ಕಡಬ: ಕಡಬ ತಾಲೂಕಿನ ಕೋಡಿಂಬಾಳ-ಮಡ್ಯಡ್ಕ ರಸ್ತೆಯಲ್ಲಿ ಮಂಗಳವಾರ ಸಾಯಂಕಾಲ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿ ಇದನ್ನು ಗಮನಿಸಿದ ಶಾಲಾ ಬಾಲಕಿ ಓಡಿ ತಪ್ಪಿಸಿಕೊಂಡಿರುವ ಪ್ರಕರಣ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತಲ್ಲದೆ ಬಾರಿ ಚರ್ಚೆಗೂ ಗ್ರಾಸವಾಗಿತ್ತು.
ಇದೀಗ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಅಸಲಿ ಸತ್ಯ ಬಹಿರಂಗಗೊಂಡಿದೆ.

ಕಡಬ ಪಟ್ಟಣ ಪಂಚಾಯಿತಿಯಿಂದ ವಾರ್ಡ್ ವಿಂಗಡನೆಗೆ ಸಂಬಂಧಿಸಿ ಯುವಕ. ಪಂಚಾಯಿತಿ ಸಿಬ್ಬಂದಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಪಿಎಸ್ ಮಾಡುವ ಕೆಲಸ ನಡೆಯುತ್ತಿದೆ.
ಮಂಗಳವಾರ ಕೋಡಿಂಬಾಳ ಗ್ರಾಮದ ಉಂಡಿಲ ಕ್ರಾಸ್ ಬಳಿ ಕಾರಲ್ಲಿ ಬಂದು ಪಂಚಾಯತ್ ನ ಇಬ್ಬರು ಸಿಬ್ಬಂದಿ ಜಿಪಿಎಸ್ ಮಾಡುತ್ತಿದ್ದರು.
ಈ ವೇಳೆ ರಸ್ತೆ ಬದಿ ಕಾರು ನಿಲ್ಲಿಸಿ ಜಿಪಿಎಸ್ ಮಾಡುವ ಸಲುವಾಗಿ ಕಾರಿನಿಂದ ಇಳಿದಿದ್ದು ಇದನ್ನು ಕಂಡ ವಿದ್ಯಾರ್ಥಿನಿ ಭಯದಿಂದ ಓಡಿದ್ದಳು.
ಈ ವಿಚಾರ ಸಿಬ್ಬಂದಿ ಗಮನಕ್ಕೂ ಬಂದಿತ್ತು, ಬಾಲಕಿ ಮನೆಗೆ ಹೋಗಿ ಪಾಲಕರಲ್ಲಿ ತಿಳಿಸಿದ್ದು, ಅವರು ಪೊಲೀಸರಿಗೆ ಹಾಗೂ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.
ವಿಚಾರ ಈ ರೀತಿ ತಿರುಗಿದ್ದು ತಿಳಿದ ಪಂಚಾಯತ್ ಸಿಬ್ಬಂದಿ ಸಾರ್ವಜನಿಕರು ಗೊಂದಲ ಪಡುವುದು ಬೇಡ ಎಂದು ನಡೆದ ಘಟನೆಯನ್ನು ಪೊಲೀಸರಲ್ಲಿ ಹಾಗೂ ಸಂಬಂಧಿತರಲ್ಲಿ ತಿಳಿಸಿದ್ದಾರೆ.
ಇಲ್ಲಿ ವಿದ್ಯಾರ್ಥಿನಿಯ ತಪ್ಪು ಗ್ರಹಿಕೆಯಿಂದ ಓಡಿದ್ದು ಎಂದು ಪೊಲೀಸ್ ಹಾಗೂ ಬಾಲಕಿಯನ್ನು ಯಾರು ಹಿಂಬಾಲಿಸಿಲ್ಲ ಎಂದು ಸ್ಪಷ್ಟವಾಗಿದೆ.