Connect with us

ಕಾರ್ಯಕ್ರಮಗಳು

ಉಪ್ಪಿನಂಗಡಿ : 50 ವರ್ಷಗಳಿಂದ ಆಸ್ತಿ ದಾಖಲೆ ಇಲ್ಲದೆ ವಾಸಿಸುತ್ತಿದ್ದ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದ ಅಶೋಕ್ ಕುಮಾರ್ ರೈ – ಅಭಿನಂದಿಸಿದ ಫಲಾನುಭವಿಗಳು

Ad Widget

Ad Widget

Ad Widget

Ad Widget

Ad Widget

Ad Widget

ಪುತ್ತೂರು : ತಾಲೂಕಿನ  ಉಪ್ಪಿನಂಗಡಿ ಗ್ರಾಮದ ಕದಿಕ್ಕಾರು ಎಂಬಲ್ಲಿ ಸುಮಾರು 50 ವರ್ಷ ಕ್ಕಿಂತಲೂ ಮೇಲ್ಪಟ್ಟು  ಶ್ರೀ ಕ್ಷೇತ್ರ ಧರ್ಮಸ್ಥಳದ ಜಾಗದಲ್ಲಿ ಸುಮಾರು 18 ಪರಿಶಿಷ್ಟಜಾತಿಯ ಕುಟುಂಬಗಳು ವಾಸಿಸುತ್ತಿದ್ದಾರೆ.

Ad Widget

Ad Widget

Ad Widget

ಈ ಜಾಗವು ಧರ್ಮಸ್ಥಳಕ್ಕೆ ಸೇರಿರುವುದರಿಂದ ಇವರಿಗೆ ಯಾವುದೇ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು.

Ad Widget

ಈ ಸಮಸ್ಯೆಯನ್ನು ಈ ಹಿಂದೆಯೇ ಹಲವು  ಜನರಲ್ಲಿ ತಿಳಿಸಿದರೂ ಯಾವೂದೇ ಪ್ರಯೋಜನ ಆಗದೇ  ಜಾಗವನ್ನು ರೆಕಾರ್ಡ್ ಮಾಡಲು ಪ್ರಯತ್ನಿಸಿ ಅರ್ಧದಲ್ಲಿ ಕೈ ಬಿಟ್ಟಿರುತ್ತಾರೆ .

Ad Widget

Ad Widget

ಸ್ಥಳೀಯರು ಈ ಸಮಸ್ಯೆಯನ್ನು ಅಶೋಕ್ ಕುಮಾರ್ ರೈ ಕೋಡಿಂಬಾಡಿ ಯವರಲ್ಲೂ  ಮನವಿ ಮಾಡಿಕೊಂಡಾಗ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆ ಕುಟುಂಬಗಳು ವಿಶ್ವಾಸ ತುಂಬಿದ್ದರು.

ಆದರಂತೆ ಸುಮಾರು  4 ವರ್ಷದಿಂದ ಸತತ ಪ್ರಯತ್ನದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆಯವರಲ್ಲಿ ವಿಚಾರವನ್ನು ತಿಳಿಸಿದಾಗ ಜಾಗವನ್ನು ದಾನಪತ್ರ ಮಾಡು ನೀಡುವುದಾಗಿ ತಿಳಿಸಿದರು.

ಜಾಗದ ದಾಖಲೆ ಪತ್ರ ಮಾಡಲು   ಬೇಕಾದ ವ್ಯವಸ್ಥೆಯ ಪೂರ್ತಿ ಜವಾಬ್ದಾರಿಯನ್ನು ಹೊತ್ತ ಅಶೋಕ್ ಕುಮಾರ್ ರೈ ಇದೀಗ
ಜಾಗದ ರೆಕಾರ್ಡ್ ಮಾಡಿಕೊಡವಲ್ಲಿ ಯಶಸ್ವಿಯಾಗಿದ್ದಾರೆ.

ಆ ಜಾಗದ ದಾಖಲೆಗಳನ್ನು  ಕುಟುಂಬಗಳಿಗೆ ವಿತರಿಸುವ ಕಾರ್ಯಕ್ರಮವು  ರೈ ಎಸ್ಟೇಟ್ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ನಡೆಯಿತು.

ದಾಖಲೆಗಳನ್ನು ವಿತರಿಸಿ , ಇಂತಹ ಬಡವರಿಗೆ ಸಹಾಯ ಮಾಡುವುದರಿಂದ ನನಗೆ ಧನ್ಯತಭಾವ ಸಿಕ್ಕಿದೆ ಮತ್ತು ಇನ್ನು ಮುಂದೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಿರಿ ಎಂದು ತಿಳಿಸಿದರು. ದಾಖಲೆಗಳನ್ನು ಪಡೆದುಕೊಂಡ ಫಲಾನುಭವಿ ಮಹಾಲಿಂಗರವರು ತಮ್ಮ ಮನದಾಳದ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಕದಿಕ್ಕಾರು ಜಾಗದ ದಾಖಲೆಗಳನ್ನು ಪಡಕೊಂಡ 18 ಕುಟುಂಬದವರು ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರನ್ನು ಶಾಲು ಹೊದಿಸಿ ಫಲಪುಷ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಫಲಾನಿಭವಿ ಮಹಾಲಿಂಗ ಮತ್ತು ರವಿ ಉಪಸ್ಥಿತಿತರಿದ್ದರು. ರೈ ಎಸ್ಟೇಟ್  ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಸಿಬ್ಬಂದಿ ಲಿಂಗಪ್ಪ ಕುದ್ಮಾನು ಕಾರ್ಯಕ್ರಮ ನಿರೂಪಣೆ ಮಾಡಿ ಸ್ವಾಗತಸಿ ವಂದಿಸಿದರು. ಪ್ರವೀಣ್ ಕುಮಾರ್  ಗುರುಂಪುನಾರ್ ಸಹಕರಿಸಿದರು.

Continue Reading
Click to comment

Leave a Reply

ಸಾಮಾಜಿಕ ಮಾಧ್ಯಮ

ಹವ್ಯಕ ವಿಶೇಷ ಪ್ರಶಸ್ತಿಗಳ ಪಟ್ಟಿ ಪ್ರಕಟ : ಯಕ್ಷಗಾನ ಹಿರಿಯ ಕಲಾವಿದ ಪೆರುವೋಡಿ ನಾರಾಯಣ್ ಭಟ್ ಗೆ ಹವ್ಯಕ ವಿಭೂಷಣ ಪ್ರಶಸ್ತಿ

Ad Widget

Ad Widget

ಬೆಂಗಳೂರು, ಮಾ 28 : ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ.

Ad Widget

Ad Widget

Ad Widget

Ad Widget

ಏಪ್ರಿಲ್ 2 ಭಾನುವಾರ ನಡೆಯುವ 80 ನೇಯ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Ad Widget

Ad Widget

Ad Widget

ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಭಾನುವಾರ ಸಂಜೆ 04 ಗಂಟೆಗೆ ನಡೆಯುವ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Ad Widget

ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಸಾಧಕ ಪೆರುವೋಡಿ ನಾರಾಯಣ ಭಟ್ (ಹಾಸ್ಯ ಕಲಾವಿದ) ರನ್ನು ಹವ್ಯಕ ವಿಭೂಷಣ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ.

Ad Widget

Ad Widget

ಖ್ಯಾತ ಇತಿಹಾಸಕಾರರು ಮತ್ತು ಶಿಕ್ಷಣ ತಜ್ಞರಾದ ಡಾ| ಲಕ್ಷ್ಮೀಶ್ ಸೋಂದಾ, ಹಾಗೂ ಸಂಗೀತ ಕ್ಷೇತ್ರದ ಜಿ. ಎಸ್. ಹೆಗಡೆ ಸಪ್ತಕ ಹವ್ಯಕ ಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವೈದ್ಯಕೀಯ & ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಕಿಶನ್ ಭಾಗವತ್, ಭೂ ಸೇನೆಯ ಲೆ.ಕ.ವಿವೇಕ್ ಸಾಯ, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಕು. ಅರ್ಪಿತಾ. ವಿ. ಎಂ, ರನ್ನು ಹವ್ಯಕ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಹವ್ಯಕ ಅಧ್ಯಯನ ಕೇಂದ್ರದ ವಿಶ್ರಾಂತ ನಿರ್ದೇಶಕರು
ನಾರಾಯಣ ಶಾನುಭೋಗ್ ರನ್ನು ಹವ್ಯಕ ಸೇವಾಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Continue Reading

ಆರೋಗ್ಯ

ಮೋದಿ ಸರ್ಕಾರದಿಂದ ಮತ್ತೊಂದು ದೊಡ್ಡ ಆರೋಗ್ಯ ಕ್ರಾಂತಿ !!! 1.5 ಲಕ್ಷ ಆರೋಗ್ಯ ಕೇಂದ್ರದ ಮಾದರಿ ಸಿದ್ದಪಡಿಸಿದ ಕೇಂದ್ರ ಸರ್ಕಾರ

Ad Widget

Ad Widget

ನವದೆಹಲಿ, ಮಾ 8 : ರಕ್ತದೊತ್ತಡ, ಸಕ್ಕರೆ ಮತ್ತು ಹೃದ್ರೋಗದಂತಹ ಗಂಭೀರ ಕಾಯಿಲೆಗಳನ್ನು ತಕ್ಷಣವೇ ಗುರುತಿಸಲು ದೇಶದಲ್ಲಿ ವಿಶಿಷ್ಟ ಆರೋಗ್ಯ ಮಾದರಿಯನ್ನ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ದೇಶಾದ್ಯಂತ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಮೋದಿ ನೇತೃತ್ವದ ಮೋದಿ ಸರ್ಕಾರದಿಂದ ವಿವಿಧ ರಾಜ್ಯಗಳ ಜಿಲ್ಲೆಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಮನೆಗಳಿಂದ ಕೆಲವು ಹೆಜ್ಜೆ ದೂರದಲ್ಲಿರುವ 1.5 ಲಕ್ಷ ಆರೋಗ್ಯ ಕೇಂದ್ರಗಳ ರಚಿಸುವ ಮೂಲಕ ಈ ಮಾದರಿಯನ್ನು ಸಿದ್ಧಪಡಿಸಲಾಗುತ್ತಿದೆ.

Ad Widget

Ad Widget

Ad Widget

Ad Widget

ಈ ಮೂಲಕ ದೇಶದಲ್ಲಿ ಆರೋಗ್ಯ ಕ್ರಾಂತಿಯನ್ನೇ ಮಾಡಲು ಹೊರಟಿದೆ. ದೇಶದ ಜನರಿಗೆ ಉತ್ತಮ ರೀತಿಯ ಅರೋಗ್ಯಕ್ಕಾಗಿ ಚಿಕಿತ್ಸೆಗಾಗಿ ಭಾರೀ ಬದಲಾವಣೆಯನ್ನೇ ತರಲು ಬಹು ದೊಡ್ಡ ಮಾದರಿಯನ್ನು ಸಿದ್ದಪಡಿಸಿದೆ.

Ad Widget

Ad Widget

Ad Widget

ಪ್ರಧಾನಿ ನರೇಂದ್ರ ಮೋದಿಯವರ ಈ ದೊಡ್ಡ ದೃಷ್ಟಿಕೋನವನ್ನ ಈಡೇರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ತನ್ನ ಸಂಪೂರ್ಣ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಇದಲ್ಲದೆ, ದೇಶದಲ್ಲಿ ಡ್ರೋನ್ ಗಳಿಂದ ಔಷಧಿ ಸರಬರಾಜು ಮತ್ತು ಪರೀಕ್ಷಾ ಸೇವೆಗಳಿಗೆ ಪ್ರಮುಖ ಸಿದ್ಧತೆಗಳು ಪ್ರಾರಂಭವಾಗಿವೆ.

Ad Widget

ಯೋಜನೆಯ ಮೊದಲ ಹಂತದಲ್ಲಿ, ದೇಶದಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳನ್ನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ಸಚಿವಾಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ಹೇಳಿದ್ದಾರೆ. ಇದು ಜನರ ಮನೆಗಳಿಗೆ ಬಹಳ ಹತ್ತಿರದಲ್ಲಿರಲಿದೆ. ಈ ಆರೋಗ್ಯ ಕೇಂದ್ರಗಳನ್ನು ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗದಂತಹ ರೋಗಗಳನ್ನ ತಕ್ಷಣವೇ ತನಿಖೆ ಮಾಡಬಹುದು ಮತ್ತು ಕ್ಲಪ್ತ ಸಮಯಕ್ಕೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಬಹುದಾಗಿದೆ.‌

Ad Widget

Ad Widget

ಮೋದಿ ಸರ್ಕಾರ ಈ ಮೊದಲು ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದಿತ್ತು. ಬಳಿಕ ಜನೌಷಧಿ ಎನ್ನುವ ಮೆಡಿಕಲ್ ನ್ನು ಸ್ಥಾಪಿಸಿ ಜನರಿಗೆ ಅತ್ಯಂತ ಅಗ್ಗದಲ್ಲಿ ಔಷಧಗಳು ಸಿಗುವಂತೆ ಮಾಡಿದ್ದರು. ಇದಾದ ಬಳಿಕ ದೇಶದಲ್ಲಿ ಮತ್ತೊಂದು ಆರೋಗ್ಯ ಕ್ರಾಂತಿ ನಡೆಸಲು ಸಜ್ಜಾಗಿದೆ. ಈ ಯೋಜನೆಯು ದೇಶದ ಜನತೆಯ ಪಾಲಿಗೆ ಹೆಚ್ಚಿನ ವರದಾನವಾಗಲಿದೆ.

Continue Reading

ಕಾರ್ಯಕ್ರಮಗಳು

ಗಣ ರಾಜ್ಯೋತ್ಸವದ ಪ್ರಯುಕ್ತ  ́ಮುಳಿಯ ರಾಷ್ಟ್ರ ಸಿಂಚನ’ Online  ನೃತ್ಯ  ಸ್ಪರ್ಧೆ

Ad Widget

Ad Widget

ಪುತ್ತೂರು: ಗಣರಾಜ್ಯೋತ್ಸವದ ಪ್ರಯುಕ್ತ ಪುತ್ತೂರಿನ ಮುಳಿಯ ಜ್ಯುವೆಲ್ಸ್ ವಿನೂತನ ಕಾರ್ಯಕ್ರಮವೊಂದನ್ನು ಪ್ರಸ್ತುತಪಡಿಸುತ್ತಿದೆ. “ಮುಳಿಯ ರಾಷ್ಟ್ರ ಸಿಂಚನ’ ಆನ್ಲೈನ್ ನೃತ್ಯ ಸ್ಪರ್ಧೆಯನ್ನು ಜನವರಿ 28ರಂದು ಮಧ್ಯಾಹ್ನ 2:00 ಗಂಟೆಗೆ ಮತ್ತು 29ರಂದು ಬೆಳಗ್ಗೆ 10:30ಕ್ಕೆ ಆಯೋಜಿಸಿದೆ.

Ad Widget

Ad Widget

Ad Widget

Ad Widget

ಸೋಲೋ ಮತ್ತು ಗ್ರೂಪ್ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತಿದ್ದು, ಸೋಲೋ ವಿಭಾಗದಲ್ಲಿ ಮೊದಲ 100 ಸ್ಪರ್ಧಿಗಳಿಗೆ ಅವಕಾಶವಿದೆ. ಈ ವಿಭಾಗದಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳು 12ರಿಂದ 21 ವರ್ಷ ವಯೋಮಿತಿಯೊಳಗಿನವರಾಗಿರಬೇಕು. 21 ವರ್ಷಕ್ಕೆ ಮೇಲ್ಪಟ್ಟವರು ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ.

Ad Widget

Ad Widget

Ad Widget

ಹೆಸರು ನೋಂದಾಯಿಸಿಕೊಳ್ಳಲು ಜನವರಿ 25 ಕೊನೆಯ ದಿನಾಂಕವಾಗಿರುತ್ತದೆ. ಗ್ರೂಪ್ ವಿಭಾಗದಲ್ಲಿ ಸ್ಪರ್ಧಿಸುವವರು ಗಮನಿಸಬೇಕಾದ ಅಂಶವೆಂದರೆ, ಮೊದಲ 35 ಗುಂಪುಗಳಿಗೆ ಮಾತ್ರ ಅವಕಾಶವಿರುತ್ತದೆ.

Ad Widget

ನಿಯಮಗಳು ಇಂತಿವೆ:

ದೇಶಭಕ್ತಿ ಗೀತೆಗೆ ಅಥವಾ ಚಲನಚಿತ್ರದ ದೇಶಭಕ್ತಿ ಗೀತೆಗೆ ನೃತ್ಯ ಮಾಡಬಹುದು.

Ad Widget

Ad Widget
  • ಒಬ್ಬ ಸ್ಪರ್ಧಿಗೆ 2-3 ನಿಮಿಷ ಮಾತ್ರ ಅವಕಾಶವಿರುತ್ತದೆ. ಗುಂಪಿಗೆ 4-5 ನಿಮಿಷದ ಕಾಲಾವಕಾಶ ನೀಡಲಾಗುವುದು.
  • ಸ್ಪರ್ಧೆಯು ಝೂಮ್ ವೇದಿಕೆಯ ಮೂಲಕ ನಡೆಯುತ್ತದೆ.
  • ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
    ಹೆಸರು ನೋಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ 9353030916 ಸಂಪರ್ಕಿಸಲು ಕೋರಲಾಗಿದೆ.
    ಸ್ಪರ್ಧೆಯ ಮೊದಲನೆಯ ದಿನ ಸಾಕಷ್ಟು ಮುಂಚಿತವಾಗಿಯೇ, ಕರೆಯ ಮೂಲಕ ಸ್ಪರ್ಧಿಗಳು ತಮ್ಮ ಮಾಹಿತಿಯನ್ನು ಮತ್ತು ನಿಯಮಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
Continue Reading

Trending

error: Content is protected !!