Ad Widget

Big Breaking : ಉಪ್ಪಿನಂಗಡಿ : ಬಸ್ಸು ನಿಲ್ದಾಣದೊಳಗಡೆ ಬಸ್ಸಿನ ಚಕ್ರದಡಿಗೆ ಸಿಲುಕಿ ತಾಯಿ ಹಾಗೂ ಒಂದು ವರ್ಷದ ಮಗು ದಾರುಣ ಸಾವು

WhatsApp Image 2021-10-12 at 12.08.17
Ad Widget

Ad Widget

Ad Widget

ಉಪ್ಪಿನಂಗಡಿ:ಅ 12: ಬಸ್ಸು ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದ ಕೆಎಸ್ಸಾರ್ಟಿಸಿ  ಬಸ್ಸಿನ ಚಕ್ರದಡಿಗೆ  ಸಿಲುಕಿ ತಾಯಿ ಹಾಗೂ ಆಕೆಯ ಒಂದು ವರ್ಷದ ಪುತ್ರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳವಾರ ( ಅ. 12) ಉಪ್ಪಿನಂಗಡಿ  ಬಸ್ಸು ನಿಲ್ದಾಣದಲ್ಲಿ ನಡೆದಿದೆ.

Ad Widget

Ad Widget

Ad Widget

Ad Widget

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿ ಸಿದ್ದಿಕ್ ಎಂಬವರ ಪತ್ನಿ ಸಾಹಿದಾ (25ವ.) ಮತ್ತು ಪುತ್ರ ‌ಸಾಹಿಲ್ (1ವ.) ಮೃತಪಟ್ಟವರು.  ಗೇರುಕಟ್ಟೆಯ ತಾಯಿ ಮನೆಗೆ ಬಂದಿದ್ದ ಶಾಹಿದಾ ಮಂಗಳವಾರ ಬೆಳಗ್ಗೆ ಪುತ್ತೂರಿಗೆ ವೈದ್ಯರ ಬಳಿ ತನ್ನ ಮಗನೊಂದಿಗೆ ತೆರಳಲು ಉಪ್ಪಿನಂಗಡಿ ಬಸ್ಸು ನಿಲ್ದಾಣದ ಬಳಿ  ಬಸ್ಸಿಗೆ ಕಾಯುತ್ತಿದ್ದಾನ ದುರ್ಘಟನೆ ಸಂಭವಿಸಿದೆ.

Ad Widget

Ad Widget

Ad Widget

Ad Widget

 ಬಸ್ ನಿಲ್ದಾಣಕ್ಕೆ ತಿರುಗುವಲ್ಲಿ  ನಂದಿನಿ ಹಾಲಿನ ಬೂತಿನ ಎದುರಿನಿಂದ ಮತ್ತೊಂದು ಕಡೆಗೆ ಶಾಹಿದಾ ಮಗುವಿನೊಂದಿಗೆ ದಾಟುತ್ತಿದ್ದ ವೇಳೆ  ಬಸ್ಸು ನಿಲ್ದಾಣದೊಳಗಡೆ ಪ್ರವೇಶಿಸುತ್ತಿದ್ದ ಬಸ್ಸು ಮಹಿಳೆಗೆ ಹಾಗೂ ಮಗುವಿಗೆ ಡಿಕ್ಕಿ ಹೊಡೆದಿದೆ. ಪ್ರತ್ಯಕ್ಷ ದರ್ಶಿಗಳ ಪ್ರಕಾರ  ಕೂಡಲೇ ಸ್ಥಳದಲ್ಲಿದ್ದವರು ಜೋರಾಗಿ ಬೊಬ್ಬೆ ಹೊಡೆದಿದ್ದು ಈ ಸಂದರ್ಭ ಗೊಂದಲಕ್ಕಿಡಾಧ ಚಾಲಕ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದು ಈ ಸಂದರ್ಭ ಬಸ್ಸಿನ ಚಕ್ರದಡಿಗೆ ತಾಯಿ ಮತ್ತು ಮಗು ಸಿಲುಕಿ ಪ್ರಾಣ ಬಿಟ್ಟಿದ್ದಾರೆ.

  ಅಪಘಾತ ನಡೆದ ಸ್ಥಳದಲ್ಲಿ ರಕ್ತದೋಕುಳಿ ಹರಿದಿದ್ದು, ದೇಹಗಳು ಛಿದ್ರಗೊಂಡಿದ್ದು ನೋಡಲು ಸ್ಥಳ ಭಯಾನಕವಾಗಿದೆ. ವೇಗವಾಗಿ ಬಂದ ಬಸ್ಸು ತಾಯಿ ಮತ್ತು ಮಗುವಿಗೆ ಡಿಕ್ಕಿ ಹೊಡೆದಿದೆ ಎಂದು ಕೆಲವರು ಆರೋಪಿಸಿದ್ದಾರೆ.  

Ad Widget

Ad Widget
Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: