment

Leave a Reply

ರಾಜ್ಯ

ನಾಲ್ಕು ಎಕರೆ ಬರಡು ಭೂಮಿಯಲ್ಲಿ ಡ್ರಾಗನ್ ಫ್ರುಟ್ ಕೃಷಿ : ವರ್ಷಕ್ಕೆ 12ರಿಂದ 16ಲಕ್ಷ ಆದಾಯ

Ad Widget

Ad Widget

ಕಾಗವಾಡ: ಉಷ್ಣ ವಲಯದಲ್ಲಿ ಬೆಳೆಯುವ ಡ್ರ್ಯಾಗನ್‌ ಪ್ರೂಟ್‌ ಕಡಿಮೆ ಕ್ಯಾಲೊರಿ ಹಾಗೂ ವಿಟಮಿನ್‌ ಸಿ, ಬಿ1, ಬಿ2, ಬಿ3, ಐರನ್‌, ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಂ ಹೇರಳವಾಗಿ ಹೊಂದಿರುತ್ತದೆ. ಪೌಷ್ಠಿಕಾಂಶದ ಮೌಲ್ಯಗಳಿಂದಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಹಾಗಾಗಿ ರೈತ ಮಹಿಳೆಯೊಬ್ಬರು ಬರಡು ಭೂಮಿಯಲ್ಲಿ ಡ್ರಾಗನ್ ಫ್ರುಟ್ ಬೆಳೆದು ಕೈತುಂಬಾ ಆದಾಯ ಪಡೆದುಕೊಂಡು ಮಾದರಿಯಾಗಿದ್ದಾರೆ.

Ad Widget

Ad Widget

Ad Widget

Ad Widget

ಕಾಗವಾಡ ಮತ ಕ್ಷೇತ್ರದ ಆಜೂರ ಗ್ರಾಮದ ಲತಾ ರಾವಸಾಬ ಐಗಳಿ ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಡ್ರಾಗನ್ ಫ್ರುಟ್ ಬೆಳೆದು ವರ್ಷಕ್ಕೆ 12ರಿಂದ 16 ಲಕ್ಷ ಆದಾಯವನ್ನು ಪಡೆದುಕೊಂಡು ಕೃಷಿಯಲ್ಲಿ ಲಾಭದಾಯಕ ಬೆಳೆ ಬೆಳೆಯುತ್ತಿದ್ದಾರೆ. ಒಟ್ಟು ನಾಲ್ಕು ಎಕರೆಯಲ್ಲಿ 6ಸಾವಿರ ಸಸಿಗಳನ್ನು ನಾಟಿ ಮಾಡಿ ಕೈತುಂಬಾ ಆದಾಯ ಪಡೆಯುತ್ತಿದ್ದಾರೆ. ಫಸಲನ್ನು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ, ಕೊಲ್ಲಾಪುರ, ಮತ್ತು ಹೈದರಾಬಾದ್‌, ವಿಜಯಪೂರ, ಬೆಂಗಳೂರು, ಮಂಗಳೂರು, ನಗರಗಳಿಗೆ ಸರಬರಾಜು ಮಾಡುತ್ತಾರೆ.

Ad Widget

Ad Widget

Ad Widget

ಲತಾ ಐಗಳಿ ಅವರ ಮಾತು:

Ad Widget

ಪ್ರತಿ ಕೆಜಿಗೆ ₹80 ರಿಂದ ₹200ರ ವರಗೆ ಮಾರಾಟ ವಾಗುತ್ತದೆ. ಎಕರೆಗೆ ₹6 ಲಕ್ಷದಿಂದ ₹8 ಲಕ್ಷ ಆದಾಯ ಬರುತ್ತದೆ. ಇದಕ್ಕೆ ರೋಗಬಾಧೆ ಕಡಿಮೆ, ನೀರಿನ ಪ್ರಮಾಣವು ಕಡಿಮೆ ತಗಲುವುದರಿಂದ ಕೀಟನಾಶಕಗಳ ನಾಶಕ ಬಳಕೆ ಇಲ್ಲದಿರುವದರಿಂದ ಖರ್ಚು ಕಡಿಮೆಯಾಗಿ ಆದಾಯ ಲಾಭದಾಯಕವಾಗಿದೆ. ತಮ್ಮ ಪತಿ ರಾವಸಾಬ ಐಗಳಿ ಸಾಹಾಯದಿಂದ ಬೆಳೆಯನ್ನು ಬೆಳೆದು ನಾವು ಖುಷಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಲತಾ ಐಗಳಿ.
ಈ ಬೆಳೆಯಲ್ಲಿ ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡು ತಮ್ಮ ಹೈನುಗಾರಿಕೆಯಿಂದ ಬರುವ ಸಾವಯುವ ಗೊಬ್ಬರ, 40 ದಿನಗಳ ಕಾಲ ಅದು ಎರೆ ಹುಳಗಳು ತಯಾರಾಗುವರೆಗೆ ಕಾದು ಅದನ್ನು ಬಳಸಿ ಈ ಡ್ರಾಗನ್ ಫ್ರುಟ್ ಬೆಳೆಯುತ್ತಿದ್ದೇವೆ ಎಂದು ಹೇಳಿದರು.

Ad Widget

Ad Widget


ರೈತರಿಗೆ ಉಚಿತವಾಗಿ ಡ್ರ್ಯಾಗನ್ ಸಸಿ ನೀಡುತ್ತಿರುವ ದಂಪತಿ:

ಪಕ್ಕದ ರೈತರಿಗೆ ಅನುಕೂಲವಾಗಲಿ ಎಂದು ಈ ದಂಪತಿ ಉಚಿತವಾಗಿ ಡ್ರಾಗನ್‌ ಫ್ರುಟ್ ಸಸಿಗಳನ್ನು ವಿತರಣೆ ಮಾಡಿ ಉದಾರತೆ ಮೆರೆಯುತ್ತಿದ್ದಾರೆ. ಡ್ರಾಗನ್‌ ಫ್ರುಟ್‌ನ ಹಲವು ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸದ್ಯ ನಾವು ನಮ್ಮ ತೋಟದಲ್ಲಿ ಐದು ತೆರನಾದ ಹಣ್ಣುಗಳನ್ನು ಬೆಳೆಯುತ್ತಿದ್ದೇವೆ. ರೆಡ್ ವೈಟ್ ಯಲ್ಲೋ ವೈಟ್ ಜಂಬೂ ರೆಡ್ ಸಿ ವೈರಟಿ ರೆಗ್ಯುಲ‌ರ್ ರೆಡ್‌ ತರಹದ ಹಣ್ಣು ಬೆಳೆಯುತ್ತೇವೆ. ತಂತ್ರಜ್ಞಾನ ಬಳಸಿಕೊಂಡು ನಮ್ಮ ಜಮೀನುಗಳಿಗೆ ಹೊಂದುವಂತಹ ಹಲವು ಬೆಳೆಗಳನ್ನು ಬೆಳೆಯಬಹುದು. ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ರೈತರು ಬೇರೆ ಬೆಳೆಗಳ ಕಡೆ ಗಮನವನ್ನು ಕೊಡಬೇಕು ಎಂದು ರೈತರಿಗೆ ಸಲಹೆ ನೀಡುತ್ತಾರೆ ಲತಾ ಐಗಳಿ.

ಮಧುಮೇಹ ಅಧಿಕ ರಕ್ತದೊತ್ತಡ ಕ್ಯಾನ್ಸ‌ರ್ ಬಿಳಿ ರಕ್ತ ಕಣಗಳು ಹೆಚ್ಚಿಸುವುದು ಹೀಗೆ ಹಲವು ರೋಗಗಳಿಗೆ ಈ ಹಣ್ಣು ಪ್ರಯೋಜನವಾಗಲಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ಹೇಳುತ್ತಾರೆ .

Continue Reading

ರಾಜ್ಯ

Karnataka Land Revenue Amendment Bill-2022 : ರೈತ ಹೋರಾಟಕ್ಕೆ ಮಣಿದ ರಾಜ್ಯ ಸರಕಾರ- ಕೃಷಿ ಭೂಮಿ ಖರೀದಿ ಕುರಿತ ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕ-2022 ವಾಪಸ್ಸಿಗೆ ನಿರ್ಧಾರ

Ad Widget

Ad Widget

Karnataka Land Revenue Amendment Bill-2022 ಬೆಳಗಾವಿ: ರೈತರ ಹೋರಾಟಕ್ಕೆ ಮಣಿದು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

Ad Widget

Ad Widget

Ad Widget

Ad Widget

ಈ ಮೊದಲು ಕೃಷಿ ಭೂಮಿ ಹೊಂದಿದವರು ಮಾತ್ರ ಕೃಷಿ ಭೂಮಿ ಖರೀದಿಗೆ ಅವಕಾಶ ಇತ್ತು. 2022 ರಲ್ಲಿ ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕದ ಮೂಲಕ ಯಾರು ಬೇಕಾದರೂ ಭೂಮಿ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು.

Ad Widget

Ad Widget

Ad Widget

ಬಿಜೆಪಿ ಸರ್ಕಾರದ ಅವಧಿಯ ಕರ್ನಾಟಕ ಭೂಕಂದಾಯ ತಿದ್ದುಪಡಿ ವಿದೇಯಕವನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕೆಲವೊಂದು ಹೊಸ ತಿದ್ದುಪಡಿಯೊಂದಿಗೆ ನೂತನ ವಿಧೇಯಕ ಈ ಬಾರಿಯ ಅದಿವೇಶನದಲ್ಲೇ ಮಂಡಿಸಲು ತೀರ್ಮಾನಿಸಲಾಗಿದೆ.

