Big Breaking : ರಸ್ತೆ ಮಧ್ಯೆ ಏಕಾಏಕಿ ಬಂದ ಕಾಡು ಹಂದಿ ಹಾಗೂ ದ್ವಿಚಕ್ರ ವಾಹನ ಮಧ್ಯೆ ಅಪಘಾತ – ಸವಾರ ಸಾವು

WhatsApp Image 2021-10-02 at 20.28.43
Ad Widget

Ad Widget

Ad Widget

ಮುಳ್ಳೇರಿಯ: ಅಚಾನಕ್‌ ಆಗಿ ರಸ್ತೆ ಮಧ್ಯೆ ಬಂದ ಕಾಡು ಹಂದಿಗೆ ಸ್ಕೂಟರಿಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ  ಆ 2 ರಂದು ಶನಿವಾರ ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಎಂಬಲ್ಲಿ ನಡೆದಿದೆ. ಅಪಘಾತಕ್ಕೆ ತುತ್ತಾದ ಕಾಡು ಹಂದಿಯೂ ಸ್ಥಳದಲ್ಲಿ ಸತ್ತು ಬಿದ್ದಿದೆ

Ad Widget

ಮುಳ್ಳೇರಿಯ ಬಳಿಯ ಕಾವುಂಗಲ್ ನಿವಾಸಿ ಕುಞಂಬು ನಾಯರ್(60) ಮೃತಪಟ್ಟವರು. ಗಂಭೀರವಾಗಿ ಗಾಯಗೊಂಡ ಇವರನ್ನು ಮಂಗಳೂರಿನ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಸಂಜೆ ಅವರು ಚಿಕಿತ್ಸೆ ಫಲಕಾರಿಯಾಗದೇ  ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.

Ad Widget

Ad Widget

Ad Widget

 ಶನಿವಾರ ಬೆಳಗ್ಗೆ 9.30  ರ ಸುಮಾರಿಗೆ ಮುಳ್ಳೇರಿಯ ಬಳಿಯ ಬಾಳಕಂಡಂ ತಿರುವಿನಲ್ಲಿ ಈ ಘಟನೆ ನಡೆದಿದೆ. ಸಾಮಾನು ಖರೀದಿಸಲೆಂದು ಮುಳ್ಳೇರಿಯ ಪೇಟೆಗೆ ಹೋಗಿದ್ದ ಕುಞಂಬು ನಾಯರ್ ಮನೆಗೆ ಹಿಂತಿರುಗುತ್ತಿರುವ ವೇಳೆ ಹಂದಿಗಳ ಹಿಂಡು ರಸ್ತೆ ಗಡ್ಡವಾಗಿ ಓಡಿದೆ. ಈ ವೇಳೆ ಕುಞಂಬು ನಾಯರ್ ಸ್ಕೂಟರಿನ ವೇಗ ಕಡಿಮೆ ಮಾಡಿದ್ದು, ಅದೇ ವೇಳೆ ಒಂದು ಹಂದಿ ವೇಗದಿಂದ ರಸ್ತೆಗಡ್ಡ ಓಡಿದ್ದು ಇವರ ಸ್ಕೂಟರಿಗೆ ಡಿಕ್ಕಿ ಹೊಡೆದಿದೆ.

Ad Widget
ಕುಞಂಬು ನಾಯರ್

 

Ad Widget

Ad Widget
ಜಾಹೀರಾತು

ಗಂಭೀರ ಗಾಯಗೊಂಡ ಕುಞಂಬುನಾಯರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರು.. ಸತ್ತ ಹಂದಿಯನ್ನು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ನಂತರ ಹೂತು ಹಾಕಿದ್ದಾರೆ.

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: