ವಿಟ್ಲ : ಒಂದೇ ದಿನ ಎರಡು ಸರಗಳ್ಳತನ – ಕಳ್ಳನ ಹಿಡಿಯಲು ಸಾರ್ವಜನಿಕರು ಯತ್ನಿಸಿದಾಗ ಬೈಕ್ ನಿಂದ ಹಾರಿ ಕಾಡಿಗೆ ಪರಾರಿ

Screenshot_20211026-211049_Thumbnail Maker
Ad Widget

Ad Widget

Ad Widget

ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಅ .26 ರಂದು ಒಂದೇ ದಿನ ಎರಡು ಸರಗಳ್ಳತನ ಪ್ರಕರಣಗಳು ನಡೆದ ಬಗ್ಗೆ ವರದಿಯಾಗಿದೆ.

Ad Widget

ಈ ಎರಡು ಪ್ರಕರಣಗಳಲ್ಲಿಯೂ ದುಷ್ಕರ್ಮಿಗಳು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದು ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

ಅ . 26 ರಂದು ಮಧ್ಯಾಹ್ನದ ವೇಳೆ ಉಕ್ಕುಡ – ಪುಣಚ ರಸ್ತೆಯಿಂದ ಗುಂಪಲಡ್ಕ ಸಂಪರ್ಕ ಕಲ್ಪಿಸುವ ಒಳ ರಸ್ತೆಯಲ್ಲಿ ಮಹಿಳೆಯ ಸರ ಎಗರಿಸಿ ಪಲಾಯನ ಮಾಡಲಾಗಿದೆ.

Ad Widget

ಸಂಜೆ ಉಕ್ಕುಡ ಕನ್ಯಾನ ರಸ್ತೆಯ ದೇಲಂತಬೆಟ್ಟು ಸಮೀಪ ಬೈಕ್ ನಲ್ಲಿ ಬಂದ ದುಷ್ಕರ್ಮಿಯೂ ಚೈನ್ ಎಳೆದು ಪರಾರಿಯಾಗಿದ್ದಾನೆ.

Ad Widget

Ad Widget

ಕಳ್ಳನೂ ಕನ್ಯಾನ ಕಡೆಗೆ ಪಲಾಯನ ಮಾಡುವ ಸಂದರ್ಭ ಕನ್ಯಾನ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಬೈಕ್ ನಿಲ್ಲಿಸಲು
ಸೂಚನೆ ನೀಡಿದರೂ ಆತ ನಿಲ್ಲಿಸದೆ ಪಲಾಯನ ಮಾಡಿದ್ದಾನೆ.

ಪೊಲೀಸರು ಸ್ಥಳೀಯ ಯುವಕರಿಗೆ ಮಾಹಿತಿ ನೀಡಿ ಅವರು ಬೈಕ್ ನಲ್ಲಿ ಬೆನ್ನಟ್ಡಿ ಕಳ್ಳನ ದ್ವಿಚಕ್ರವಾಹನವನ್ನು ಅಡ್ಡ ಹಾಕಿದ್ದಾರೆ.

ಈ ಸಂದರ್ಭ ಆತ ತನ್ನ ದ್ವಿಚಕ್ರವಾಹನದಿಂದ ಹಾರಿ ಕಾಡಿನಲ್ಲಿ ಪಲಾಯನ ಮಾಡಿದ್ದಾನೆ. ಏಕ ವ್ಯಕ್ತಿಯಿಂದ ಈ ಕೃತ್ಯ ನಡೆದಿದ್ದು, ಸ್ಥಳೀಯ ನಿವಾಸಿಗಳು ಪಲಾಯನ ಮಾಡಿದ ಭಾಗದಲ್ಲಿ ನಾಕಾ ಬಂಧಿ ರಚಿಸಿ ಕಳ್ಳನಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: