Ad Widget

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಜೈಲು ಸೇರಿದ್ದ, ಮಾಜಿ ಪ್ರಧಾನಿ ಶಾಸ್ತ್ರಿಯವರ ಯೋಗಕ್ಷೇಮ ನೋಡಿಕೊಂಡಿದ್ದ ಅಪ್ಪಟ್ಟ ಗಾಂಧಿವಾದಿ ಬೆಳ್ತಂಗಡಿಯ ಬೋಜರಾಜ ಹೆಗ್ಡೆ ನಿಧನ | ಸ್ವಾತಂತ್ರ್ಯ ಹೋರಾಟಗಾರರಿಗೆ ಸರಕಾರ ನೀಡುವ ಜಮೀನು ನಿರಾಕರಿಸಿ ಅದರ್ಶ ಮೆರೆದಿದ್ದರು

boja
Ad Widget

Ad Widget

Ad Widget

ಬೆಳ್ತಂಗಡಿ: ಸ್ವಾತಂತ್ರ್ಯ ಹೋರಾಟಗಾರರೂ, ಗಾಂಧಿ ತತ್ವದ ಪರಿಪಾಲಕರೂ ಆದ ಪಡಂಗಡಿ ಭೋಜರಾಜ  ಹೆಗ್ಡೆಯವರು ತಮ್ಮ 99ನೇ ವಯಸ್ಸಿನಲ್ಲಿ ಬೆಳ್ತಂಗಡಿಯ ಪಡಂಗಡಿ ನಿವಾಸದಲ್ಲಿ  ನಿಧನರಾಗಿದ್ದಾರೆ. ಮೃತರು ಪುತ್ರ ವಿನಯಪ್ರಸಾದ್ ಪುತ್ರಿ ವೀಣಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸೆರೆಮನೆ ಸೇರಿದ್ದ ಹೆಗ್ಡೆಯವರು, ತುರ್ತು ಪರಿಸ್ಥಿತಿಯ ವಿರುದ್ಧವೂ ಹೋರಾಡಿ ಸೆರೆ ವಾಸ ಅನುಭವಿಸಿದ್ದರು. ಸರಕಾರದಿಂದ ಅವರಿಗೆ ಭೂಮಿ ಮಂಜೂರಾಗಿದ್ದಾಗ ತನ್ನ ದೇಶಕ್ಕಾಗಿ ತಾನು ಮಾಡಿದ ಕೆಲಸಕ್ಕೆ ಕೂಲಿ ತೆಗೆದುಕೊಳ್ಳುವುದಿಲ್ಲವೆಂದು ನಿರಾಕರಿಸಿದ್ದರು.

Ad Widget

Ad Widget

Ad Widget

Ad Widget

Ad Widget

ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಮಂಗಳೂರಿಗೆ ಬಂದಿದ್ದಾಗ ಅವರ ಯೋಗಕ್ಷೇಮವನ್ನು‌ ನಿರ್ವಹಿಸಿದವರೂ ಹೆಗ್ಡೆಯವರೇ ಆಗಿದ್ದರು.ಜೀವನ ಪೂರ್ತಿ ತತ್ವ ನಿಷ್ಠರಾಗಿ ಬಾಳಿದ್ದ ಹೆಗ್ಡೆಯವರು ತನ್ನ ಕೊನೆಯ ದಿನಗಳಲ್ಲಿ ಅಲ್ಪ ಕಾಲ ಅಸೌಖ್ಯದಿಂದಿದ್ದರು.

ದಕ್ಷಿಣ ಕನ್ನಡದಲ್ಲಿ  ಪ್ರಾರಂಭವಾದ ಗಾಂಧಿ ವಿಚಾರ ವೇದಿಕೆ ಇವರನ್ನು ಮಾರ್ಗದರ್ಶಿ ಎಂಬಂತೆ ಗೌರವಿಸಿತು.  ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿಯು ಸಕಲ ಗೌರವಾದರಗಳೊಂದಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿತು.

Ad Widget

Ad Widget

Ad Widget

Ad Widget
Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: