Ad Widget

ಮಂಗಳೂರಿನಲ್ಲಿ ಮತ್ತೆ ದೈವಸ್ಥಾನಕ್ಕೆ ಅಪಚಾರ: ಬೈಕಂಪಾಡಿ ಕರ್ಕೇರ ಮೂಲಸ್ಥಾನದ ನಾಗಬ್ರಹ್ಮ, ನಂದಿ ವಿಗ್ರಹಗಳಿಗೆ ಹಾನಿ

Ad Widget

Ad Widget

Ad Widget

ಮಂಗಳೂರು, ಅ.17 : ಮಂಗಳೂರಿನಲ್ಲಿ ಮತ್ತೆ ಹಿಂದೂಗಳ ಶ್ರದ್ದಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ. ಬೈಕಂಪಾಡಿ ಕರ್ಕೇರ ಮೂಲ ಸ್ಥಾನ ಜರಂದಾಯ ದೈವಸ್ಥಾನ ಮತ್ತು ನಾಗನ ಬ್ರಹ್ಮ ಪೀಠವನ್ನು ದುಷ್ಕರ್ಮಿಗಳು ಹಾನಿಮಾಡಿದ್ದು ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Ad Widget

Ad Widget

Ad Widget

Ad Widget

Ad Widget

ಮುಂಜಾನೆ ದೈವಸ್ಥಾನಕ್ಕೆ ಭೇಟಿ ನೀಡಿದವರು ಹಾನಿಯಾದದ್ದು ಗಮನಿಸಿ ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಶಿಲಾಮಯ ನಾಗನ ಮೂರ್ತಿಯನ್ನು ಭಗ್ನ ಮಾಡಿದ್ದು, ಶಿಲೆಯಿಂದ ಮಾಡಲಾದ ನಂದಿಯ ವಿಗ್ರಹಕ್ಕೂ ಹಾನಿ‌ಮಾಡಿದ್ದಾರೆ. ಅದಲ್ಲದೆ ಕಪಾಟು ಒಡೆದು ಚೆಲ್ಲಾ ಪಿಲ್ಲಿ ಮಾದಿರುವುದರ ಜತೆಗೆ ದೈವಸ್ಥಾನದ ಹೊರಾಂಗಣದ ಗೇಟುಗಳನ್ನು ಮುರಿದು ಹಾಕಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ಮಾಡಿದ್ದಾರೆ.
ಈ ಹಿಂದೆಯೂ ಮಂಗಳೂರು ಸುತ್ತಮುತ್ತಲ ದೈವ ಕ್ಷೇತ್ರಗಳಿಗೆ ಅಪಚಾರವೆಸಗಿ ದುಷ್ಕೃತ್ಯ ಮೆರೆಯಲಾಗಿತ್ತು. ಶಾಂತಿ ಭಂಗ ಮಾಡುವ ಇಂತಹಾ ಸಮಾಜ ಘಾತುಕರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: