ಕಳೆದ 15 ತಿಂಗಳು ಕನ್ನಡ ಚಿತ್ರ ರಂಗದ ಪಾಲಿಗೆ ಅತ್ಯಂತ ನೋವಿನ ಸಮಯ. ಒಂದು ಕಡೆ ಕೊರೊನಾ ಹಿನ್ನಲೆ ಸಿನಿಮಾ ಚಿತ್ರೀಕರಣ ಹಾಗೂ ಪ್ರದರ್ಶನಗಳು ಇಲ್ಲದೇ, ಸಿನಿಮಾ ಚಟುವಟಿಕೆಗಳು ನಿಸ್ತೇಜಗೊಂಡಿದ್ದವು. ಇನ್ನೊಂದೆಡೆ ಪ್ರತಿಭಾನ್ವಿತ ಯುವ ನಟರ ಸಾಲು ಸಾಲು ದುರಂತ ಸಾವು.
ಚಿರು ಸರ್ಜಾ ಸಾವು ಕರೊನಾ ಸಂದರ್ಭ ಸ್ಯಾಂಡಲ್ವುಡ್ಗೆ ದೊಡ್ಡ ಆಘಾತವಾಗಿತ್ತು. ಅದರ ನೋವು ಮಾಸುವ ಮುನ್ನವೇ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅಪಘಾತದಿಂದ ಸಾವನ್ನಪ್ಪಿದರು. ಆ ಸಾವಿನ ನೋವು ಹಾಗೆಯೇ ಇರುವಾಗಲೇ ಸ್ಯಾಂಡಲ್ವುಡ್ ಮತ್ತೊಮ್ಮೆ ಪ್ರತಿಭಾನ್ವಿತ ಸ್ಟಾರ್ ನಟ, ಪುನೀತ್ ರಾಜ್ಕುಮಾರ್ ಅವರು ಇಂದು ಹೃದಯಾಘಾತದಿಂದ ಅಗಲಿದ್ದಾರೆ.
ಪುನೀತ್ ರಾಜ್ ಕುಮಾರ್ 2020ರ ಧರ್ಮಸ್ಥಳದ ಭಜನಾ ಕಮ್ಮಟದಲ್ಲಿ ರಾಯರ ಭಜನೆ ಹಾಡಿರುವ ದೃಶ್ಯ
ಅಗಲಿದ ಮೂರು ನಟರು ಹುಟ್ಟಿದ್ದು 17ನೇ ತಾರೀಖು:
ಇನ್ನೊಂದು ಪ್ರಮುಖ ವಿಚಾರವೆಂದರೆ ಮೂವರು ನಟರು ಹುಟ್ಟಿದ್ದು ಒಂದೇ ತಾರೀಖು. ಅಂದರೆ ಸ್ಯಾಂಡಲ್ವುಡ್ಗೆ 17ನೇ ತಾರೀಖು ಶಾಪವಾಗಿದ್ಯಾ ಎಂಬ ಪ್ರಶ್ನೆ ಮೂಡುತ್ತಿದೆ.

ಕಳೆದ ವರ್ಷ ನಿಧನರಾದ ನಟ ಚಿರಂಜೀವಿ ಸರ್ಜಾ, 17 ಅಕ್ಟೋಬರ್ 1984 ರಂದು ಹುಟ್ಟಿದ್ದಾರೆ.ತಡರಾತ್ರಿ ಔಷಧ ತರಲು ಹೋಗುತ್ತಿದ್ದಾಗ ನಡೆದ ಅಪಘಾತದಲ್ಲಿ ಮೃತಪಟ್ಟ ಪ್ರತಿಭಾನಿತ್ವ ನಟ ಸಂಚಾರಿ ವಿಜಯ್ ಹುಟ್ಟಿದ್ದು ಕೂಡ 17 ಜುಲೈ 1983 ರಂದು.

ಹೃದಯಘಾತದಿಂದ ನಿನ್ನೆ ಅಗಲಿದ ವರನಟ ಡಾ. ರಾಜ್ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್ ಕೂಡ 17 ಮಾರ್ಚ್ 1975 ರಂದು ಹುಟ್ಟಿದ್ದಾರೆ. ಒಂದು ರೀತಿಯಲ್ಲಿ ಇದು ಕಾಕತಾಳೀಯವೋ ಅಥವಾ 17ನೇ ತಾರೀಖು ಸ್ಯಾಂಡಲ್ವುಡ್ಗೆ ಶಾಪವೋ ಎಂಬ ಪ್ರಶ್ನೆ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಮೂಡಿದೆ.
