ಪುತ್ತೂರು, ಅ.30: ಕಳೆದ 15 ವರ್ಷಗಳಿಂದ ಪುತ್ತೂರಿನ ಜನರ ಮನಗೆದ್ದಿರುವ ಪ್ರತಿಷ್ಟಿತ ಮೊಬೈಲ್ ಮಳಿಗೆ ಸೆಲ್ಝೋನ್ನಲ್ಲಿ ದೀಪಾವಳಿ ಪ್ರಯುಕ್ತ ಬಿಗ್ ಸೇಲ್ ‘ಸೆಲ್ಝೋನ್ ಫೆಸ್ಟೀವ್ ಧಮಕಾ’ ಅ.30 ರಂದು ಉದ್ಘಾಟನೆಗೊಂಡಿತು.ಮೊಬೈಲ್ ಜತೆಗೆ TVS ಜುಪಿಟರ್ ಗೆಲ್ಲುವ ಅವಕಾಶ ಈ ದೀಪಾವಳಿ ಧಮಾಕದ ವಿಶೇಷ.
ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳ ಸುಬ್ರಹ್ಮಣ್ಯ ನಟ್ಟೋಜ ಫೆಸ್ಟೀವ್ ಧಮಕಾವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು.
ಸೆಲ್ಝೋನ್ ಮೊಬೈಲ್ ಮಳಿಗೆ ಪುತ್ತೂರಿನ ಗ್ರಾಹಕರ ಅತ್ಯಂತ ಮೆಚ್ಚಿನ ಮೊಬೈಲ್ ಖರೀದಿ ತಾಣ . ಇದು ಪುತ್ತೂರಿನಲ್ಲಿ ಮೊಬೈಲ್ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಈ ಕ್ಷೇತ್ರದಲ್ಲಿ ಪುತ್ತೂರಿನಲ್ಲಿ ಅನೇಕ ಸಂಸ್ಥೆಗಳು ಬಂದರೂ ಸೆಲ್ ಜೋನ್ ಮಾತ್ರ ಗುಣಮಟ್ಟದ ಉತ್ತಮ ಸೇವೆಯನ್ನು ನೀಡುತ್ತಾ ಜನಮನ ಗೆದ್ದಿದೆ ಎಂದು ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದರು.
ಈ ಸ್ಪರ್ಧಾತ್ಮಕ ಯುಗದಲ್ಲಿ ಮೊಬೈಲ್ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಭಾರತೀಯರ ದೈನಂದಿನ ಚಟುವಟಿಕೆಯಲ್ಲಿ ಮೊಬೈಲ್ ಮಹತ್ತರ ಬದಲಾವಣೆಯನ್ನು ತಂದಿದೆ.
ಮೊಬೈಲ್ ಬಳಕೆಯಲ್ಲಿ ವಿಶ್ವದಲ್ಲಿ ಭಾರಯ ದ್ವಿತೀಯ ಸ್ಥಾನ ಪಡೆದಿದೆ. ಅದು ಸಾಧ್ಯವಾಗಿದ್ದು ಈ ಸಂಸ್ಥೆಯ ಮಾಲಕರಂತಹಾ ಸಾಹಸಿಗರ ಪ್ರಯತ್ನದಿಂದ. ಇವರ ನಿಷ್ಕಳಂಕ ಸೇವೆಯಿಂದ ಸಂಸ್ಥೆಯೂವ ಪುತ್ತೂರಿನಲ್ಲಿ ಮೇಲ್ಪಂಕ್ತಿ ಪಡೆದಿದೆ. ಮೊಬೈಲ್ ಸೇವೆಯಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಿ ಪುತ್ತೂರಿನಲ್ಲಿ ಮೆಗಾ ಶೋರೂಂ ಪ್ರಾರಂಭಿಸುವಂತಾಗಲಿ. ಮೊಬೈಲ್ ವಿತರಣೆಯಲ್ಲಿ ಕರ್ನಾಟಕದಲ್ಲಿಯೇ ಪ್ರಥಮ ಸ್ಥಾನ ಪಡೆಯಲಿ ಎಂದು ಅವರುಬ ಆಶಿಸಿದರು.

ಇದೇ ಸಂದರ್ಭ ಕೋಟೆಕಲ್ ಆರ್ಯುವೇದಿಕ್ನ ಡಾ.ಪ್ರದೀಪ್ ಕುಮಾರ್, ಸ್ಯಾಮ್ಸಾಂಗ್ನ ವಿತರಕ ಪ್ರಶಾಂತ್ ಶೆಣೈ, ಪ್ರಾರ್ಥನಾ ಸ್ವೀಟ್ಸ್ನ ಭಾಸ್ಕರ್ ರೈ, ಸಂಜೀವ ಶೆಟ್ಟಿಯ ಜವುಳಿ ಮಳಿಗೆಯ ಕೀರ್ತನ್ ಶೆಟ್ಟಿ, ಜಯಪ್ರಕಾಶ್ ಅಮೈ, ಜಗದೀಶ್ ಅಮೈ, ಹೇಮಂತ್ ಹಾಗೂ ಸುಶಾಂತ್ ಮೊದಲಾದವರು ಉಪಸ್ಥಿತರಿದ್ದರು. ಮಾಲಕ ಪ್ರವೀಣ್ ಅಮೈ ಸ್ವಾಗತಿಸಿ, ವಂದಿಸಿದರು.

ಏನಿದು ಫೆಸ್ಟಿವ್ ಧಮಾಕ!!?
ಈ ಬಾರಿಯ ದೀಪಾವಳಿ ಹಬ್ಬದ ಅಂಗವಾಗಿ ಸೆಲ್ ಝೊನ್ ಅದ್ದೂರಿ, ಅತ್ಯದ್ಭುತ ಕೊಡುಗೆಗಳನ್ನು ನೀಡುತ್ತಿದೆ. ಗ್ರಾಹಕರು ತನ್ನ ನೆಚ್ಚಿನ ಮೊಬೈಲ್ ಖರೀದಿಸಲು ಅಫರ್ ಹಾಗೂ ಬಹುಮಾನಗಳ ಸುರಿಮಳೆ ಹರಿಸುತ್ತಿದೆ. ಇಲ್ಲಿ ಪ್ರತಿ ಐದು ಸಾವಿರದ ಖರೀದಿಗೆ ಗಿಫ್ಟ್ಕೂಪನ್ ನೀಡಲಾಗುತ್ತಿದ್ದು ವಿಜೇತರಿಗೆ ಬಂಪರ್ ಬಹುಮಾನವಾಗಿ ಟಿವಿಎಸ್ ಜ್ಯುಪಿಟರ್ ನೀಡಲಾಗುವುದು.

ಮೊಬೈಲ್ ಖರೀದಿಗೆ ಸುಲಭ ಸಾಲ ಸೌಲಭ್ಯ, ವಿಶೇಷ ಇಎಂಐ ಸೌಲಭ್ಯ, ಶೂನ್ಯ ಬಡ್ಡಿದರ, ಶೂನ್ಯ ಡೌನ್ ಪೇಮೆಂಟ್, ವಿಶ್ವದರ್ಜೆಯ 5g ಸ್ಮಾರ್ಟ್ಫೋನ್ಗಳಿಗೆ ಅಪ್ಗ್ರೇಡ್ ಆಗಿ ಕ್ಯಾಶ್ಬ್ಯಾಕ್, ನಿಮ್ಮ ಹಳೆಯ ಮೊಬೈಲ್ ಫೋನ್ನ್ನು ಅತ್ಯಾಧುನಿಕ 5g ಸ್ಮಾರ್ಟ್ಫೋನ್ನೊಂದಿಗೆ ಎಕ್ಸ್ಚೇಂಜ್ ಮಾಡುವ ಅಪೂರ್ವ ಅವಕಾಶ, ಸ್ಮಾಟ್ ವಾಚ್ಗಳು, ನೆಕ್ಬ್ಯಾಂಡ್, ಪವರ್ಬ್ಯಾಂಕ್ ಹಾಗೂ ಇಯರ್ಬಡ್ಸ್ಗಳ ಮೇಲೆ ಶೇ.50 ರಷ್ಟ ದರ ಕಡಿತ ದೊರೆಯಲಿದೆ.

ಮೊಬೈಲ್ ಆಕ್ಸೆಸರೀಸ್ಗಳಿಗೂ ವಿಶೇಷ ದರ ಕಡಿತ, ಪ್ರತಿ ಖರೀದಿಗೂ ಉಡುಗೊರೆಗಳನ್ನು ಪಡೆಯುವ ವಿಶೇಷ ಅವಕಾಶವನ್ನು ನೀಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
