Connect with us

ಬಿಗ್ ನ್ಯೂಸ್

500 ವರ್ಷಗಳ ಇತಿಹಾಸವಿರುವ ತುಳುನಾಡಿನ ಸಾಂಪ್ರದಾಯಿಕ ‘ಕಳಿ’ ಮೂರ್ತೆದಾರರಿಲ್ಲದೆ ಅಳಿವಿನಂಚಿಗೆ – ತಾಳೆ ಶೇಂದಿಗೆ ಯುವಜನತೆ ಫಿದಾ – ಕೇರಳದ ಮೂರ್ತೆದಾರರಿಗೆ ಭರ್ಜರಿ ಡಿಮ್ಯಾಂಡ್

Ad Widget

Ad Widget

ಮಂಗಳೂರು: ಕರಾವಳಿ ಜಿಲ್ಲೆಯ ಸಾಂಪ್ರದಾಯಿಕ, ಮೂಲ ಕಸುಬುಗಳಲ್ಲಿ ಒಂದಾದ ತಾಳೆ ಮರದ ಮೂರ್ತೆದಾರಿಕೆ ಸಂಪೂರ್ಣ ಅಳಿವಿನಂಚಿನಲ್ಲಿದ್ದು, ಶೇಂದಿ ಉತ್ಪಾದನೆ ಶೇ.95ರಷ್ಟು ಕುಂಠಿತಗೊಂಡಿದೆ. ಈ ಮಧ್ಯೆ ತೆಂಗಿನ ಮರದಿಂದ ಶೇಂದಿ ತೆಗೆಯುವ ಕೇರಳ ಟ್ಯಾಪರ್ಸ್ (ಮೂರ್ತೆದಾರರಿಗೆ) ರಾಜ್ಯದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

Ad Widget

Ad Widget

Ad Widget

Ad Widget

ಕರಾವಳಿ ಭಾಗದಲ್ಲಿ ತಾಳೆ ಮರದಿಂದ ಶೇಂದಿ ತೆಗೆಯುವ ಕಸುಬಿಗೆ 500ವರ್ಷಕ್ಕೂ ಹಿಂದಿನ ಇತಿಹಾಸವಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಶೇಂದಿ ಉತ್ಪಾದನೆಯಾಗುತ್ತಿತ್ತು.

Ad Widget

Ad Widget

Ad Widget

ನವೆಂಬರ್‌ನಿಂದ-ಮೇ ತಿಂಗಳ ಅವಧಿಯಲ್ಲಿ ಶೇಂದಿ ಉತ್ಪಾದನೆ ಹೆಚ್ಚಾಗಿ ನಡೆಯುತ್ತಿದ್ದು, ಸೀಸನ್‌ ಅವಧಿಯಲ್ಲಿ ಈ ಅವಳಿ ಜಿಲ್ಲೆಗಳಲ್ಲಿ ದಿನಕ್ಕೆ ಕನಿಷ್ಠ 1ಲಕ್ಷಕ್ಕೂ ಅಧಿಕ ಲೀಟರ್‌ ಶೇಂದಿ ಸಂಗ್ರಹವಾಗುತ್ತಿತ್ತು. ಅಂತಹುದರಲ್ಲಿ ಈಗ 5ಸಾವಿರ ಉತ್ಪಾದನೆಯೂ ಆಗುತ್ತಿಲ್ಲ ಎನ್ನುತ್ತಾರೆ ಮೂರ್ತೆದಾರರ ಮಹಾಮಂಡಲ ಉಪಾಧ್ಯಕ್ಷ ಶಿವಪ್ಪ ಸುವರ್ಣ ಪಕ್ಕಲಪಾದೆ.

Ad Widget

ಬೇಡಿಕೆಯಿದೆ, ಉತ್ಪಾದನೆಯಿಲ್ಲ: ಕರಾವಳಿಯ ತಾಳೆ ಮರದ ಶೇಂದಿಗೆ ಮೊದಲಿಗಿಂತ ಈಗ ಬೇಡಿಕೆ ಹೆಚ್ಚಿದೆ. ಅದರಲ್ಲೂ ಇಂದಿನ ಯುವಸಮುದಾಯ ತಾಳೆ ಶೇಂದಿಗೆ ಹೆಚ್ಚು ಫಿದಾ ಆಗಿದೆ. ವೀಕೆಂಡ್‌ನಲ್ಲಿ ಈ ಬೇಡಿಕೆ 4ರಿಂದ 5 ಪಟು ಹೆಚ್ಚಾಗಿದೆ. ಆದರೆ ಬೇಡಿಕೆಯಷ್ಟು ಉತ್ಪಾದನೆಯಾಗದೆ ಉತ್ತಮ ದರ್ಜೆಯ ಶೇಂದಿ ದರವೂ ಲೀಟರ್‌ಗೆ 100ರೂ.ಗೆ ವಿಕ್ರಯವಾಗುತ್ತಿದೆ. ಆದರೂ ಉತ್ತಮ ದರ್ಜೆ ಶೇಂದಿ ಸಿಗುತ್ತಿಲ್ಲ ಎನ್ನುತ್ತಾರೆ ಶೇಂದಿ ಮಾರಾಟಗಾರರು.

Ad Widget

Ad Widget

ಕೇರಳ ಮೂರ್ತೆದಾರರಿಗೆ ಬೇಡಿಕೆ:ತಾಳೆ ಮರದ ಶೇಂದಿ ಕೊರತೆಯಾಗಿರುವ ಕಾರಣ ಕರಾವಳಿ ಭಾಗದಲ್ಲಿ ತೆಂಗಿನ ಮರದ ಶೇಂದಿಗೆ ಬೇಡಿಕೆ ಹೆಚ್ಚಾಗಿದೆ. ತೆಂಗಿನ ಮರದಲ್ಲಿ ಶೇಂದಿ ಮಾಡುವುದರಲ್ಲಿ ಕೇರಳದ ಮೂರ್ತೆದಾರರು ನಿಪುಣರಾಗಿದ್ದು, ಅವರಿಗೆ ಹೆಚ್ಚಿನ ಬೇಡಿಕೆಯಿದೆ. ಪ್ರತಿ ಲೀಟರ್‌ಗೆ ಕಮಿಷನ್‌ ಆಧಾರದಲ್ಲಿ ಇವರು ಆದಾಯ ಮಾಡಿಕೊಳ್ಳುತ್ತಿದ್ದಾರೆ. ಕರಾವಳಿ ಭಾಗದಲ್ಲಿ ತೆಂಗಿನ ಮರದ ಮೂರ್ತೆದಾರಿಕೆ ಕಲಿಯಲು ಆಸಕ್ತಿಯೂ ಕಡಿಮೆಯಾಗಿದೆ ಮತ್ತು ಕೇರಳದವರು ಕೂಡಾ ಈ ವಿದ್ಯೆಯನ್ನು ಕಲಿಸಿಕೊಡಲು ಉತ್ಸಾಹ ತೋರುತ್ತಿಲ್ಲ ಎನ್ನುತ್ತಾರೆ ಶಿವಪ್ಪ ಸುವರ್ಣ.

ಸರಕಾರದಿಂದ ಪ್ರೋತ್ಸಾಹ, ತರಬೇತಿ ಇಲ್ಲ:
ಮೂರ್ತೆದಾರಿಕೆ ಎನ್ನುವುದು ಸಾಹಸ, ಸಂಕಷ್ಟದ ಕಸುಬಾಗಿದ್ದು, ಇದರಲ್ಲಿ ತೊಡಗಿಸಿಕೊಂಡ ವ್ಯಕ್ತಿ ದಿನದ ಮೂರು ಹೊತ್ತು ತಾಳೆ ಮರಕ್ಕೆ ಹೋಗಿ ಶೇಂದಿ ಉತ್ಪಾದಿಸಬೇಕು. ಇದೊಂದು ಸಾಹಸದ ಕೆಲಸವಾದರೂ ತಾಳೆ ಮರದಿಂದ ಮೃತಪಟ್ಟು ಸತ್ತವರ ಕುಟುಂಬಕ್ಕೆ ಸರಕಾರದಿಂದ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಹೀಗಿರುವುದರಿಂದ ಮೂರ್ತೆದಾರರು ಕುಟುಂಬದ ಯಾವೊಬ್ಬ ಸದಸ್ಯನೂ ಈ ಉದ್ಯೋಗಕ್ಕೆ ಒಲವು ತೋರುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ತುಂಬೆಯಲ್ಲಿ ರಾಜ್ಯ ಸರಕಾರವೇ ಕೋಟ್ಯಂತರ ರೂ. ಖರ್ಚು ಮಾಡಿ ನೀರಾ ಘಟಕ ಆರಂಭಿಸಿತ್ತಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಪಾಳು ಬಿದ್ದಿದೆ.

ತರಬೇತಿಯೂ ಸಿಗುತ್ತಿಲ್ಲ: ಮೂರ್ತೆದಾರಿಕೆ ಕಸುಬು ಕಲಿಯಲು ಯಾವುದೇ ತರಬೇತಿ ಶಾಲೆಗಳಿಲ್ಲ. ಒಬ್ಬರಿಂದ ಒಬ್ಬರು ಕಲಿಯಬೇಕಿದೆ. ಆದರೆ, ಈವರೆಗೆ ಮೂರ್ತೆದಾರಿಕೆ ಮಾಡಿಕೊಂಡು ಬಂದ ಹಿರಿ ಜೀವಗಳು ಈಗ ಕಸುಬು ನಿಲ್ಲಿಸಿದ್ದಾರೆ. ಹೊಸ ಪೀಳಿಗೆ ಇದಕ್ಕೆ ಆಸಕ್ತಿ ತೋರಿಸುತ್ತಿಲ್ಲ. ತರಬೇತಿ ವ್ಯವಸ್ಥೆಗಳು ಇಲ್ಲದ ಕಾರಣ ಮೂರ್ತೆದಾರಿಕೆ ಇನ್ನು ಕೆಲವೇ ವರ್ಷಗಳಲ್ಲಿ ಅಳಿವಿನಂಚಿಗೆ ತೆರಳಲಿದೆ.

ಕರಾವಳಿ ಜಿಲ್ಲೆಯಲ್ಲಿ ತಾಳೆ ಮೂರ್ತೆದಾರಿಕೆ ಬಹುತೇಕ ಅಳವಿನಂಚಿನಲ್ಲಿದ್ದು, ಹೆಚ್ಚಿನವರು ಕೇರಳದ ಮೂರ್ತೆದಾರರನ್ನು ಕರೆಯಿಸಿ ತೆಂಗಿನ ಮರದ ಮೂರ್ತೆದಾರಿಕೆ ಮಾಡಿಸುತ್ತಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ಅನಾದಿಕಾಲದ ಕುಲಕಸುಬು ತಾಳೆ ಮೂರ್ತೆದಾರಿಕೆ ಉಳಿಯಬೇಕಾದರೆ ಸರಕಾರದಿಂದ ಪ್ರೋತ್ಸಾಹ ಸಿಗಬೇಕು ಮತ್ತು ತರಬೇತಿ ಕೇಂದ್ರಗಳನ್ನು ತೆರೆಯಬೇಕು ಎನ್ನುತ್ತಾರೆ ಮೂರ್ತೆದಾರರ ಮಹಾಮಂಡಲ, ದಕ್ಷಿಣ ಕನ್ನಡ ಉಪಾಧ್ಯಕ್ಷರಾದ ಶಿವಪ್ಪ ಸುವರ್ಣ

Click to comment

Leave a Reply

ಸುಳ್ಯ

 Kukke subrahmnya Temple ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಗಮನಕ್ಕೆ :  ಡಿ.8ರಿಂದ 24ರ ತನಕ ಕ್ಷೇತ್ರದಲ್ಲಿ ಪ್ರಧಾನ ಸೇವೆ ಸಹಿತ ಹಲವು ಸೇವೆಗಳು ಅಲಭ್ಯ,  ವ್ಯತ್ಯಯ – ಇಲ್ಲಿದೆ ಮಾಹಿತಿ

Ad Widget

Ad Widget

ಶ್ರೀ ಕ್ಷೇತ್ರದ  ಜಾತ್ರೋತ್ಸವದ ಹಿನ್ನಲೆ ಇಲ್ಲಿನ  ಪ್ರಧಾನ ಸೇವೆಗಳಲ್ಲಿ  ಒಂದಾದ ಸರ್ಪ ಸಂಸ್ಕಾರವು ಡಿ.8ರಿಂದ 24ರ ತನಕ ನೆರವೇರುವುದಿಲ್ಲ. ಇತರ ಸೇವೆಗಳು ಎಂದಿನಂತೆ ನೆರವೇರುತ್ತದೆ. ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವೊಂದು ಸೇವೆಗಳು ನೆರವೇರುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕು ಎಂದು ದೇವಳದ ಪ್ರಕಟಣೆ ತಿಳಿಸಿದೆ.  

Ad Widget

Ad Widget

Ad Widget

Ad Widget

ಪ್ರಾರ್ಥನೆ, ಆಶ್ಲೇಷ ಬಲಿ ಸೇವೆಯಲ್ಲಿ ವ್ಯತ್ಯಯ:

Ad Widget

Ad Widget

Ad Widget

ಲಕ್ಷದೀಪೋತ್ಸವ (ಡಿ.12), ಚೌತಿ (ಡಿ.16), ಪಂಚಮಿ (ಡಿ.17) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ (ಡಿ.18) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ.

Ad Widget

 ಲಕ್ಷದೀಪೋತ್ಸವ (ಡಿ.12), ಚೌತಿ  (ಡಿ.16), ಪಂಚಮಿ (ಡಿ.18) ಮತ್ತು ಕೊಪ್ಪರಿಗೆ ಇಳಿಯುವ ದಿನ (ಡಿ.24) ದಂದು ಮಹಾಭಿಷೇಕ ಸೇವೆ ನಡಯುವುದಿಲ್ಲ. ಡಿ.10ರಿಂದ ಡಿ.24ರ ತನಕ ಸಾಯಂಕಾಲದ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ.

Ad Widget

Ad Widget

Kukke Shri Subrahmanya Temple ದಕ್ಷಿಣ  ಭಾರತದ ಪ್ರಸಿದ್ದ ನಾಗಕ್ಷೇತ್ರದಲ್ಲಿ ನಾಳೆ (ಡಿ 9) ಮೂಲ ಮೃತಿಕಾ  ಪ್ರಸಾದ ವಿತರಣೆ – ಇಲ್ಲಿದೆ  ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಈ  ಪ್ರಸಾದದ ಮಹತ್ವ  

ಚಂಪಾಷಷ್ಠಿ ಜಾತ್ರೋತ್ಸವವು ಡಿ.10 ರಿಂದ 24ರ ತನಕ ನಡೆಯಲಿದ್ದು, ಜಾತ್ರೋತ್ಸವದ ಪ್ರಧಾನ ದಿನಗಳಾದ ಲಕ್ಷದೀಪ, ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವೊಂದು ಸೇವೆಗಳನ್ನು ನೆರವೇರಿಸಲು ಅವಕಾಶಗಳು ಇರುವುದಿಲ್ಲ. ಆದರೆ ಇತರ ದಿನಗಳಲ್ಲಿ ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ಶೇಷಸೇವೆ, ಕಾರ್ತಿಕಪೂಜೆ, ಮಹಾಪೂಜೆ, ತುಲಾಭಾರ, ನಾಗಪ್ರತಿಷ್ಠೆ ಮೊದಲಾದುವುಗಳು ಎಂದಿನಂತೆ ನೆರವೇರಲಿದೆ. ಸರ್ಪಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳು ಮಾತ್ರ ಡಿ.24ರ ತನಕ ನೆರವೇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.9 ದರುಶನದಲ್ಲಿ ವ್ಯತ್ಯಯ: ಡಿ.9ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯು ಪವಿತ್ರ ಕಾರ್ಯದ ಕಾರಣ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ದೇವರ ದರುಶನ ಹಾಗೂ ಸೇವಾದಿಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ, 2 ಗಂಟೆಯ ನಂತರ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ

Continue Reading

ಸುಳ್ಯ

Kukke Shri Subrahmanya Temple ದಕ್ಷಿಣ  ಭಾರತದ ಪ್ರಸಿದ್ದ ನಾಗಕ್ಷೇತ್ರದಲ್ಲಿ ನಾಳೆ (ಡಿ 9) ಮೂಲ ಮೃತಿಕಾ  ಪ್ರಸಾದ ವಿತರಣೆ – ಇಲ್ಲಿದೆ  ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಈ  ಪ್ರಸಾದದ ಮಹತ್ವ  

Ad Widget

Ad Widget

Kukke Shri Subrahmanya Temple ಡಿಸೆಂಬರ್ 06;  ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ   ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ವಾರಾಂತ್ಯದಲ್ಲಿ  ದರ್ಶನ ಮತ್ತು ವಿವಿಧ ಸೇವೆಗಳು ಅರ್ಧ ದಿನದ ಕಾಲ ಲಭ್ಯವಿರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.  

Ad Widget

Ad Widget

Ad Widget

Ad Widget

ದೇವಳದಲ್ಲಿ 2023-24ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಪೂರಕವಾಗಿ ಡಿ.9ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪವಿತ್ರ ಕಾರ್ಯ ಇರಲಿದೆ. ಈ ಹಿನ್ನಲೆಯಲ್ಲಿ ಆ ದಿನ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ದೇವರ ದರುಶನ ಹಾಗೂ ಸೇವಾದಿಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ. 2 ಗಂಟೆಯ ನಂತರ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ

Ad Widget

Ad Widget

Ad Widget

ಕುಕ್ಕೆ ಸುಬ್ರಮಣ್ಯದಲ್ಲಿ “ಮೂಲಮೃತಿಕಾ” ಪ್ರಸಾದಕ್ಕೆ ಹೆಚ್ಚಿನ ಮಹತ್ವವಿದೆ. ಮೂಲಸ್ಥಾನವಾದ ಕುಕ್ಕೆ ಸುಬ್ರಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಕ್ಷೇತ್ರದ ಅತ್ಯಂತ ಪವಿತ್ರ ಪ್ರಸಾದ. ಯಾವುದೇ ದೇವಾಲಯದಲ್ಲಿ ಸಹ ಈ ಮಾದರಿ ಪ್ರಸಾದ ಸಿಗುವುದಿಲ್ಲ. ವರ್ಷಕ್ಕೆ ಒಂದು ಬಾರಿ ಮಾತ್ರ ಈ ಪ್ರಸಾದ ತೆಗೆಯಲಾಗುತ್ತದೆ.

Ad Widget

ಕ್ಷೇತ್ರದ ಮೂಲಸ್ಥಾನವಾದ ಗರ್ಭಗುಡಿಯಿಂದ ಈ ಮೂಲಮೃತಿಕಾ ಪ್ರಸಾದವನ್ನು ತೆಗೆದು ಭಕ್ತರಿಗೆ ನೀಡಲಾಗುತ್ತದೆ. ಈ ಪ್ರಸಾದವು ರೋಗ ನಿರೋಧಕ ಶಕ್ತಿ ಹೊಂದಿದೆ ಎಂಬುದು ಭಕ್ತರ ನಂಬಿಕೆಯಾಗಿದೆ.  ಈ ಮೃತ್ತಿಕೆ ಪ್ರಸಾದ ಸಂತಾನಕಾರಕ, ಚರ್ಮ ರೋಗಗಳ ಪರಿಹಾರಕ್ಕೆ ದಿವ್ಯ ಔಷಧ ಎಂಬುದು ಭಕ್ತರ ನಂಬಿಕೆ. ಮೃತ್ತಿಕಾ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ, ವ್ಯಾಧಿಗಳ ನಿವಾರಣೆಗೂ ಭಕ್ತರು ಬಳಸುತ್ತಾರೆ.

Ad Widget

Ad Widget

ಸಾವಿರಾರು ಭಕ್ತರು ಮೂಲಮೃತಿಕಾ ಪ್ರಸಾದವನ್ನು ತೆಗೆದುಕೊಂಡು ಹೋಗಲು ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಶುಭ ಕಾರ್ಯಗಳ ಸಂದರ್ಭದಲ್ಲಿ, ರೋಗಗಳ ನಿವಾರಣೆಗೆ ಸಹ ಈ ಪ್ರಸಾದವನ್ನು ಬಳಕೆ ಮಾಡುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ರಾಜ್ಯದ ಸುಬ್ರಹ್ಮಣ್ಯಂ ಗ್ರಾಮದಲ್ಲಿ ಬರುತ್ತದೆ. ಪ್ರಕೃತಿಯ ಸೌಂದರ್ಯದಲ್ಲಿ ನೆಲೆಸಿರುವ ಈ ಭವ್ಯವಾದ  ದೇವಾಲಯವು ಗ್ರಾಮದ ಹೃದಯಭಾಗದಲ್ಲಿದೆ. ಪ್ರಕೃತಿ ನದಿಗಳು, ಕಾಡುಗಳು ಮತ್ತು ಪರ್ವತಗಳಿಂದ ಸುತ್ತುವರೆದಿರುವ ಈ ದೇವಾಲಯವು ತನ್ನ ಅನನ್ಯ ಸೌಂದರ್ಯವನ್ನು ಬಹಿರಂಗಪಡಿಸುತ್ತದೆ .ಪ್ರತಿನಿತ್ಯ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

Continue Reading

ಬಿಗ್ ನ್ಯೂಸ್

Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ  ಮದುವೆ ನಿರಾಕರಿಸಿದ ವಧು

Ad Widget

Ad Widget

Bride refuses Marriage in hall ಚಿತ್ರದುರ್ಗ: ನಿಗದಿಯಾಗಿದ ಮದುವೆಗಳು ಮುರಿದು ಬೀಳುವುದು ಸಹಜ . ಆದರೇ ಮದುವೆ ಮಟಂಪದಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಾಗ ಮದುವೆಗಳು ಮುರಿದು ಬೀಳುವುದು ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮಾತ್ರ. ಆದರೇ ಇಂತಹದೊಮದು ಸಿನಿಮೀಯ ಘಟನೆ ಚಿತ್ರದುರ್ಗಾದಿಂದ ವರದಿಯಾಗಿದೆ. ಈ ಘಟನೆ ನೋಡಿ ಮದುವೆ ಬಂದವರು ಹೌಹಾರಿದ್ದಾರೆ.

Ad Widget

Ad Widget

Ad Widget

Ad Widget

ಇನ್ನೇನು ವರ  ವಧುವಿನ ಕುತ್ತಿಗೆಗೆ ತಾಳಿ ಕಟ್ಟಬೇಕು ಎನ್ನುವಾಗ  ವಧು ತೆಗೆದುಕೊಂಡ  ಈ ನಿರ್ಧಾರದಿಂದ ಮದುವೆ ಮನೆಯಲ್ಲಿ ಸೇರಿದ್ದ ಜನರಿಗೆ ಎಲ್ಲರಿಗೂ ಒಂದು ರೀತಿಯ ಶಾಕ್ ನೀಡಿದಂತೆ ಆಗಿದೆ.  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (Hosadurga Taluku) ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ತಾಳಿ ಕಟ್ಟಿಸಿಕೊಳ್ಳಲು ವಧು ವಿವಾಹವಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮದುವೆ ಕ್ಯಾನ್ಸಲ್ ಆಗಿದೆ. ವರ ತಾಳಿ ಕಟ್ಟುವಾಗ ವಧು  ತಾಳಿಗೆ ಕೈ ಅಡ್ಡ ಹಿಡಿದು ತಡೆದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Ad Widget

Ad Widget

Ad Widget

ವಧುವಿಗೆ ಮದುವೆಗೆ ಇಷ್ಟವಿರಲಿಲ್ಲ .ಮನೆಯವರ ಒತ್ತಾಯಕ್ಕೆ ಮಣಿದು ಆಕೆ ವಿವಾಹಕ್ಕೆ ಸಮ್ಮತಿ ಸೂಚಿಸಿದ್ದಾಳೆ ಅದರೆ ಮುಹೂರ್ತದ ವೇಳೆ ಮನ ಬದಲಾಯಿಸಿದ ವಧು ತಾಳಿ ಕಟ್ಟುವ ವೇಳೆ ಕಯ ಅಡ್ಡ ಹಿಡಿದು ತನ್ನ ಅಸಮ್ಮತಿ ಸೂಚಿಸಿದ್ದಾಳೆ ಎನ್ನಲಾಗಿದೆ. ಕೊನೆ ಕ್ಷಣದಲ್ಲಿ ಕೈ ಕೊಟ್ಟ ವಧುವಿನ ಬಗ್ಗೆ ವರನ ಮನೆಯವರಿಗೆ ಸಿಕ್ಕಾಪಟ್ಟೆ ಕೋಪ ಬಂದಿದೆ.

Ad Widget

ಹುಡುಗಿ ಮದುವೆಗೊಪ್ಪದಿರುವದನ್ನು ಗಮನಿಸಿದ ಎರಡು  ಕಡೆಯ ಸಂಬಂಧಿಗಳು ವಧುವಿನ ಮನವೊಲಿಸಲು ಯತ್ನಿಸಿದ್ದಾರೆ. ಆದರೇ ಗಟ್ಟಿ ಮನಸ್ಸು ಮಾಡಿದ ವಧು  ಮದುವೆಯಾಗಲು ನಿರಾಕರಿಸಿದ್ದಾಳೆ.   ಹೀಗಾಗಿ  ಮದುವೆಗೆ ಆಗಮಿಸಿದ ಜನರು, ಸಂಬಂಧಿಗಳು ವಧುಗೆ ಹಿಡಿಶಾಪ ಹಾಕಿದ್ದಾರೆ. ವರನ ಕನಸು ನುಚ್ಚು ನೂರು ಮಾಡಿದಳು. ಮೊದಲೇ ತಿಳಿಸಿದ್ರೆ ಸಮಸ್ಯೆ ಎದುರಾಗ್ತಿರಲಿಲ್ಲ ಅಂತ ಹಿಡಿಶಾಪ ಹಾಕಿದ್ದಾರೆ.

Ad Widget

Ad Widget

ಮದುವೆ ನಿರಾಕರಣೆಗೆ ಈವರೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಗೆ ಯುವತಿ ಸಮ್ಮತಿಸಿದ್ದು, ಆಕೆ ತಾಳಿಕಟ್ಟುವ ವೇಳೆ ಧೈರ್ಯ ಮಾಡಿ ವಿವಾಹ ನಿರಾಕರಿಸಿದ್ದಾಳೆಂಬ ಮಾತುಗಳು ಕೇಳಿಬಂದಿವೆ. ಸದ್ಯ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

Continue Reading

Trending

error: Content is protected !!