Ad Widget
Continue Reading

ರಾಷ್ಟ್ರೀಯ

online priest Fraud ಪೂಜೆಗೆಂದು ದುಡ್ಡು ಪಡೆದು ಪಂಗನಾಮ: 80 ಲಕ್ಷ ರೂ ವಂಚಿಸಿದ ‘ಆನ್‌ಲೈನ್ ʼ ಆರ್ಚಕ

Ad Widget

Ad Widget

ಬೆಂಗಳೂರು: ಇತ್ತೀಚಿಗೆ ಸಾಕಷ್ಟು ಆನ್ಲೈನ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಆತಂಕಕಾರಿಯಾಗಿದೆ. ಪ್ರತಿದಿನ ಹೊಸ ಹೊಸ ನಮೂನೆಯ ಮೋಸಗಳನ್ನು ಕಾಣಬಹುದಾಗಿದೆ. ಈ ವಂಚನೆ ಈಗ ಧಾರ್ಮಿಕ ಕ್ಷೇತ್ರಕ್ಕೂ ಕಾಲಿಟ್ಟಿದೆ. ಆರ್ಚಕರ ಸೋಗಿನಲ್ಲಿ ವ್ಯಕ್ತಿಯೊಬ್ಬರು ಆನ್‌ಲೈನ್ ಮೂಲಕ ₹ 80 ಸಾವಿರ ಪಡೆದು ಮಹಿಳೆಯೊಬ್ಬರಿಗೆ ವಂಚಿಸಿರುವ ಘಟನೆ ಬೆಂಗಳೂರು ನಗರದ ಬನ್ನೇರುಘಟ್ಟ ಬಳಿ ನಡೆದಿದೆ.

Ad Widget

Ad Widget

Ad Widget

Ad Widget

‘ಬನ್ನೇರುಘಟ್ಟ ರಸ್ತೆಯ ನಿವಾಸಿಯಾಗಿರುವ 36 ವರ್ಷದ ಮಹಿಳೆಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

Ad Widget

Ad Widget

Ad Widget

ಈ ವಂಚನೆ ಪ್ರಕರಣದ ಬಗ್ಗೆ ಮಹಿಳೆ ಕೊಟ್ಟಿರುವ ಮಾಹಿತಿಯ ಪ್ರಕಾರ, ಮಹಿಳೆ ತಮ್ಮ ಮನೆಯಲ್ಲಿ ಪೂಜೆ ಮಾಡಿಸಲು ತೀರ್ಮಾನಿಸಿದ್ದರು. ಇದಕ್ಕಾಗಿ ಪೂಜಾರಿ ಅವರನ್ನು ಹುಡುಕುತ್ತಿದ್ದರು. ಸ್ನೇಹಿತರೊಬ್ಬರು ಪೂಜಾರಿ ಶರಣ್ ಭಟ್ ಎಂಬುವರ ಮೊಬೈಲ್ ನಂಬರ್ ನೀಡಿದ್ದರು. ಅದಕ್ಕೆ ಕರೆ ಮಾಡಿದ್ದ ಮಹಿಳೆ, ಪೂಜೆ ಮಾಡಿಕೊಡುವಂತೆ ವಿನಂತಿಸಿದ್ದರು.’

Ad Widget

ಪೂಜೆ ಮಾಡಲು ಒಪ್ಪಿದ್ದ ಪೂಜಾರಿ, ‘ನನ್ನ ಖಾತೆಗೆ ₹ 50,000 ಕಳುಹಿಸಿ. ಅದನ್ನು ದೇವರ ಮುಂದೆ ಇರಿಸಿ ಕೆಲದಿನ ಪೂಜೆ ಮಾಡುತ್ತೇನೆ. ನಂತರ, ನಿಮ್ಮ ಮನೆಗೂ ಅದೇ ಹಣವನ್ನು ತಂದಿಟ್ಟು ಪುನಃ ಪೂಜೆ ಮಾಡುತ್ತೇನೆ’ ಎಂದಿದ್ದ. ಅದನ್ನು ನಂಬಿದ್ದ ಮಹಿಳೆ, ಹಣ ಕಳುಹಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

Ad Widget

Ad Widget

‘ಪೂಜೆ ಸಾಮಗ್ರಿಗಳನ್ನು ಖರೀದಿಸಬೇಕೆಂದು ಹೇಳಿದ್ದ ಆರೋಪಿ, ಪುನಃ ₹ 30 ಸಾವಿರ ಪಡೆದಿದ್ದ. ಇದಾದ ನಂತರ ಆರೋಪಿ, ಪೂಜೆ ಮಾಡಲು ಬಂದಿದ್ದ. ಹಣವನ್ನೂ ವಾಪಸು ಕೊಡದೇ ಪರಾರಿಯಾಗಿದ್ದಾನೆ’ ಎಂದು ಹೇಳಿದರು.

Continue Reading

Trending

error: Content is protected !!