Connect with us

ಬಿಗ್ ನ್ಯೂಸ್

ಮಾರುಕಟ್ಟೆಯಲ್ಲಿ ಕಪ್ಪು ಬಂಗಾರ ಕರಿಮೆಣಸು ಬೆಲೆಯದ್ದೆ ಕಲರವ –ತಿಂಗಳಲ್ಲಿ ರೂ 100 ಜಿಗಿತ , ಹಲವು ವರ್ಷಗಳ ಬಳಿಕ ರೂ 500 ತಲುಪಿದ ಧಾರಣೆ | ಮುಂದೇನಾದಿತು?

Ad Widget

Ad Widget

Ad Widget

Ad Widget Ad Widget

ಕಪ್ಪು ಬಂಗಾರ ಎಂದೇ ಕರೆಯಲ್ಪಡುವ ವಾಣಿಜ್ಯ ಬೆಳೆ ಕರಿಮೆಣಸು ಬೆಳೆಗಾರರ ಮುಖದಲ್ಲಿ ಹಲವು ವರ್ಷಗಳ ಬಳಿಕ ಮತ್ತೆ ಕಿರುನಗೆ ಕಾಣಿಸಿದೆ. ಒಂದೇ ತಿಂಗಳಲ್ಲಿ ಕಾಳು ಮೆಣಸಿನ ಬೆಲೆಯಲ್ಲಿ ರೂ 100 ಜಂಪ್‌ ಆಗಿದೆ. ಬಹುತೇಕ 6-7 ವರ್ಷಗಳ ಬಳಿಕ  ಈ ವಾರದ ಆರಂಭದಲ್ಲಿ ಅದರ ಧಾರಣೆ ರೂ.  500 ರೂಪಾಯಿ ತಲುಪಿದೆ. ಇದು ಬೆಳೆ ಹಾಗೂ ಬೆಲೆ ನಷ್ಟದಿಂದ ಕಂಗಾಲಾಗಿರುವ ಕೃಷಿಕರಿಗೆ ಸ್ವಲ್ಪಮಟ್ಟಿನ ನೆಮ್ಮದಿ ತರಿಸಿದೆ.

Ad Widget

Ad Widget

Ad Widget

Ad Widget

Ad Widget

ಏಳೆಂಟು ವರ್ಷ ಹಿಂದೆ ಕರಿಮೆಣಸು ಧಾರಣೆ 750 ರೂ.ವರೆಗೂ ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಬರೆದಿತ್ತು. ಅಂದು ಐದಾರು ತಿಂಗಳ ಕಾಲ ಈ  ಧಾರಣೆ ಇದ್ದುದರಿಂದ ಹೆಚ್ಚಿನ ರೈತರು ಈ ಬೆಳೆಗೆ ಅನುರಕ್ತರಾಗಿದ್ದರು. ಹಾಗಾಗಿ ಇದನ್ನು ಬೆಳೆಯುವ ಕೃಷಿಕನ ಸಂಖ್ಯೆ ಹಾಗೂ ಪ್ರದೇಶವೂ ಹಿಗ್ಗಿತ್ತು. ಅದಾದ ಬಳಿಕ ಆದರ ಧಾರಣೆ ಹಠಾತ್‌ ಕುಸಿದು 250 ರೂ.ಗೆ ಇಳಿದಿತ್ತು. ಇದು ಬೆಳೆಗಾರರನ್ನು ಕಂಗಾಲು ಮಾಡಿತ್ತು.

Ad Widget

Ad Widget

ಕಳೆದರೆಡು ವರ್ಷಗಳಿಂದ  380 ರೂ.ನಿಂದ 390 ರೂ. ಆಸುಪಾಸಿನಲ್ಲೇ  ಸ್ಥಿರತೆ ಕಾಯ್ದುಕೊಂಡಿದ್ದ ಬೆಲೆ ಈ ಸೆಪ್ಟಂಬರ್‌ ತಿಂಗಳಿನಿಂದ ಏರುಗತಿಯನ್ನು ಪಡೆಯಿತು.ಕರಿಮೆಣಸು ಧಾರಣೆ ಕಳೆದೊಂದು ತಿಂಗಳಿನಿಂದ ದೊಡ್ಡ ಜಂಪ್‌  ಕಂಡಿದೆ. ಸೆಪ್ಟೆಂಬರ್‌ ಅಂತ್ಯದಲ್ಲಿ 400 ರೂ. ಗಡಿ ದಾಟಿದ ಧಾರಣೆ ಎರಡು ವಾರದ ಹಿಂದೆ  ಖಾಸಗಿ ಮಾರುಕಟ್ಟೆಯಲ್ಲಿ 430ರಿಂದ 435 ರೂಗೆ ತಲುಪಿತ್ತು.  ಕಳೆದ ಎರಡು ವಾರದಲ್ಲಿ ಮತ್ತೆ 65 ರೂ ಜಿಗಿತ ಕಂಡಿದೆ.

Ad Widget

Ad Widget

ಕರಿಮೆಣಸಿನ ಅತೀ ದೊಡ್ಡ ಉತ್ಪಾದಕ ದೇಶವಾದ  ವಿಯೆಟ್ನಾಂ ಇತ್ಯಾದಿ ದೇಶಗಳಿಂದ ಭಾರತಕ್ಕೆ ಕರಿಮೆಣಸು ಕಳ್ಳಮಾರ್ಗದಲ್ಲಿ  ಬರುತಿತ್ತು. ಅಲ್ಲಿ ಈಗಲೂ ಕಾಳು ಮೆಣಸು ಧಾರಣೆ ಭಾರತದ ರೂಪಾಯಿಯಲ್ಲಿ ರೂ.200 ರಿಂದ 220ರ ಅಸುಪಾಸಿನಲ್ಲಿಯೇ ಇದೆ. ಇದರ ಗುಣಮಟ್ಟ ಕಳಪೆಯಾಗಿದ್ದರೂ ದೇಸಿ ವ್ಯಾಪರಸ್ಥರು ಕಾರ್ಪೋರೇಟ್‌ ಕಂಪೆನಿಗಳು ಈ ಕರಿಮೆಣಸನ್ನೆ ಖರೀದಿಸುತಿದ್ದವು. ವಿಯೆಟ್ನಾಂನಿಂದ  ಕರಿಮೆಣಸು ಅಮದಿಗೆ  ಭಾರತದಲ್ಲಿ ಶುಂಕ ವಿಧಿಸಲಾಗುತ್ತಿದೆ. ಆದರೆ,ಆ ಕರಿಮೆಣಸನ್ನು ಶ್ರೀಲಂಕಾಕ್ಕೆ ತಂದು ಭಾರತ ಹಾಗೂ ಶ್ರೀಲಂಕಾದ ಅಮದು ನೀತಿಯನ್ನು ದುರ್ಬಳಕೆ ಮಾಡಿಕೊಂಡು ಭಾರತಕ್ಕೆ ತರಲಾಗುತಿತ್ತು.

Ad Widget

Ad Widget

ಇದೀಗ ಈ ಅಕ್ರಮ ಅಮದಿಗೆ ಕಡಿವಾಣ ಹಾಕಲಾಗಿದೆ. ಹಾಗಾಗಿಯೇ ಧಾರಣೆ ಅಧಿಕವಾಗಿದೆ ಎಂಬ ಮಾತುಗಳು ಮಾರುಕಟ್ಟೆ ವಲಯದಲ್ಲಿ ಕೇಳಿ ಬರುತ್ತಿದೆ. ಈ ಏರಿಕೆ ಇನ್ನೆಷ್ಟು ದಿನ ಇರಲಿದೆ ಎಂಬ ಅತಂಕವೂ ಕೃಷಿಕರನ್ನು ಕಾಡುತ್ತಿದೆ. ಹಾಗಾಗಿ ಆತನೂ ಬೆಲೆಯೆರಿಕೆಯನ್ನು ಸೂಕ್ಷ್ಮವಾಗಿ ಗಮನಿಸುತಿದ್ದಾನೆ. ದಿಡೀರ್‌ ಆಗಿ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ತರುತ್ತಿಲ್ಲ . ಅಲ್ಲದೇ ಈ ಬಾರಿಯ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿ ಉತ್ಪನ್ನದ ಕೊರತೆಯೂ ಇದೆ

ಸದ್ಯ ಮಾರುಕಟ್ಟೆಗೆ ಕೃಷಿಕರಿಂದ ಕರಿಮೆಣಸು ಅವಕವಾಗುತ್ತಿಲ್ಲವಾದುದರಿಂದ ಬೆಲೆಯೆರಿಕೆ ಇನ್ನೊಂದಷ್ಟು ಸಮಯ ಮುಂದುವರಿಯಲಿದೆ. ನವೆಂಬರ್‌ ಅಂತ್ಯಕ್ಕೆ ಧಾರಣೆ ರೂ 600 ಅನ್ನು ತಲುಪುವ ಸಾಧ್ಯತೆಯೂ ಅಲ್ಲಗೆಳೆಯುವಂತಿಲ್ಲ ಎಂದು ಮಾರುಕಟ್ಟೆ ತಜ್ನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ

Click to comment

Leave a Reply

ಸಾಮಾಜಿಕ ಮಾಧ್ಯಮ

Hasana sex tape : ಚುನಾವಣೆ ಹೊಸ್ತಿಲಲ್ಲಿ  ಹಾಸನ ಅಭ್ಯರ್ಥಿಯ ರಾಸಲೀಲೆಯ ಪೆನ್‌ ಡ್ರೈವ್‌  ಸೌಂಡ್‌ ! ಅಸಲಿಯ / ನಕಲಿಯ ತೀವ್ರ ಚರ್ಚೆ

Ad Widget

Ad Widget

Ad Widget

Ad Widget Ad Widget

ಹಾಸನ ಲೋಕಸಭಾ ಕ್ಷೇತ್ರದ  ರಾಜಕೀಯ ಪಕ್ಷವೊಂದರ ಅಭ್ಯರ್ಥಿಯೊರು  ಭಾಗಿಯಾಗಿದ್ದಾರೆ  ಎನ್ನಲಾದ ನೂರಾರು  ರಾಸಲೀಲೆಯ ಫೋಟೋ ಮತ್ತು ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ವೊಂದು ಇದೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಚುನಾವಣೆಯಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಕೆಲ ಅಶ್ಲೀಲ ವಿಡಿಯೋ ಹಾಗೂ ಫೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವು ಆ ಪೆನ್‌ ಡ್ರೈವ್‌ ಒಳಗಿನಿಂದ ಸೋರಿಕೆ ಮಾಡಲಾದ ಕ್ಲಿಪಿಂಗ್‌ ಗಳು ಎಂದು ಹೇಳಲಾಗುತ್ತಿದೆ.

Ad Widget

Ad Widget

Ad Widget

Ad Widget

Ad Widget

ಚುನಾವಣೆ ಹೊಸ್ತಿಲಲ್ಲಿ , 3 ದಿನಗಳ ಹಿಂದೆಯಷ್ಟೆ ಈ ಪೆನ್‌ ಡ್ರೈವ್‌ ಚರ್ಚೆ ಮುನ್ನಲೆಗೆ ಬಂದಿದೆ. ಈ ವಿಡಿಯೋ ತುಣುಕುಗಳಲ್ಲಿ ಕೆಲವು ಸಂಘಟನೆಗಳಿಗೆ ಸೇರಿದ ಮಹಿಳೆಯರು, ಅಭ್ಯರ್ಥಿಯ ಪಕ್ಷದ ಮುಖಂಡರ ಪತ್ನಿಯರು ಇದ್ದಾರೆ. ಮನೆ ಕೆಲಸದ ಮಹಿಳೆಯರೂ ಇದ್ದಾರೆ ಎಂಬ ಚರ್ಚೆ ಬಿರುಸಿನಿಂದ ನಡೆದಿದೆ. ತನ್ನಲ್ಲಿ ಕೆಲಸ ಕೇಳಿ ಬಂದ ಯುವತಿಯರು ಹಾಗೂ ಮಹಿಳೆಯರನ್ನು ಆ ವ್ಯಕ್ತಿ ವಿಕೃತವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Ad Widget

Ad Widget

ಆದರೇ ರಾಜಕಾರಣಿಯ ಬೆಂಬಲಿಗರು ಈ ಆರೋಪಗಳನ್ನು ನಿರಾಕರಿಸಿದ್ದು.  ಅತ್ಯಾಧುನಿಕ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಈ ವಿಡಿಯೋಗಳನ್ನು  ಎಂದು  ಅಭ್ಯರ್ಥಿಯ ಬೆಂಬಲಿಗರು   ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.

Ad Widget

Ad Widget

ಚುನಾವಣೆಯ ಪ್ರಚಾರದ ಭರಾಟೆ ಆರಂಭವಾಗಿ ಇಷ್ಟು ದಿನಗಳ ಬಳಿಕ ಇದೀಗ ಕೊನೆಯ ಹಂತದಲ್ಲಿ ಈ ರಾಸಲೀಲೆಯ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಬಗ್ಗೆ ಚರ್ಚೆ ನಡೆಯುತ್ತಿರುವುದು ಕುತೂಹಲ ಮೂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನಕ್ಕೆ  ಶರಣಾಗಿದ್ದಾರೆ.

Ad Widget

Ad Widget

ಈ ಪೆನ್‌ಡ್ರೈನಲ್ಲಿ ಸುಮಾರು ಸಾವಿರಾರು ವಿಡಿಯೋಗಳಿವೆ ಎನ್ನಲಾಗುತ್ತಿದೆ. ಇದರಲ್ಲಿರುವ ಎನ್ನಲಾದ ಅಭ್ಯರ್ಥಿ ತನ್ನ ಬಳಿ ಸಹಾಯ ಕೇಳಿಕೊಂಡು ಬರುವ ಮಹಿಳೆಯರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದ. ಆ ಲೈಂಗಿಕ ಚಟುವಟಿಕೆಯನ್ನು ತಾನೇವಿಡಿಯೋ ಮಾಡಿಟ್ಟುಕೊಳ್ಳುತ್ತಿದ್ದ. ಈಗಾಗಲೇ ಕ್ಷೇತ್ರದ ಹಲವರು ಹಲವರು ಈ ಈ ವಿಡಿಯೋಗಳನ್ನು ನೋಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ತುಣುಕುಗಳು ಹರಿದಾಡುತ್ತಿವೆ.

 ಈ ಹಿಂದೆ ಹಾಸನದ ವಕೀಲ ದೇವರಾಜೇಗೌಡ ಎಂಬುವವರು ಅಭ್ಯರ್ಥಿಯ ಹಲವು ಅಶ್ಲೀಲ ವಿಡಿ ಯೋಗಳು ತಮ್ಮ ಬಳಿ ಇವೆ ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಈ ವಿಡಿಯೋಗಳನ್ನು ತಾವು ಬಹಿರಂಗ ಗೊಳಿಸಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

Continue Reading

ಬಿಗ್ ನ್ಯೂಸ್

NOTAForSoujanyaCase : ಸೌಜನ್ಯ ಪ್ರಕರಣ : ಟ್ವಿಟರ್ ಟ್ರೆಂಡಿಂಗಲ್ಲಿ 3ನೇ ಸ್ಥಾನ ಪಡೆದ ನೋಟಾ ಅಭಿಯಾನ

Ad Widget

Ad Widget

Ad Widget

Ad Widget Ad Widget

ಮಂಗಳೂರು: 2012ರ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಇದೀಗ ಬಾರಿ ಸದ್ದು ಮಾಡುತ್ತಿದೆ.

Ad Widget

Ad Widget

Ad Widget

Ad Widget

Ad Widget

ಸೌಜನ್ಯ ಪರ ಹೋರಾಟಗಾರರು ಎ.26ರಂದು ಜರಗುವ ಲೋಕಸಭಾ ಚುನಾವಣೆಯಲ್ಲಿ ನೋಟಾ ಮತದಾನದ ಅಭಿಯಾನ ಕೈಗೊಂಡಿದ್ದಾರೆ.

Ad Widget

Ad Widget

ಟ್ವಿಟರ್ (ಎಕ್ಸ್) ನಲ್ಲಿ #NOTAForSoujanyaCase ಎಂಬ ಟ್ರೆಂಡಿಂಗ್ 3ನೇ ಸ್ಥಾನ ಪಡೆದಿದೆ.

Ad Widget

Ad Widget

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ನೋಟಾ ಅಭಿಯಾನದ ಪರ ಪ್ರಚಾರ ಕಾರ್ಯವನ್ನು ಹೋರಾಟಗಾರರು ನಡೆಸುತ್ತಿದ್ದಾರೆ.

Ad Widget

Ad Widget

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನೋಟಾ ಪರಿಣಾಮ ಯಾವಾ ರೀತಿ ಪಲಿತಾಂಶದ ಮೇಲೆ ಪರಿಣಾಮ ಬೀರಬಹುದೆಂಬ ಅಂಕಿಅಂಶ ಇನ್ನೂ ಕೂಡ ರಾಜಕೀಯ ಪಂಡಿತರಿಗೆ ಅಂದಾಜಿಸಲು ಸಾಧ್ಯವಾಗಿಲ್ಲ.

Continue Reading

ಬಿಗ್ ನ್ಯೂಸ್

ಪದ್ಮರಾಜ್ ಆರ್ ಪೂಜಾರಿ ಬಿಲ್ಲವನಲ್ಲ – ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ – ಜಿಲ್ಲಾ ಕಾಂಗ್ರೆಸ್ ನಿಂದ ಪೊಲೀಸ್ ಕಮೀಷನರ್ ಗೆ ದೂರು

Ad Widget

Ad Widget

Ad Widget

Ad Widget Ad Widget

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಯವರ ಜಾತಿಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸುತ್ತಿದ್ದು ಇದರ ವಿರುದ್ದ , ಜಿಲ್ಲಾ ಕಾಂಗ್ರೆಸ್ ಮಂಗಳೂರು ಪೊಲೀಸ್ ಕಮೀಷನರ್ ಗೆ ದೂರು ನೀಡಿದೆ.

Ad Widget

Ad Widget

Ad Widget

Ad Widget

Ad Widget

ಗಣೇಶ್ ಶೆಟ್ಟಿ ಎಂಬವರು ಯುವನಾಯಕ ಬ್ರಿಜೇಶ್ ಚೌಟ ಫೇಸ್ ಬುಕ್ ಪೇಜಿನಲ್ಲಿ ಹಾಗು ಡಾಕ್ಟರ್ಸ್ ಲೀವ್ ಸ್ಟೇಸ್ಟಸ್ ಗ್ರೂಫಿನಲ್ಲಿ ಸಂತೋಷ್ ಕುಮಾರ್ ಎಂಬಾತ ಅಪಪ್ರಚಾರ ನಡೆಸಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ.

Ad Widget

Ad Widget

ಪದ್ಮರಾಜ್ ಆರ್ ಪೂಜಾರಿಯವರು ಬಿಲ್ಲವ ಸಮುದಾಯಕ್ಕೆ ಸೇರಿದವರಲ್ಲ. ಅವರು ಹಿಂದೂ ಯುವಕನ ಕೊಲೆ ಕೇಸಿನಲ್ಲಿ ಕೊಲೆ ಆರೋಪಿ ಪಿ ಎಫ್ ಐ ಕಾರ್ಯಕರ್ತನ ಪರ ವಕಾಲತ್ತು ವಹಿಸಿದ್ದಾರೆ ಇತ್ಯಾದಿ ಸುಳ್ಳು ಸುದ್ದಿಗಳನ್ನು ಒಳಗೊಂಡ ಪೋಸ್ಟ್ ವೊಂದನ್ನು ವಿರೋದಿಗಳು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಹಂಚುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

Ad Widget

Ad Widget

ಈ ಹಿಂದೆ ಜನಾರ್ಧನ ಪೂಜಾರಿಯನ್ನು ಅನುಸರಿಸಿದ ಅಪಪ್ರಚಾರದ ತಂತ್ರವನ್ನೆ ಅವರ ಶಿಷ್ಯ ಪದ್ಮರಾಜ್ ವಿರುದ್ದವು ಅನುಸರಿಸುತ್ತಿದ್ದು, ಮತದಾರರು ಇದನ್ನು ಸೂಕ್ಷ್ಮವಾಗಿ ಗಮನಿಸಿ ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡಬೇಕೆಂದು ಅದು ವಿನಂತಿಸಿದೆ.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading