ಅವಿಭಜಿತ ದ.ಕ ಜಿಲ್ಲೆಯನ್ನು ಒಳಗೊಂಡ ಜಿಲ್ಲಾ ಕಂಬಳ ಸಮಿತಿಯ ನೂತನ ಆದ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ ಹಾಗೂ ನಿಯುಕ್ತಿಗೊಂಡಿದ್ದಾರೆ. ಅ .30 ರಂದು ಮೂಡಬಿದಿರೆಯು ಸಮಾಜ ಮಂದಿರದಲ್ಲಿ ನಡೆದ ಸಮತಿಯ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಪ್ರಧಾನ ಕಾರ್ಯದರ್ಶಿಯಾಗಿ ನಾರಾವಿ ರಕ್ಷಿತ್ ಜೈನ್ ಹಾಗೂ ಕೋಶಾಧಿಕಾರಿಯಾಗಿ ಮೂಡುಬಿದಿರೆ ನ್ಯೂ ಪಡಿವಾಳ್ಸ್ ಹರ್ಷವರ್ಧನ ಪಡಿವಾಳ್ ಅವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷರಾದ ಎನ್ ಚಂದ್ರಹಾಸ ಶೆಟ್ಟಿ ಪುತ್ತೂರು, ಹೊಕ್ಕಾಡಿಗೋಳಿ ರಶ್ಮಿತ್ ಶೆಟ್ಟಿ ಕೈತ್ರೋಡಿ, ಇರ್ವತ್ತೂರು ಉದಯ್ ಕೋಟ್ಯಾನ್, ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿ, ಜಪ್ಪು ಮಂಕು ತೋಟ ಅನಿಲ್ ಶೆಟ್ಟಿ ಆಯ್ಕೆ ಮಾಡಲಾಗಿದೆ.

ಓಟಗಾರರ ಪ್ರಮುಖರಾಗಿ ಕೊಳಕೆ ಇರ್ವತ್ತೂರು ಆನಂದ, ಜೊತೆ ಕಾರ್ಯದರ್ಶಿಯಾಗಿ ಸುಧೀರ್ ಕುಮಾರ್ ಆರಿಗ, ಸಿದ್ದಕಟ್ಟೆ ಪೊಡುಂಬ ಸಂದೀಪ್ ಶೆಟ್ಟಿ, ಕೌಡೂರು ಬೀಡು ಯತೀಶ್ ಭಂಡಾರಿ, ಸರಪಾಡಿ ಧನಂಜಯ ಶೆಟ್ಟಿ ರವರು ಆಯ್ಕೆಯಾಗಿದ್ದಾರೆ.